1947 ರಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಎಷ್ಟಿತ್ತು ಗೊತ್ತಾ? ಕೇಳಿದರೆ ಅಚ್ಚರಿ ಆಗೋದು ಖಂಡಿತಾ!

ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಿನೇದಿನೇ ಏರಿಕೆಯಾಗುತ್ತಿವೆ. ಜಾಗತಿಕ ತೈಲ ಕೊರತೆ, ಮಧ್ಯಪ್ರಾಚ್ಯದ ಉದ್ವಿಗ್ನತೆ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಸೇರಿದಂತೆ ಹಲವು ಕಾರಣಗಳಿಂದ ಇಂಧನ ದರಗಳು ಜನರ ಮೇಲೆ ಹೆಚ್ಚುವರಿ ಹೊರೆ ತಂದಿವೆ. ಇಂತಹ ಸಂದರ್ಭದಲ್ಲೇ ಒಂದು ಕುತೂಹಲಕಾರಿ ಪ್ರಶ್ನೆ ಹಲವರ ಮನದಲ್ಲಿ ಮೂಡುತ್ತದೆ — ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ ಪೆಟ್ರೋಲ್ ಬೆಲೆ ಎಷ್ಟಿತ್ತು? 1947ರಲ್ಲಿ ಪೆಟ್ರೋಲ್ ದರ ಎಷ್ಟು? ಭಾರತ ಸ್ವತಂತ್ರವಾದ ಸಮಯದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಕೇವಲ […]
ಪೆಟ್ರೊಲ್, ಡೀಸೆಲ್ ಬಳಿಕ ಇದೀಗ CNG ದರ ಕೂಡ ಏರಿಕೆ, ಆಟೋ, ಕ್ಯಾಬ್, ದರದಲ್ಲೂ ಹೆಚ್ಚಳ ಸಾಧ್ಯತೆ!

ದೇಶದಲ್ಲಿ ಇಂಧನ ದರ ಏರಿಕೆಯ ನಡುವೆಯೇ ಇದೀಗ CNG (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್) ದರವೂ ಹೆಚ್ಚಳ ಕಂಡಿದ್ದು, ವಾಹನ ಸವಾರರಿಗೆ ಮತ್ತೊಂದು ಹೊರೆ ಎದುರಾಗಿದೆ. ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯ ಅಸ್ಥಿರತೆ ಹಾಗೂ ಹೋರ್ಮುಜ್ ಜಲಸಂಧಿ ಬಿಕ್ಕಟ್ಟಿನ ಪರಿಣಾಮವಾಗಿ CNG ದರವನ್ನು ಪ್ರತಿ ಕಿಲೋಗ್ರಾಂಗೆ ಸುಮಾರು ₹2ರವರೆಗೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇತ್ತೀಚೆಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡಿದ್ದರೆ, ಇದೀಗ CNG ದರ ಏರಿಕೆಯೂ ಸಾರಿಗೆ ಕ್ಷೇತ್ರದ ಮೇಲೆ ಪರಿಣಾಮ ಬೀರುವ […]
‘ನಾನು ಕೈಬೀಸಿದರೂ ಯಾರೂ ನನ್ನ ನೋಡಲಿಲ್ಲ,ಯಾರೂ ಹತ್ತಿರ ಬರಲಿಲ್ಲ ನನ್ನ ಅಹಂಕಾರ ಪುಡಿಯಾಯಿತು’-ನಟ ರಜನಿಕಾಂತ್

ದಕ್ಷಿಣ ಭಾರತದ ಸೂಪರ್ಸ್ಟಾರ್ ರಜನಿಕಾಂತ್ ಅವರಿಗೆ ದೇಶದಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಅವರು ಕಾಣಿಸಿಕೊಂಡರೆ ಅಭಿಮಾನಿಗಳು ಸೆಲ್ಫಿ, ಆಟೋಗ್ರಾಫ್ಗಾಗಿ ಮುಗಿಬೀಳುತ್ತಾರೆ. ಆದರೆ, ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ನನ್ನತ್ತ ಯಾರೂ ಗಮನ ಕೊಡದೇ ಇದ್ದುದು ನನ್ನ ಅಹಂಕಾರವನ್ನು ಸಂಪೂರ್ಣವಾಗಿ ಪುಡಿಮಾಡಿತು ಎಂದು ರಜನಿಕಾಂತ್ ಬಹಿರಂಗಪಡಿಸಿದ್ದಾರೆ. ಮಂಗಳವಾರ ನಡೆದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷಾಚರಣೆ ಹಾಗೂ ರವಿಶಂಕರ್ ಗುರುಜಿ ಅವರ 70ನೇ ಜನ್ಮದಿನದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, […]
ಆಭರಣ ಪ್ರಿಯರಿಗೆ ಶಾಕ್, ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಏರಿಕೆ

ಮುಂಬೈ : ಕೇಂದ್ರ ಸರ್ಕಾರವು ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕವನ್ನು ದಿಢೀರನೇ ಏರಿಕೆ ಮಾಡಿದ ಬೆನ್ನಲ್ಲೇ ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಫ್ಯೂಚರ್ಸ್ ದರದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಇದರಿಂದ ಆಭರಣ ಪ್ರಿಯರು ಹಾಗೂ ಹೂಡಿಕೆದಾರರಿಗೆ ಶಾಕ್ ಎದುರಾಗಿದೆ. ಬೆಳಗ್ಗೆ 9:45ರ ವೇಳೆಗೆ 10 ಗ್ರಾಂ ಚಿನ್ನದ ಬೆಲೆ 8,838 ರೂ. (ಶೇ.5.66) ಏರಿಕೆಯಾಗಿ 1,61,887 ರೂ. ತಲುಪಿದರೆ, 1 ಕೆಜಿ ಬೆಳ್ಳಿಯ ದರ 1,80,920 ರೂ. (ಶೇ.6.36) […]
ಚಿನ್ನ ಖರೀದಿಸದಿರಿ ಎಂದು ವೈರಲ್ ಆದ ಇಂದಿರಾಗಾಂಧಿ ಹೇಳಿಕೆ ಇರುವ ಮುಖಪುಟ ನಕಲಿ! “ದಿ ಹಿಂದೂ ಪತ್ರಿಕೆಯ ಸ್ಪಷ್ಟನೆ

ಬೆಂಗಳೂರು: ‘ದೇಶದ ಹಿತದೃಷ್ಟಿಯಿಂದ ಒಂದು ವರ್ಷ ಚಿನ್ನ ಖರೀದಿಸಬೇಡಿ’ ಎಂದು ಪ್ರಧಾನಿ ಮೋದಿ ಕರೆ ನೀಡಿದ ಬಳಿಕ, ಮಾಜಿ ಪ್ರಧಾನಿ ಇಂದಿರಾಗಾಂಧಿ ಕೂಡ ಇದೇ ರೀತಿಯ ಮನವಿ ಮಾಡಿದ್ದರು ಎಂದು ಸೋಶಿಯಲ್ ಮೀಡಿಯಾಗಳಲ್ಲಿ ದಿ ಹಿಂದೂ The Hindu ಪತ್ರಿಕೆಯ ಹಳೆಯ ಮುಖಪುಟದ ಚಿತ್ರವು ವೈರಲ್ ಆಗಿತ್ತು. ಆದರೆ ಆ ಸುದ್ದಿ ಮತ್ತು ಫೋಟೋ ನಕಲಿ (ಫೇಕ್)ಎಂದು ದಿ ಹಿಂದೂ ಪತ್ರಿಕೆಯೇ ಸ್ಪಷ್ಟನೆ ನೀಡಿದೆ. 1967ರ ಜೂನ್ 6ರಂದು “ಇಂದಿರಾಗಾಂಧೀ ಚಿನ್ನ ಕೊಳ್ಳಬೇಡಿ ಎಂದು ಹೇಳಿದ ಯಾವುದೇ […]