ನ.1 ರಿಂದ ವಿಮಾ ಪಾಲಿಸಿ, ಅಡುಗೆ ಅನಿಲ ಮತ್ತು ಜಿ.ಎಸ್.ಟಿ ರಿಟರ್ನ್ಸ್ ನಿಯಮಗಳಲ್ಲಿ ಆಗಲಿವೆ ಬದಲಾವಣೆಗಳು

ನವದೆಹಲಿ: ನವೆಂಬರ್ 1 ರಿಂದ ವಿಮಾ ಪಾಲಿಸಿ, ಅಡುಗೆ ಅನಿಲ ಮತ್ತು ಜಿ.ಎಸ್.ಟಿ ಗಳ ನಿಯಮಗಳು ಬದಲಾಗಲಿವೆ. ಈ ನಿಯಮಗಳು ಸಾಮಾನ್ಯ ಜನರ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ ಮತ್ತು ಇವುಗಳಲ್ಲಿ ಹೆಚ್ಚಿನವನ್ನು ಗ್ರಾಹಕರ ಅನುಕೂಲತೆಗಾಗಿ ಮಾಡಲಾಗಿದೆ. 1. ಜೀವವಿಮಾ ಪಾಲಿಸಿಗೆ ಕೆವೈಸಿ ಕಡ್ಡಾಯ ವಿಮಾ ನಿಯಂತ್ರಕ ಐ.ಆರ್.ಡಿ.ಎ.ಐ ಜೀವೇತರ(ನಾನ್-ಲೈಫ್) ವಿಮಾ ಪಾಲಿಸಿಗಳನ್ನು ಖರೀದಿಸಲು ಕೈವೈಸಿ ಅನ್ನು ಕಡ್ಡಾಯಗೊಳಿಸಿದೆ. ಇದುವರೆಗೆ ಜೀವ ವಿಮೆಗೆ ಮತ್ತು ಆರೋಗ್ಯ ಮತ್ತು ವಾಹನ ವಿಮೆಯಂತಹ ಜೀವೇತರ ವಿಮೆಯ ಸಂದರ್ಭದಲ್ಲಿ, ಒಂದು ಲಕ್ಷ […]
ಸಗಟು ವಿಭಾಗದಲ್ಲಿ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಯೋಜನೆ ಪ್ರಾರಂಭಿಸಲಿರುವ ಆರ್ಬಿಐ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಸಗಟು ವಿಭಾಗದಲ್ಲಿ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಯೋಜನೆಯನ್ನು ಇಂದು ಪ್ರಾರಂಭಿಸಲಿದೆ. ಸರ್ಕಾರಿ ಭದ್ರತೆಗಳಲ್ಲಿ ದ್ವಿತೀಯ ಮಾರುಕಟ್ಟೆ ವಹಿವಾಟುಗಳ ಇತ್ಯರ್ಥಕ್ಕಾಗಿ ಡಿಜಿಟಲ್ ರೂಪಾಯಿಯನ್ನು ಬಳಸಲಾಗುವುದು. ಇ-ರೂಪಾಯಿ ಬಳಕೆಯಿಂದ ಅಂತರ-ಬ್ಯಾಂಕ್ ಮಾರುಕಟ್ಟೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ನಿರೀಕ್ಷೆಯಿದೆ ಎಂದು ಆರ್ಬಿಐ ಹೇಳಿದೆ. ಕೇಂದ್ರ ಬ್ಯಾಂಕ್ ಹಣದ ಮೂಲಕ ಪಾವತಿಯು, ಪಾವತಿ ಖಚಿತತೆ ಮೂಲಸೌಕರ್ಯದ ಅಗತ್ಯವನ್ನು ಮೊದಲೇ ಖಾಲಿ ಮಾಡುವ ಮೂಲಕ ಅಥವಾ ಮೇಲಾಧಾರದ ಪಾವತಿ ಅಪಾಯವನ್ನು ತಗ್ಗಿಸಲು ಪಾವತಿ ವೆಚ್ಚವನ್ನು ಕಡಿಮೆ […]
ಅತ್ಯಾಚಾರ ಪ್ರಕರಣಗಳಲ್ಲಿ ಎರಡು ಬೆರಳಿನ ಪರೀಕ್ಷೆಯನ್ನು ನಿಷೇಧಿಸಿದ ಸುಪ್ರೀಂ ಕೋರ್ಟ್: ದ್ವಿಸದಸ್ಯದ ಪೀಠದಿಂದ ತೀರ್ಪು

ನವದೆಹಲಿ: ಅತ್ಯಾಚಾರ ಪ್ರಕರಣಗಳಲ್ಲಿ “ಎರಡು ಬೆರಳಿನ ಪರೀಕ್ಷೆ”ಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಿಷೇಧಿಸಿದೆ ಮತ್ತು ಅಂತಹ ಪರೀಕ್ಷೆಗಳನ್ನು ನಡೆಸುವ ವ್ಯಕ್ತಿಗಳನ್ನು ದುರ್ನಡತೆಯ ತಪ್ಪಿತಸ್ಥರೆಂದು ಪರಿಗಣಿಸಲಾಗುವುದು ಎಂದು ಎಚ್ಚರಿಸಿದೆ. ‘ಎರಡು ಬೆರಳು ಪರೀಕ್ಷೆ’ ಇಂದಿಗೂ ನಡೆಯುತ್ತಿರುವುದು ವಿಷಾದನೀಯ ಎಂದು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ವಿಷಾದಿಸಿದೆ. “ಈ ನ್ಯಾಯಾಲಯವು ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯವನ್ನು ಆಪಾದಿಸುವ ಪ್ರಕರಣಗಳಲ್ಲಿ ಎರಡು ಬೆರಳು ಪರೀಕ್ಷೆಯ ಬಳಕೆಯನ್ನು ಪದೇ ಪದೇ ನಿರಾಕರಿಸಿದೆ. ಪರೀಕ್ಷೆ ಎಂದು ಕರೆಯಲ್ಪಡುವ ಇದಕ್ಕೆ […]
ಹಕ್ಕಿ ಬಿಡುಗಡೆ ಹೊಂದಿತು ಎಂದ ಏಲಾನ್ ಮಸ್ಕ್: ಸಿ.ಇ.ಒ ಪರಾಗ್ ಅಗರ್ವಾಲ್ ಗೆ ಟ್ವಿಟರ್ ನಿಂದ ಗೇಟ್ ಪಾಸ್

ಸ್ಯಾನ್ ಫ್ರಾನ್ಸಿಸ್ಕೋ: ಏಲಾನ್ ಮಸ್ಕ್ ಅವರು ಗುರುವಾರ ತಡರಾತ್ರಿ ಟ್ವಿಟರ್ನ 44 ಶತಕೋಟಿ ಡಾಲರ್ ಖರೀದಿ ಒಪ್ಪಂದವನ್ನು ಪೂರ್ಣಗೊಳಿಸಿದ ನಂತರ, ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉನ್ನತ ಕಾರ್ಯನಿರ್ವಾಹಕರನ್ನು ವಜಾಗೊಳಿಸಿ ಸಾಮಾಜಿಕ ಮಾಧ್ಯಮ ಕಂಪನಿಯ ಸ್ಯಾನ್ ಫ್ರಾನ್ಸಿಸ್ಕೋ ಪ್ರಧಾನ ಕಛೇರಿಯಿಂದ ಹೊರಕ್ಕೆ ಕಳುಹಿಸಲಾಯಿತು ಎಂದು ಹಲವಾರು ಮಾಧ್ಯಮ ವರದಿಗಳು ತಿಳಿಸಿವೆ. ಸಿಇಒ ಪರಾಗ್ ಅಗರವಾಲ್, ಕಾನೂನು ವ್ಯವಹಾರಗಳು ಮತ್ತು ನೀತಿ ಮುಖ್ಯಸ್ಥ ವಿಜಯ ಗಡ್ಡೆ, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಮತ್ತು ಜನರಲ್ ಕೌನ್ಸಿಲ್ ಸೀನ್ ಎಡ್ಜೆಟ್ ವಜಾಗೊಳಿಸಲಾಗಿರುವ […]
ಯೂನಿಲಿವರ್ ಶ್ಯಾಂಪೂಗಳಲ್ಲಿ ಕ್ಯಾನ್ಸರ್ ಕಾರಕಗಳು ಪತ್ತೆ: ಅಮೇರಿಕಾದಲ್ಲಿ ಉತ್ಪನ್ನಗಳನ್ನು ಹಿಂಪಡೆದ ಸಂಸ್ಥೆ

ನ್ಯೂಯಾರ್ಕ್: ತನ್ನ ಉತ್ಪನ್ನಗಳಲ್ಲಿ ಕ್ಯಾನ್ಸರ್ ಕಾರಕಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಯೂನಿಲಿವರ್ ಪಿಎಲ್ಸಿ ಕಂಪನಿಯು ಅಮೇರಿಕಾದಲ್ಲಿ ಡವ್ ಸೇರಿದಂತೆ ಏರೋಸಾಲ್ ಡ್ರೈ ಶ್ಯಾಂಪೂಗಳ ಜನಪ್ರಿಯ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆದಿದೆ. ಭಾರತದಲ್ಲಿ ಇದು ಅತ್ಯಂತ ಚಿಕ್ಕ ಮಾರುಕಟ್ಟೆಯಾಗಿರುವುದರಿಂದ ಇದರ ಪರಿಣಾಮವು ಅತ್ಯಲ್ಪವಾಗಿರುತ್ತದೆ ಎಂದು ಡೋಲತ್ ಕ್ಯಾಪಿಟಲ್ನ ಉಪಾಧ್ಯಕ್ಷ ಸಚಿನ್ ಬೋಬಡೆ ಹೇಳಿದ್ದಾರೆ. ಬ್ಯುಸಿನೆಸ್ ಸ್ಟ್ಯಾಂಡರ್ಡ್ನಿಂದ ಪರಿಶೀಲಿಸಲ್ಪಟ್ಟಂತೆ ಉತ್ಪನ್ನವು ಭಾರತದಲ್ಲಿ ನೈಕಾ ಮತ್ತು ಅಮೆಜಾನ್ ನಲ್ಲಿ ಮಾರಾಟವಾಗುತ್ತಲೇ ಇದೆ. ಈ ಶ್ಯಾಂಪೂಗಳಲ್ಲಿ ಬೆಂಜೀನ್ ಎನ್ನುವ ಕ್ಯಾನ್ಸರ್ಕಾರಕ ಅಂಶವಿದ್ದು, ಇದು ಮಾನವನ ದೇಹವನ್ನು […]