ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ: ಕಿರಿಕ್ ಪಾರ್ಟಿಯಂತೆ ಕಚಗುಳಿಯಿಡುವ ಕಥೆಯೊಂದಿಗೆ ಬರುತ್ತಿದೆ ಪರಂವಃ ಪಿಕ್ಚರ್ಸ್

ರಕ್ಷಿತ್ ಶೆಟ್ಟಿಯ ಚಿತ್ರ ನಿರ್ಮಾಣ ಸಂಸ್ಥೆ ಪರಂವಃ ಪಿಕ್ಚರ್ಸ್ ಹೊಸ ಸಿನಿಮಾದೊಂದಿಗೆ ಮುಂದೆ ಬರುತ್ತಿದೆ. ಈ ಬಗ್ಗೆ ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ನಾವು ಹಿಂದೆ ಪ್ರಸ್ತುತಪಡಿಸಿದ್ದಕ್ಕಿಂತ ವಿಭಿನ್ನವಾದ ಪ್ರಕಾರದಿಂದ ಅಸಾಧಾರಣವಾಗಿ ನಿರ್ಮಿಸಿದ ಚಲನಚಿತ್ರ. ಸೃಜನಾತ್ಮಕವಾಗಿ ಪ್ರಚೋದಿತ ಯುವಕರ ಭಾವೋದ್ರಿಕ್ತ ಗುಂಪು ಈ ಉಲ್ಲಾಸದ ಮತ್ತು ತಂಗಾಳಿಯ ಚಲನಚಿತ್ರವನ್ನು ರಚಿಸಲು ಒಗ್ಗೂಡಿದೆ. ಅದು ನಿಮ್ಮನ್ನು ಭೂತಕಾಲದ ಸುಖದ ಸ್ಮೃತಿಯ ಹಾದಿಯಲ್ಲಿ ನಡೆಸುವುದು ಖಚಿತ. ಈ ಚಿತ್ರವನ್ನು ಚಿತ್ರಿಸಿದ ರೀತಿಯಲ್ಲಿ, ದೇಶದ ಯಾವುದೇ ಚಲನಚಿತ್ರವು ಈ […]
ಎಲ್ಲರ ಬಾಳು ಬಂಗಾರವಾಗಿಸಲಿದೆ ಹೊಂಬಾಳೆ: ಮುಂದಿನ 5 ವರ್ಷಗಳಲ್ಲಿ 3,000 ಕೋಟಿ ರೂ ಹೂಡಿಕೆ ಮಾಡಲಿದೆ ಚಿತ್ರ ನಿರ್ಮಾಣ ಸಂಸ್ಥೆ!

2022 ರಲ್ಲಿ ಬೆನ್ನು ಬೆನ್ನಿಗೆ ಎರಡು ಯಶಸ್ವಿ ಚಿತ್ರಗಳಾದ ಕೆ.ಜಿ.ಎಫ್-೨ ಮತ್ತು ಕಾಂತಾರ ಚಿತ್ರಗಳನ್ನು ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರು ಮುಂದಿನ ಐದು ವರ್ಷಕ್ಕೆ ಬರೋಬ್ಬರಿ 3,000 ಕೋಟಿ ರೂ ಹೂಡಿಕೆ ಮಾಡಲಿದ್ದಾರೆ. ಅಲ್ಲದೆ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯು ಮುಂದಿನ ಎರಡು ವರ್ಷಗಳಲ್ಲಿ 10-12 ಚಿತ್ರಗಳನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದೆ. ದಕ್ಷಿಣ ಭಾರತದ ಘಟಾನುಘಟಿ ನಟರನ್ನು ಹೊಂಬಾಳೆ ಫಿಲ್ಮ್ಸ್ ತೆರೆಗೆ ತರಲಿದ್ದು ಹೊಂಬಾಳೆಯಿಂದ ಎಲ್ಲರ ಬಾಳು ಬಂಗಾರವಾಗಲಿದೆ. ಪ್ರಭಾಸ್ ನಟನೆಯ ಸಲಾರ್, ಪೃಥ್ವಿರಾಜ್ ನ ಟೈಸನ್, […]
ಶಾರುಖ್ ಖಾನ್ ಪಠಾಣ್ ಗೆ ಸೆನ್ಸರ್ ಸರ್ಜರಿ: ಚಿತ್ರದಲ್ಲಿ ಬದಲಾವಣೆ ಮಾಡಿ ಪರಿಷ್ಕೃತ ಆವೃತ್ತಿ ಸಲ್ಲಿಸಲು ಸಿ.ಬಿ.ಎಫ್.ಸಿ ಸೂಚನೆ

ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರದ ಮುಂಬರುವ ಬಿಡುಗಡೆಯ ಸುತ್ತಲಿನ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಅಧ್ಯಕ್ಷ ಪ್ರಸೂನ್ ಜೋಶಿ, ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಚಿತ್ರದ ಹಾಡುಗಳು ಸೇರಿದಂತೆ “ಸಲಹೆ ಮಾಡಲಾದ ಬದಲಾವಣೆಗಳನ್ನು ಜಾರಿಗೆ ತರಲು” ತಯಾರಕರಿಗೆ ಸಿ.ಬಿ.ಎಫ್.ಸಿ ಪರೀಕ್ಷಾ ಸಮಿತಿ ಸೂಚಿಸಿದೆ ಎಂದು ಸುದ್ದಿ ಸಂಸ್ಥೆ ಪಿ.ಟಿ.ಐ ತಿಳಿಸಿದೆ ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿರುವ ಪಠಾಣ್, ಅದರ ಮೊದಲ ಹಾಡು ‘ಬೇಷರಂ ರಂಗ್’ ಬಿಡುಗಡೆಯಾದ ನಂತರ ದೊಡ್ಡ ವಿವಾದವನ್ನು […]
ಪ್ರೀತಿಯಲ್ಲಿ ಬಿದ್ದ ರಕ್ಷಿತ್ ಶೆಟ್ಟಿ: ‘ರಿಚರ್ಡ್ ಆಂಟನಿ’ ಚಿತ್ರಕಥೆ ಬರೆಯುತ್ತಿರುವ ಕಿರಿಕ್ ಹುಡುಗನ ಮನದಾಳದ ಮಾತು

ಚಲನ ಚಿತ್ರಗಳೆಂದರೆ ಹೀಗೇ ಇರಬೇಕು ಎನ್ನುವ ಸಿದ್ದ ಸೂತ್ರಗಳನ್ನು ಬದಿಗಿಟ್ಟು, ತಮ್ಮದೇ ಹಾದಿಯಲ್ಲಿ ನಡೆದು ಚಲನಚಿತ್ರವೆಂದರೆ ಚಲನಶೀಲ ಜಗತ್ತು, ಸಿದ್ಧ ಸೂತ್ರಗಳನ್ನು ನೆಚ್ಚಿಕೊಂಡು ಕೂರುತ್ತಲೆ ಇರಬೇಕೆಂದಿಲ್ಲ. ಬದಲಾವಣೆ ಜಗದ ನಿಯಮ ಮತ್ತು ಬದಲಾವಣೆಗಳು ಒಳ್ಳೆಯದಾಗಿದ್ದರೆ ಜನ ಅದನ್ನು ಒಪ್ಪಿಕೊಳ್ಳುತ್ತಾರೆ ಎಂದು ತೋರಿಸಿಕೊಟ್ಟವರು ಹಲವರಿದ್ದಾರೆ. ಕನ್ನಡ ಚಿತ್ರರಂಗವೂ ಈ ಬದಲಾವಣೆಗಳನ್ನು ಹಲವು ಬಾರಿ ಕಂಡಿದೆ. ಶಂಕರ್ ನಾಗ್, ರವಿಚಂದ್ರನ್, ಕಿಚ್ಚ ಸುದೀಪ್ ಮುಂತಾದವರು ಸಿದ್ದ ಸೂತ್ರಗಳನ್ನು ಬದಿಗಿಟ್ಟು ತಮ್ಮದೇ ಹಾದಿಯಲ್ಲಿ ನಡೆದು ಯಶಸ್ಸು ಕಂಡವರು. ಇದೀಗ ಅವರ ಹಾದಿಯಲ್ಲಿ […]
ಯೂಟ್ಯೂಬ್ ನಲ್ಲಿ ಬಿಡುಗಡೆಯಾಯ್ತು ಗಗನ್ ಗಾಂವ್ಕರ್ ಸುಮಧುರ ಕಂಠದಲ್ಲಿ ಸಿಂಗಾರ ಸಿರಿಯೆ ತುಳು ಆವೃತ್ತಿ

ವಿಶ್ವದಾದ್ಯಂತ ಕಿಚ್ಚು ಹಚ್ಚಿದ ಕಾಂತಾರ ಚಿತ್ರದ ಸಿಂಗಾರ ಸಿರಿಯೆ ಗೀತೆಯನ್ನು ಮೆಚ್ಚದವರೇ ಇಲ್ಲ. ಇದೀಗ ಸಿಂಗಾರ ಸಿರಿಯೆ ಹಾಡಿನ ತುಳು ಆವೃತ್ತಿಯು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರತಾಪ್ ಶೆಟ್ಟಿ ಸಾಹಿತ್ಯದ ಗೀತೆಯನ್ನು ಝೀಟಿವಿಯ ಸರೆಗಮಪ ಸಂಗೀತ ರಿಯಾಲಿಟಿ ಶೋ ವಿಜೇತ ಗಗನ್ ಗಾಂವ್ಕರ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಹಾಡಿನ ಮಿಕ್ಸಿಂಗ್ ಅನ್ನು ಉಡುಪಿಯ ನಿನಾದ್ ಆಡಿಯೋ ರೆಕಾರ್ಡಿಂಗ್ ಮಿಕ್ಸಿಂಗ್ ಸ್ಟುಡಿಯೋನ ಶರತ್ ಉಚ್ಚಿಲ ಮಾಡಿದ್ದಾರೆ.