ಮೂಕ ಜೀವಿಗಳಿಗಾಗಿ ಸದಾ ಮಿಡಿಯುವ ಮನಸ್ಸು, ಸೇವೆಯನ್ನೇ ಬದುಕಾಗಿಸಿಕೊಂಡ ಅಪರೂಪದ ಪಶುವೈದ್ಯ ಡಾ. ನಾಗರಾಜ ಮರವಂತೆ ಅವರ ಮಾದರಿ ಲೈಫು!

-ಉಡುಪಿ xpress special ಕೆಲವರು ತಮ್ಮ ವೃತ್ತಿಯನ್ನು ಕೇವಲ ಉದ್ಯೋಗವಾಗಿ ನೋಡುವುದಿಲ್ಲ; ಅದನ್ನು ಸಮಾಜಸೇವೆಯ ಮಾರ್ಗವನ್ನಾಗಿ ರೂಪಿಸಿಕೊಳ್ಳುತ್ತಾರೆ. ಅಂತಹ ಅಪರೂಪದ ವ್ಯಕ್ತಿತ್ವಗಳಲ್ಲಿ ಕುಂದಾಪುರ–ಬೈಂದೂರು ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಪಶುವೈದ್ಯಾಧಿಕಾರಿ ಡಾ. ನಾಗರಾಜ ಮರವಂತೆ ಅವರು ಪ್ರಮುಖರು. ಮೂಕ ಜೀವಿಗಳ ನೋವಿಗೆ ಮಿಡಿಯುವ ಅವರ ಹೃದಯ, ಹಗಲು-ರಾತ್ರಿ ಎನ್ನದೆ ಸಲ್ಲಿಸುತ್ತಿರುವ ಸೇವೆ ಮತ್ತು ಪಶುಸಂಗೋಪನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಅವರಿಗೆ ವಿಶೇಷ ಗುರುತನ್ನು ತಂದುಕೊಟ್ಟಿದೆ. ಡಾ. ನಾಗರಾಜ ಮರವಂತೆ ಬಗ್ಗೆ ಒಂದಿಷ್ಟು: ಬಡ ಕುಟುಂಬದಲ್ಲಿ […]
ಊಟದ ಬಳಿಕ ಚಹಾ ಕುಡಿಯುವ ಅಭ್ಯಾಸ ಇದೆಯೇ? ಹಾಗಿದ್ರೆ ಈ ಮಾಹಿತಿ ನಿಮಗೆ ತಿಳಿದಿರಲಿ

ಭಾರತದಲ್ಲಿ ಹೆಚ್ಚಿನ ಜನರು ದಿನವನ್ನು ಒಂದು ಕಪ್ ಚಹಾ ಅಥವಾ ಕಾಫಿಯೊಂದಿಗೆ ಆರಂಭಿಸುತ್ತಾರೆ. ಕೆಲವರಿಗೆ ಬೆಳಿಗ್ಗೆ ಟೀ ಕುಡಿಯದೇ ದಿನವೇ ಶುರುವಾಗುವುದಿಲ್ಲ. ಇದೇ ರೀತಿ, ಕೆಲವರು ಊಟದ ನಂತರವೂ ಒಂದು ಕಪ್ ಚಹಾ ಸೇವಿಸುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಊಟವಾದ ತಕ್ಷಣ ಚಹಾ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೇ ಎಂಬ ಪ್ರಶ್ನೆ ಹಲವರಲ್ಲಿ ಇರುತ್ತದೆ. ಇಲ್ಲಿದೆ ಮಹಿತಿ. ಹಲವು ತಜ್ಞ ವೈದ್ಯರ ಪ್ರಕಾರ, ಊಟದ ತಕ್ಷಣ ಚಹಾ ಸೇವಿಸುವುದು ಕೆಲವು ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಯಾಗಬಹುದು. ನಾವು […]
ಹಲಸಿನ ಸೀಸನ್ ಎಚ್ಚರವಿರಲಿ! ಈ ಪದಾರ್ಥಗಳ ಜೊತೆ ಹಲಸು ತಿಂದರೆ ಕಾಡಬಹುದು ಸಮಸ್ಯೆ

ಹಸಿದು ಹಲಸು ಅನ್ನೋ ಜನಪ್ರಿಯ ಮಾತಿದೆ. ಹಲಸಿನ ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ. ಇದು ಪೋಷಕಾಂಶಗಳ ಭಂಡಾರವಾಗಿದ್ದು, ಜೀರ್ಣಕ್ರಿಯೆ ಸುಧಾರಿಸಲು ಸಹಾಯಕ. ಹಾಗೇ ರೋಗನಿರೋಧಕ ಶಕ್ತಿ ಹೆಚ್ಚಿಸುವುದು ಹಾಗೂ ಹೃದಯದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಆದರೆ ಹಲಸು ತಿಂದ ತಕ್ಷಣ ಕೆಲವು ಆಹಾರಗಳನ್ನು ಸೇವಿಸಿದರೆ ಅಜೀರ್ಣ, ಹೊಟ್ಟೆ ಉಬ್ಬರ ಮತ್ತು ಇತರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸುತ್ತಾರೆ. ಹಲಸು ತಿಂದ ಬಳಿಕ ಯಾವ ಆಹಾರಗಳನ್ನು ತಪ್ಪಿಸಬೇಕು? ಹಾಲು ಮತ್ತು ಹಾಲಿನ […]
ಕೆಮ್ಮಿನ ಸಿರಪ್ ಬೇಕಿಲ್ಲ, ಈ ನೈಸರ್ಗಿಕ ಮನೆಮದ್ದು ಕೆಮ್ಮಿನ ಸಿರಪ್ ಗಿಂತಲೂ ಒಳ್ಳೆಯ ಕೆಲಸ ಮಾಡುತ್ತೆ!

ಶೀತ ಮತ್ತು ಕೆಮ್ಮಿನ ಸಮಸ್ಯೆ ಎದುರಾದಾಗ ಸಿರಪ್ ಮೊರೆ ಹೋಗುವುದು ಸಾಮಾನ್ಯ. ಆದರೆ ಆರೋಗ್ಯ ಸಚಿವಾಲಯ ವೈದ್ಯರ ಶಿಫಾರಸ್ಸು ಇಲ್ಲದೇ ಕೆಮ್ಮಿನ ಸಿರಪ್ ಸೇವಿಸದಂತೆ ಸೂಚಿಸಿದೆ. ಇಂತಹ ಸಿರಪ್ ಗಳು ಹಾನಿಕಾರಕ ಎಂದೂ ಬಹಿರಂಗವಾಗಿದೆ. ಔಷಧಿಗಳಿಗಿಂತ ನೈಸರ್ಗಿಕ ಪರಿಹಾರಗಳಿಗೆ ಹೆಚ್ಚು ಆದ್ಯತೆ ನೀಡುವುದು ಬೆಸ್ಟ್. ಜೇನುತುಪ್ಪ, ಶುಂಠಿ ಮತ್ತು ತುಳಸಿಯಿಂದ ತಯಾರಿಸಲಾದ ಮನೆಮದ್ದುಗಳು ಸುಲಭವಾಗಿ ಲಭ್ಯವಾಗುವುದರ ಜೊತೆಗೆ ಕಡಿಮೆ ವೆಚ್ಚದ ಆಯ್ಕೆಗಳಾಗಿವೆ. ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ಜೇನುತುಪ್ಪವು ಉರಿಯೂತ ನಿವಾರಕ ಮತ್ತು ಸೂಕ್ಷ್ಮಜೀವಿ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು, […]
ನೇರಳೆ ಹಣ್ಣಿನ ಸಮೃದ್ಧ ಫಸಲು ಬರಗಾಲದ ಮುನ್ಸೂಚನೆಯೇ? ಪೂರ್ವಜರ ನಂಬಿಕೆಗೆ ಇಲ್ಲಿದೆ ವೈಜ್ಞಾನಿಕ ವಿವರಣೆ

ಬೆಂಗಳೂರು: ಈ ವರ್ಷ ರಾಜ್ಯದಲ್ಲಿ ಹೇರಳವಾಗಿ ಕಂಡುಬರುತ್ತಿರುವ ನೇರಳೆ ಹಣ್ಣಿನ ಫಸಲು ಬರಗಾಲದ ಸೂಚನೆಯೇ ಎಂಬ ಚರ್ಚೆ ಜೋರಾಗಿದೆ. “ನೇರಳೆ ಹಣ್ಣು ಹೆಚ್ಚು ಬಂದರೆ ಆ ವರ್ಷ ಬರಗಾಲ ಬರುತ್ತದೆ” ಎಂಬುದು ಜನಪದದಲ್ಲಿ ಹಿರಿಯರಿಂದ ಬಂದಿರುವ ನಂಬಿಕೆ. ಇದೇ ವೇಳೆ ಮುಂಗಾರು ಮಳೆ ನಿರೀಕ್ಷೆಗಿಂತ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯೂ ಈ ಚರ್ಚೆಗೆ ಮತ್ತಷ್ಟು ಬಲ ನೀಡಿದೆ. ಹವಾಮಾನ ಇಲಾಖೆಯ ಪ್ರಕಾರ, ಎಲ್ನಿನೋ ಪರಿಣಾಮದಿಂದ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ದಾಖಲಾಗುವ […]