ಈ ಮಹಿಳೆ ಕೊಟ್ಟ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಕೆಲ ದಿನಗಳಲ್ಲೇ ತೂಕ ಇಳಿಸಬಹುದು !

ತೂಕ ಇಳಿಸೋದೇ ಈ ಕಾಲದ ಬಹುತೇಕ ಮಂದಿಯ ದೊಡ್ಡ ಸಮಸ್ಯೆ, ಸುಲಭದಲ್ಲಿ ತೂಕ ಇಳಿಸಲು ಏನಾದ್ರೂ ಟಿಪ್ಸ್ ಇದ್ರೆ ಹೇಳಿ ಎಂದು ಕೇಳುವವರಿದ್ದಾರೆ. ಅಂತವರಿಗೆ ಇತ್ತೀಚೆಗೆ ಸಿಂಪಲ್ಲಾಗಿ ಕೆಲವು ದಿನಗಳಲ್ಲೇ 33 ಕೆ ಜಿ ತೂಕ ಇಳಿಸಿಕೊಂಡ ತರಬೇತುದಾರರಾದ ನಿಧಿ ಗುಪ್ತಾ ಕೆಲವು ಸಿಂಪಲ್ ಟಿಪ್ಸ್ ಗಳನ್ನು ಕೊಟ್ಟಿದ್ದಾರೆ. ನೀವೂ ತೂಕ ಇಳಿಸುವ ಯೋಚನೆಯಲ್ಲಿದ್ರೆ ಈ ಟಿಪ್ಸ್ ಮಿಸ್ ಮಾಡದೇ ಫಾಲೋ ಮಾಡಿ. ನೇರ ಪ್ರೋಟೀನ್, ತಾಜಾ ತರಕಾರಿಗಳು, ಹಣ್ಣುಗಳು, ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳಂತಹ ಸಂಪೂರ್ಣ, […]
ರಾತ್ರಿ ಮಲಗುವ ಮುನ್ನ ಇಷ್ಟನ್ನು ಮಾಡಿ ಸಾಕು ಆರೋಗ್ಯವಾಗಿ ಇರ್ತೀರಿ!

writeup: suvarchala b s ಮೊಬೈಲ್ ನಲ್ಲಿ ಮಾತಾಡ್ತನೋ, ಸುಮ್ನೆ ಸೋಷಿಯಲ್ ಮೀಡಿಯಾಗಳಲ್ಲಿ ಕಾಲಹರಣ ಮಾಡ್ತಾನೋ, ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಲೋ ನಿದ್ದೆಗೆ ಜಾರುವವರು ಇಂದಿನ ದಿನಗಳಲ್ಲಿ ಬಹುಸಂಖ್ಯಾತರಾಗಿದ್ದಾರೆ. ಹೆಚ್ಚಿನವರಿಗೆ ಈ ಅಭ್ಯಾಸಗಳು ಆರೋಗ್ಯಕರವಲ್ಲ ಎಂದು ಗೊತ್ತಿದ್ದೂ ಅದರಿಂದ ಹೊರಬರಲಾರದೇ ಅದೇ ಜೀವನಶೈಲಿಗೆ ಒಗ್ಗಿಕೊಂಡಿದ್ದಾರೆ. ಹಾಗಾದ್ರೆ ಮಲಗುವ ಮುನ್ನ ಯಾವ ರೀತಿಯ ಒಳ್ಳೆಯ ಹವ್ಯಾಸಗಳನ್ನು ನಾವು ರೂಢಿಸಿಕೊಳ್ಬೋದು ಅಂತ ಇಲ್ನೋಡಿ. ಒಟ್ಟಿನಲ್ಲಿ ಮಲಗುವ ಒಂದು/ಅರ್ಧ ಗಂಟೆ ಮೊದಲು ಮೊಬೈಲ್ ನಂತಹಾ ಗ್ಯಾಜೆಟ್ ಗಳಿಂದ ದೂರವಿದ್ದು ನೋಡಿ ಖಂಡಿತ್ತಾ […]
ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯೋ ಅಭ್ಯಾಸ ನಿಮಗಿದ್ರೆ ಕೂಡಲೇ ಬಿಡೋದು ಒಳ್ಳೇದು : ಇದು ಉಡುಪಿXPRESS ಕಾಳಜಿ

courtecy:pinterest
ಮುಂಜಾನೆ ಕರಿಬೇವು ಎಲೆ ಜಗಿಯೋದ್ರಿಂದ ಇಷ್ಟೊಂದೆಲ್ಲಾ ಉಪಯೋಗಗಳಿವೆ!

ಕರಿಬೇವು ಎಲೆ ಬರೀ ಒಗ್ಗರಣೆಗಷ್ಟೇ ಬಳಸುವುದಿಲ್ಲ. ಈ ಎಲೆಯಿಂದ ಹತ್ತಾರು ಉಪಯೋಗಗಳಿವೆ. ತಿನ್ನುವುದಕ್ಕೆ ಸಪ್ಪೆ ಬೋರು ಅನ್ನಿಸಿದ್ರೂ ಈ ಎಲೆಗಳ ಗುಣಗಳಿಂದ ಆರೋಗ್ಯಕ್ಕೂ ಹತ್ತಾರು ಪೂರಕವಾದ ಅಂಶಗಳಿವೆ ಬನ್ನಿ ಹಾಗಾದ್ರೆ ಕರಿಬೇವಿನಿಂದ ಯಾವುದೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದುಕೊಳ್ಳೋಣ. ಕ್ರಮಬದ್ದವಾಗಿ ತಿಂದರೆ ತೂಕ ಕಳೆದುಕೊಳ್ತೀರಿ: ಹೌದು ಕೊಬ್ಬಿನ ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಮತ್ತು ಚಯಾಪಚಯವನ್ನು ಹೆಚ್ಚಿಸುವ ಸಾಮರ್ಥ್ಯ ಕರಿಬೇವಿಗಿದೆ. ಇದರಿಂದಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.ಬೊಜ್ಜು, ದೇಹದ ತೂಕ ಇಳಿಸಬೇಕು ಎನ್ನುವವರು ಖಂಡಿತ ಕರಿಬೇವನ್ನು ತಪ್ಪದೇ ದಿನನಿತ್ಯ ಬೆಳಗ್ಗೆ ತಿನ್ನಬಹುದು […]
ಉಡುಪಿ:ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ವೈದ್ಯಕೀಯ ತಪಾಸಣಾ ಶಿಬಿರ

ಉಡುಪಿ: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಸಮಗ್ರ ಶಿಕ್ಷಾ ಕರ್ನಾಟಕ ಯೋಜನೆಯಡಿ ಪೂರ್ವ ಪ್ರಾಥಮಿಕತರಗತಿಯಿಂದ ಪದವಿ ಪೂರ್ವ ತರಗತಿವರೆಗಿನ ಶಾಲಾ ಶಿಕ್ಷಣ ಇಲಾಖೆಯ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ವೈದ್ಯಕೀಯ ತಪಾಸಣಾ ಶಿಬಿರವು ಕಾರ್ಕಳ ವಲಯಕ್ಕೆ ನವೆಂಬರ್ 23 ರಂದು ಕಾರ್ಕಳ ಬಿ.ಆರ್.ಸಿ ಯಲ್ಲಿ, ಬೈಂದೂರು ಮತ್ತು ಕುಂದಾಪುರ ವಲಯದವರಿಗೆನವೆಂಬರ್ 25 ರಂದು ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಾಗೂ ಉಡುಪಿ ಮತ್ತು ಬ್ರಹ್ಮಾವರ ವಲಯದವರಿಗೆ ನವೆಂಬರ್ 26 ರಂದು ನಗರದ ಅಜ್ಜರಕಾಡು ಬಿ.ಆರ್.ಸಿಯಲ್ಲಿ ನಡೆಯಲಿದೆ. ಮಕ್ಕಳ ಅಗತ್ಯ […]