ಫಿಲ್ಮ್ಫೇರ್ ಅವಾರ್ಡ್ಸ್ ಸೌತ್: ಧನಂಜಯ್, ಯಜ್ಞಾ ಅತ್ಯುತ್ತಮ ನಟರು; ರಾಜ್ ಬಿ.ಶೆಟ್ಟಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ; ಆ್ಯಕ್ಟ್ 1978 ಅತ್ಯುತ್ತಮ ಚಿತ್ರ

ಫಿಲ್ಮ್ಫೇರ್ ಅವಾರ್ಡ್ಸ್ ಸೌತ್ 2022 ಅಕ್ಟೋಬರ್ 9 ರಂದು ಬೆಂಗಳೂರಿನ ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜನೆಗೊಂಡಿತು. ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಚಿತ್ರೋದ್ಯಮಗಳ ಅತ್ಯುತ್ತಮ ಚಲಚಿತ್ರಗಳು ಪ್ರಶಸ್ತಿಯನ್ನು ಬಾಚಿಕೊಂಡವು. 2020 ಮತ್ತು 2021 ರಲ್ಲಿ ತೆರೆಗೆ ಬಂದ ಅತ್ಯುತ್ತಮ ಚಲನಚಿತ್ರಗಳಿಗೆ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಯಿತು. ಕನ್ನಡ ಚಿತ್ರರಂಗದಲ್ಲಿ ಪ್ರಶಸ್ತಿ ಪಡೆದ ಚಿತ್ರಗಳು ಅತ್ಯುತ್ತಮ ನಟನಾಗಿ ಬಡವ ರಾಸ್ಕಲ್ ಚಿತ್ರಕ್ಕಾಗಿ ಧನಂಜಯ್, ಅತ್ಯುತ್ತಮ ನಟಿಯಾಗಿ ಆ್ಯಕ್ಟ್ 1978 ಗಾಗಿ ಯಜ್ಞಾ ಶೆಟ್ಟಿ, […]
ಭಾರತೀಯ ಚಿತ್ರರಂಗದ ಬಾಹುಬಲಿ ಎಸ್.ಎಸ್.ರಾಜಮೌಳಿ ಜನ್ಮದಿನ: ನಿರ್ದೇಶನದ ‘ರಾಜ’ನಿಗಿದೆ ರಾಯಚೂರಿನ ನಂಟು!

ಭಾರತೀಯ ಚಿತ್ರರಂಗದ ಬಾಹುಬಲಿ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕೊಡೂರಿ ಶ್ರೀಶೈಲ ಶ್ರೀ ರಾಜಮೌಳಿ 10 ಅಕ್ಟೋಬರ್ 1973 ರಲ್ಲಿ ಜನಿಸಿದರು. ಇವರು ಭಾರತದ ಅತಿಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ. ಅವರ ಮೂರು ಚಲನಚಿತ್ರಗಳು, ಬಾಹುಬಲಿ: ದಿ ಬಿಗಿನಿಂಗ್ (2015), ಬಾಹುಬಲಿ 2: ದಿ ಕನ್ಕ್ಲೂಷನ್ (2017), ಮತ್ತು ಆರ್.ಆರ್.ಆರ್ (2022) ಇಲ್ಲಿಯವರೆಗೆ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲ್ಲಿ ಸೇರಿವೆ. ಅವರು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ನಾಲ್ಕು ದಕ್ಷಿಣ ಭಾರತೀಯ […]
ಅಪ್ಪು ಗಂಧದಗುಡಿಗೆ ಶುಭ ಹಾರೈಸಿದ ಪ್ರಧಾನಿ ಮೋದಿ

ಅಪ್ಪು ಜಗತ್ತಿನಾದ್ಯಂತ ಲಕ್ಷಾಂತರ ಹೃದಯಗಳಲ್ಲಿ ನೆಲೆಸಿದ್ದಾರೆ. ಅವರು ತೇಜಸ್ಸಿನ ಪ್ರತೀಕ, ಚೈತನ್ಯದ ಚಿಲುಮೆ ಮತ್ತು ಸರಿಸಾಟಿಯಿಲ್ಲದ ಪ್ರತಿಭಾವಂತರಾಗಿದ್ದರು. ‘ಗಂಧದ ಗುಡಿ’ ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯ ಹಾಗು ಪರಿಸರ ಸಂರಕ್ಷಣೆಗೆ ಸಲ್ಲಿಸಲಾದ ಗೌರವ. ಈ ಪ್ರಯತ್ನಕ್ಕೆ ನನ್ನ ಶುಭ ಹಾರೈಕೆಗಳು ಎಂದು ಪ್ರಧಾನಿ ಮೋದಿ ಟ್ವೀಟಿಸಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಗಂಧದ ಗುಡಿ ಚಿತ್ರ ಬಿಡುಗಡೆ ಬಗ್ಗೆ ಪ್ರಧಾನಿ ಮೋದಿ ಅವರನ್ನು ಟ್ಯಾಗ್ ಮಾಡಿ ಟ್ವೀಟಿಸಿದ್ದರು. ನಮಸ್ತೆ ನರೇಂದ್ರ ಮೋದಿ ಅವರೇ, ಅಪ್ಪು ಅವರ […]
ಅಕ್ಟೋಬರ್ 28 ರಂದು ತೆರೆಗಪ್ಪಳಿಸಲಿದೆ ಗಂಧದ ಗುಡಿ: ಇದು ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅವರ ಕೊನೆ ಚಿತ್ರ

ನಟ ಪುನೀತ್ ರಾಜ್ಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಅಮೋಘವರ್ಷ ನಿರ್ದೇಶನದ ಸಾಕ್ಷ್ಯಚಿತ್ರ ಅಕ್ಟೋಬರ್ 28 ರಂದು ತೆರೆ ಮೇಲೆ ಬರಲಿದೆ. ಬಿಡುಗಡೆ ದಿನಾಂಕದ ಅಧಿಕೃತ ಪ್ರಕಟಣೆಯನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಹಂಚಿಕೊಂಡಿದ್ದಾರೆ. “ತನ್ನ ಮೇಲೆ ಅಪಾರ ಪ್ರೀತಿಯನ್ನು ಧಾರೆಯೆರೆದ ಭೂಮಿಗೆ ಗೌರವವಾಗಿ ಕರ್ನಾಟಕದ ಕಾಡುಗಳನ್ನು ಪುನೀತ್ ಆಗಿಯೇ ಅನ್ವೇಷಿಸುತ್ತಾರೆ. ಈ ಚಿತ್ರದಲ್ಲಿ ಚಿತ್ರಕಥೆಯಿಲ್ಲದ ನೈಜ ಪುನೀತ್ ಅವರನ್ನು ಅಭಿಮಾನಿಗಳು ಕಾಣಬಹುದು” ಎಂದು ಅಶ್ವಿನಿ ಹೇಳಿದ್ದಾರೆ. […]
“ಕಾಂತಾರ” ನಮಗೆ ಕಾಣಿಸಿದ್ದೇನು? “ಕಾಂತಾರ” ಕ್ಕೆ ಸಿಗುವ ದೊಡ್ಡ ಗೆಲುವು ಯಾವುದೆಂದರೆ! :

♦ಪ್ರಸಾದ್ ಶೆಣೈ ಆರ್.ಕೆ ನಮ್ಮ ತುಳುನಾಡಿನ ದೈವಗಳು, ಆ ದೈವಗಳ ಕಾರ್ಣೀಕಗಳು, ಅದರ ರೌದ್ರತೆ, ಅದು ನೀಡುವ ಅಭಯ, ಅದು ಹುಟ್ಟಿಸುವ ಭಯ. ಇವೆಲ್ಲವನ್ನೂ ಇನ್ನಷ್ಟು ಅಚ್ಚರಿ, ನಿಗೂಢತೆ ಬೆರೆಸಿ, ರಸವತ್ತಾದ ಕತೆಯಾಗಿಸಿ ಹಿರಿಯರು ಹೇಳುವಾಗ ನಮ್ಮ ಕಲ್ಪನೆಯ ಹರಿವು ವಿಸ್ತಾರವಾಗುತ್ತಿತ್ತು, ನಮ್ಮ ನೆಲ ಸಂಸ್ಕೃತಿಯ ಅರಿವೂ ಆಗುತ್ತಿತ್ತು. ನಮ್ಮ ಬಾಲ್ಯವನ್ನು ಪೊರೆಯುತ್ತಿದ್ದುದು ಇದೇ ದೈವಗಳ ಕುರಿತ ಕತೆಗಳು. ಈಗಲೂ ನನಗೆ ದೈವಗಳ ಕುರಿತು ಧಾರ್ಮಿಕ ನಂಬಿಕೆಗಿಂತಲೂ ಜಾಸ್ತಿ ಅದೊಂದು ನಿಗೂಢತೆ, ರೋಚಕತೆ, ಬೆರಗುಗಳನ್ನು ತುಂಬಿಕೊಂಡ ಕಾನನದಂತೆಯೇ […]