ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ: ಆರೋಪಿಗಳಿಗೆ ಟ್ರಾನ್ಸಿಟ್ ರಿಮಾಂಡ್

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಪೋಟ (Rameshwaram Cafe Blast) ಪ್ರಕರಣದ ಇಬ್ಬರು ಆರೋಪಿಗಳಿಗೆ ಕೊಲ್ಕತ್ತಾ ಕೋರ್ಟ್ ಮೂರು ದಿನಗಳ ಟ್ರಾನ್ಸಿಟ್ ರಿಮಾಂಡ್ ನೀಡಿದ್ದು, ಹೆಚ್ಚಿನ ತನಿಖೆಗಾಗಿ ಅವರನ್ನು ಬೆಂಗಳೂರಿಗೆ ಕರೆದೊಯ್ಯಲು ಎನ್‌ಐಎಗೆ ಅನುಮತಿ ನೀಡಿದೆ. ಬಂಧಿತ ಆರೋಪಿಗಳಾದ ಮುಸಾವಿರ್​ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್​ ತಾಹಾನನ್ನು ವೈದ್ಯಕೀಯ ಪರೀಕ್ಷೆ ಮಾಡಿಸಿ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಎನ್‌ಐಎ ಮನವಿ ಮೇರೆಗೆ ಸಿಟಿ ಸೆಷನ್ಸ್ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಮೂರು ದಿನಗಳ ಟ್ರಾನ್ಸಿಟ್ ರಿಮಾಂಡ್ ಗೆ ಅನುಮತಿ […]

ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಲಿರುವ ಅಮೇರಿಕಾದ ಬಿಲಿಯನೇರ್ ಎಲೋನ್ ಮಸ್ಕ್

ನವದೆಹಲಿ: ಇವಿ ತಯಾರಕ ಟೆಸ್ಲಾ ಅಂತಿಮವಾಗಿ ದೇಶದಲ್ಲಿ ಕಾರ್ಖಾನೆಯನ್ನು ಸ್ಥಾಪಿಸಲು ಭೂಮಿಯನ್ನು ಹುಡುಕುತ್ತಿದೆ ಎಂಬ ಊಹಾಪೋಹಗಳ ನಡುವೆ ಬಿಲಿಯನೇರ್ ಎಲೋನ್ ಮಸ್ಕ್ ಭಾರತಕ್ಕೆ ಭೇಟಿ ನೀಡುವುದಾಗಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವುದಾಗಿ ದೃಢಪಡಿಸಿದ್ದಾರೆ. “ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ!” ಎಂದು ತನ್ನ ಸ್ವಾಮಿತ್ವದ ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಎಲೋನ್ ಮಸ್ಕ್ ತಿಳಿಸಿದ್ದಾರೆ. ರಾಯಿಟರ್ಸ್ ಸುದ್ದಿ ಸಂಸ್ಥೆ ಪ್ರಕಾರ, ಎಲೋನ್ ಮಸ್ಕ್ ಏಪ್ರಿಲ್ 22 ರಂದು ನವದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು […]

ಮತ್ತೊಂದು ಸಾಗರೋತ್ತರ ಬಂದರಿನ ಹಕ್ಕು ಪಡೆದ ಭಾರತ: ಮ್ಯಾನ್ಮಾರ್‌ನ ಸಿಟ್ವೆ ಬಂದರು ಭಾರತದ ತೆಕ್ಕೆಗೆ

ನವದೆಹಲಿ: ಇರಾನ್‌ನ ಚಬಹಾರ್ ಬಂದರನ್ನು ಸ್ವಾಧೀನಪಡಿಸಿಕೊಂಡಿರುವ ಭಾರತ ಇದೀಗ ಮ್ಯಾನ್ಮಾರ್‌ನಲ್ಲಿ ಸಿಟ್ವೆ ಎಂಬ ಎರಡನೇ ಸಾಗರೋತ್ತರ ಬಂದರನ್ನು ನಿರ್ವಹಿಸುವ ಹಕ್ಕನ್ನು ಪಡೆದುಕೊಂಡಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಭಾರತ ಪೋರ್ಟ್ಸ್ ಗ್ಲೋಬಲ್ (IPGL)ಗೆ ಕಲಾದನ್ ನದಿಯಲ್ಲಿರುವ ಸಂಪೂರ್ಣ ಬಂದರಿನ ಕಾರ್ಯಾಚರಣೆಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಸ್ತಾವನೆಯನ್ನು ಅನುಮೋದಿಸಿದೆ. IPGL ಎಂಬುದು ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ 100 ಪ್ರತಿಶತ ಒಡೆತನದ ಕಂಪನಿಯಾಗಿದೆ. ಹಿಂದೂ ಮಹಾಸಾಗರದಲ್ಲಿ, ಚೀನಾ ಮತ್ತು ಭಾರತವು ತಮ್ಮ ಆರ್ಥಿಕ ಪ್ರಭಾವವನ್ನು ವಿಸ್ತರಿಸಲು ಹೋರಾಟದಲ್ಲಿ ತೊಡಗಿವೆ. ಈ […]

ದ. ಅಮೇರಿಕಾದ ಪೆರುವಿನಲ್ಲಿದ್ದಾರೆ 124 ವರ್ಷದ ಪ್ರಪಂಚದ ಅತ್ಯಂತ ಹಿರಿಯ ವ್ಯಕ್ತಿ!!

ದ.ಅಮೇರಿಕಾದ ಪೆರು ಸರ್ಕಾರವು ಹುವಾನುಕೊ ಪ್ರದೇಶದ 124 ವರ್ಷದ ಮಾರ್ಸೆಲಿನೊ ಅಬಾದ್ ಪ್ರಪಂಚದ ಅತ್ಯಂತ ಹಿರಿಯ ವ್ಯಕ್ತಿ ಎಂದು ಹೇಳಿಕೊಂಡಿದೆ. ಇದಕ್ಕಾಗಿ ಸರ್ಕಾರವು ಎಲ್ಲ ದಾಖಲೆಗಳನ್ನು ಪರಿಶೀಲಿಸಿದೆ. ಇದು ನಿಜವಾದಲ್ಲಿ ಪೆರುವಿನ ಆಂಡಿಸ್ ಪರ್ವತಗಳು ದೀರ್ಘಾಯುಷ್ಯದ ರಹಸ್ಯವನ್ನು ಹೊಂದಿರಬಹುದು ಎನ್ನಲಾಗುತ್ತಿದೆ. 1900 ರಲ್ಲಿ ಜನಿಸಿದ 124 ವರ್ಷದ ಮಾರ್ಸೆಲಿನೊ ಅಬಾದ್ ಇದುವರೆಗೆ ಸ್ವತಂತ್ರವಾಗಿ ಪರಿಶೀಲಿಸಲ್ಪಟ್ಟ ಅತ್ಯಂತ ಹಳೆಯ ವ್ಯಕ್ತಿ ಎಂದು ಅಲ್ಲಿನ ಸರ್ಕಾರ ಹೇಳಿದೆ. “ಹುವಾನುಕೊದ ಸಸ್ಯ ಮತ್ತು ಪ್ರಾಣಿಗಳ ಶಾಂತತೆ ಯವಾತಾವರಣದಲ್ಲಿ, ಮಾರ್ಸೆಲಿನೊ ಅಬಾದ್ ಟೊಲೆಂಟಿನೊ […]

ಭಾರತದಲ್ಲಿ ಚಂದ್ರದರ್ಶನ: ಪವಿತ್ರ ಈದುಲ್ ಫಿತ್ರ್‌ ಹಬ್ಬದ ಆಚರಣೆಗಳು ಪ್ರಾರಂಭ

ನವದೆಹಲಿ: ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಸಿಂಗಾಪುರ, ಬಾಂಗ್ಲಾದೇಶ ಮತ್ತು ಇತರ ದಕ್ಷಿಣ ಏಷ್ಯಾದ ದೇಶಗಳ ಮುಸ್ಲಿಮರು ರಂಜಾನ್ ಅಂತ್ಯವನ್ನು ಗುರುತಿಸುವ ರಂಜಾನ್ 29, 1445 ಹಿಜ್ರಿಗೆ ಅನುಗುಣವಾಗಿ ಮಂಗಳವಾರ, ಏಪ್ರಿಲ್ 09, 2024 ರ ಸಂಜೆ ಹೊಸ ಚಂದ್ರನನ್ನು ವೀಕ್ಷಿಸಲು ಸಜ್ಜಾದರು. ವಿಶ್ವದಾದ್ಯಂತ ಚಂದ್ರದರ್ಶನಕ್ಕನುಗುಣವಾಗಿ ಮುಸಲ್ಮಾನರ ಪವಿತ್ರ ಹಬ್ಬವಾದ ಈದುಲ್ ಫಿತ್ರ್‌ ಅನ್ನು ಆಚರಿಸಲಾಗುತ್ತಿದೆ. ನಿನ್ನೆ ರಾತ್ರಿ ಕೇರಳದ ಪೂನ್ನಾಣಿಯಲ್ಲಿ ಚಂದ್ರನ ದರ್ಶನವಾದದ್ದರಿಂದ ಇಂದು ಕೇರಳ ರಾಜ್ಯ ಸೇರಿ ಕರಾವಳಿ ಭಾಗದ ಮಂಗಳೂರು, ಕೊಡಗಿನಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. […]