ಐಸಿಐಸಿಐಯಿಂದ 1200 ಕೋಟಿ ಆರ್ಥಿಕ ನೆರವು ಟಾಟಾ ಸ್ಮಾರಕ ಕೇಂದ್ರದ ಮಡಿಲಿಗೆ

ಮುಂಬೈ: ಟಾಟಾ ಸ್ಮಾರಕ ಕೇಂದ್ರಕ್ಕೆ ಐಸಿಐಸಿಐ 1200 ಕೋಟಿ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ. ಹೆಚ್ಚಿನ ಕ್ಯಾನ್ಸರ್ ರೋಗಿಗಳಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಟಾಟಾ ಸ್ಮಾರಕ ಕೇಂದ್ರಕ್ಕೆ (ಟಿಎಂಸಿ) 1,200 ಕೋಟಿ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಐಸಿಐಸಿಐ ಬ್ಯಾಂಕ್ ಘೋಷಿಸಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ ಸೇರಿದಂತೆ ಮೂರು ಪ್ರದೇಶಗಳಲ್ಲಿ ಟಿಎಂಸಿಯ ಕ್ಯಾನ್ಸರ್ ಆಸ್ಪತ್ರೆಗಳ ವಿಸ್ತರಣೆಗೆ ಈ ಹಣವನ್ನು ನೀಡುವುದಾಗಿ ಅದರ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಇಲಾಖೆ ಹೇಳಿದೆ. ವಿಸ್ತರಣೆಯು ನವಿ ಮುಂಬೈನ ಖಾರ್ಘರ್ನಲ್ಲಿರುವ ಕ್ಯಾನ್ಸರ್ನಲ್ಲಿನ ಚಿಕಿತ್ಸೆ […]
Udupi:ಮಹಿಳೆಯರಿಗಾಗಿ ಏಂಜೆಲ್ಸ್ zumba ಫಿಟ್ ನೆಸ್ ಕ್ಲಾಸ್

ಉಡುಪಿ: ಇಲ್ಲಿನ ಸಿಟಿ ಬಸ್ ನಿಲ್ದಾಣದ ಬಳಿ ಇರುವ ರಾಜ್ ಟವರ್ಸ್ ನ 5 ನೇ ಮಹಡಿಯಲ್ಲಿ ದರ್ಪಣ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ನಲ್ಲಿ ಪ್ರತಿದಿನ ಬೆಳಗ್ಗೆ 10.30 ರಿಂದ 11.30 ಮತ್ತು ಸಂಜೆ 6.30 ರಿಂದ 7.30 ರವರೆಗೆ ಮಹಿಳೆಯರಿಗಾಗಿ zumba ಫಿಟ್ ನೆಸ್ ತರಗತಿಗಳು ನಡೆಯುತ್ತಿದ್ದು ಆಸಕ್ತರು 9380323108 ಅನ್ನು ಸಂಪರ್ಕಿಸಬಹುದು. https://g.co/kgs/dW2VsH https://instagram.com/ange_lsfitness?igshid=MzRlODBiNWFlZA==
ಮನೆಯ ಕೈತೋಟದಲ್ಲಿ ಬೆಳೆಯುವ ಚೆಂಗುಲಾಬಿ ಹೂವಿನಲ್ಲಿದೆ ಸ್ವಸ್ಥ ಮೈನಸ್ಸು ಮತ್ತು ಸೌಂದರ್ಯದ ಗುಟ್ಟು!

ಗುಲಾಬಿ ಹೂವು ನೀವು ಎಂದೂ ಯೋಚಿಸಿರದ ಹಲವಾರು ಆರೋಗ್ಯ ಪ್ರಯೋಜನಗಳನ್ನು ನಿಮಗೆ ನೀಡುತ್ತದೆ ಎನ್ನುವುದು ನಿಮಗೆ ತಿಳಿದಿದೆಯೆ? ಮನೆಯ ಹೂದೋಟಗಳಲ್ಲಿ ತಣ್ಣನೆ ನಸುನಗುತ್ತಾ ನಿಂತಿರುವ ಈ ಹೂವು ನಿಮ್ಮ ದೇಹ, ಮನಸ್ಸು ಮತ್ತು ಚರ್ಮದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಮತ್ತು ಪ್ರಾಚೀನ ಕಾಲದಿಂದಲೂ ಸೌಂದರ್ಯಪ್ರಸಾಧನಗಳಲ್ಲಿ ಇದನ್ನು ಬಳಸಲಾಗುತ್ತಿದೆ. ಗುಲಾಬಿಯು ತಾನು ಎಷ್ಟು ಚೆಲುವುಳ್ಳ ಹೂವಾಗಿದೆಯೋ ಅದನ್ನು ತಲೆಯಲ್ಲಿ ಮುಡಿಯುವುದರಿಂದ ಹೆಂಗಳೆಯರ ಚೆಲುವು ಹೇಗೆ ಇಮ್ಮಡಿಸುತ್ತದೋ ಅಂತೆಯೆ ಗುಲಾಬಿಯನ್ನು ನಿಯಮಿತವಾಗಿ ಮತ್ತು ಹಿತಮಿತವಾಗಿ ಬಳಸಿದಲ್ಲಿ ದೇಹ ಮತ್ತು […]
ಮಸಾಲೆಗಳ ರಾಣಿ ಬಹುಪಯೋಗೀ ಏಲಕ್ಕಿಯ ಆರೋಗ್ಯಕಾರಿ ಪ್ರಯೋಜನಗಳು

ಮಸಾಲೆಗಳ ರಾಣಿ ಎಂದೂ ಕರೆಯಲ್ಪಡುವ ಏಲಕ್ಕಿಯನ್ನು ಭಾರತೀಯ ಸಾಂಪ್ರದಾಯಿಕ ಔಷಧ ಅಥವಾ ಆಯುರ್ವೇದದಲ್ಲಿ ಶತಮಾನಗಳಿಂದಲೂ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿದೆ. ಏಲಕ್ಕಿ ಅಥವಾ ಎಲೈಚಿ ಬಹುಪಯೋಗಿ ಮಸಾಲೆಯಾಗಿದ್ದು, ಇದನ್ನು ಬಿರಿಯಾನಿ, ಪುಲಾವ್, ಚಹಾ ಮತ್ತು ಹಲವಾರು ತಿಂಡಿ ತಿನಿಸುಗಳಲ್ಲಿ ಬಳಸುವುದು ಕೇವಲ ಸುವಾಸನೆಗೆ ಮಾತ್ರವಲ್ಲ, ಬದಲಿಗೆ ಇದರಲ್ಲಿರುವ ಆರೋಗ್ಯಭರಿತ ಅಂಶಗಳಿಗಾಗಿಯೂ ಹೌದು. ಏಲಕ್ಕಿಯು ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ನಂತಹ ಪೋಷಕಾಂಶಗಳು, ವಿಟಮಿನ್ಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಅಜೀರ್ಣದ ಸಮಸ್ಯೆಗಳನ್ನು ನಿವಾರಿಸುತ್ತದೆ ಏಲಕ್ಕಿ ಚಹಾವು ಅಜೀರ್ಣ, […]
ಆಹಾರದ ಬದಲಾವಣೆಯು ಅಸ್ತಮಾ ರೋಗವನ್ನು ನಿರ್ವಹಿಸುವಲ್ಲಿ ಸಹಾಯ ಮಾಡಬಹುದು: ಡಾ. ಸುದರ್ಶನ್ ಕೆ.ಎಸ್.

ವ್ಯಕ್ತಿಯಲ್ಲಿ ಉಸಿರಾಟದ ವಾಯು ಮಾರ್ಗಗಳು ಉರಿಯೂತಕ್ಕೊಳಗಾವುದು, ಕಿರಿದಾಗುವುದು ಮತ್ತು ಊದಿಕೊಳ್ಳುವುದು ಮತ್ತು ಹೆಚ್ಚುವರಿ ಲೋಳೆಯ ಉತ್ಪತ್ತಿಯಾಗುವ ಸ್ಥಿತಿಯನ್ನು ಆಸ್ತಮಾ ಎನ್ನುತ್ತಾರೆ. ಇದರಿಂದ ಉಸಿರಾಡಲು ಕಷ್ಟವಾಗುತ್ತದೆ. ಆಸ್ತಮಾ ಅಲ್ಪ ಪ್ರಮಾಣದ್ದಾಗಿರಬಹುದು ಅಥವಾ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯುಂಟು ಮಾಡುವಂತಹುದ್ದಾಗಿರಬಹುದು. ಕೆಲವೊಮ್ಮೆ ಇದು ಮಾರಣಾಂತಿಕ ಆಸ್ತಮಾ ದಾಳಿಗೆ ಕಾರಣವಾಗಬಹುದು. ಆಸ್ತಮಾ ಸಮಸ್ಯೆಯು ಉಸಿರಾಟದ ತೊಂದರೆ, ಎದೆ ನೋವು, ಕೆಮ್ಮು ಮತ್ತು ಉಬ್ಬಸವನ್ನು ಉಂಟುಮಾಡಬಹುದು. ರೋಗಲಕ್ಷಣಗಳು ಕೆಲವೊಮ್ಮೆ ಉಲ್ಬಣಗೊಳ್ಳಬಹುದು. ಆಹಾರ ಪದ್ಧತಿಯು ರೋಗಿಗಳಲ್ಲಿ ಆಸ್ತಮಾ ಪರಿಸ್ಥಿತಿಯನ್ನು ಹೆಚ್ಚಿಸಬಹುದು ಅಥವಾ ಸ್ವಲ್ಪ ಪರಿಹಾರ ಉಂಟುಮಾಡಬಹುದು […]