ಮಕ್ಕಳಿಗೆ ಚಿನ್ನದ ಉಂಗುರ, ನವವಧುಗಳಿಗೆ ಕೈ ತುಂಬಾ ಚಿನ್ನ, ರೇಶ್ಮೆಸೀರೆ ಕೊಡ್ತಾರಂತೆ ವಿಜಯ್, ಇದೇನು ಸಿನಿಮಾ ಸ್ಟೋರಿ ಅಲ್ಲ ತಮಿಳುನಾಡಿಗೆ ವಿಜಯ್ ಕೊಟ್ಟ ಬಂಪರ್ ಭರವಸೆ!

ತಮಿಳುನಾಡಿನಲ್ಲಿ ನಟ-ರಾಜಕಾರಣಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಈ ಬಾರಿ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಭರ್ಜರಿ ಜಯಭೇರಿ ಭಾರಿಸಿದೆ. ಈಗ ವಿಶೇಷವಾಗಿ ವಿಜಯ್ ಪ್ರಣಾಳಿಕೆಯಲ್ಲಿ ಘೋಷಿಸಿದ ಭರ್ಜರಿ “ಚಿನ್ನದ ಭರವಸೆಗಳು” ಜನರ ಗಮನ ಸೆಳೆಯುತ್ತಿದೆ.ಚಿನ್ನಕ್ಕೆ ಸಂಬಂಧಿಸಿದ ಭರವಸೆಗಳ ಸರಮಾಲೆಯನ್ನೇ ನೀಡಿದ್ದು, ಇದೀಗ ಇದರ ವೆಚ್ಚದ ಬಗ್ಗೆ ಚರ್ಚೆ ಶುರುವಾಗಿದೆ. ನವಜಾತ ಶಿಶುಗಳಿಗೆ ಚಿನ್ನದ ಉಂಗುರ, ವಧುಗಳಿಗೆ 8 ಗ್ರಾಂ ಚಿನ್ನ ಮತ್ತು ರೇಷ್ಮೆ ಸೀರೆ ನೀಡುವಂತಹ ಯೋಜನೆಗಳು ಜನರಲ್ಲಿ ಆಕರ್ಷಣೆ ಹುಟ್ಟಿಸಿದರೂ, […]

ಸಿನಿಮಾ ಬಳಿಕ ರಾಜಕೀಯದಲ್ಲೂ ಹೀರೋ ಆದ ವಿಜಯ್: ತಮಿಳು ನಾಡಿನಲ್ಲಿ ಅಬ್ಬರಿಸಿದ TVK

ಚೆನ್ನೈ: ತಮಿಳುನಾಡಿನ ನಟ Vijay ನೇತೃತ್ವದ Tamilaga Vettri Kazhagam (ಟಿವಿಕೆ) ಪಕ್ಷವು ದಶಕಗಳಿಂದ ಪ್ರಭುತ್ವ ಸಾಧಿಸಿದ್ದ Dravida Munnetra Kazhagam ಮತ್ತು All India Anna Dravida Munnetra Kazhagam ಪಕ್ಷಗಳ ಲೆಕ್ಕಾಚಾರವನ್ನು ತಲೆಕೆಳಗು ಮಾಡಿ ಭರ್ಜರಿ ಜಯ ದಾಖಲಿಸಿದೆ. ದೀರ್ಘಕಾಲದಿಂದ ಡಿಎಂಕೆ–ಎಐಎಡಿಎಂಕೆ ನಡುವಿನ ಪೈಪೋಟಿಯಲ್ಲೇ ಸೀಮಿತವಾಗಿದ್ದ ತಮಿಳುನಾಡಿನ ರಾಜಕೀಯದಲ್ಲಿ, ವಿಜಯ್ ಅವರ ಪ್ರವೇಶವು ಮಹತ್ವದ ಬದಲಾವಣೆಗೆ ಕಾರಣವಾಗಿದೆ. ಯುವಜನತೆ ಮತ್ತು ಮಹಿಳೆಯರ ಭಾರೀ ಬೆಂಬಲದೊಂದಿಗೆ ವಿಜಯ್ ‘ಕಿಂಗ್‌ಮೇಕರ್’ ಅಲ್ಲ, ನೇರವಾಗಿ ‘ಕಿಂಗ್’ ಆಗಿ ಹೊರಹೊಮ್ಮಿದ್ದಾರೆ […]

ಪಂಚ ರಾಜ್ಯಗಳ ಮತ ಎಣಿಕೆ: ಈ ಕ್ಷಣದ ಅಪ್ ಡೇಟ್ ಹೀಗಿದೆ

ಭಾರತದ ಐದು ಪ್ರಮುಖ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು, ರಾಜಕೀಯ ಕಣ ಸಾಕಷ್ಟು ರೋಚಕ ತಿರುವು ಪಡೆದುಕೊಂಡಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಹಾಗೂ ಪುದುಚೆರಿ ರಾಜ್ಯಗಳ ಜೊತೆಗೆ ಕರ್ನಾಟಕದ ಬಾಗಲಕೋಟೆ ಮತ್ತು ದಾವಣಗೆರೆ ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಈ ಬಾರಿ ಮತದಾನದ ಪ್ರಮಾಣ ಹೆಚ್ಚಾಗಿರುವುದರಿಂದ ಅಚ್ಚರಿಯ ಫಲಿತಾಂಶಗಳ ನಿರೀಕ್ಷೆ ಹೆಚ್ಚಾಗಿದೆ. ಈ ಕ್ಷಣದ ಸುದ್ದಿ ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್ ಓಟದತ್ತ- ಅಸ್ಸಾಂನಲ್ಲಿ ಬಿಜೆಪಿ […]

ನೀವು SSLC/ITI ಪಾಸ್‌ ಮಾಡಿದ್ದೀರಾ? ಹಾಗಿದ್ದರೆ ಕೇಂದ್ರ ಸರ್ಕಾರದಲ್ಲಿದೆ ಉದ್ಯೋಗ

SSLC ಅಥವಾ ITI ಪಾಸ್ ಆದ ಯುವಕರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಉದ್ಯೋಗ ಅವಕಾಶ ಲಭ್ಯವಾಗಿದೆ. Central Reserve Police Force (CRPF) ವತಿಯಿಂದ 2026ನೇ ಸಾಲಿನ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ಕಾನ್‌ಸ್ಟೆಬಲ್ (ಟೆಕ್ನಿಕಲ್ & ಟ್ರೇಡ್ಸ್‌ಮನ್) ವಿಭಾಗದಲ್ಲಿ ಒಟ್ಟು 9,195 ಹುದ್ದೆಗಳು ಭರ್ತಿಯಾಗಲಿವೆ. ಈ ಪೈಕಿ 9,096 ಹುದ್ದೆಗಳು ಪುರುಷರಿಗೆ ಹಾಗೂ 79 ಹುದ್ದೆಗಳು ಮಹಿಳೆಯರಿಗೆ ಮೀಸಲಾಗಿವೆ. ಲಭ್ಯವಿರುವ ಹುದ್ದೆಗಳು ಟ್ರೇಡ್ಸ್‌ಮನ್ ವಿಭಾಗದಲ್ಲಿ ವಿವಿಧ ಹುದ್ದೆಗಳು ಪಯೋನಿಯರ್ ವಿಭಾಗ: ಅರ್ಹತೆ ಮತ್ತು ವಯೋಮಿತಿ ಅರ್ಜಿ ಶುಲ್ಕ […]

ಎಲ್​ಪಿಜಿ ಸಿಲಿಂಡರ್ ಬೆಲೆ 993 ರೂ. ಏರಿಕೆ! ಇಂದಿನಿಂದಲೇ ಜಾರಿ

ನವದೆಹಲಿ: ಇರಾನ್, ಇಸ್ರೇಲ್, ಅಮೇರಿಕಾ ದೇಶಗಳ ಯುದ್ಧ ಪರಿಸ್ಥಿತಿ ಹಾಗೂ ಹೊರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಎಲ್.ಪಿ.ಜಿ. ಕೊರತೆ ಉಂಟಾಗಿದೆ. ಇದೀಗ ದೇಶಾದ್ಯಂತ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ ಜಾರಿಯಾಗಿದೆ. ಇಂದಿನಿಂದಲೇ (ಮೇ 1) ಅನ್ವಯವಾಗುವಂತೆ, ಪ್ರತಿ ಸಿಲಿಂಡರ್‌ಗೆ ₹993 ಹೆಚ್ಚಳ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಏರಿಕೆಯ ನಂತರ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ದರ ₹3,071.50ಕ್ಕೆ ತಲುಪಿದೆ. ಈ ಬೆಲೆ ಏರಿಕೆ ಹೋಟೆಲ್‌, ರೆಸ್ಟೋರೆಂಟ್ ಹಾಗೂ ಇತರ ವಾಣಿಜ್ಯ […]