ಪಾಕಿಸ್ಥಾನ ತಂಡವನ್ನು ಬಗ್ಗು ಬಡಿದು ಏಷ್ಯಾಕಪ್ ಎತ್ತಿ ಹಿಡಿದ ಭಾರತದ ಹಾಕಿ ತಂಡ

ಏಷ್ಯಾ ಕಪ್ ಹಾಕಿ ಫೈನಲ್‌ನಲ್ಲಿ ಭಾರತವು ಪಾಕಿಸ್ತಾನವನ್ನು ಪೆನಾಲ್ಟಿ ಶೂಟೌಟ್‌ನಲ್ಲಿಸೋಲಿಸಿ, ಓಮನ್‌ನ ಸಲಾಲಾದಲ್ಲಿ ನಿನ್ನೆ ನಡೆದ ಪುರುಷರ ಹಾಕಿ 5s ಏಷ್ಯಾ ಕಪ್ 2023 ಅನ್ನು ಗೆದ್ದುಕೊಂಡಿತು. ಈ ಗೆಲುವು FIH ಪುರುಷರ ಹಾಕಿ5 ವಿಶ್ವಕಪ್ ಓಮನ್ 2024 ಗಾಗಿ ಏಷ್ಯಾದ ಅರ್ಹತಾ ಪಂದ್ಯಾವಳಿಯಾಗಿ ಕಾರ್ಯನಿರ್ವಹಿಸಿತು. ಮೂರು ಕೂಟಗಳಲ್ಲಿ ಭಾರತ ಹಾಕಿ 5s ಮಾದರಿಯಲ್ಲಿ ಪಾಕಿಸ್ತಾನವನ್ನು ಸೋಲಿಸಿದ್ದು ಇದೇ ಮೊದಲು. ದ್ವಿತೀಯಾರ್ಧದಲ್ಲಿ 2-4 ರ ಹಿನ್ನಡೆಯಿಂದ, ಭಾರತದ ಮೊಹಮ್ಮದ್ ರಹೀಲ್ ಎರಡು ಗೋಲುಗಳ ನಂತರ ಪಂದ್ಯವನ್ನು ಶೂಟೌಟ್‌ಗೆ […]

100 ಮೀ. ಪ್ರಯಾಣಿಸಿದ ರೋವರ್: ಚಂದ್ರನ ಅಂಗಳದಲ್ಲಿ `ಪ್ರಜ್ಞಾನ್ ರೋವರ್’ ಭರ್ಜರಿ ಶತಕ!

ಬೆಂಗಳೂರು : ಪ್ರಗ್ಯಾನ್ 100 ನಾಟೌಟ್, ಚಂದ್ರನ ಮೇಲೆ, ಪ್ರಗನ್ ರೋವರ್ 100 ಮೀಟರ್ ಗಿಂತಲೂ ಹೆಚ್ಚು ಪ್ರಯಾಣಿಸಿದೆ ಮತ್ತು ಮುಂದುವರಿಯುತ್ತಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ.ಚಂದ್ರಯಾನ-3 ಯಶಸ್ವಿಯಾಗಿದ್ದು,ಆಗಸ್ಟ್ 23 ರಂದು ಸಂಜೆ 6.04 ಕ್ಕೆ ಚಂದ್ರಯಾನ -3 ಚಂದ್ರನ ಮೇಲೆ ಇಳಿಯಿತು. ಬುಧವಾರ ಚಂದ್ರಯಾನ 3 ಅನ್ನು ಇಳಿಸುವ ಮೂಲಕ ಭಾರತ ಇತಿಹಾಸ ನಿರ್ಮಿಸಿದೆ. ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಚಂದ್ರನ ಅಂಗಳದಲ್ಲಿ ಪ್ರಜ್ಞಾನ್ ರೋವರ್ […]

ಭಾರತೀಯ ಮೂಲದ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಥರ್ಮನ್ ಷಣ್ಮುಗರತ್ನಂ ಸಿಂಗಾಪುರದ ಮುಂದಿನ ಅಧ್ಯಕ್ಷ

ಭಾರತೀಯ ಮೂಲದ ಪ್ರಖ್ಯಾತ ಅರ್ಥಶಾಸ್ತ್ರಜ್ಞರಾದ ಥರ್ಮನ್ ಷಣ್ಮುಗರತ್ನಂ ಅವರು ಮುಂದಿನ ಆರು ವರ್ಷಗಳ ಕಾಲ ಸಿಂಗಾಪುರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈತ ಸಿಂಗಾಪುರದ ಒಂಬತ್ತನೇ ಅಧ್ಯಕ್ಷರಾಗಿದ್ದು ವಿಶ್ವದಲ್ಲಿ ಅಧ್ಯಕ್ಷ ಪದವಿಯನ್ನು ಅಲಂಕರಿಸಿದ ಮೂರನೇ ಭಾರತೀಯ ಮೂಲದ ವ್ಯಕ್ತಿಯಾಗಿದ್ದಾರೆ. ಥರ್ಮನ್ ಷಣ್ಮುಗರತ್ನಂ ಅವರ ಪೂರ್ವಜರು ತಮಿಳುನಾಡಿನವರಾಗಿದ್ದಾರೆ. 2.7 ಮಿಲಿಯನ್‌ಗಿಂತಲೂ ಹೆಚ್ಚು ಸಿಂಗಾಪುರದ ಮತದಾರರಲ್ಲಿ ಸರಿಸುಮಾರು ಶೇಕಡಾ ಒಂಬತ್ತು ಪ್ರತಿಶತವನ್ನು ರೂಪಿಸುವ ಸಿಂಗಾಪುರದ ಭಾರತೀಯ ಸಮುದಾಯದಿಂದ ಅವರು ಚುನಾಯಿಸಲ್ಪಟ್ಟಿದ್ದಾರೆ. 66 ವರ್ಷದ ಅರ್ಥಶಾಸ್ತ್ರಜ್ಞ , ಕ್ರೀಡಾ ಪಟು ಮತ್ತು ಕವಿಯಾಗಿರುವ ಥರ್ಮನ್, […]

ಕಳೆದ ವರ್ಷಕ್ಕಿಂತ ಆಗಸ್ಟ್​​ ಜಿಎಸ್​​​ಟಿ ಆದಾಯ 1,59,069 ಕೋಟಿ ರೂ.;ಶೇ 11ರಷ್ಟು ಹೆಚ್ಚಳ

ನವದೆಹಲಿ: ಆಗಸ್ಟ್​ನಲ್ಲಿ ದೇಶದ ಒಟ್ಟು ಜಿಎಸ್​ಟಿ ಆದಾಯ 1,59,069 ಕೋಟಿ ರೂ.ಗಳಾಗಿದೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ತಿಳಿಸಿವೆ. ಇದು ಜುಲೈನಲ್ಲಿ ಸಂಗ್ರಹವಾದ 1,65,105 ಕೋಟಿ ರೂ.ಗಿಂತ ಶೇ 3.6ರಷ್ಟು ಕಡಿಮೆಯಾಗಿದೆ. ಆದಾಗ್ಯೂ, ಆಗಸ್ಟ್ 2022ರಲ್ಲಿ ಬಂದಿದ್ದ ಜಿಎಸ್​ಟಿ ಆದಾಯ 1,43,612ಕ್ಕೆ ಹೋಲಿಸಿದರೆ ಈ ವರ್ಷದ ಆಗಸ್ಟ್​ ಜಿಎಸ್​ಟಿ ಆದಾಯ ಶೇಕಡಾ 11 ರಷ್ಟು ಹೆಚ್ಚಾಗಿರುವುದು ಗಮನಾರ್ಹ.ಈ ವರ್ಷದ ಆಗಸ್ಟ್ ತಿಂಗಳಲ್ಲಿ ದೇಶದ ಜಿಎಸ್​ಟಿ ಆದಾಯ 1,59,069 ಕೋಟಿ ರೂಪಾಯಿಗಳಾಗಿದೆ ಎಂದು ಅಂಕಿಅಂಶಗಳು ತೋರಿಸಿವೆ. .ಸರ್ಕಾರವು ಸಿಜಿಎಸ್​ಟಿಗೆ […]

ಒಂದು ರಾಷ್ಟ್ರ-ಒಂದು ಚುನಾವಣೆ ಸಾಧ್ಯತೆಗಾಗಿ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಸಮಿತಿ ರಚಿಸಿದ ಕೇಂದ್ರ

ನವದೆಹಲಿ: ಸೆಪ್ಟೆಂಬರ್ 18 ರಿಂದ ಉಭಯ ಸದನಗಳ “ವಿಶೇಷ” ಐದು ದಿನಗಳ ಅಧಿವೇಶನವನ್ನು ಕರೆಯುವ ನಿರ್ಧಾರವನ್ನು ಮೋದಿ ಸರ್ಕಾರ ಘೋಷಿಸಿದ ಒಂದು ದಿನದ ಬಳಿಕ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಸಾಧ್ಯತೆಯನ್ನು ಅನ್ವೇಷಿಸಲು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಸಮಿತಿಯನ್ನು ರಚಿಸಿದೆ. ದೆಹಲಿಯಲ್ಲಿ ಜಿ 20 ಶೃಂಗಸಭೆಯ ಕೆಲವು ದಿನಗಳ ನಂತರ ವಿಶೇಷ ಅಧಿವೇಶನ ನಡೆಯಲಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. “ವಿಶೇಷ ಅಧಿವೇಶನ” ದ ಶಾಸಕಾಂಗ ಕಾರ್ಯಸೂಚಿಯ ಮೇಲಿನ ಊಹಾಪೋಹಗಳು ಶಾಸಕಾಂಗ […]