ಕೂದಲು ಉದುರುವ ಸಮಸ್ಯೆಗೆ ಸರಳ ಪರಿಹಾರ! ಮನೆಯಲ್ಲೇ ಹೀಗೆ ಮಾಡಿ ಮ್ಯಾಜಿಕ್ ಆಗತ್ತೆ

ಕೂದಲು ಉದುರುವುದು ಈಗ ಬಹಳ ಜನರಿಗೆ ಸಾಮಾನ್ಯ ಸಮಸ್ಯೆ. ಒತ್ತಡ, ಕಳಪೆ ಆಹಾರ, ಮಾಲಿನ್ಯ ಮತ್ತು ಸರಿಯಾದ ರೀತಿಯಲ್ಲಿ ಕೂದಲು ಆರೈಕೆ ಮಾಡದಿರುವುದು ಸಮಸ್ಯೆಗೆ ಕಾರಣ. ಮನೆಯಲ್ಲೇ ಇರುವ ಕೆಲವು ನೈಸರ್ಗಿಕ ವಸ್ತುಗಳನ್ನು ಕರಿಬೇವಿನೊಟ್ಟಿಗೆ ಬಳಸಿದರೆ ಕೂದಲು ಉದುರುವ ಸಮಸ್ಯೆಗೆ ಸ್ವಲ್ಪ ಮಟ್ಟಿನ ಪರಿಹಾರ ಸಿಗುತ್ತದೆ. ಭಾರತೀಯ ಅಡುಗೆ ಮನೆಗಳಲ್ಲಿ ಕರಿಬೇವು ಇದ್ದೇ ಇರುತ್ತದೆ. ಇದು ಅಡುಗೆಗೆ ಒಳ್ಳೆಯ ವಾಸನೆ ಕೊಡುತ್ತದೆ. ಕರಿಬೇವು ಆರೋಗ್ಯಕ್ಕೆ ಒಳ್ಳೆಯದು. ಹಾಗೆಯೇ ಕರಿಬೇವಿನ ಎಲೆಯಿಂದ ಕೂದಲಿನ ಆರೈಕೆ ಮಾಡಬಹುದು. ಕರಿಬೇವಿನ ಹೇರ್ […]

ಮಹಿಳೆಯರೇ, ಸರಿಯಾದ ಸಮಯಕ್ಕೆ “ಪಿರಿಯಡ್ಸ್” ಆಗ್ತಿಲ್ಲವೇ? ತಡ ಮಾಡ್ಬೇಡಿ ಕಾರಣ ಹೀಗಿರಬಹುದು

ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಮುಟ್ಟು ಬರುತ್ತದೆ ಎಂದು ನಿರೀಕ್ಷಿಸುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಕೆಲವು ದಿನಗಳು ಅಥವಾ ವಾರ ತಡವಾಗಬಹುದು. ಒಂದು ಬಾರಿ ಮುಟ್ಟು ತಡವಾದರೆ ಗಾಬರಿಯಾಗಬೇಕಿಲ್ಲ. ಆದರೆ ಪದೇಪದೇ ಋತುಚಕ್ರ ತಡವಾಗುತ್ತಿದ್ದರೆ ಅದರ ಹಿಂದಿರುವ ಕಾರಣವನ್ನು ತಿಳಿದುಕೊಳ್ಳುವುದು ಮುಖ್ಯ. ಮುಟ್ಟು ತಡವಾಗಲು ಗರ್ಭಧಾರಣೆ ಮಾತ್ರ ಕಾರಣವಲ್ಲ. ಒತ್ತಡ, ನಿದ್ರೆಯ ಬದಲಾವಣೆ, ತೂಕದಲ್ಲಿ ಗಮನಾರ್ಹ ಬದಲಾವಣೆ, ಅತಿಯಾದ ವ್ಯಾಯಾಮ, ಹಾರ್ಮೋನ್‌ಗಳ ಅಸಮತೋಲನ ಹಾಗೂ ಕೆಲವು ಆರೋಗ್ಯ ಸಮಸ್ಯೆಗಳು ಕೂಡ ಕಾರಣವಾಗಬಹುದು. 1. ಒತ್ತಡ ದೈನಂದಿನ ಜೀವನದಲ್ಲಿ […]

7-8 ಗಂಟೆ ನಿದ್ರೆ ಮಾಡಿದ್ರೂ ಡಾರ್ಕ್ ಸರ್ಕಲ್ಸ್ ಹೋಗ್ತಿಲ್ವಾ? ಈ ಅಂಶಗಳೂ ಕಾರಣ!

ಹೆಚ್ಚಿನವರು ಕಣ್ಣುಗಳ ಕೆಳಗೆ ಕಪ್ಪು ವಲಯಗಳು ಕಾಣಿಸಿಕೊಂಡರೆ ಮೊದಲು ನಿದ್ರೆ ಸರಿಯಾಗಿ ಆಗುತ್ತಿಲ್ಲ ಎಂದುಕೊಳ್ಳುತ್ತಾರೆ. ಪ್ರತಿದಿನ 7-8 ಗಂಟೆಗಳ ಕಾಲ ಸಾಕಷ್ಟು ನಿದ್ರೆ ಮಾಡಿದರೂ ಕಣ್ಣುಗಳ ಕೆಳಗಿನ ಕಪ್ಪು ವಲಯಗಳು ಕಡಿಮೆಯಾಗುತ್ತಿಲ್ಲವೇ? ಹಾಗಾದರೆ ಇದಕ್ಕೆ ನಿದ್ರೆಯ ಕೊರತೆ ಮಾತ್ರ ಕಾರಣವಾಗಿರಬೇಕೆಂದಿಲ್ಲ. ಜೀವನಶೈಲಿ, ಆಹಾರ ಪದ್ಧತಿ, ಅಲರ್ಜಿ ಸೇರಿದಂತೆ ಹಲವು ಕಾರಣಗಳು ಡಾರ್ಕ್ ಸರ್ಕಲ್ಸ್‌ಗೆ ಕಾರಣವಾಗಬಹುದು. ಸುತ್ತಲಿನ ಚರ್ಮ ಬಹಳ ತೆಳುವಾಗಿರುವುದರಿಂದ ಅನುವಂಶಿಕತೆ, ವಯಸ್ಸು, ಅಲರ್ಜಿ ಹಾಗೂ ದೇಹದ ಕೆಲವು ಬದಲಾವಣೆಗಳೂ ಇದಕ್ಕೆ ಕಾರಣವಾಗಬಹುದು. ದೇಹಕ್ಕೆ ಸಾಕಷ್ಟು ನೀರು […]

40 ವರ್ಷದ ಬಳಿಕ ಹೆಚ್ಚಾಗುತ್ತಿದೆ ಕಿಡ್ನಿ ಸಮಸ್ಯೆ! ಮೂತ್ರಪಿಂಡದ ಕಾಯಿಲೆ ಬಗ್ಗೆ ಜಾಗರೂಕರಾಗಿರಿ!

ವಯಸ್ಸು ಹೆಚ್ಚಾದಂತೆ ದೇಹದಲ್ಲಿ ಹಲವು ಬದಲಾವಣೆಗಳು ಸಹಜವಾಗಿ ಸಂಭವಿಸುತ್ತವೆ. ಆದರೆ, 40 ವರ್ಷ ದಾಟಿದ ಬಳಿಕ ಮೂತ್ರಪಿಂಡ (ಕಿಡ್ನಿ) ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತ್ಯಗತ್ಯ ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ. ಆರಂಭಿಕ ಹಂತದಲ್ಲಿ ಕಿಡ್ನಿ ಕಾಯಿಲೆಗಳು ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸದ ಕಾರಣ, ತಡವಾಗಿ ಪತ್ತೆಯಾದರೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ವೈದ್ಯರ ಪ್ರಕಾರ, 40 ವರ್ಷಗಳ ನಂತರ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಸ್ಥೂಲಕಾಯದಂತಹ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇವು ಕ್ರಮೇಣ ಮೂತ್ರಪಿಂಡಗಳ […]

ಇಂದಿನಿಂದಲೇ ಶಾಲೆ-ಕಾಲೇಜುಗಳ 50 ಮೀಟರ್ ವ್ಯಾಪ್ತಿಯಲ್ಲಿ ಜಂಕ್‌ ಫುಡ್‌ಗೆ ಬ್ರೇಕ್:ಯಾಕೆ ಈ ಮಹತ್ವದ ನಿರ್ಧಾರ?

ಬೆಂಗಳೂರು: ರಾಜ್ಯದ ಶಾಲೆ, ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳ 50 ಮೀಟರ್ ವ್ಯಾಪ್ತಿಯಲ್ಲಿ ಹೆಚ್ಚಿನ ಕೊಬ್ಬು, ಸಕ್ಕರೆ ಮತ್ತು ಉಪ್ಪು (HFSS) ಹೊಂದಿರುವ ಆಹಾರಗಳ ಮಾರಾಟ, ಉಚಿತ ವಿತರಣೆ, ಜಾಹೀರಾತು ಮತ್ತು ಪ್ರಚಾರಕ್ಕೆ ವಿಧಿಸಿರುವ ನಿಷೇಧವನ್ನು ಆಗಸ್ಟ್‌ 1ರಿಂದ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (FDA) ಇಲಾಖೆ ತಿಳಿಸಿದೆ. ಆರೋಗ್ಯ ಸಚಿವ ಯು.ಟಿ. ಖಾದರ್ ಈ ಕುರಿತು ಮಾಹಿತಿ ನೀಡಿ, ಮಕ್ಕಳಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಬೆಳೆಸುವುದು ಹಾಗೂ ಜಂಕ್‌ […]