ಉಡುಪಿ: ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಸೆ.17ರ ವರೆಗೆ ವಿಶೇಷ ಸೋಣಾರತಿ

ಉಡುಪಿ: ಉಡುಪಿಯ ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಸೋಣೆ ಮಾಸದ ದಿನಂಪ್ರತಿ ಸೆ. 17ರ ತನಕ ವಿಶೇಷ ಸೋಣಾರತಿ ಸೇವೆ ನಡೆಯಲಿದೆ. ಆ ಪ್ರಯುಕ್ತ ಕ್ಷೇತ್ರದಲ್ಲಿ ಪ್ರತೀ ಶುಕ್ರವಾರ ವಿಶೇಷ ಪೂಜೆ, ಜತೆಗೆ ಸೋಣೆ ಮಾಸದ ನಾಲ್ಕು ಶುಕ್ರವಾರವೂ‌ ವಿವಿಧ ಧಾರ್ಮಿಕ ಕಾರ್ಯಕ್ರಮ‌ ನಡೆಯಲಿದೆ. ಈ ಸಂದರ್ಭ ಹೂವಿನ ಪೂಜೆ, ರಂಗಪೂಜೆ, ಹಾಲು ಪಾಯಸ, ಅನ್ನಸಂತರ್ಪಣೆ ನಡೆಯಲಿದೆ. ಸೋಣಾರತಿ ಸಮಯದಲ್ಲಿ‌ ಹಲಸಿನ ಮರದ ವಿವಿಧ ಆಕೃತಿಗಳ 12 ಆರತಿಗಳನ್ನು ಬೆಳಗಲಾಗುತ್ತದೆ. ಪ್ರತೀ ಶುಕ್ರವಾರ ಬೆಳಗಲ್ಪಡುವ 14 […]

ಶ್ರೀ ಕೃಷ್ಣ ಮಠ:1500 ಗೋವುಗಳಿಗೆ ದೇಣಿಗೆ ಸಂಗ್ರಹ

ಉಡುಪಿ:  ಶ್ರೀ ಕೃಷ್ಣ  ಮಠದ ರಥಬೀದಿಯಲ್ಲಿ ನಡೆದ  ವಿಟ್ಲಪಿಂಡಿ ಉತ್ಸವದಂದು ಪೇಜಾವರ ಮಠಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಯುತ್ತಿರಯುವ ನೀಲಾವರ ಗೋಶಾಲೆಯ ಸುಮಾರು 1500 ಗೋವುಗಳಿಗೆ  ಜಿಲ್ಲಾ ಯುವಬ್ರಾಹ್ಮಣ ಪರಿಷತ್ತಿನ ಸದಸ್ಯರು ಹಾಗೂ ಭಕ್ತಾಧಿಗಳಿಂದ ದೇಣಿಗೆ ಸಂಗ್ರಹವನ್ನು 10 ವರ್ಷಗಳಿಂದ ಮಾಡುತ್ತಿದ್ದು, ಈ ವರ್ಷ ಪರ್ಯಾಯ  ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು,ಅದಮಾರು ಕಿರಿಯ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹಾಗೂ ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ದೇಣಿಗೆ ಹಾಕುವ  ಮೂಲಕ ಚಾಲನೆ ನೀಡಿದರು. ಪರಿಷತ್ತಿನ ಅಧ್ಯಕ್ಶರಾದ […]

ಶ್ರೀ ಕೃಷ್ಣ ಮಠ:ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ್ ವಿನಮ್ರ ಸಹಾಯಧನ ವಿತರಣೆ

ಉಡುಪಿ:   ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಯಕ್ಷಗಾನ ಕಲಾರಂಗ  ಉಡುಪಿ ಇದರ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹದಿನೈದನೇ ವರ್ಷದ ವಿದ್ಯಾಪೋಷಕ್ ವಿನಮ್ರ ಸಹಾಯಧನ ವಿತರಣೆ ಕಾರ್ಯಕ್ರಮವನ್ನು ಅದಮಾರು ಮಠದ ಶ್ರೀ ಶ್ರೀ ಈಶಪ್ರಿಯ ತೀರ್ಥರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಡಾ.ಜಿ.ಶಂಕರ್ ವಹಿಸಿದ್ದರು.  ರತ್ನಕುಮಾರ್, ಆನಂದ್ ಸಿ.ಕುಂದರ್,ಪ್ರಮೋದ್ ಮಧ್ವರಾಜ್,ಮಹಾಲಿಂಗೇಶ್ವರ ಕೆ.,ಸುಜಿತ್ ಕುಮಾರ್, ಡಾ.ತಲ್ಲೂರ್ ಶಿವರಾಮ ಶೆಟ್ಟಿ, […]

ಶ್ರೀ ಕೃಷ್ಣ ಮಠ: ಅನುಗ್ರಹ ಸಂದೇಶ   ಕಾರ್ಯಕ್ರಮ

ಉಡುಪಿ:  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀಜಗದ್ಗುರು ಮೂಲಮಹಾಸಂಸ್ಥಾನಂ ಶ್ರೀಹೃಷಿಕೇಶತೀರ್ಥಪೀಠಮ್ ಪರ್ಯಾಯ ಶ್ರೀಪಲಿಮಾರು ಮಠದ ಆಶ್ರಯದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಮಹೋತ್ಸವದ ಕಾರ್ಯಕ್ರಮಗಳ ಎಂಟನೇ ದಿನದಂದು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಅದಮಾರು ಕಿರಿಯ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹಾಗೂ ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ  ನೀಡಿದರು. ಸಮಾರಂಭದಲ್ಲಿ  ನಾಡೋಜ ಡಾ.ಜಿ.ಶಂಕರ್, ಭುವನೇಂದ್ರ ಕಿದಿಯೂರು, ಆನಂದ ಸಿ.ಕುಂದರ್, ಹರಿಯಪ್ಪ ಕೋಟಿಯಾನ್, ವಿದ್ವಾನ್ ಮಧೂರು ಬಾಲಸುಬ್ರಮಣ್ಯ,  ಪ್ರತಿಭಾ ಸಾಮಗ, ಭೋಜರಾಜ ಕಿದಿಯೂರು, ಜಯಚಂದ್ರ ಐ.ಕೆ, ವಿಷ್ಣು ಆರ್. ಆಚಾರ್ಯ, […]