ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ನಿಧನ

ಮುಂಬೈ: ಬಾಲಿವುಡ್ನ ದಂತಕಥೆ ಹಿರಿಯ ನಟ ಧರ್ಮೇಂದ್ರ (89) ಇಂದು ಬೆಳಗ್ಗೆ ಮುಂಬೈನಲ್ಲಿ ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿದ್ದ ಅವರ ಸ್ಥಿತಿ ಗಂಭೀರವಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಧರ್ಮೇಂದ್ರ ಪತ್ನಿ ಹೇಮಾ ಮಾಲಿನಿ, ಪ್ರಕಾಶ್ ಕೌರ್ ಮಕ್ಕಳಾದ ಮಕ್ಕಳಾದ ಸನ್ನಿ ಡಿಯೋಲ್, ಬಾಬಿ ಡಿಯೋಲ್, ವಿಜೇತಾ, ಅಜೀತಾ, ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಅವರನ್ನು ಅಗಲಿದ್ದಾರೆ. ಸಲ್ಮಾನ್ ಖಾನ್, ಶಾರುಖ್ ಖಾನ್, ಗೋವಿಂದ, […]
ಇರುವೆಗಳಿಗೆ ಹೆದರಿ ಮಹಿಳೆ ಆತ್ಮಹತ್ಯೆಗೆ ಶರಣು!

ಹೈದರಾಬಾದ್: ಇರುವೆಗಳ ಮೇಲಿನ ಭಯದಿಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಂಗಾರೆಡ್ಡಿ ಜಿಲ್ಲೆಯ ನಿವಾಸಿಯಾಗಿದ್ದ 25 ವರ್ಷದ ಮಹಿಳೆ ಇರುವೆಗಳನ್ನು ಕಂಡರೆ ಭಯಪಡುವ ಮಾನಸಿಕ ಸಮಸ್ಯೆಯಿಂದ (ಮೈರ್ಮೆಕೊಫೋಬಿಯಾ) ಬಾಲ್ಯದಿಂದಲೂ ಬಳಲುತ್ತಿದ್ದರು. 2022ರಲ್ಲಿ ಮದುವೆಯಾಗಿದ್ದ ಅವರಿಗೆ 3 ವರ್ಷದ ಹೆಣ್ಣು ಮಗುವೂ ಇತ್ತು. ನವೆಂಬರ್ 4ರಂದು ಮಹಿಳೆಯು, ಮನೆ ಶುಚಿಗೊಳಿಸಿದ ಬಳಿಕ ಮಗುವನ್ನು ಕರೆದುಕೊಂಡು ಹೋಗುವುದಾಗಿ ತಿಳಿಸಿ ಸಂಬಂಧಿಕರ ಮನೆಯಲ್ಲಿ ಮಗುವನ್ನು ಬಿಟ್ಟು ವಾಪಸಾಗಿದ್ದರು. ಆದರೆ, ಸಂಜೆ ಮಹಿಳೆಯ ಪತಿ ಮನೆಗೆ ಬಂದು ನೋಡುವಷ್ಟರಲ್ಲಿ ಆಕೆ ಮರಣಪತ್ರ ಬರೆದಿಟ್ಟು ನೇಣುಹಾಕಿಕೊಂಡಿದ್ದರು. […]
ಬ್ಯಾಂಕ್ ಖಾತೆ ಮತ್ತು ಲಾಕರ್ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಏನೆಲ್ಲಾ ಬದಲಾವಣೆ, ಹೊಸ ರೂಲ್ಸ್ ಏನು?

ನಮ್ಮ ಬ್ಯಾಂಕ್ ಖಾತೆ ಮತ್ತು ಲಾಕರ್ಗಳಿಗೆ ಸಂಬಂಧಿಸಿದಂತೆ ಒಂದು ದೊಡ್ಡ ಸುದ್ದಿ ಬಂದಿದೆ. ಮುಂದಿನ ತಿಂಗಳು, ಅಂದರೆ ನವೆಂಬರ್ 1ರಿಂದ, ಬ್ಯಾಂಕಿಂಗ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. ಕೇಂದ್ರ ಸರ್ಕಾರವು “ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಕಾಯ್ದೆ, 2025” ಅಡಿಯಲ್ಲಿ ಈ ಹೊಸ ನಿಯಮಗಳನ್ನು ತರಲು ನಿರ್ಧರಿಸಿದೆ. ಖಾತೆಗೆ ನಾಲ್ಕು ನಾಮಿನಿ ಹಾಕಬಹುದು: ಇದುವರೆಗೂ ಬ್ಯಾಂಕ್ ಖಾತೆಗೆ ಕೇವಲ ಒಬ್ಬರ ಹೆಸರನ್ನು ಮಾತ್ರ ನಾಮಿನಿಯಾಗಿ ಸೇರಿಸಲು ಸಾಧ್ಯವಿತ್ತು. ಆದರೆ ಹೊಸ ನಿಯಮದ ಪ್ರಕಾರ, ಈಗಿನಿಂದ ನೀವು ನಿಮ್ಮ […]
“ನಿಮ್ಮ ಸೋನ್ ಪಾಪ್ಡಿ ಬಾಕ್ಸ್ ಯಾರಿಗೆ ಬೇಕು”?ಎಂದು ಮಾಲಿಕ ಕೊಟ್ಟ ಸ್ವೀಟ್ಸ್ ಬಾಕ್ಸ್ ನ್ನು ಗೇಟ್ ಮುಂದೆ ಎಸೆದ ಉದ್ಯೋಗಿಗಳು!

ಚಂಡೀಗಢ: ದೀಪಾವಳಿ ಹಬ್ಬದ ಸಂದರ್ಭ ಕಂಪೆನಿಯ ಮಾಲಿಕರು ಸ್ವೀಟ್ಸ್ ನೀಡುವುದು ಮಾಮೂಲು, ಆದರೆ ಸ್ವೀಟ್ಸ್ ಜೊತೆ ಬೋಸನ್ ಅಥವಾ ಗಿಫ್ಟ್ ಅನ್ನು ಕೂಡ ನೀಡುವ ರೂಢಿ ಕಂಪೆನಿಗಳಿಗಿವೆ. ಬರೀ ಸ್ವೀಟ್ಸ್ ಮಾತ್ರ ನೀಡಿದ್ದಾರೆ ಎನ್ನುವ ಕಾರಣಕ್ಕಾಗಿ ಚಂಡೀಗಢದ ಕಂಪೆನಿಯ ಕೆಲಸಗಾರರು ಸಂಸ್ಥೆಯ ಗೇಟ್ ಮುಂದೆ ಎಸೆದು ಹೋದ ವಿಡಿಯೋವೊಂದು ವೈರಲ್ ಆಗುತ್ತಿದೆ. ಹರ್ಯಾಣದ ಸೋನಿಪತ್ ನ ಗನ್ನೌರ್ ಕೈಗಾರಿಕಾ ಪ್ರದೇಶಲ್ಲಿನ ಕಾರ್ಖಾನೆಯೊಂದರ ಮಾಲೀಕ ನೀಡಿದ್ದ ದೀಪಾವಳಿ ಉಡುಗೊರೆಗೆ ಅವರದ್ದೇ ಸಿಬ್ಬಂದಿ ಕೆಂಡಾಮಂಡಲರಾಗಿದ್ದಾರೆ. ಮಾತ್ರವಲ್ಲದೇ ಸಂಸ್ಥೆಯ ಗೇಟ್ ಮುಂದೆ ಎಸೆದು […]
ಬಾಲಿವುಡ್ ಹಿರಿಯ ನಟ ಗೋವರ್ಧನ ಅಸ್ರಾನಿ ನಿಧನ.

ಮುಂಬೈ: ಖ್ಯಾತ ಹಿಂದಿ ಸಿನಿಮಾ ಹಾಸ್ಯನಟ ಮತ್ತು ನಟ ಗೋವರ್ಧನ್ ಅಸ್ರಾನಿ 84ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಳೆದ ಐದು ದಿನಗಳಿಂದ ಅವರನ್ನು ಮುಂಬೈನ ಜುಹುವಿನಲ್ಲಿರುವ ಆರೋಗ್ಯ ನಿಧಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಸ್ರಾನಿ ಅವರ ವ್ಯವಸ್ಥಾಪಕ ಬಾಬುಭಾಯಿ ತಿಬಾ ಅವರ ನಿಧನವನ್ನು ದೃಢಪಡಿಸಿದ್ದು ಅವರ ಅಂತ್ಯಕ್ರಿಯೆಯನ್ನು ಅ.20 ರಂದು ಸಂಜೆ ಸಾಂತಾಕ್ರೂಜ್ ಪಶ್ಚಿಮದಲ್ಲಿರುವ ಶಾಸ್ತ್ರಿನಗರ ಸ್ಮಶಾನದಲ್ಲಿ ನಡೆಸಲಾಯಿತು ಎಂದು ಹೇಳಿದರು. 1941 ಜನವರಿ 1ರಂದು ಜೈಪುರದಲ್ಲಿ ಜನಿಸಿದ ಗೋವರ್ಧನ್ ಅಸ್ರಾನಿ ಕಳೆದ ಆರು ದಶಕಗಳಿಂದ ಬಾಲಿವುಡ್ನ ಮುಖವಾಗಿದ್ದರು. 1960ರ […]