ಸಶಸ್ತ್ರ ಪಡೆಗಳ ಯೋಧರ ಸೇವೆ, ಶೌರ್ಯ, ತ್ಯಾಗಕ್ಕೆ ಗೌರವಾರ್ಪಣೆ : ಇಂದು ಭಾರತದ ಧ್ವಜ ದಿನ

ಭಾರತೀಯ ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಯ ಯೋಧರ ತ್ಯಾಗ, ಶೌರ್ಯ ಹಾಗೂ ಸಮರ್ಪಣೆ ಗೌರವಿಸುವ ಹಾಗೂ ವೀರ ಯೋಧರ ತ್ಯಾಗದ ಸ್ಮರಣಾರ್ಥವಾಗಿ ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್​ 7 ರಂದು ಅಂದರೆ ಇಂದು ಭಾರತದ ಧ್ವಜ ದಿನವನ್ನು ಆಚರಿಸಲಾಗುತ್ತದೆ.ಈ ದಿನವನ್ನು ಸಶಸ್ತ್ರ ಪಡೆಗಳ ಧ್ವಜ ದಿನ ಎಂದೂ ಆಚರಿಸಲ್ಪಡುವ ಈ ದಿನ ಸಾರ್ವಜನಿಕರಿಗೆ ರಾಷ್ಟ್ರಧ್ವಜದ ಜೊತೆಗೆ ಮೂರೂ ಸೇನೆಗಳನ್ನು ಪ್ರತಿನಿಧಿಸುವ ಧ್ವಜ, ಬ್ಯಾಡ್ಜ್​, ಸ್ಟಿಕ್ಕರ್​ ಹಾಗೂ ಇತರ ವಸ್ತುಗಳ ಮಾರಾಟ ಮಾಡುವ ಮೂಲಕ ದೇಣಿಗೆ ಸಂಗ್ರಹಿಸಲಾಗುತ್ತದೆ.ಈ ದಿನ […]

ಹರಿಯಾಣ ರಾಜ್ಯಪಾಲರಿಂದ ಗೀತಾ ಮಹೋತ್ಸವ ಉದ್ಘಾಟನೆ : ಕುರುಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಗೀತಾ ಜಯಂತಿ 2023

ಕುರುಕ್ಷೇತ್ರ (ಹರಿಯಾಣ): ಕರಕುಶಲ ಮತ್ತು ಸಾರಸ್ ಮೇಳದಲ್ಲಿ 24 ರಾಜ್ಯಗಳ 250ಕ್ಕೂ ಹೆಚ್ಚು ಕುಶಲಕರ್ಮಿಗಳು ತಮ್ಮ ಕರಕುಶಲ ವಸ್ತುಗಳನ್ನು ಪ್ರದರ್ಶಿಸುತ್ತಾರೆ. ಕ್ರಾಫ್ಟ್ಸ್ ಮತ್ತು ಸಾರಸ್ ಮೇಳವು ಅಂತಾರಾಷ್ಟ್ರೀಯ ಗೀತಾ ಮಹೋತ್ಸವದ ಜನರ ಆಕರ್ಷಣೆಯ ಪ್ರಮುಖ ಕೇಂದ್ರವಾಗಿದೆ. ಈ ವರ್ಷ ಬ್ರಹ್ಮ ಸರೋವರ ದಡದಲ್ಲಿ 600ಕ್ಕೂ ಹೆಚ್ಚು ಕುಶಲಕರ್ಮಿಗಳ ಮಳಿಗೆಗಳನ್ನು ಸ್ಥಾಪಿಸಲಾಗುವುದು. 24 ರಾಜ್ಯಗಳ 250ಕ್ಕೂ ಹೆಚ್ಚು ಕುಶಲಕರ್ಮಿಗಳು ಈ ಮೇಳಕ್ಕೆ ಆಗಮಿಸಿ ತಮ್ಮ ಕಲೆಗಾರಿಕೆ ಪ್ರದರ್ಶಿಸಲಿದ್ದಾರೆ. 2023ರ ಅಂತಾರಾಷ್ಟ್ರೀಯ ಗೀತಾ ಮಹೋತ್ಸವ ಇಂದಿನಿಂದ ಆರಂಭವಾಗಿದೆ. ಅಂತಾರಾಷ್ಟ್ರೀಯ ಗೀತಾ […]

ತೆಲಂಗಾಣದ ಮೊದಲ ಕಾಂಗ್ರೆಸ್ ಸಿಎಂ ಆಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ

ಹೈದರಾಬಾದ್: ಹೈದರಾಬಾದ್‌ನ ಎಲ್ ಬಿ ಸ್ಟೇಡಿಯಂನಲ್ಲಿ ತೆಲಂಗಾಣದ ಮೊದಲ ಕಾಂಗ್ರೆಸ್ ಮುಖ್ಯಮಂತ್ರಿಯಾಗಿ ಎ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಡಾ ತಮಿಳಿಸೈ ಸೌಂದರರಾಜನ್ ಪ್ರಮಾಣ ವಚನ ಬೋಧಿಸಿದರು. ಮಲ್ಲು ಭಟ್ಟಿ ವಿಕ್ರಮಾರ್ಕ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರ ಜೊತೆಗೆ ಎನ್ ಉತ್ತಮ್ ಕುಮಾರ್ ರೆಡ್ಡಿ, ಕೋಮಟಿರೆಡ್ಡಿ ವೆಂಕಟ್ ರೆಡ್ಡಿ, ಪೊನ್ನಂ ಪ್ರಭಾಕರ್, ದಾಸರಿ ಅನಸೂಯಾ, ದಾಮೋದರ ರಾಜ ನರಸಿಂಹ, ಡಿ ಶ್ರೀಧರ್ ಬಾಬು, ತುಮ್ಮಲ ನಾಗೇಶ್ವರ ರಾವ್, ಪೊಂಗುಲೇಟಿ ಶ್ರೀನಿವಾಸ ರೆಡ್ಡಿ, ಕೊಂಡ […]

ಯುನೆಸ್ಕೋ ಸಾಂಸ್ಕೃತಿಕ ಅಮೂರ್ತ ಪರಂಪರೆಯ ಪಟ್ಟಿ ಸೇರಿದ ‘ಸ್ತ್ರೀ ಶಕ್ತಿಯ’ ಪ್ರತೀಕ ಗುಜರಾತಿನ ಗರ್ಬಾ ನೃತ್ಯ

ಬೋಟ್ಸ್‌ವಾನಾ: 5 ರಿಂದ 9 ಡಿಸೆಂಬರ್ 2023 ರವರೆಗೆ ಬೋಟ್ಸ್‌ವಾನಾದ ಕಸಾನೆಯಲ್ಲಿ ನಡೆಯುತ್ತಿರುವ ತನ್ನ 18 ನೇ ಅಧಿವೇಶನದಲ್ಲಿ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ಅಂತರ್ ಸರ್ಕಾರಿ ಸಮಿತಿಯು ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿಯಲ್ಲಿ ‘ಗುಜರಾತ್‌ನ ಗರ್ಬಾ’ ವನ್ನು ಸೇರಿಸಿದೆ. ಗರ್ಬಾವನ್ನು ಈಗ ಸೇರ್ಪಡೆಗೊಳಿಸುವುದರಿಂದ ಇದು ಪಟ್ಟಿಯಲ್ಲಿ ಭಾರತದ 15 ನೇ ಪ್ರಾತಿನಿಧಿಕ ಪರಂಪರೆಯಾಗಿದೆ. ಗುಜರಾತ್ ರಾಜ್ಯದಾದ್ಯಂತ ಮತ್ತು ಭಾರತದಾದ್ಯಂತ, ಗರ್ಬಾವನ್ನು ನವರಾತ್ರಿಯ ಉತ್ಸವದಲ್ಲಿ ಒಂಬತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ಈ ಹಬ್ಬವನ್ನು ಸ್ತ್ರೀ […]

ಪಾಕ್ ಆಕ್ರಮಿತ ಕಾಶ್ಮೀರಕ್ಕೆ ವಿಧಾನಸಭೆಯಲ್ಲಿ 24 ಸ್ಥಾನ ಮೀಸಲು: ಪಿಒಕೆ ನಮ್ಮದು ಎಂದು ಗೃಹ ಸಚಿವ ಅಮಿತ್ ಶಾ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ 24 ಸ್ಥಾನಗಳನ್ನು ಮೀಸಲಿಡಲಾಗಿದೆ “ಪಿಒಕೆ ನಮ್ಮದು” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಸಂಸತ್ತಿನಲ್ಲಿ ಹೇಳಿದರು. ಬುಧವಾರ ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ, 2023 ಅನ್ನು ಮಂಡಿಸಿದ ಶಾ, ಈ ಹಿಂದೆ ಜಮ್ಮು 37 ಸ್ಥಾನಗಳನ್ನು ಹೊಂದಿತ್ತು ಆದರೆ ಈಗ ಅದು 43ಕ್ಕೇರಿದೆ ಹಾಗೂ ಕಾಶ್ಮೀರ 46 ಸ್ಥಾನಗಳನ್ನು ಹೊಂದಿದ್ದು, ಈಗ ಅದು 47 ಸ್ಥಾನಗಳನ್ನು ಹೊಂದಿದೆ ಎಂದು […]