ಸದನದಲ್ಲಿ ಹಿಂದಿನ ವರ್ಷದ ಬಜೆಟ್ ಓದಿದ ಅಶೋಕ್ ಗೆಹ್ಲೋಟ್: ಬಜೆಟ್ ಮೊದಲೆ ಸೋರಿಕೆಯಾಗಿದೆಯೆ ಎಂದ ಪ್ರತಿಪಕ್ಷ

ಜೈಪುರ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಶುಕ್ರವಾರದಂದು ಸದನದಲ್ಲಿ ಹಳೆ ಬಜೆಟ್ ಅನ್ನು ಏಳು ನಿಮಿಷಗಳ ಕಾಲ ಓದಿದ್ದು, ಆ ಬಳಿಕ ಮುಖ್ಯ ಸಚೇತಕ ಅವರನ್ನು ಎಚ್ಚರಿಸಿದ್ದು, ತಪ್ಪಿನ ಅರಿವಾಗಿ ಸದನದ ಕ್ಷಮೆ ಕೇಳಿದ್ದಾರೆ. ಗೆಹ್ಲೋಟ್ ಸರಕಾರದಿಂದ ಪ್ರಮಾದವಾಗಿದೆ, ಬಜೆಟ್ ಕೂಡಾ ಇತರ ಪೇಪರ್ ಗಳಂತೆ ಮೊದಲೇ ಸೋರಿಕೆ ಆಗಿದೆ ಎಂದು ಪ್ರತಿಪಕ್ಷಗಳು ಸರಕಾರವನ್ನು ಮುಜುಗರಕ್ಕೆ ಸಿಲುಕಿವೆ ಮಾತ್ರವಲ್ಲ, ಸದನದಲ್ಲಿ ಗದ್ದಲ ಸೃಷ್ಟಿಸಿವಿಧಾನಸಭೆಯ ಬಾವಿಯಲ್ಲಿ ಕುಳಿತು ಸದನವನ್ನು 30 ನಿಮಿಷಗಳ ಕಾಲ ಮುಂದೂಡುವಂತೆ ಮಾಡಿದೆ. ಈ […]
ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ 5.9 ಮಿಲಿಯನ್ ಟನ್ ಲಿಥಿಯಂ ನಿಕ್ಷೇಪ ಪತ್ತೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶದಲ್ಲಿ ಮೊದಲ ಬಾರಿಗೆ 5.9 ಮಿಲಿಯನ್ ಟನ್ ಲಿಥಿಯಂ ನಿಕ್ಷೇಪಗಳು ಪತ್ತೆಯಾಗಿವೆ ಎಂದು ಭಾರತದ ಗಣಿ ಸಚಿವಾಲಯ ಗುರುವಾರ ಪ್ರಕಟಿಸಿದೆ. ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್-ಹೈಮಾನ ಪ್ರದೇಶದಲ್ಲಿ 5.9 ಮಿಲಿಯನ್ ಟನ್ಗಳ ಲಿಥಿಯಂ ಊಹಿಸಲಾದ ಸಂಪನ್ಮೂಲಗಳನ್ನು (ಜಿ3) ಮೊದಲ ಬಾರಿಗೆ ಭಾರತದ ಭೂವೈಜ್ಞಾನಿಕ ಸಮೀಕ್ಷೆ ಸ್ಥಾಪಿಸಿದೆ ಎಂದು ಸಚಿವಾಲಯ ತಿಳಿಸಿದೆ. ಲಿಥಿಯಂ ಮತ್ತು ಚಿನ್ನ ಸೇರಿದಂತೆ 51 ಖನಿಜ ಬ್ಲಾಕ್ಗಳನ್ನು ಆಯಾ ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅದು […]
ಸಂಸತ್ತಿನಲ್ಲಿ ಪ್ರಧಾನಿ ಮೋದಿ ಧರಿಸಿದ್ದು ಪ್ಲಾಸ್ಟಿಕ್ ಬಾಟಲಿಗಳ ಮರುಬಳಕೆಯಿಂದ ಮಾಡಿದ ಜಾಕೆಟ್!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸಂಸತ್ತಿನಲ್ಲಿ ಪ್ಲಾಸ್ಟಿಕ್ ಬಾಟಲಿಗಳಿಂದ ಮರುಬಳಕೆ ಮಾಡಿದ ವಸ್ತುಗಳಿಂದ ತಯಾರಿಸಿದ ತೋಳಿಲ್ಲದ ಜಾಕೆಟ್ ಧರಿಸಿದ್ದರು. ಬುಧವಾರ ಲೋಕಸಭೆಯಲ್ಲಿ ಪ್ರಧಾನಿಯವರು ತಿಳಿ ನೀಲಿ ಬಣ್ಣದ “ಸದ್ರಿ” ಜಾಕೆಟ್ ಧರಿಸಿ ಬಂದಿದ್ದರು. ಮೋದಿ ಧರಿಸಿರುವ ಈ ಜಾಕೆಟ್ ಪ್ಲಾಸ್ಟಿಕ್ ಬಾಟಲಿಗಳಿಂದ ಮರುಬಳಕೆ ಮಾಡಲಾದ ವಸ್ತುಗಳಿಂದ ಮಾಡಲ್ಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ನಡೆದ ಇಂಡಿಯಾ ಎನರ್ಜಿ ವೀಕ್ನಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅವರು ಕಂಪನಿಯ “ಅನ್ಬಾಟಲ್ಡ್” ಉಪಕ್ರಮದ ಅಡಿಯಲ್ಲಿ ಸಮವಸ್ತ್ರವನ್ನು ಬಿಡುಗಡೆ […]
ಜೂಲಿ-ರೋಮಿಯೋ-ಹನಿ-ರಾಂಬೊ: ಟರ್ಕಿಯಲ್ಲಿ ಭಾರತೀಯ ಶ್ವಾನದಳದ ನಾಲ್ಕು ಹೀರೋಗಳು

ಸೈಪ್ರಸ್: ಫೆಬ್ರವರಿ 6 ರಂದು ಟರ್ಕಿ ಮತ್ತು ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪನದ ನಂತರ, 5,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ವಿಶ್ವದ ಬಹುತೇಕ ದೇಶಗಳು ಟರ್ಕಿಗೆ ಸಹಾಯ ಹಸ್ತ್ ಚಾಚಿವೆ. ಭಾರತವೂ ಕೂಡಾ ಶ್ವಾನದಳ ಮತ್ತು 101 ಸದಸ್ಯರ ಎನ್.ಡಿ.ಆರ್.ಎಫ್ ತಂಡವನ್ನು ಕಳುಹಿಸಿದ್ದು, ತಂಡವು ಅದಾಗಲೇ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. ಈ ಮಧ್ಯೆ ಶ್ವಾನದಳದಲ್ಲಿ ಜೂಲಿ, ರೋಮಿಯೋ, ಹನಿ ಮತ್ತು ರಾಂಬೊ ಎನ್ನುವ ನಾಲ್ಕು ಶ್ವಾನಗಳು ರಕ್ಷಣಾ ಕಾರ್ಯಾಚರಣೆಯ ಭಾಗವಾಗಿವೆ. ಈ ಲ್ಯಾಬ್ರಡಾರ್ ತಳಿಯ […]
ಚಿತ್ರಗಳಲ್ಲಡಗಿದೆ ಕನ್ನಡದ ಅಕ್ಷರಮಾಲೆ: ಸೃಜನಶೀಲ ಕಲಿಕಾ ವಿಧಾನ ಎಂದ ಪ್ರಧಾನಿ ಮೋದಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕನ್ನಡ ಕಲಿಕೆಯ ಬಗ್ಗೆ ಕನ್ನಡಿಗರಲ್ಲೇ ನಿರುತ್ಸಾಹ ಕಂಡುಬರುತ್ತಿದೆ. ಚಿಕ್ಕ ಮಕ್ಕಳಿಗಂತೂ ಇವತ್ತು ಕನ್ನಡವೆಂದರೆ ಕಬ್ಬಿಣದ ಕಡಲೆಯಂತಾಗಿದೆ. ಇಂಗ್ಲೀಷ್ ಭಾಷಾ ವ್ಯಾಮೋಹದಿಂದಾಗಿ ಕನ್ನಡ ನಿರಂತರ ಸೊರಗುತ್ತಿದೆ. ಈ ಮಧ್ಯೆ ಟ್ವಿಟರ್ ನಲ್ಲಿ ಬಳಕೆದಾರರೊಬ್ಬರು ವಿನೂತನ ವಿಧಾನದಲ್ಲಿ ಕನ್ನಡದ ಅಕ್ಷರಮಾಲೆಯನ್ನು ಕಲಿಸಬಹುದಾದ ಚಿತ್ರವನ್ನು ಹಂಚಿಕೊಂಡಿದ್ದಾರೆ. ” 49 ರಲ್ಲಿ 46 ಅಕ್ಷರಗಳು ಚಿತ್ರಗಳ ಸುಳಿವುಗಳನ್ನು ಹೊಂದಿವೆ. ಮಕ್ಕಳಿಗೆ ಕನ್ನಡ ವರ್ಣಮಾಲೆಗಳನ್ನು ಕಲಿಸುವ ಅದ್ಭುತ ವಿಧಾನ. (ಆದರೂ ನನಗೆ ಇದರ ರಚನಕಾರರು ಗೊತ್ತಿಲ್ಲ) ನೀವು ಎಷ್ಟನ್ನು ಊಹಿಸಬಹುದು? […]