ಕಚ್ಚಾ ತೈಲ ಬೆಲೆ ಏರಿಕೆಯಿಂದ ರೂಪಾಯಿ ಮೌಲ್ಯ ದಾಖಲೆ ಮಟ್ಟದಲ್ಲಿ ಕುಸಿತ

ಮುಂಬೈ :ಕಚ್ಚಾ ತೈಲದ ಬೆಲೆ ಏರಿಕೆಯ ಪರಿಣಾಮದಿಂದ ಭಾರತೀಯ ರೂಪಾಯಿ ಡಾಲರ್ ಎದುರು ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವುದರಿಂದ ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆಯ 83.2675ಕ್ಕೆ ಕುಸಿದಿದೆ. “ವಿದೇಶಿ ವಿನಿಮಯ ಮೀಸಲುಗಳ ಸಾಕಷ್ಟು ಸಂಗ್ರಹ ಹೊಂದಿರುವ ಆರ್​ಬಿಐ ರೂಪಾಯಿ ಮೌಲ್ಯವನ್ನು ಎತ್ತಿಹಿಡಿಯಲು ಪ್ರಯತ್ನ ಮಾಡುತ್ತಿದೆ. ಆದರೆ ರೂಪಾಯಿ ಮೌಲ್ಯ ಕುಸಿತವು ಒಂದು ಹಂತ ಮೀರಿ ಹೋದರೆ ಆರ್​ಬಿಐ ಏನೂ ಮಾಡಲಾಗಲ್ಲ” ಎಂದು ಖಾಸಗಿ ವಲಯದ ಬ್ಯಾಂಕಿನ ವಿದೇಶಿ ವಿನಿಮಯ […]

ಕೆನಡಾ ಏಟಿಗೆ ಭಾರತ ಎದಿರೇಟು: ಕೆನಡಾದ ರಾಜತಾಂತ್ರಿಕ ಅಧಿಕಾರಿ ದೇಶ ತೊರೆಯುವಂತೆ ಭಾರತ ತಾಕೀತು

ಹೊಸದಿಲ್ಲಿ: ಜೂನ್‌ನಲ್ಲಿ ನಡೆದ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕನ ಹತ್ಯೆಗೆ ಭಾರತದ “ಸಂಭಾವ್ಯ” ಸಂಬಂಧವನ್ನು ಉಲ್ಲೇಖಿಸಿ ಕೆನಡಾ ತನ್ನ ದೇಶವನ್ನು ತೊರೆಯುವಂತೆ ಭಾರತೀಯ ಅಧಿಕಾರಿಯನ್ನು ಕೆನಡಾ ಕೇಳಿದ ಕೆಲವೇ ಗಂಟೆಗಳ ನಂತರ ಕೆನಡಾದ ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕುವುದಾಗಿ ಭಾರತ ಘೋಷಿಸಿದೆ. ಭಾರತದಲ್ಲಿರುವ ಕೆನಡಾದ ಹೈಕಮಿಷನರ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ (MEA) ಕರೆಸಲಾಯಿತು ಮತ್ತು ಹಿರಿಯ ಕೆನಡಾದ ರಾಜತಾಂತ್ರಿಕರನ್ನು ಹೊರಹಾಕುವ ನಿರ್ಧಾರದ ಬಗ್ಗೆ ತಿಳಿಸಲಾಯಿತು. ಜೂನ್‌ನಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ […]

ಹೊಸ ಸಂಸತ್ ಭವನಕ್ಕೆ ಶ್ರೀಗಣೇಶ: ಅಧಿವೇಶನಕ್ಕೂ ಮುನ್ನ ಕ್ಯಾಬಿನೆಟ್ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಅಂಗೀಕಾರ

ನವದೆಹಲಿ: ಈ ವರ್ಷದ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಹೊಸ ಸಂಸತ್ ಭವನದಲ್ಲಿ ಮೊದಲ ಅಧಿವೇಶನ ಇಂದು ಪ್ರಾರಂಭವಾಯಿತು. ನೂತನ ಸಂಸತ್ ಭವನದ ಮೊದಲ ಹಾಗೂ ಐತಿಹಾಸಿಕ ಅಧಿವೇಶನ ಇದಾಗಿದೆ. ನಾನು ಭಾರತದ ಸಂಸದರು ಮತ್ತು ಜನರನ್ನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಮೋದಿ ಸದನವನ್ನುದ್ದೇಶಿಸಿ ಹೇಳಿದರು. PM @narendramodi acknowledges Samvatsari a cherished tradition. On this day of 'Micchami Dukkadam,' he extends apologies to anyone he […]

ಎಲ್​ಐಸಿ ಉದ್ಯೋಗಿಗಳು, ಏಜೆಂಟರಿಗೆ ಕೇಂದ್ರದಿಂದ ಗಣೇಶ ಹಬ್ಬಕ್ಕೆ ಭರ್ಜರಿ ಉಡುಗೊರೆ

ನವದೆಹಲಿ: ಎಲ್​ಐಸಿ ಉದ್ಯೋಗಿಗಳು ಮತ್ತು ಏಜೆಂಟರಿಗೆ ಕೇಂದ್ರ ಸರ್ಕಾರ ಗಣೇಶ ಚತುರ್ಥಿಗೆ ಭರ್ಜರಿ ಉಡುಗೊರೆ ನೀಡಿದೆ. ಗ್ರಾಚ್ಯುಟಿ ಮಿತಿ, ಕುಟುಂಬ ಪಿಂಚಣಿ, ವಿಮೆ ಕವರೇಜ್​ನಲ್ಲಿ ಹಲವು ಬದಲಾವಣೆಗಳನ್ನು ಮಾಡಿ ಹಣಕಾಸು ಸಚಿವಾಲಯ ಅನುಮೋದನೆ ಪಡೆದುಕೊಂಡಿದೆ. ಕುಟುಂಬ ಪಿಂಚಣಿ ಹೆಚ್ಚಳ, ಏಜೆಂಟರ ಗ್ರಾಚ್ಯುಟಿ ಮಿತಿ ಏರಿಕೆ ಸೇರಿದಂತೆ ವಿವಿಧ ಕೊಡುಗೆಗಳನ್ನು ಕೇಂದ್ರ ಸರ್ಕಾರ ಎಲ್​ಐಸಿ ಸಿಬ್ಬಂದಿಗೆ ಪ್ರಕಟಿಸಿದೆ.ಇದು ಭಾರತೀಯ ಜೀವ ವಿಮಾ ನಿಗಮದ(ಎಲ್​ಐಸಿ) ಉದ್ಯೋಗಿಗಳು ಮತ್ತು ಏಜೆಂಟರು ಖುಷಿ ಪಡುವ ಸುದ್ದಿ. ಭಾರತದ ಅತಿದೊಡ್ಡ ಜೀವ ವಿಮಾ ಸಂಸ್ಥೆ […]

ಗಣೇಶ ಚತುರ್ಥಿಯಂದೇ ಹೊಸ ಸಂಸತ್ ಭವನದೊಳಗೆ ಪ್ರವೇಶ: ಪ್ರಧಾನಿ ಮೋದಿ

ನವದೆಹಲಿ: ನಾಳೆ ಗಣೇಶ ಚತುರ್ಥಿಯಂದು ಹೊಸ ಸಂಸತ್ತಿಗೆ ತೆರಳಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗಣಪತಿಯನ್ನು ವಿಘ್ನಹರ್ತ ಎಂದೂ ಕರೆಯುತ್ತಾರೆ, ಈಗ ದೇಶದ ಅಭಿವೃದ್ಧಿಗೆ ಯಾವುದೇ ಅಡೆತಡೆಗಳಿಲ್ಲ ನಿರ್ವಿಘ್ನ ರೂಪದಿಂದ ಭಾರತವು ತನ್ನ ಎಲ್ಲಾ ಕನಸು ಎಲ್ಲ ಸಂಕಲ್ಪಗಳನ್ನು ಪರಿಪೂರ್ಣಗೊಳಿಸಲಿದೆ. ಗಣೇಶ್ ಚತುರ್ಥಿಯ ದಿನದಂದು ನವ ಪಯಣ ಹೊಸ ಭಾರತ ಎಲ್ಲಾ ಕನಸುಗಳನ್ನು ಚರಿತಾರ್ಥಗೊಳಿಸಲಿದೆ. ಸಂಸತ್ತಿನ ಈ ಅಧಿವೇಶನವು ಚಿಕ್ಕದಾಗಿರಬಹುದು, ಆದರೆ ಬಹಳ ಪ್ರಮುಖವಾಗಿದೆ ಎಂದು ಅವರು ಮಾಧ್ಯಮಗಳಿಗೆ ಹೇಳಿದರು. #WATCH | Prime Minister […]