ಆಭರಣ ಪ್ರಿಯರಿಗೆ ಶಾಕ್, ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಏರಿಕೆ

ಮುಂಬೈ : ಕೇಂದ್ರ ಸರ್ಕಾರವು ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕವನ್ನು ದಿಢೀರನೇ ಏರಿಕೆ ಮಾಡಿದ ಬೆನ್ನಲ್ಲೇ ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಫ್ಯೂಚರ್ಸ್ ದರದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಇದರಿಂದ ಆಭರಣ ಪ್ರಿಯರು ಹಾಗೂ ಹೂಡಿಕೆದಾರರಿಗೆ ಶಾಕ್ ಎದುರಾಗಿದೆ. ಬೆಳಗ್ಗೆ 9:45ರ ವೇಳೆಗೆ 10 ಗ್ರಾಂ ಚಿನ್ನದ ಬೆಲೆ 8,838 ರೂ. (ಶೇ.5.66) ಏರಿಕೆಯಾಗಿ 1,61,887 ರೂ. ತಲುಪಿದರೆ, 1 ಕೆಜಿ ಬೆಳ್ಳಿಯ ದರ 1,80,920 ರೂ. (ಶೇ.6.36) […]
ಚಿನ್ನ ಖರೀದಿಸದಿರಿ ಎಂದು ವೈರಲ್ ಆದ ಇಂದಿರಾಗಾಂಧಿ ಹೇಳಿಕೆ ಇರುವ ಮುಖಪುಟ ನಕಲಿ! “ದಿ ಹಿಂದೂ ಪತ್ರಿಕೆಯ ಸ್ಪಷ್ಟನೆ

ಬೆಂಗಳೂರು: ‘ದೇಶದ ಹಿತದೃಷ್ಟಿಯಿಂದ ಒಂದು ವರ್ಷ ಚಿನ್ನ ಖರೀದಿಸಬೇಡಿ’ ಎಂದು ಪ್ರಧಾನಿ ಮೋದಿ ಕರೆ ನೀಡಿದ ಬಳಿಕ, ಮಾಜಿ ಪ್ರಧಾನಿ ಇಂದಿರಾಗಾಂಧಿ ಕೂಡ ಇದೇ ರೀತಿಯ ಮನವಿ ಮಾಡಿದ್ದರು ಎಂದು ಸೋಶಿಯಲ್ ಮೀಡಿಯಾಗಳಲ್ಲಿ ದಿ ಹಿಂದೂ The Hindu ಪತ್ರಿಕೆಯ ಹಳೆಯ ಮುಖಪುಟದ ಚಿತ್ರವು ವೈರಲ್ ಆಗಿತ್ತು. ಆದರೆ ಆ ಸುದ್ದಿ ಮತ್ತು ಫೋಟೋ ನಕಲಿ (ಫೇಕ್)ಎಂದು ದಿ ಹಿಂದೂ ಪತ್ರಿಕೆಯೇ ಸ್ಪಷ್ಟನೆ ನೀಡಿದೆ. 1967ರ ಜೂನ್ 6ರಂದು “ಇಂದಿರಾಗಾಂಧೀ ಚಿನ್ನ ಕೊಳ್ಳಬೇಡಿ ಎಂದು ಹೇಳಿದ ಯಾವುದೇ […]
ಶ್ರೀಲಂಕಾದಿಂದ ಭಾರತಕ್ಕೆ 11 ಗಂಟೆಗಳ ಕಾಲ ಈಜಿ ದಾಖಲೆ ನಿರ್ಮಿಸಿದ ಬೆಂಗಳೂರಿನ ಐಟಿ ದಂಪತಿ!

ರಾಮೇಶ್ವರಂ: ಶ್ರೀಲಂಕಾದಿಂದ ಭಾರತಕ್ಕೆ ಸುಮಾರು 32 ಕಿಲೋಮೀಟರ್ ದೂರವನ್ನು ಈಜಿ ಬೆಂಗಳೂರು ಮೂಲದ ಐಟಿ ವೃತ್ತಿಪರ ದಂಪತಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಡ್ಯಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದೆ ಅವರು ಐತಿಹಾಸಿಕ ರಾಮ ಸೇತು ಮಾರ್ಗದಲ್ಲಿ ‘ಸೈಡ್-ಬೈ-ಸೈಡ್ ಓಪನ್ ವಾಟರ್ ಸ್ವಿಮ್’ ಪೂರ್ಣಗೊಳಿಸಿದ ಮೊದಲ ದಂಪತಿಗಳಾಗಿದ್ದಾರೆ. ಮೇ 7ರಂದು ಈ ಸಾಹಸಿಕ ಈಜು ಪ್ರಾರಂಭಗೊಂಡಿದ್ದು, ಶ್ರೀಲಂಕಾದ ತಲೈಮನ್ನಾರ್ ನಿಂದ ಬೆಳಿಗ್ಗೆ 4:30ಕ್ಕೆ ಆರಂಭಿಸಿದ ದಂಪತಿ, ಮಧ್ಯಾಹ್ನ 3:15ರ ಸುಮಾರಿಗೆ ತಮಿಳುನಾಡಿನ ಧನುಷ್ಕೋಟಿ ತಲುಪಿದರು. ಸುಮಾರು 10 ಗಂಟೆ […]
ಮುತ್ತಜ್ಜ ನೆಟ್ಟ ಮರ ಮರಿಮೊಮ್ಮಗನಿಗೆ ನೆರಳು ಮಾತ್ರ ಕೊಡ್ತಿಲ್ಲ, ಪ್ರತೀ ದಿನ ಕೊಡ್ತಿದೆ ಸಂಪತ್ತು, ಮರದಿಂದ ಬದಲಾಯ್ತು ಬದುಕು!

ರಾಂಚಿ: ಜಾರ್ಖಂಡ್ ರಾಜಧಾನಿ ರಾಂಚಿಯ ಗ್ರಾಮೀಣ ಭಾಗಗಳಲ್ಲಿ ಹಲಸಿನ ಮರಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಆದರೆ ಮನಾಟು ಗ್ರಾಮದಲ್ಲಿರುವ ಒಂದು ವಿಶಿಷ್ಟ ಹಲಸಿನ ಮರ ಇದೀಗ ಕುಟುಂಬದ ಆರ್ಥಿಕ ಬಲವಾಗಿದ್ದು, ಗ್ರಾಮಸ್ಥರ ಗಮನ ಸೆಳೆಯುತ್ತಿದೆ. ಸುಮಾರು 50 ವರ್ಷಗಳ ಹಿಂದೆ ಸುರೇಶ್ ಅವರ ಮುತ್ತಜ್ಜ ನೆಟ್ಟ ಈ ಮರ ಇಂದು ಕುಟುಂಬಕ್ಕೆ ಆಶೀರ್ವಾದವಾಗಿ ಪರಿಣಮಿಸಿದೆ. ಜೊತೆಗೆ ಗಿಡಿಗಳನ್ನು ಯಾಕೆ ನೆಡಬೇಕು, ಅದನ್ನು ಮರವಾಗುವ ತನಕ ಯಾಕೆ ಬೆಳೆಸಬೇಕು, ಉಳಿಸಬೇಕು ಎನ್ನುವುದನ್ನು ಈ ಒಂದು ಪ್ರಸಂಗ ಅರ್ಥ ಮಾಡಿಸಿದೆ. ಬೃಹತ್ […]
“ಒಂದು ವರ್ಷ ಚಿನ್ನ ಖರೀದಿಸಬೇಡಿ!”- ಯಾಕೆ ಗೊತ್ತಾ?

ದೇಶದ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಒಂದು ವರ್ಷದವರೆಗೆ ಚಿನ್ನ ಖರೀದಿಯನ್ನು ತಪ್ಪಿಸಲು ಮನವಿ ಮಾಡಿದ್ದಾರೆ. ಹೈದರಾಬಾದ್ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ ಹಾಗೂ ಜಾಗತಿಕ ತೈಲ ಬಿಕ್ಕಟ್ಟಿನ ಹಿನ್ನೆಲೆ ವಿದೇಶಿ ವಿನಿಮಯ ಉಳಿಸುವ ಅಗತ್ಯವಿದೆ ಎಂದು ಹೇಳಿದರು. “ದೇಶಭಕ್ತಿಯ ದೃಷ್ಟಿಯಿಂದ ವಿದೇಶಿ ವಿನಿಮಯ ಉಳಿಸೋಣ” ಎಂದು ಕರೆ ನೀಡಿದ ಅವರು, ಮದುವೆ ಸೇರಿದಂತೆ ವಿವಿಧ ಸಮಾರಂಭಗಳಲ್ಲಿ ಚಿನ್ನ ಖರೀದಿಯನ್ನು ಮಿತಿಗೊಳಿಸುವಂತೆ […]