ಭಾರತದ ಸರಕು ಮತ್ತು ಸೇವಾ ರಫ್ತು ಬೆಳವಣಿಗೆ ಶೇ.11.51ರಷ್ಟು ಏರಿಕೆ: ಅಂದಾಜು 61.18 ಬಿಲಿಯನ್ ಯುಎಸ್ ಡಾಲರ್ ವ್ಯಾಪಾರ

ನವದೆಹಲಿ: ಸರಕು ಮತ್ತು ಸೇವೆಗಳು ಸೇರಿದಂತೆ ದೇಶದ ಒಟ್ಟಾರೆ ರಫ್ತುಗಳು ಕಳೆದ ತಿಂಗಳು ಬೆಳವಣಿಗೆಯನ್ನು ದಾಖಲಿಸಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ರಫ್ತುಗಳು ಶೇಕಡಾ 11.51 ರಷ್ಟು ಬೆಳವಣಿಗೆಯನ್ನು ಪದರ್ಶಿಸಿವೆ ಮತ್ತು 61.18 ಬಿಲಿಯನ್ ಯುಎಸ್ ಡಾಲರ್ ಇರಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಒಟ್ಟಾರೆ ಆಮದುಗಳು ಶೇ 42.90 ರಷ್ಟು ಬೆಳವಣಿಗೆಯನ್ನು ಪ್ರದರ್ಶಿಸಿವೆ. ಕಳೆದ ತಿಂಗಳಲ್ಲಿ ದೇಶದ ಆಮದು 82.22 ಬಿಲಿಯನ್ ಯುಎಸ್ ಡಾಲರ್ ಎಂದು ಅಂದಾಜಿಸಲಾಗಿದೆ. ಕಳೆದ ಏಪ್ರಿಲ್-ಜುಲೈ […]

ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ: 31 ಡಿಸೆಂಬರ್ 2024 ರವರೆಗೆ ಮುಂದುವರಿಕೆ

ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMAY-U) – ಸರ್ವರಿಗೂ ವಸತಿ ಯೋಜನೆಯನ್ನು 31 ಡಿಸೆಂಬರ್ 2024 ರವರೆಗೆ ಮುಂದುವರಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಈಗಾಗಲೇ ಮಂಜೂರಾಗಿರುವ 122 ಲಕ್ಷ ಮನೆಗಳನ್ನು 2022ರ ಮಾರ್ಚ್ 31ರವರೆಗೆ ಪೂರ್ಣಗೊಳಿಸಲು ಆರ್ಥಿಕ ನೆರವು ನೀಡಲಾಗಿದೆ. ಈ ಯೋಜನೆಯು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ನೋಡಲ್ ಏಜೆನ್ಸಿಗಳ ಮೂಲಕ ದೇಶದ ನಗರ ಪ್ರದೇಶಗಳಲ್ಲಿನ ಎಲ್ಲಾ ಅರ್ಹ ಫಲಾನುಭವಿಗಳಿಗೆ ಎಲ್ಲಾ ಹವಾಮಾನದ ಪಕ್ಕಾ ಮನೆಗಳನ್ನು ಒದಗಿಸಲು ಕೇಂದ್ರ ಸರ್ಕಾರವು ಜಾರಿಗೊಳಿಸುತ್ತಿರುವ ಪ್ರಮುಖ […]

18 ವರ್ಷ ಮೇಲ್ಪಟ್ಟ ಬೂಸ್ಟರ್ ಡೋಸ್ ಅರ್ಹತೆಯುಳ್ಳವರಿಗೆ ಬಹು ಆಯ್ಕೆ ಲಭ್ಯ: ಕೋರ್ಬೆವಾಕ್ಸ್ ಪರಿಗಣಿಸಲು ಕೇಂದ್ರ ಮಾರ್ಗಸೂಚಿ

ನವದೆಹಲಿ: 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರಿಗೆ ಕೋರ್ಬೆವಾಕ್ಸ್ ನೊಂದಿಗೆ ಮುನ್ನೆಚ್ಚರಿಕಾ(ಬೂಸ್ಟರ್) ಡೋಸ್ ನ ಭಿನ್ನ ಆಯ್ಕೆಯು ಲಭ್ಯವಿರುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾತನಾಡಿ, 18 ವರ್ಷ ಮೇಲ್ಪಟ್ಟ ಜನರಿಗೆ ಕೋವಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆಗಳ ಎರಡನೇ ಡೋಸ್ ನೀಡಿದ ದಿನಾಂಕದಿಂದ ಆರು ತಿಂಗಳ ನಂತರ ಮುನ್ನೆಚ್ಚರಿಕಾ ಡೋಸ್ ಆಗಿ ಕೋರ್ಬೆವಾಕ್ಸ್ ಲಭ್ಯವಿರುತ್ತದೆ ಎಂದು ಹೇಳಿದ್ದಾರೆ. ಅಂದರೆ, ಈ ಹಿಂದೆ ಕೋವಾಕ್ಸಿನ್ ಅಥವಾ ಕೋವಿಶೀಲ್ಡ್ ನ ಎರಡೂ ಡೋಸೇಜ್ […]

42ರ ತಾಯಿ 24ರ ಮಗ; ಕೇರಳದ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ಪಾಸಾದ ಅಮ್ಮ-ಮಗ ಜೋಡಿಗೆ ಸೈ ಎಂದ ಜನ!!

ಮಲಪ್ಪುರಂ: ಪ್ರತಿ ವರ್ಷ ಪಬ್ಲಿಕ್ ಸರ್ವಿಸ್ ಕಮಿಷನ್ ನಲ್ಲಿ ತರಹೇವಾರಿ ಅರ್ಜಿದಾರರು ಪರೀಕ್ಷೆ ನೀಡಲು ಬರುತ್ತಿರುತ್ತಾರೆ. ಈ ಬಾರಿ ಅಮ್ಮ ಮಗನ ಅನನ್ಯ ಜೋಡಿಯೊಂದು ಪರೀಕ್ಷೆ ಬರೆದು ಪಾಸಾಗಿ ಸೈ ಎನಿಸಿಕೊಂಡಿದೆ. 42 ವರ್ಷದ ಬಿಂದು ಮತ್ತು 24 ವರ್ಷದ ವಿವೇಕ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯನ್ನು ಒಟ್ಟಿಗೆ ಬರೆದು ಜತೆಯಾಗಿಯೆ ಪಾಸಾಗಿದ್ದಾರೆ. ಸಾಧನೆಯ ಬಗ್ಗೆ ಮಾತನಾಡಿದ ವಿವೇಕ್, ತಂದೆಯು ಎಲ್ಲಾ ಸೌಕರ್ಯಗಳನ್ನು ಕಲ್ಪಿಸಿದ್ದು, ತಾಯಿಯ ಸಹಾಯದಿಂದ ತಾನು ಇಲ್ಲಿಯವರೆಗೆ ಬರಲು ಸಾಧ್ಯವಾಯಿತು ಎಂದಿದ್ದಾರೆ. “ನಾವು ಕೋಚಿಂಗ್ […]

ಪ್ರಧಾನಿಯವರ ಹರ್ ಘರ್ ತಿರಂಗಾ ಅಭಿಯಾನದಿಂದ ಬದಲಾಯ್ತು ವ್ಯಾಪಾರಿಗಳ ಬದುಕು: ಇತಿಹಾಸದಲ್ಲೇ ದಾಖಲೆಯ ರಾಷ್ಟ್ರಧ್ವಜಗಳ ಮಾರಾಟ!

ನವದೆಹಲಿ: ದೇಶದ 75 ನೇ ಸ್ವಾಂತಂತ್ರ್ಯೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಪ್ರಧಾನಿ ಮೋದಿ ಕರೆ ನೀಡಿದ್ದು, ರಾಷ್ಟ್ರಧ್ವಜ ಮಾರಾಟ ಮಾಡುವ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಬದುಕು ಹಸನಾಗಿದೆ. ಇತಿಹಾಸದಲ್ಲೇ ಅತಿ ಹೆಚ್ಚು ರಾಷ್ಟ್ರಧ್ವಜ ಮಾರಾಟವಾಗುತ್ತಿದ್ದು ವ್ಯಾಪಾರಿಗಳ ಮೊಗದಲ್ಲಿ ಸಂತಸ ಮನೆ ಮಾಡಿದೆ. ಹಿಂದೆಲ್ಲಾ ಜನರು ಒಂದೆರಡು ಧ್ವಜಗಳನು ಖರೀದಿಸುತ್ತಿದ್ದರು, ಆದರೆ ಹರ್ ಘರ್ ಅಭಿಯಾನದಿಂದಾಗಿ ಜನರು ಬೃಹತ್ ಆರ್ಡರ್ ಗಳನ್ನು ನೀಡುತ್ತಿದ್ದು, ಲಕ್ಷಗಟ್ಟಲೆ ಧ್ವಜಗಳು ಈಗಾಗಲೇ ಬಿಕರಿಯಾಗಿದ್ದು ಬೇಡಿಕೆ ಇನ್ನೂ ಹೆಚ್ಚುತ್ತಲೇ ಇದೆ. […]