ದೆಹಲಿ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ; ಬಿಜೆಪಿ ಘೋಷಣೆ.

ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯ ಪದಗ್ರಹಣಕ್ಕೆ ನಾಳೆ ಮುಹೂರ್ತ ನಿಗದಿಯಾಗಿದ್ದರೂ ಮುಖ್ಯಮಂತ್ರಿಯ ಹೆಸರನ್ನು ಮಾತ್ರ ಬಿಜೆಪಿ ಬಿಟ್ಟುಕೊಟ್ಟಿರಲಿಲ್ಲ. ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ 27 ವರ್ಷಗಳ ಬಳಿಕ ಬಿಜೆಪಿ ಭಾರೀ ಬಹುಮತ ಪಡೆಯುವ ಮೂಲಕ ದಿಗ್ವಿಜಯ ಸಾಧಿಸಿದಾಗಿನಿಂದಲೂ ಈ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿ ಗೆದ್ದ ಪರ್ವೇಶ್ ವರ್ಮಾ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಆಶಿಶ್ ಸೂದ್, ಜಿತೇಂದ್ರ ಮಹಾಜನ್, ರೇಖಾ ಗುಪ್ತಾ ಮುಂತಾದವರ ಹೆಸರು ಸಿಎಂ ರೇಸ್ನಲ್ಲಿ ಕಾಣಿಸಿಕೊಂಡಿತ್ತು. ದೆಹಲಿ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಇದೀಗ […]
ಕಾರ್ಕಳ ಅತ್ತೂರಿನಲ್ಲಿ ಬಸಿಲಿಕ ಮಹೋತ್ಸವದ ವೈಭವ, ಎಲ್ಲಡೆ ಭಕ್ತಿ ಭಾವ ಸಂಭ್ರಮದ ಕಲರವ

ಕಾರ್ಕಳ: ಪ್ರಸಿದ್ಧ ಕ್ಷೇತ್ರವಾದ ಅತ್ತೂರಿನ ಸಂತ ಲಾರೆನ್ಸರ ನೆಲೆಬೀಡಾದ ಅತ್ತೂರಿನಲ್ಲಿ ಕಳೆದ ಜನವರಿ 26 ರಿಂದ ಆರಂಭಗೊಂಡ ಬೆಸಿಲಿಕಾ ಮಹೋತ್ಸವಕ್ಕೆ ನಾಡಿನ ಮೂಲೆ ಮೂಲೆಗಳಿಂದ ಮಾತ್ರವಲ್ಲ, ವಿದೇಶಗಳಲ್ಲಿ ನೆಲೆಸಿರುವ ಭಕ್ತರೂ ಕೂಡ ಮಹೋತ್ಸವದಲ್ಲಿ ಪಾಲ್ಗೊಂಡು ಸಂತ ಲಾರೆನ್ಸರ ದಿವ್ಯ ಆಶೀರ್ವಾದಕ್ಕೆ ಪಾತ್ರರಾದರು. ಅತ್ತೂರು ಕ್ಷೇತ್ರದಲ್ಲಿ ಪ್ರತಿದಿನವೂ ವಿಶೇಷ ಪೂಜೆ, ಕೊಂಕಣಿ ಭಾಷೆಯಲ್ಲಿ 31 ಹಾಗೂ ಕನ್ನಡ ಭಾಷೆಯಲ್ಲಿ 7 ಹೀಗೆ ಒಟ್ಟು 38 ದಿವ್ಯಪೂಜೆಗಳು ನಡೆದವು. ಇಂದು ಜನವರಿ 30 ಬಸಿಲಿಕ ಮಹೋತ್ಸವದ ಕೊನೆಯ ದಿನವಾಗಿದ್ದು, ಹಲವು […]
ಸಾಫ್ಟ್ ಡ್ರಿಂಕ್ ನಲ್ಲಿ ವಿಷಕಾರಕ ಅಂಶ: ಕೆಲವು ದೇಶಗಳಿಂದ ಸ್ಟಾಕ್ ವಾಪಾಸ್ ತರಿಸಿಕೊಂಡ ಕೋಕಾಕೋಲಾ ಕಂಪೆನಿ! ಭಾರತದ ಕತೆ ಏನು?

ಸಾಫ್ಟ್ ಡ್ರಿಂಕ್ ಆರೋಗ್ಯಕ್ಕೆ ಹಾನಿಕರ ಎಂದು ಎಷ್ಟೇ ಜಗೃತಿ ಮೂಡಿಸಿದರೂ ಬಹುತೇಕ ಜನರು ಕ್ಯಾರೇ ಎನ್ನುತ್ತಿಲ್ಲ. ಆದರೆ ಈಗ ಕೋಕೋಕೋಲಾದಲ್ಲಿ ತೀವ್ರ ಪ್ರಮಾಣದ ವಿಷಕಾರಕ ಅಂಶಗಳು ಸೇರಿಕೊಂಡ ಹಿನ್ನೆಲೆಯಲ್ಲಿ ಕಂಪೆನಿ ತನ್ನ ಉತ್ಪನ್ನಗಳಾದ ಫಾಂಟಾ, ಮಿನಿಟ್ ಮೇಡ್, ಟ್ರೋಪಿಕೋ ಬ್ರ್ಯಾಂಡ್ ಗಳನ್ನು ಮಾರುಕಟ್ಟೆಯಿಂದ ವಾಪಾಸ್ ಪಡೆದುಕೊಳ್ಳುತ್ತಿದೆ. ಈ ಎಲ್ಲಾ ಪಾನೀಯಗಳು ಕ್ಲೋರೇಟ್ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಕಂಪೆನಿ ಈ ನಿರ್ಧಾರ ತೆಗೆದುಕೊಂಡಿದೆ. ನೆದರ್ಲ್ಯಾಂಡ್ಸ್, ಬ್ರಿಟನ್, ಬೆಲ್ಜಿಯಂ, ಜರ್ಮನಿ, ಲಕ್ಸೆಂಬರ್ಗ್ ಮತ್ತು ಫ್ರಾನ್ಸ್ ದೇಶಗಳಲ್ಲಿ ವಿತರಣೆಯಾಗಿರುವ […]
ದಿಗ್ವಿಜಯ ಭಾರಿಸಿದ ಕಾಂಡೋಮ್ : 2024 ಆನ್ ಲೈನ್ ಶಾಪಿಂಗ್ ನಲ್ಲಿ ಕಾಂಡೋಮ್ ಭರ್ಜರಿ ಸೇಲ್!

ಆನ್ಲೈನ್ ಶಾಪಿಂಗ್ ನಲ್ಲಿ ಪ್ರತೀವರ್ಷವೂ ಒಂದೊಂದು ಉತ್ಪನ್ನಗಳು ಸದ್ದು ಮಾಡುತ್ತಿರುತ್ತದೆ. ಆನ್ ಲೈನ್ ಮಾರುಕಟ್ಟೆಗಳಿಗೆ ವೇದಿಕೆ ಕಲ್ಪಿಸುವ ಕಂಪೆನಿಗಳು ವರ್ಷಾಂತ್ಯದ ಕೊನೆಗೆ ತಮ್ಮಲ್ಲಿ ಈ ವರ್ಷ ಜಾಸ್ತಿಯಾಗಿ ಮಾರಾಟವಾದ ವಸ್ತು ಯಾವುದು ಎನ್ನುವುದನ್ನು ಬಹಿರಂಗಪಡಿಸುತ್ತದೆ. ಇ-ಕಾಮರ್ಸ್ ದೈತ್ಯ ಸ್ವಿಗ್ಗಿ ತನ್ನ ಆನ್ಲೈನ್ ಶಾಪಿಂಗ್ ವಿವರಗಳನ್ನು ಬಹಿರಂಗಪಡಿಸಿದೆ. ಈ ವರ್ಷ ಭರ್ಜರಿಯಾಗಿ ಸೇಲ್ ಆದ ಉತ್ಪನ್ನಗಳಲ್ಲಿ ಮೊದಲೇ ಸ್ಥಾನವನ್ನು ಕಾಂಡೋಮ್ ಬಾಚಿಕೊಂಡಿದೆ ಎನ್ನುವುದು ಇಂಟರೆಸ್ಟಿಂಗ್ ಸಂಗತಿ. ಹೌದು. ಸ್ವಿಗ್ಗಿ ಇನ್ಸ್ಟಾಮಾರ್ಟ್ – 2024 ಎಂಬ ಶೀರ್ಷಿಕೆಯ ವರದಿಯನ್ನು ಬಿಡುಗಡೆ […]
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನ: ಡಿ.27 ರಂದು ಸರಕಾರಿ ರಜೆ ಘೋಷಣೆ.

ಬೆಂಗಳೂರು: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನದ ಗೌರವಾರ್ಥ ರಾಜ್ಯದಲ್ಲಿ ಏಳು ದಿನಗಳ ಶೋಕಾಚರಣೆ, ಹಾಗೂ ಇಂದು (ಡಿ.27) ಸರಕಾರಿ ರಜೆ ಘೋಷಿಸಲಾಗಿದೆ. ಭಾರತ ಕಂಡ ಶ್ರೇಷ್ಠ ಅರ್ಥ ಶಾಸ್ತ್ರಜ್ಞರಲ್ಲಿ ಒಬ್ಬರು ಹಾಗೂ ಒಂದು ದಶಕದ ಕಾಲ ದೇಶದ ಪ್ರಧಾನಿಯಾಗಿದ್ದ ಡಾ.ಮನಮೋಹನ್ ಸಿಂಗ್ ಗುರುವಾರ ರಾತ್ರಿ ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. 2004 ರಿಂದ 2014 ರವರೆಗೆ ಅವರು ದೇಶದ ಪ್ರಧಾನಿಯಾಗಿದ್ದರು.