ಉಕ್ರೇನ್ ಬಿಕ್ಕಟ್ಟು ವಿಷಯದಲ್ಲಿ ಹೊಸ ವಾಕ್ಯ ಸೇರಿಸಿದ ಭಾರತ : G20 Summit

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನ ಆರಂಭವಾಗಿರುವ ಜಿ-20 ಶೃಂಗಸಭೆಯಲ್ಲಿ ಉಕ್ರೇನ್ ಸಂಘರ್ಷದ ಕುರಿತ ಭಾರತ ತನ್ನ ಹೇಳಿಕೆಯಲ್ಲಿ ಹೊಸ ವಾಕ್ಯ( ಮೊದಲಿನ ಕರಡಿನಲ್ಲಿ ಹೊಸ ವಾಕ್ಯವೊಂದನ್ನ) ಸೇರಿದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಜಿ20 ಶೃಂಗಸಭೆಯ ಕೊನೆಯಲ್ಲಿ ಜಂಟಿ ನಾಯಕರ ಘೋಷಣೆಗೆ ಉಕ್ರೇನ್ ಬಿಕ್ಕಟ್ಟು ವಿಷಯದಲ್ಲಿ ಭಾರತ ಹೊಸ ಹೇಳಿಕೆಯನ್ನು ಪ್ರಸ್ತಾಪಿಸಿದೆ. ಹರಿಯಾಣದ ನುಹ್ ಜಿಲ್ಲೆಯಲ್ಲಿ ಸೆಪ್ಟೆಂಬರ್ 3-6 ರವರೆಗೆ ನಡೆದ G20 ಶೆರ್ಪಾ ಸಭೆಯಲ್ಲಿ ಉಕ್ರೇನ್ ಸಂಘರ್ಷ ವಿವರಿಸಲು ವಾಕ್ಯದಲ್ಲಿ ಯಾವುದೇ ಒಮ್ಮತವಿಲ್ಲ ಎಂಬುವುದನ್ನು […]
ದಾಖಲೆ ಬರೆದ ಭಾರತದ ಅಧ್ಯಕ್ಷತೆಯ ಜಿ-20 ಶೃಂಗಸಭೆ : 73 ಘೋಷಣೆಗಳಿಗೆ ವಿಶ್ವನಾಯಕರ ಒಪ್ಪಿಗೆ

ನವದೆಹಲಿ: ಇಲ್ಲಿ ನಡೆಯುತ್ತಿರುವ ಐತಿಹಾಸಿಕ ಜಿ-20 ಶೃಂಗಸಭೆಯು ಹಲವು ಮೊದಲುಗಳಿಗೆ ನಾಂದಿ ಹಾಡಿದೆ.ವಿಶ್ವನಾಯಕರ ಕೂಟವಾದ ಜಿ20 ಶೃಂಗವು ಭಾರತದ ಅಧ್ಯಕ್ಷತೆಯಲ್ಲಿ ಒಂದು ಭೂಮಿ, ಒಂದು ಒಂದು ಕುಟುಂಬ, ಒಂದು ಭವಿಷ್ಯಕ್ಕಾಗಿ 112 ಘೋಷಣೆಗಳನ್ನು ಅಂಗೀಕರಿಸಿದೆ. ಇದು ಜಿ20 ಶೃಂಗಸಭೆಯ ಇತಿಹಾಸದಲ್ಲಿ ದಾಖಲೆ ಬರೆದಿದೆ. ಭಾರತದ ಅಧ್ಯಕ್ಷತೆಯಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಶೃಂಗ ಇದಾಗಿದ್ದರೆ, ವಿಶ್ವದಲ್ಲಿನ ಹಲವು ದೈತ್ಯ ಸವಾಲುಗಳು ಮತ್ತು ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯಕ್ಕಾಗಿ 73 ಸಂಕಲ್ಪಗಳನ್ನು(ರೆಸಲ್ಯೂಶನ್) ಅಂಗೀಕರಿಸಲಾಗಿದೆ. ಇದು ಈವರೆಗೂ ಯಾವುದೇ […]
ಸಾರಿಗೆ ಯೋಜನೆ ಭಾರತವನ್ನು ಯುರೋಪ್ಗೆ ಸಂಪರ್ಕಿಸುವ ಯೋಜನೆ ಘೋಷಿಸಲಿರುವ ಮೋದಿ-ಬೈಡನ್

ನವದೆಹಲಿ: ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಮಿತ್ರರಾಷ್ಟ್ರಗಳು ಭಾರತವನ್ನು ಮಧ್ಯಪ್ರಾಚ್ಯದ ಮೂಲಕ ಯುರೋಪ್ನೊಂದಿಗೆ ಸಂಪರ್ಕಿಸುವ ‘ಶಿಪ್ಪಿಂಗ್ ಕಾರಿಡಾರ್ ಯೋಜನೆ’ಯನ್ನು ರೂಪಿಸಲು ಯೋಜಿಸಿದ್ದಾರೆ. ಈ ಮಹತ್ವದ ನಿರ್ಧಾರವನ್ನು ಜಿ20 ಶೃಂಗಸಭೆಯಲ್ಲಿ ಘೋಷಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಮಧ್ಯಪ್ರಾಚ್ಯ ಮತ್ತು ಯುರೋಪ್ನೊಂದಿಗೆ ಸಂಪರ್ಕಿಸುವ ಶಿಪ್ಪಿಂಗ್ ಕಾರಿಡಾರ್ ಯೋಜನೆಗಳನ್ನು ಇಂದು ಘೋಷಿಸಲಿದ್ದಾರೆ ಎಂದು ತಿಳಿದು ಬಂದಿದೆ. ಅಮೆರಿಕ ಅಧ್ಯಕ್ಷ ಬೈಡನ್ ಮತ್ತು ಭಾರತದ […]
ಪ್ರಧಾನಿ ಮೋದಿ ಜಿ-20 ಶೃಂಗಸಭೆಯಲ್ಲಿ ಆಸನದ ಮುಂದೆ ‘ಭಾರತ’ ಕಾರ್ಡ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ ಎರಡು ದಿನಗಳ ಜಿ-20 ಶೃಂಗಸಭೆ ಆರಂಭವಾಗಿದೆ . ದೆಹಲಿಯ ‘ಭಾರತ್’ ಮಂಟಪಂನಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಆಸನದ ಮುಂದೆ ‘ಭಾರತ’ ಹೆಸರಿನ ಫಲಕ ಪ್ರರ್ದಶಿಸಲಾಗಿದೆ ಮಹತ್ವದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಭಾರತ’ವನ್ನು ಪ್ರತಿನಿಧಿಸುವ ನಾಯಕ ಎಂದು ಗುರುತಿಸಲಾಗಿದೆ. ಪ್ರಧಾನಿ ಮೋದಿ ಆಸನದ ಮುಂದೆ ‘ಭಾರತ’ ಫಲಕವನ್ನು ಇರಿಸಲಾಗಿದೆ. ಈ ಶೃಂಗಸಭೆ ನಿಮಿತ್ತ ರಾಷ್ಟ್ರಪತಿಗಳು ಔತಣಕೂಟವನ್ನು ಏರ್ಪಡಿಸಿದ್ದಾರೆ. ಇದರ ಆಮಂತ್ರಣ ಪತ್ರಿಕೆಯಲ್ಲಿ ಹಿಂದಿನಿಂದಲೂ ಬಳಕೆಯಲ್ಲಿದ್ದ ‘ಪ್ರೆಸಿಡೆಂಟ್ […]
ಗಮನಸೆಳೆದ ಕೋನಾರ್ಕ್ ಚಕ್ರ , ಪ್ರಧಾನಿ ಮೋದಿ G20 ನಾಯಕರ ಸ್ವಾಗತದ ವೇದಿಕೆಯಲ್ಲಿ ಪ್ರತಿಕೃತಿ

ನವದೆಹಲಿ: ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿರುವ ಶೃಂಗಸಭೆಗೆ ರೆಡ್ ಕಾರ್ಪೆಟ್ನ ಮೂಲಕ ಪ್ರಧಾನಿ ಮೋದಿ ಅವರು, G20 ನಾಯಕರನ್ನು ಸ್ವಾಗತ ಕೋರಿದರು. ಈ ವೇಳೆ, ಒಡಿಶಾದ ಪುರಿಯಲ್ಲಿರುವ ಪ್ರಸಿದ್ಧ ಸೂರ್ಯ ದೇವಾಲಯದ ಕೋನಾರ್ಕ್ ಚಕ್ರದ ಪ್ರತಿಕೃತಿಯು ಪ್ರಧಾನಿ ನರೇಂದ್ರ ಮೋದಿ ಅವರು, ಇಂದು (ಶನಿವಾರ) ಹಸ್ತಲಾಘವದೊಂದಿಗೆ G20 ವಿಶ್ವ ನಾಯಕರನ್ನು ಸ್ವಾಗತ ವೇದಿಕೆಯ ಬ್ಯಾಗ್ರೌಂಡ್ ಆಗಿ ಕಾರ್ಯನಿರ್ವಹಿಸಿತು. ಸ್ವಾಗತ ವೇದಿಕೆಗೆ ಆಗಮಿಸಿದ ಎಲ್ಲ ನಾಯಕರನ್ನು ಕೋನಾರ್ಕ್ ಚಕ್ರದ ಪ್ರತಿಕೃತಿಯು ಸೋಜಿಗದಂತೆ ಸಳೆಯಿತು. G20 ವಿಶ್ವ ನಾಯಕರನ್ನು ಸ್ವಾಗತಿಸಲೆಂದು […]