ವರ್ಷದ ಕೊನೆಯ ಚಂದ್ರಗ್ರಹಣ ಗೋಚರ ಮೋಕ್ಷದ ನಂತರ ದೇವಾಲಯಗಳ ಶುದ್ಧೀಕರಣ, ವಿಶೇಷ ಪೂಜೆ

ನವದೆಹಲಿ: 2023ರ ಕೊನೆಯ ಚಂದ್ರಗ್ರಹಣ ಶನಿವಾರ ರಾತ್ರಿ ಸಂಭವಿಸಿತು.ಖಂಡಗ್ರಾಸ ಗ್ರಹಣವು ಒಟ್ಟು 3 ಗಂಟೆ 7 ನಿಮಿಷಗಳ ಕಾಲ ನಡೆಯಿತು. ಅಕ್ಟೋಬರ್ 29ರ ಮಧ್ಯರಾತ್ರಿ 1 ಗಂಟೆ 05 ನಿಮಿಷಕ್ಕೆ ಆರಂಭವಾದ ಗ್ರಹಣವು 2 ಗಂಟೆ 24 ನಿಮಿಷಕ್ಕೆ ಕೊನೆಗೊಂಡಿದೆ. 2023ರ ಕೊನೆಯ ಚಂದ್ರಗ್ರಹಣ ಕೊನೆಗೊಂಡಿದೆ. ಗ್ರಹಣ ಮೋಕ್ಷದ ನಂತರ ದೇಶದ ವಿವಿಧ ದೇವಾಲಯಗಳಲ್ಲಿ ಶುದ್ಧೀಕರಣ ಕಾರ್ಯ ನಡೆಯಿತು. ಜಗತ್ತಿನ ಹಲವೆಡೆ ಜನರು ಆಗಸದಲ್ಲಿ ಸಂಭವಿಸಿದ ಕೌತುಕ ವೀಕ್ಷಿಸಿದರು. ಉಜ್ಜಯಿನಿ ಮಹಾಕಾಲ ದೇವಾಲಯದಲ್ಲಿ ಶುದ್ಧೀಕರಣ: ದೇಶದ ಪ್ರಸಿದ್ಧ […]

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿದ ಹಾವೇರಿಯ ಮೈಕ್ರೋ ಕಲಾವಿದ : ಅಕ್ಕಿ ಕಾಳಿನಲ್ಲಿ ನಾಡಗೀತೆ

ಹಾವೇರಿ: ತಾಲೂಕಿನ ಗುಡಿಸಲಕೊಪ್ಪ ಗ್ರಾಮದ ಪರಮೇಶ್​ ಶಂಕ್ರಪ್ಪ ಬಂಡಿ ಎಂಬ ಮೈಕ್ರೋ ಕಲಾವಿದ ಅಕ್ಕಿ ಕಾಳಿನ ಮೇಲೆ ನಾಡಗೀತೆ ಬರೆದು ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ಗೆ ಸೇರ್ಪಡೆಯಾಗಿದ್ದಾರೆ.ಸೂಕ್ಷ್ಮಕಲೆಯನ್ನು ಕರಗತ ಮಾಡಿಕೊಂಡಿರುವ ಪರಮೇಶ್​ ಕೇವಲ 80 ನಿಮಿಷದಲ್ಲಿ 144 ಅಕ್ಕಿಕಾಳಿನಲ್ಲಿ ನಾಡಗೀತೆ ಬರೆದು ಈ ದಾಖಲೆ ನಿರ್ಮಿಸಿದ್ದಾರೆ. ಮೈಕ್ರೋ ಕಲಾವಿದ ಪರಮೇಶ್​ ಶಂಕ್ರಪ್ಪ ಬಂಡಿ ಅವರು ಅಕ್ಕಿ ಕಾಳಿನ ಮೇಲೆ ನಾಡಗೀತೆ ಬರೆದು ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾ ಮತ್ತು ಇಂಡಿಯಾ […]

51,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ನರೇಂದ್ರ ಮೋದಿ : ರೋಜಗಾರ್​ ಮೇಳ

ನವದೆಹಲಿ: ರೋಜಗಾರ್​ ಮೇಳದ ಅಂಗವಾಗಿಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವಿಡಿಯೋ ಕಾನ್ಫೆರೆನ್ಸಿಂಗ್ ಮೂಲಕ ಅರ್ಹ 51,000ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ನೀಡಿದರು.ಹೊಸದಾಗಿ ನೇಮಕಗೊಂಡ 51,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ನೇಮಕಾತಿ ಪತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಇಂದು ವಿತರಿಸಿದರು. ಉದ್ಯೋಗ ಪಡೆಯುವ ಯುವಕರಿಗೆ ಈ ಅವಕಾಶ ದೀಪಾವಳಿಗಿಂತ ಕಡಿಮೆಯಿಲ್ಲ ಎಂದರು. ದೇಶಾದ್ಯಂತ 37 ಸ್ಥಳಗಳಲ್ಲಿ ಈ ರೋಜ್‌ಗಾರ್ ಮೇಳ ನಡೆಯಿತು. ಈ ಮೇಳದ ಅಂಗವಾಗಿ ಕೇಂದ್ರ ಸರ್ಕಾರದ ಇಲಾಖೆಗಳು ಹಾಗೂ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ […]

ಮುಂದಿನ ತಿಂಗಳವರೆಗೆ ಏರುಗತಿಯಲ್ಲಿರಲಿದೆ ಈರುಳ್ಳಿ ಬೆಲೆ: ಡಿಸೆಂಬರ್ ವೇಳೆಗೆ ಇಳಿಕೆ ಸಾಧ್ಯತೆ

ನವದೆಹಲಿ: ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಇತರೆ ರಾಜ್ಯಗಳಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ. ಬೆಂಗಳೂರಿನ ಯಶವಂತಪುರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರತಿ ಕಿಲೋಗ್ರಾಂಗೆ ₹ 65-70ರಂತೆ ಈರುಳ್ಳಿ ಮಾರಾಟ ಮಾಡಿದೆ. ನವರಾತ್ರಿಯ ಬಳಿಕ ಈರುಳ್ಳಿ ಬೆಲೆಯು ಸತತ ಏರಿಕೆಯ ಹಾದಿ ತುಳಿದಿದ್ದು, ಸರ್ಕಾರದ ಅಂಕಿಅಂಶಗಳ ಪ್ರಕಾರ, ಈರುಳ್ಳಿಯ ಗರಿಷ್ಠ ಬೆಲೆ ಪ್ರತಿ ಕಿಲೋಗ್ರಾಂಗೆ ₹ 70 ರಷ್ಟಿದ್ದು, ಈ ಏರುಮುಖ ಪ್ರವೃತ್ತಿ ಡಿಸೆಂಬರ್‌ವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಈರುಳ್ಳಿಯ ಒಳಹರಿವು ಕಡಿಮೆಯಾಗಿದ್ದು, ಹೆಚ್ಚಿನ ದರಕ್ಕೆ ಕಾರಣವಾಗುತ್ತದೆ. […]

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 100 ಪದಕಗಳ ಗಡಿ ದಾಟಿ ಇತಿಹಾಸ ರಚಿಸಿದ ಭಾರತ

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಮಹತ್ವದ ಸಾಧನೆ ಮಾಡುವ ಮೂಲಕ ಭಾರತ 100 ಪದಕಗಳ ಗಡಿಯನ್ನು ಮುಟ್ಟಿದೆ. ಭಾರತೀಯ ಕ್ರೀಡಾಪಟುಗಳ ಅಸಾಧಾರಣ ಪ್ರತಿಭೆ, ಸಮರ್ಪಣೆ ಮತ್ತು ಪರಿಶ್ರಮವು ಈ ಯಶಸ್ಸಿಗೆ ಕಾರಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ಮೈಲಿಗಲ್ಲನ್ನು ಶ್ಲಾಘಿಸಿದ್ದಾರೆ.