ಮೇ 16ರಂದು “ಲೈಟ್ ಹೌಸ್” ಕನ್ನಡ ಚಲನಚಿತ್ರ ರಾಜ್ಯಾದ್ಯಂತ ಬಿಡುಗಡೆ

ಉಡುಪಿ: ಅಸ್ತ್ರ ಪ್ರೊಡಕ್ಷನ್ಸ್ ಹಾಗೂ ಆಮೆ ಕ್ರಿಯೇಶನ್ಸ್ ಬ್ಯಾನರ್‌ನಡಿ ನಿರ್ಮಾಣಗೊಂಡಿರುವ “ಲೈಟ್ ಹೌಸ್” ಕನ್ನಡ ಚಲನಚಿತ್ರವು ಇದೇ ಮೇ 16ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಸಂದೀಪ್ ಕಾಮತ್ ಅಜೆಕಾರು ತಿಳಿಸಿದರು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಚಿತ್ರದ ಬಹುಪಾಲು ಚಿತ್ರೀಕರಣವು ಉಡುಪಿಯ ರಮಣೀಯ ಪರಿಸರದಲ್ಲಿ ನಡೆದಿದ್ದು, ಕರಾವಳಿಯ ನೈಸರ್ಗಿಕ ಸೌಂದರ್ಯವನ್ನು ಸೆರೆಹಿಡಿಯಲಾಗಿದೆ.ಈ ಕುರಿತು ಮಾಹಿತಿ ನೀಡಿದ ಚಿತ್ರತಂಡ, “ಲೈಟ್ ಹೌಸ್” ಒಂದು ಸಂಪೂರ್ಣ ಸಾಂಸಾರಿಕ ಕಥಾಹಂದರವನ್ನು ಹೊಂದಿದ್ದು, ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಕುಳಿತು ಆನಂದಿಸಬಹುದಾದ ಚಿತ್ರ […]

 “ನಾನು ಐಶ್ವರ್ಯ ರೈ ಮಗ ,ಲಂಡನ್ ನಲ್ಲಿ ಜನಿಸಿದ್ದೇನೆ” ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಸಂಗೀತ್ ಕುಮಾರ್ ಹೇಳಿಕೆ

ಏಳೆಂಟು ವರ್ಷಗಳ ಹಿಂದೆ ಹೈದರಾಬಾದ್‌ನ ಸಂಗೀತ್ ಕುಮಾರ್  ಎನ್ನುವ ಯುವಕ “ನಾನು ಬಾಲಿವುಡ್ ನಟಿ ಐಶ್ವರ್ಯ ರೈ ಮಗ ನಾನು ಲಂಡನ್ ನಲ್ಲಿ ಐವಿಎಫ್ ಮೂಲಕ ಐಶ್ವರ್ಯ ರೈಗೆ ಜನಿದ್ದೇನೆ”ಎಂದು ಹೇಳಿಕೊಂಡಿದ್ದ ಅದು ಆಗ ವೈರಲ್ ಆಗಿತ್ತು ಇದೀಗ ಮತ್ತೆ ಸಂಗೀತ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷನಾಗಿದ್ದು ಇವನ ಪೋಸ್ಟ್ ಸಖತ್ ವೈರಲ್ಲಾಗುತ್ತಿದೆ. ಹೌದು ಆಂದ್ರ ಮೂಲಕ ಸಂಗೀತಕುಮಾರ್ (35)ವರ್ಷ ಆದಿ ರೆಡ್ಡಿಯಾಗಿದ್ದು ಇವನ ಹೇಳಿಕೆ ಇದೀಗ ಐಶ್ವರ್ಯಾ ಅಭಿಮಾನಿಗಳಲ್ಲಿ ಚರ್ಚೆಯಾಗುತ್ತಿದೆ. ತನ್ನ ತಂದೆ ಐಶ್ವರ್ಯಾ ರೈ […]

ಕನ್ನಡಿಗರ ತೀವ್ರ ಆಕ್ರೋಶಕ್ಕೆ ಉಲ್ಟಾ ಹೊಡೆದ ಸೋನು ನಿಗಮ್! ಹೊಸ ಹೇಳಿಕೆ ಏನು?

ನಿನ್ನೆಯಿಂದ  ತಾನು ನೀಡಿದ ಹೇಳಿಕೆಯ ಕಾರಣಕ್ಕೆ ಗಾಯಕ ಸೋನು ನಿಗಮ್ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗುತ್ತಲೇ ಇದ್ದಾರೆ. ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿಯಾಗಿದೆ ಎಂದು ವಿವಾದಿತ ಹೇಳಿಕೆ ನೀಡಿದ್ದ ಈ ಗಾಯಕ ಇದೀಗ ತನ್ನ ಮಾತುಗಳನ್ನು ಬೇರೊಂದು ರೀತಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ. ಈ ಹೇಳಿಕೆಯ ವಿರುದ್ಧ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗುತ್ತಿದ್ದಂತೆಯೇ ಸೋನು ನಿಗಮ್ ತನ್ನ ಹೇಳಿಕೆಯ ಟೋನ್ ಬದಲಿಸಿಕೊಂಡಿದ್ದಾರೆ.  ಕನ್ನಡ ಕನ್ನಡ ಎಂದು ಪ್ರೀತಿಯಿಂದ  ಕರೆಯುವುದಕ್ಕೂ, ಕನ್ನಡ ಕನ್ನಡ ಎಂದು ಧಮ್ಕಿ […]

ಮಾದಕ ದ್ರವ್ಯ ತಪಾಸಣೆಯ ವೇಳೆ ಹೊಟೇಲಿನಿಂದ ಸಿನಿಮಾ ಶೈಲಿಯಲ್ಲಿ ಪರಾರಿಯಾದ ಖ್ಯಾತ ಮಲಯಾಳಂ ನಟ!

ಕೇರಳದ ಕೊಚ್ಚಿಯಲ್ಲಿ ಅಧಿಕಾರಿಗಳು ನಡೆಸಿದ ಮಾಧಕ ದ್ರವ್ಯ ದಾಳಿಯ ವೇಳೆಯಲ್ಲಿ ಮಲಯಾಳಂ ನ ಖ್ಯಾತ ನಟ ಶೈನ್ ಟಾಮ್ ಚಾಕೊ ದಾಳಿಯ ಸ್ಥಳದಿಂದ ಓಡುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು  ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಮಲಯಾಳಂ ಚಿತ್ರರಂಗದಲ್ಲಿ ಮಾಧಕ ದ್ರವ್ಯ ಬಳಕೆ ಹೆಚ್ಷಾಗಿದೆ ಎನ್ನುವ ಆರೋಪ ಇತ್ತೀಚೆಗೆ ಕೇಳಿಬರತೊಡಗಿದ್ದು ಇದರ ನಡುವೆ ಈ ಹೊಸ ಪ್ರಕರಣ ಕೂಡ ಮಲಯಾಳಂ ಚಿತ್ರರಂಗದ ನಿದ್ದೆಗೆಡಿಸಿದೆ. ಕೆಲವು ಸಮಯದ ಹಿಂದೆ ನಟ ಶೈನ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ […]

ಕನ್ನಡದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ಇನ್ನಿಲ್ಲ.

ಬೆಂಗಳೂರು: ಕನ್ನಡದ ಹಿರಿಯ ನಟ ಬ್ಯಾಂಕ್ ಜನಾರ್ಧನ್ (76) ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಏಪ್ರಿಲ್ 14 ರಾತ್ರಿ 2.30ರ ಸುಮಾರಿಗೆ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಸುಲ್ತಾನ್ ಪಾಳ್ಯದ ನಿವಾಸದಲ್ಲಿ ಅವರ ಪಾರ್ಥೀವ ಶರೀರ ಇಡಲಾಗಿದೆ. 1949ರಲ್ಲಿ ಬ್ಯಾಂಕ್ ಜನಾರ್ಧನ್ ಅವರು ಚಿತ್ರದುರ್ಗದ ಹೊಳಲ್​ಕೆರೆಯಲ್ಲಿ ಜನಿಸಿದರು. 1985ರಲ್ಲಿ ‘ಪಿತಾಮಹ’ ಚಿತ್ರದ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ‘ಬೆಟ್ಟದ ತಾಯಿ’, ‘ಪೊಲೀಸ್ ಹೆಂಡತಿ’, ‘ಶ್​..’, ‘ತರ್ಲೆ ನನ್ಮಗ’ ಹೀಗೆ ಹಲವು ಚಿತ್ರಗಳಲ್ಲಿ […]