ಗಣೇಶ ಚತುರ್ಥಿ ಹಬ್ಬದಂದು Jio AirFiber ಸೇವೆಗೆ ಚಾಲನೆ: ಮುಕೇಶ್ ಅಂಬಾನಿ

ಮುಂಬೈ: ಬಹುನಿರೀಕ್ಷಿತ Jio AirFiber ಸೇವೆಯು ಅಂತಿಮವಾಗಿ ಮುಂದಿನ ತಿಂಗಳಿನಿಂದ ಗ್ರಾಹಕರ ಸೇವೆಗೆ ಲಭ್ಯವಾಗಲಿದೆ ಎಂದು RIL ಅಧ್ಯಕ್ಷ ಮುಕೇಶ್ ಅಂಬಾನಿ ದೃಢಪಡಿಸಿದರು. ಕಂಪನಿಯು ಹಬ್ಬಗಳ ಸಮಯದಲ್ಲಿ ದೊಡ್ಡ ಉತ್ಪನ್ನಗಳನ್ನು ಹೊರತರುತ್ತದೆ. ಈ ವರ್ಷ, ಗಣೇಶ ಚತುರ್ಥಿ ಹಬ್ಬದ ದಿನ ಸೆಪ್ಟೆಂಬರ್ 19 ರಂದು AirFiber ಅನ್ನು ಪ್ರಾರಂಭಿಸಲು ಯೋಜಿಸಲಾಗಿದೆ. AirFiber ಸೇವೆ ಬಗ್ಗೆ ತಿಳಿದಿರಬೇಕಾದ ಪ್ರಮುಖ ಅಂಶಗಳು ಗ್ರಾಹಕರು Jio AirFiber ರೂಟರ್ ಬಾಕ್ಸ್ ಅನ್ನು ಖರೀದಿಸಬೇಕು ಮತ್ತು ಅದನ್ನು ಪವರ್ ಪಾಯಿಂಟ್‌ಗೆ ಸಂಪರ್ಕಿಸಬೇಕು. ಸಾಧನವು […]

ಸೆಪ್ಟೆಂಬರ್‌ ಮೊದಲ ವಾರ ಆದಿತ್ಯ ಎಲ್‌ 1 ಉಡಾವಣೆ : ಚಂದ್ರನ ಬಳಿಕ ಸೂರ್ಯನತ್ತ ಚಿತ್ತ ಹರಿಸಿದ ಇಸ್ರೋ

ತಿರುವನಂತಪುರಂ (ಕೇರಳ) :ಸೂರ್ಯನನ್ನು ಅಧ್ಯಯನ ಮಾಡುವ ಆದಿತ್ಯ ಎಲ್ 1 ಗಗನನೌಕೆಯನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಹೇಳಿದ್ದಾರೆ. ಚಂದ್ರಯಾನ-3 ಬಾಹ್ಯಾಕಾಶ ಯೋಜನೆಯ ಲ್ಯಾಂಡರ್ ‘ವಿಕ್ರಮ್’ ಈಗಾಗಲೇ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್​ ಆಗಿದ್ದು, ವೈಜ್ಞಾನಿಕ ಸಂಶೋಧನೆಗಳ ಕೆಲಸ ಪ್ರಾರಂಭಿಸಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಇಸ್ರೋ ಮುಖ್ಯಸ್ಥರು, “ಆದಿತ್ಯ ಎಲ್ 1 ಉಪಗ್ರಹ ಸಿದ್ಧವಾಗಿದೆ. ಈಗಾಗಲೇ ಶ್ರೀಹರಿಕೋಟಾವನ್ನು ತಲುಪಿದ್ದು, ಪಿಎಸ್‌ಎಲ್‌ವಿಗೆ ಸಂಪರ್ಕ ಹೊಂದಿದೆ. ಇಸ್ರೋದ ಮುಂದಿನ […]

ಆಗಸ್ಟ್​ 28 ರಂದು 51 ಸಾವಿರ ಫಲಾನುಭವಿಗಳಿಗೆ ಪ್ರಧಾನಿ ಮೋದಿ ನೇಮಕಾತಿ ಪತ್ರ ವಿತರಣೆ : ರೋಜ್​ಗಾರ್​ ಮೇಳ

ನವದೆಹಲಿ : ಸರ್ಕಾರಿ ಉದ್ಯೋಗಗಳ ಸೃಷ್ಟಿ ಮತ್ತು ಯುವಕರಿಗೆ ಹುದ್ದೆಗಳನ್ನು ನೀಡುವ ಅಭಿಯಾನವಾದ ‘ರೋಜ್​ಗಾರ್​ ಮೇಳ’ದ ಅಡಿಯಲ್ಲಿ ಆಗಸ್ಟ್​ 28 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 51 ಸಾವಿರ ನೇಮಕಾತಿ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಿದ್ದಾರೆ ಎಂದು ಸರ್ಕಾರ ತಿಳಿಸಿದೆ ಪಂಜಾಬ್​ನ ಜಲಂಧರ್​ ಸೇರಿದಂತೆ 45 ಕಡೆಗಳಲ್ಲಿ ನಡೆಯುವ ರೋಜ್​ಗಾರ್​ ಮೇಳದಲ್ಲಿ 8 ನೇ ಹಂತದ ನೇಮಕಾತಿ ಪತ್ರಗಳ ವಿತರಣೆ ನಡೆಯಲಿದೆ. ಮೇಳದಲ್ಲಿ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ನೇರವಾಗಿ ಭಾಗಿಯಾದರೆ, ಪ್ರಧಾನಿ ಮೋದಿ ಅವರು […]

3,289 ಕೋಟಿ ಮೌಲ್ಯದ ಆರ್ಡರ್​ ಪಡೆದ ಬಿಇಎಲ್​: ಚಂದ್ರಯಾನ-3ರ ಎಫೆಕ್ಟ್

ಬೆಂಗಳೂರು: ನವರತ್ನ ರಕ್ಷಣಾ ಸಾರ್ವಜನಿಕ ವಲಯದ ಉದ್ಯಮ ಭಾರತ್​​ ಎಲೆಕ್ಟ್ರಿಕಲ್​ ಲಿಮಿಟೆಡ್​​ (ಬಿಇಎಲ್​) ಈ ವರ್ಷದ ಅಂದರೆ 2023 ಜುಲೈ ಮತ್ತು ಆಗಸ್ಟ್​​ನಲ್ಲಿ 3,289 ಕೋಟಿ ಮೊತ್ತದ ಹೊಸ ರಕ್ಷಣ ಮತ್ತು ರಕ್ಷಣೆತ್ತರ ಆರ್ಡರ್​ ಅನ್ನು ಪಡೆಯುವ ಮೂಲಕ ಸಾಧನೆ ಮಾಡಿದೆ. ಉದ್ಯಮದ ವಿವಿಧ ರೀತಿಯ ಎಲೆಕ್ಟ್ರಾನಿಕ್​ ಸಾಧನಗಳ ಪೂರೈಕೆಯನ್ನು ಈ ಆರ್ಡರ್​​ ಹೊಂದಿದೆ. ಇದರಲ್ಲಿ ಕಡಿಮೆ ಮಟ್ಟದ ಲೈಟ್​ ವೈಟ್​ ರಾಡಾರ್​​, ಸೋನಾರ್ಸ್​, ಐಎಫ್​ಎಫ್​ ವ್ಯವಸ್ಥೆ, ಸ್ಟಾಟ್​ಕೊಮ್​ ವ್ಯವಸ್ಥೆ, ಇಒ/ಐಆರ್​ ಪೇಲೋಡ್​, ಟಿಆರ್​ಎಂ/ಡಿಟಿಆರ್​ಎಂಗಳು, ಜಾಮರ್​​, ಎನಕ್ರಿಪ್ಟರ್ಸ್​​, […]

ಪುನಲೂರು-ಮದುರೈ ಎಕ್ಸ್‌ಪ್ರೆಸ್‌ನಲ್ಲಿ ಗ್ಯಾಸ್ ಸಿಲಿಂಡರ್ ಅಕ್ರಮ ಸಾಗಣೆ: ಬೋಗಿಯಲ್ಲಿ ಹೊತ್ತಿಕೊಂಡ ಬೆಂಕಿ; ಕನಿಷ್ಠ ಎಂಟು ಸಾವು

ಚೆನ್ನೈ: ಇಂದು ಬೆಳಗ್ಗೆ 5:15 ಕ್ಕೆ ಪುನಲೂರು-ಮದುರೈ ಎಕ್ಸ್‌ಪ್ರೆಸ್‌ನ ಖಾಸಗಿ/ವೈಯಕ್ತಿಕ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆ ನಡೆದಾಗ ರೈಲು ಮದುರೈ ಯಾರ್ಡ್‌ನಲ್ಲಿತ್ತು. ಆ ಕೂಡಲೇ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ್ದು, ಮತ್ತೊಂದು ಬೋಗಿಗೆ ಯಾವುದೇ ಹಾನಿಯಾಗದಂತೆ ತಡೆದಿದ್ದಾರೆ. ಪ್ರಯಾಣಿಕರು ಗ್ಯಾಸ್ ಸಿಲಿಂಡರ್ ಅನ್ನು ಕಳ್ಳಸಾಗಣೆ ಮಾಡುತ್ತಿದ್ದುದೇ ಬೆಂಕಿಗೆ ಕಾರಣ ಎಂದು ದಕ್ಷಿಣ ರೈಲ್ವೆ ಅಧಿಕಾರಿ ತಿಳಿಸಿದ್ದಾರೆ. ಘಟನೆಯಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದರು ಮತ್ತು ಏಳು ಮಂದಿ ಗಾಯಗೊಂಡಿರುವುದಾಗಿ ಮಾಧ್ಯಮ ವರದಿಯಾಗಿದೆ. #WATCH | Tamil […]