ಕುಡಿಯೋದನ್ನು ನಿಲ್ಲಿಸಿದ ಒಂದೇ ದಿನದಲ್ಲಿ ನಿಮ್ಮಲ್ಲಾಗುತ್ತೆ ಈ ಪಾಸಿಟಿವ್ ಬದಲಾವಣೆಗಳು: ಕುಡಿಯೋ ಅಭ್ಯಾಸ ಇರುವವರು ಒಮ್ಮೆ ಓದಿ

ದಿನನಿತ್ಯ ಮದ್ಯಪಾನ ಮಾಡುವ ಅಭ್ಯಾಸ ಶೇ.50 ರಷ್ಟು ಮಂದಿಗೆ ಇದೆ ಎನ್ನಲಾಗಿದೆ. ಮದ್ಯಪಾನದಿಂದ ಗಂಭೀರವಾದ ಆರೋಗ್ಯ ಸಮಸ್ಯೆಗಳು ಸಂಭವಿಸುತ್ತೆ ಎನ್ನುವ ಸತ್ಯ ಗೊತ್ತಿದ್ದರೂ ತುಂಬಾ ಮಂದಿ ಮದ್ಯಪಾನದತ್ತ ಆಕರ್ಷಿತರಾಗುತ್ತಾರೆ. ನಾವಿಲ್ಲಿ ಬರೀ ಒಂದು ದಿನ ಮದ್ಯಪಾನ ಬಿಟ್ಟರೆ ಏನೆಲ್ಲಾ ಒಳ್ಳೆಯ ಬದಲಾವಣೆಗಳು ನಮ್ಮ ದೇಹದ ಮೇಲಾಗುತ್ತದೆ? ಆಮೇಲೆ ಒಂದು ತಿಂಗಳು, ಮೂರು ತಿಂಗಳು, ಒಂದು ವರ್ಷ ಬಿಡುವುದರಿಂದ ಯಾವೆಲ್ಲಾ ಒಳ್ಳೆಯ ಬದಲಾವಣೆಗಳು ನಮ್ಮ ದೇಹದ ಮೇಲಾಗುತ್ತದೆ ಎನ್ನುವುದನ್ನು ವಿವರಿಸುತ್ತೇವೆ. 24 ಗಂಟೆಯಲ್ಲಿ ನೀವು ಮದ್ಯಪಾನ ಮಾಡುವುದನ್ನು ನಿಲ್ಲಿಸಿದ […]

ಕಾರಿನಲ್ಲಿ ಎಸಿ ಹಾಕಿ ಮಲಗೋ ಅಭ್ಯಾಸ ನಿಮಗಿದ್ಯಾ?: ಈ ಅಭ್ಯಾಸದಿಂದ ಜೀವಕ್ಕೇ ಆಪತ್ತು!

ತುಂಬಾ ಮಂದಿಗೆ ಕಾರಿನಲ್ಲಿ ಎಸಿ ಆನ್ ಮಾಡಿ ನಿದ್ರಿಸುವ ಅಭ್ಯಾಸ ಇದ್ದೇ ಇರುತ್ತದೆ. ಕೆಲವರಿಗೆ ಇದು ಆರಾಮದಾಯಕ ಫೀಲ್ ಕೂಡ ಕೊಡಬಹುದು. ಆದರೆ ಇತ್ತೀಚೆಗೆ ಕೆಲವೊಂದು ಅಧ್ಯಯನ ಮತ್ತು ಘಟನೆಗಳಿಂದ ಒಂದು ಸತ್ಯ ಹೊರಬಿದ್ದಿದೆ ಅದೇನು ಅಂದ್ರೆ, ಎಸಿ ಹಾಕಿ ಮಲಗೋದ್ರಿಂದ ಕೆಲವು ಅಪಾಯಗಳು ನಮ್ಮ ಜೀವಕ್ಕೆ ಸಂಭವಿಸುತ್ತದೆ ಎನ್ನುವ ಅಂಶ ಗೊತ್ತಾಗಿದೆ. ಹೌದು ಇತ್ತೀಚೆಗೆ, ನೋಯ್ಡಾದಲ್ಲಿ ಒಂದು ಘಟನೆ ನಡೆಯಿತು, ಕಾರು ಚಾಲಕ ಮತ್ತು ಅವನ ಸ್ನೇಹಿತ ಇಬ್ಬರೂ ಕ್ಯಾಬ್‌ನಲ್ಲಿ ನಿದ್ರಿಸಿದ್ದರು. ಆದರೆ, ಕಾರು ಚಾಲಕ […]

ತಾಮ್ರದ ಬಾಟಲಿಯಲ್ಲಿ ನೀರು ಕುಡಿದು ನೋಡಿ, ಕೆಲವೇ ಸಮಯದಲ್ಲಿ ಗೊತ್ತಾಗುತ್ತೆ ಆರೋಗ್ಯದಲ್ಲಾಗೋ ಈ ಪಾಸಿಟಿವ್ ಬದಲಾವಣೆಗಳು!

ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದು ಪ್ರಾಚೀನ ಜೀವನಶೈಲಿಯ ಒಂದು ಭಾಗವಾಗಿತ್ತು.ಇದೊಂದು ಆರೋಗ್ಯಕರ ಮಾರ್ಗ ಎಂದು ಹಿರಿಯರು ನಂಬಿದ್ದರು.  ತಾಮ್ರದಲ್ಲಿಆಂಟಿಮೈಕ್ರೊಬಿಯಲ್  ಗುಣವು ದೇಹದ ಶಕ್ತಿಯನ್ನು ಸಮತೋಲನಗೊಳಿಸುತ್ತದೆ ಎನ್ನುವ ನಂಬಿಕೆ ಇಂದು ನಿನ್ನೆಯದ್ದಲ್ಲ. ಆದರೆ ಕ್ರಮೇಣ ತಾಮ್ರದ ಪಾತ್ರೆಗಳು ಕಾಣೆಯಾದವು, ಮೂಲೆಗುಂಪಾದವು. ಆದರೆ ಈಗ ತಾಮ್ರದ ಟ್ರೆಂಡ್ ಮತ್ತೆ ಶುರುವಾಗಿದೆ. ತಾಮ್ರದ ಬಾಟಲಿಗಳು ಅಥವಾ ಪಾತ್ರೆಗಳಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವ ಬಳಕೆ ಅಲ್ಲಲ್ಲಿ ಶುರುವಾಗಿದೆ. ಹಾಗಾದ್ರೆ ಬನ್ನಿ ತಾಮ್ರದ ಬಾಟಲಿ ಅಥವಾ ಪಾತ್ರೆಯಲ್ಲಿ ನೀರನ್ನು ಸೇವಿಸುದರಿಂದ ಆಗುವ ಉಪಯೋಗಗಳೇನು ತಿಳಿದುಕೊಳ್ಳೋಣ. […]

ಅಗರಬತ್ತಿ ಹೊಗೆಯಲ್ಲಿದೆ, ಸಿಗರೇಟ್ ಹೊಗೆಗಿಂತಲೂ ಮಾರಕವಾದ ಅಂಶ: ಅಗರಬತ್ತಿ ಹೊಗೆ ಭಾರೀ ಅಪಾಯಕಾರಿ! ಅಧ್ಯಯನ ಬಿಚ್ಚಿಟ್ಟ ಭಯಾನಕ ಸತ್ಯ!

ಧಾರ್ಮಿಕ ಕಾರ್ಯಕ್ರಮಗಳಿಗೆ ಅಗರಬತ್ತಿಗಳನ್ನು ಬಳಸೋದು ಎಲ್ಲೆಡೆ ಮಾಮೂಲು. ಕೆಲವರು ಮನೆ ಮನಸ್ಸು ಪರಿಮಳವಾಗಿರಲಿ ಎನ್ನುವ ಕಾರಣಕ್ಕೂ ಊದುಬತ್ತಿಗಳನ್ನು ಹಚ್ಚಿಡುತ್ತಾರೆ. ಆದರೆ ಊದುಬತ್ತಿಯ ಹೊಗೆಯ ಬಗ್ಗೆ ಆತಂಕಕಾರಿ ಮಾಹಿತಿಯೊಂದು ಹೊರಬಿದ್ದಿದ್ದು ಇದರಲ್ಲಿ ಊದುಬತ್ತಿ ಆರೋಗ್ಯದ ಮೇಲೆ ಗಂಭೀರಾದ ಪರಿಣಾಮ ಬೀರುತ್ತೆ ಎನ್ನುವ ಬಗ್ಗೆ ವೈಜ್ಞಾನಿಕ ಅಂಶ ಸಾಬೀತಾಗಿದೆ. ಹೌದು. ದಕ್ಷಿಣ ಚೀನಾದ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಈ ಅಧ್ಯಯನವು, ಅಗರಬತ್ತಿಯ ಹೊಗೆಯು ಸಿಗರೇಟ್ ಧೂಮಕ್ಕಿಂತಲೂ ಹೆಚ್ಚು ವಿಷಕಾರಿ ಎನ್ನುವ ಆತಂಕಕಾರಿ ಮಾಹಿತಿ ದೊರೆತಿದೆ. ಅಂತದ್ದೇನಿದೆ ಅಗರಬತ್ತಿಯಲ್ಲಿ? ಅಗರಬತ್ತಿ ಹೊಗೆಯಲ್ಲಿ […]

ಬದುಕಿಗೆ ಬಲ, ಯುಗಾದಿಯ ಫಲ: ಯುಗಾದಿ ವಿಶೇಷ ಬರಹ

ಯುಗಾದಿ ಎಂದರೆ ಹೊಸತರ ಸಮ್ಮಿಶ್ರಣ. ಈ ಯುಗಾದಿಯಲ್ಲಿ ಫಲವೂ ಸಿಗುತ್ತದೆ. ಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದರಿಂದ ಹೆಚ್ಚಿನ ಪ್ರಯೋಜನವಿದೆ. ಪಂಚ ಎಂದರೆ ಐದು, ಅಂಗ ಎಂದರೆ ಭಾಗ, ವಾರ, ತಿಥಿ, ಯೋಗ, ನಕ್ಷತ್ರ ಮತ್ತು ಕರಣ ಇವೇ ಆ ಐದು ಅಂಗಗಳು. ಈ ಐದು ಭಾಗಗಳಿಂದ ಕೂಡಿದ ವಿವರವೇ ಪಂಚಾಂಗ, ಪಂಚ + ಅಂಗ = ಪಂಚಾಂಗ, ಇವುಗಳಲ್ಲಿ ಒಂದು ಭಾಗವನ್ನು ಬಿಟ್ಟರೂ ಪಂಚಾಂಗ ಶಾಸ್ತ್ರ ಪೂರ್ಣವಾಗುವುದಿಲ್ಲ. ಇದು ಐದು ಬೆರಳುಗಳ ಪೂರ್ಣಹಸ್ತವಿದ್ದಂತೆ. ಯಾವುದೇ ಶುಭ ಕಾರ್ಯವನ್ನು […]