ಹೊಸ ಸಂಶೋಧನೆಯಿಂದ ಹೊರ ಬಂತು ಸೀಕ್ರೇಟ್: ನದಿಯಲ್ಲಿ ಅಪರೂಪದ ಲೋಹ ಪತ್ತೆ!

ಇನ್ಸ್ಟಿಟ್ಯೂಟ್ನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರೆಸ್ಮಿ ಸೆಬಾಸ್ಟಿಯನ್ ನೇತೃತ್ವದ ತಂಡವು ಈ ಮಹತ್ವದ ಆವಿಷ್ಕಾರವನ್ನು ಮಾಡಿದೆ. “ನನ್ನ ಸಂಶೋಧನಾ ವಿದ್ಯಾರ್ಥಿಯೊಬ್ಬರು (Student) ಸಟ್ಲೆಜ್ ನದಿಯ ಮರಳಿನ ಗುಣಲಕ್ಷಣಗಳ ಮೇಲೆ ಪ್ರಯೋಗಗಳನ್ನು ನಡೆಸುವಾಗ ಟ್ಯಾಂಟಲಮ್ ಇರುವಿಕೆಯನ್ನು ಪತ್ತೆ ಹಚ್ಚಿದ್ದಾರೆ ” ಎಂದು ಅವರು ಹೇಳಿದ್ದಾರೆ.ಪಂಜಾಬ್ನ ಸಟ್ಲೆಜ್ ನದಿ ಮರಳಿನಲ್ಲಿ ರೋಪರ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಸಂಶೋಧಕರು ಅಪರೂಪದ ಲೋಹವನ್ನು ಪತ್ತೆ ಹಚ್ಚಿದ್ದಾರೆ. ಸಟ್ಲೆಜ್ ನದಿ ತೀರದ ಮರಳಿನಲ್ಲಿ ಎಲೆಕ್ಟ್ರಾನಿಕ್ ಘಟಕಗಳ ತಯಾರಿಕೆಯಲ್ಲಿ ಬಳಸುವ […]
ಹೊಸ ಪ್ರಭೇದದ ‘ಮ್ಯೂಸಿಕ್ ಕಪ್ಪೆ’ ಪತ್ತೆ :ಗಂಡು – ಹೆಣ್ಣಿನ ಧ್ವನಿಯಲ್ಲಿ ವಟಗುಟ್ಟುವ ಹೊಸ ಜಾತಿಯ ಕಪ್ಪೆ

ಇಟಾನಗರ (ಅರುಣಾಚಲಪ್ರದೇಶ) :ಪತ್ತೆಯಾದ ಹೊಸ ಜಾತಿಯ ಕಪ್ಪೆಯು ಧ್ವನಿಯು ಸಂಗೀತದಂತೆ ಕೇಳಿಬರುತ್ತಿದ್ದು ‘ಮ್ಯೂಸಿಕ್ ಫ್ರಾಗ್’ ಎಂದು ವಿಜ್ಞಾನಿಗಳು ಕರೆದಿದ್ದಾರೆ. ಈ ಕಪ್ಪೆಯು ಮೂರು ರೀತಿಯಲ್ಲಿ ಧ್ವನಿ ಮಾಡುವ ವಿಶೇಷತೆ ಹೊಂದಿದೆ. ನಾವು ನೋವಾ ಡಿಹಿಂಗ್ ನದಿ ಬಳಿಯ ಜೌಗು ಪ್ರದೇಶದಲ್ಲಿ ಪತ್ತೆ ಮಾಡಿದೆವು. ಇದು ಹೆಚ್ಚೂ ಕಮ್ಮಿ ಕಾಡು ಬಾತುಕೋಳಿ ಜಾತಿಗೆ ಹೋಲುತ್ತದೆ. ಇದರ ಧ್ವನಿಯನ್ನೂ ನಾವು ಹಿಂದೆಂದೂ ಕೇಳಿರಲಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾಗಿ ಝೂಟಾಕ್ಸಾ ಜರ್ನಲ್ನಲ್ಲಿ ನವೆಂಬರ್ 15 ರಂದು ಪ್ರಕಟವಾದ ಲೇಖನದಲ್ಲಿ ಪ್ರಕಟವಾಗಿದೆ. ನೋವಾ […]
ಚಂದ್ರನಿಂದ ಕಲ್ಲು-ಮಣ್ಣಿನ ಮಾದರಿ ತರುವ ಗುರಿ: ಚಂದ್ರಯಾನ-4ರತ್ತ ಇಸ್ರೋ ಚಿತ್ತ

ಪುಣೆ(ಮಹಾರಾಷ್ಟ್ರ): ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಚಂದ್ರಯಾನ-4 ಉಡಾವಣೆಗೆ ಸಿದ್ಧತೆ ನಡೆಸುತ್ತಿದೆ.ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ ನಿರ್ದೇಶಕ ನಿಲೇಶ್ ದೇಸಾಯಿ, ಚಂದ್ರಯಾನ-4 ಕುರಿತು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದರು. ಚಂದ್ರಯಾನ-3ಯೋಜನೆಯ ಯಶಸ್ಸಿನೊಂದಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಇತಿಹಾಸ ಬರೆದಿದೆ. ಇದೀಗ ಸಂಸ್ಥೆ ಮತ್ತೊಂದು ಮಹತ್ವದ ಯೋಜನೆಗೆ ಸಿದ್ಧವಾಗಿದೆ. ಅದುವೇ ಚಂದ್ರಯಾನ-4. ‘ಐದರಿಂದ 10 ವರ್ಷ […]
2 ರಫೇಲ್ ವಿಮಾನಗಳಿಂದ ಹುಡುಕಾಡಿದ ವಾಯುಸೇನೆ : ಇಂಫಾಲದಲ್ಲಿ ಅಪರಿಚಿತ ವಸ್ತು ಹಾರಾಟ

ನವದೆಹಲಿ: ನಿಲ್ದಾಣದ ಸಮೀಪ ಯುಎಫ್ಒ (ಯೂನಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್) ಹಾರಾಟ ನಡೆಸಿದ್ದನ್ನು ಕೆಲವರು ಕಂಡಿದ್ದು, ಇದು ನಿತ್ಯದ ವಿಮಾನಗಳ ಹಾರಾಟಕ್ಕೆ ಕೆಲಕಾಲ ಅಡ್ಡಿ ಉಂಟು ಮಾಡಿತ್ತು. ವಾಯುಪಡೆಯು 2 ರಫೇಲ್ ವಿಮಾನಗಳಿಂದ ಹುಡುಕಾಟ ನಡೆಸಿದೆ.ಭೂಮಿಯ ಮೇಲೆ ಆಗಾಗ್ಗೆ ಅಪರಿಚಿತ ವಸ್ತುಗಳು ಆಗಸದಲ್ಲಿ ಹಾರಾಡಿದ ಬಗ್ಗೆ ವರದಿಯಾಗುತ್ತಿರುತ್ತದೆ. ಅಂಥಹದ್ದೇ ವಿದ್ಯಮಾನ ಮಣಿಪುರದ ಇಂಫಾಲ ವಿಮಾನ ನಿಲ್ದಾಣದ ಬಳಿ ನಡೆದಿದೆ ಎಂದು ಹೇಳಲಾಗಿದೆ.ಮಣಿಪುರದ ಇಂಫಾಲದಲ್ಲಿ ಅಪರಿಚಿತ ವಸ್ತುವೊಂದು ಆಗಸದಲ್ಲಿ ಹಾರಾಡಿರುವುದು ಕಂಡುಬಂದಿದೆ. ರಫೇಲ್ ವಿಮಾನಗಳಿಂದ ತಪಾಸಣೆ: ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ […]
ರಕ್ಷಣಾ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತ: ಉತ್ತರಾಖಂಡ ಸುರಂಗ ಕುಸಿತ

ರಕ್ಷಣಾ ಕಾರ್ಯಕ್ಕೆ ಪದೇ ಪದೆ ಅಡ್ಡಿ ಎದುರಾಗುತ್ತಿರುವ ಹಿನ್ನೆಲೆ ಅಮೆರಿಕದ ನಿರ್ಮಿತ ಆಗರ್ ಯಂತ್ರವು ಪೈಪ್ಗಳನ್ನು ಕೊರೆಯಲು ಮತ್ತು ತಳ್ಳಲು ನಿಯೋಜಿಸಲಾಗಿದೆ.ಉತ್ತರಕಾಶಿ, ಉತ್ತರಾಖಂಡ್: ಉತ್ತರಾಕಾಶಿಯ ಭಾಗಶಃ ಕುಸಿದಿರುವ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 40 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯನ್ನು ಶುಕ್ರವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ಶುಕ್ರವಾರ ಸುರಂಗದ ರಕ್ಷಣಾ ಕಾರ್ಯಾಚರಣೆ ವೇಳೆ ಭಾರಿ ಸದ್ದು ಬಂದ ಹಿನ್ನೆಲೆ ಸ್ಥಗಿತಗೊಳಿಸಲಾಗಿದೆ. ಈ ವೇಳೆ, ಶುಕ್ರವಾರ ಮಧ್ಯಾಹ್ನ ಈ ರಕ್ಷಣಾ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಸುರಂಗದ 60 ಮೀಟರ್ ಪ್ರದೇಶದೊಳಗೆ ಹೆವಿ ಡ್ಯೂಟಿ ಆಗರ್ ಮಷಿನ್ […]