ಆಹಾರ ಸುರಕ್ಷತಾ ತಪಾಸಣೆಯಲ್ಲಿ ಎಷ್ಟೇ ದೊಡ್ಡವರಾಗಿದ್ದರೂ ಅವರನ್ನು ಸುಮ್ಮನೆ ಬಿಡುವ ಪ್ರಶ್ನೆಯಿಲ್ಲ: ಆರೋಗ್ಯ ಸಚಿವ ಯು.ಟಿ. ಖಾದರ್

ಮಂಗಳೂರು: ಆಹಾರ ಸುರಕ್ಷತಾ ತಪಾಸಣೆಯಲ್ಲಿ ಎಷ್ಟೇ ದೊಡ್ಡವರಾಗಿದ್ದರೂ, ಸಣ್ಣವರಾಗಿದ್ದರೂ ಯಾರನ್ನೂ ಬಿಡುವುದಿಲ್ಲ. ಜನರ ಆರೋಗ್ಯವೇ ಸರ್ಕಾರದ ಮೊದಲ ಆದ್ಯತೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಆಹಾರ ತಯಾರಿಸುವ ಹಾಗೂ ವಿತರಿಸುವ ಸ್ಥಳಗಳು ಮತ್ತು ಆಹಾರ ಉತ್ಪಾದನಾ ಕೇಂದ್ರಗಳನ್ನು ಗುರುತಿಸಿ ರಾಜ್ಯಾದ್ಯಂತ ತಪಾಸಣೆ ಆರಂಭಿಸಲಾಗಿದೆ. ಈ ತಪಾಸಣೆ ಯಾರ ಮೇಲಿನ ವೈಯಕ್ತಿಕ ಕೋಪದಿಂದ ನಡೆಸುತ್ತಿರುವುದಲ್ಲ. ಆಹಾರ ಸುರಕ್ಷತೆ ಹಾಗೂ ನೈರ್ಮಲ್ಯದಲ್ಲಿ ಏನಾದರೂ ಲೋಪಗಳಿದ್ದರೆ ಅವುಗಳನ್ನು ಗುರುತಿಸಿ, ವಾಸ್ತವ ಪರಿಸ್ಥಿತಿಯನ್ನು […]

ಹೋಟೆಲ್ ಆಯ್ತು, ಇನ್ನು ರಾಜ್ಯದ ಹಾಸ್ಟೆಲ್‌, ಪಿಜಿಗಳಲ್ಲೂ ಆಹಾರ ತಪಾಸಣೆಗೆ ಆರೋಗ್ಯ ಸಚಿವರ ಆದೇಶ

ಬೆಂಗಳೂರು: ಹೋಟೆಲ್‌ಗಳಲ್ಲಿನ ಆಹಾರ ಗುಣಮಟ್ಟದ ಪರಿಶೀಲನೆ ಬಳಿಕ ಇದೀಗ ರಾಜ್ಯದ ಹಾಸ್ಟೆಲ್‌ಗಳು ಮತ್ತು ಪಿಜಿಗಳಲ್ಲೂ ಆಹಾರ ತಪಾಸಣೆ ನಡೆಸಲು ಆರೋಗ್ಯ ಸಚಿವ ಯು.ಟಿ. ಖಾದರ್ ಸೂಚನೆ ನೀಡಿದ್ದಾರೆ. ಆರೋಗ್ಯ ಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಸರ್ಕಾರಿ, ಖಾಸಗಿ ಹಾಗೂ ಸಹಕಾರಿ ಹಾಸ್ಟೆಲ್‌ಗಳಲ್ಲಿ ಆಹಾರದ ಗುಣಮಟ್ಟ, ಸ್ವಚ್ಛತೆ ಮತ್ತು ಆಹಾರ ಪದಾರ್ಥಗಳ ಸಂಗ್ರಹಣೆ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಹಾಸ್ಟೆಲ್‌ಗಳ ಜೊತೆಗೆ ಪಿಜಿಗಳು ಹಾಗೂ ಕ್ಯಾಂಟೀನ್‌ಗಳಲ್ಲಿಯೂ ಆಹಾರ ಪರೀಕ್ಷೆ ನಡೆಸಲಾಗುವುದು. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಎಲ್ಲಾ ಜಿಲ್ಲಾ […]

ರಾಜ್ಯದಲ್ಲಿ ಒಂದು ವರ್ಷ ಗುಟ್ಕಾ ಹಾಗೂ ಪಾನ್ ಮಸಾಲಾ ಬ್ಯಾನ್!

ಬೆಂಗಳೂರು: ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾಗಳ ಉತ್ಪಾದನೆ, ಶೇಖರಣೆ, ವಿತರಣೆ, ಸಾಗಣೆ ಮತ್ತು ಮಾರಾಟಕ್ಕೆ ಕರ್ನಾಟಕ ಸರ್ಕಾರ ಒಂದು ವರ್ಷದ ಅವಧಿಗೆ ರಾಜ್ಯಾದ್ಯಂತ ಸಂಪೂರ್ಣ ನಿಷೇಧ ಹೇರಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಸೆಕ್ಷನ್ 30(2)(a) ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಮಾರಾಟ ನಿಷೇಧ ಮತ್ತು ನಿರ್ಬಂಧಗಳು) ನಿಯಮಾವಳಿ-2011ರ ನಿಯಮ 2.3.4ರ ಅಡಿಯಲ್ಲಿ ರಾಜ್ಯ ಆಹಾರ ಸುರಕ್ಷತಾ ಆಯುಕ್ತರು ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ. ಅಧಿಸೂಚನೆ ಹೊರಡಿಸಿದ ದಿನದಿಂದಲೇ […]

ಪಬ್‌ಗಳ ಮೇಲೆ ಆಹಾರ ಇಲಾಖೆ ದಾಳಿ: ಫಂಗಸ್ ಹಿಡಿದ ಮಶ್ರೂಮ್‌, ಜಿರಳೆ ಪತ್ತೆ, ರಾಜ್ಯದ ಎಲ್ಲಾ ಹೊಟೇಲ್ ಗಳಿಗೂ ಎಚ್ಚರಿಕೆ!

ಬೆಂಗಳೂರು : ರಾಜಧಾನಿ ಬೆಂಗಳೂರಿನ ಪ್ರಮುಖ ವಾಣಿಜ್ಯ ಹಾಗೂ ನೈಟ್‌ಲೈಫ್ ತಾಣಗಳಾದ ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ನ ಪಬ್‌ಗಳು ಹಾಗೂ ರೆಸ್ಟೋರೆಂಟ್‌ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ ಮುಂದುವರಿದಿದೆ. ತಡರಾತ್ರಿ ನಡೆದ ಕಾರ್ಯಾಚರಣೆಯಲ್ಲಿ 10 ತಂಡಗಳು ವಿವಿಧ ಹೋಟೆಲ್‌ಗಳು ಮತ್ತು ಪಬ್‌ಗಳಲ್ಲಿ ಆಹಾರ ಗುಣಮಟ್ಟ ಹಾಗೂ ಅಡುಗೆಮನೆಯ ಸ್ವಚ್ಛತೆಯನ್ನು ಪರಿಶೀಲಿಸಿವೆ. ರಾಜ್ಯಾದ್ಯಂತ ಆಹಾರ ಇಲಾಖೆ ಹೊಟೇಲ್ ಗಳೀಗೆ ಭೇಟಿ ನೀಡಲಿದೆ. ಯುಬಿ ಸಿಟಿಯ ಸ್ಕೈ ಲಾಂಜ್ ಬಳಿಕ ಬ್ರಿಗೇಡ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್‌ನ […]

ನಿಮ್ಮ ಮನೆಗೆ ಬರುವ ಹಾಲಿನಲ್ಲಿ ಕಲಬೆರಕೆ ಎಷ್ಟಿದೆ? ತಿಳಿಯಲು ಹೀಗೆ ಮಾಡಿ!

ದಿನಕ್ಕೊಂದು ಲೋಟ ಹಾಲು ಕುಡಿಯದವರೇ ಇಲ್ಲ. ನೇರವಾಗಿ ಅಲ್ಲದಿದ್ದರೂ ಯಾವುದಾದರೂ ರೂಪದಲ್ಲಿ ನಾವು ಹಾಲನ್ನು ಸೇವಿಸುತ್ತೇವೆ. ಹಾಲು ಆರೋಗ್ಯಕಾರಿ ಪೇಯವೂ ಹೌದು. ಕ್ಯಾಲ್ಸಿಯಂ ಅತಿ ಹೆಚ್ಚು ಇರುವ ಮನುಷ್ಯನ ದೇಹಕ್ಕೆ ಆರೋಗ್ಯಕ್ಕೆ ಬೇಕಾದ ಮುಖ್ಯ ಆಹಾರ ಹಾಲು. ಆದರೆ, ಇತ್ತೀಚೆಗೆ ನಾವು ಸೇವಿಸುವ ಹಾಲು ಶುದ್ಧ ಹಾಲೆಂದು ಹೇಳಲು ಸಾಧ್ಯವಾಗುತ್ತಿಲ್ಲ, ರೈತರ ಮಟ್ಟದಿಂದ ಹಿಡಿದು ಹಾಲು ಸಂಗ್ರಹಣಾ ಕೇಂದ್ರ ಹಾಗೂ ಶೀತಲೀಕರಣ ಕೇಂದ್ರದವರೆಗಿನ ವಿವಿಧ ಹಂತಗಳಲ್ಲಿ ಕಲಬೆರಕೆ ಸಂಭವಿಸುತ್ತಿದೆ. ಇದು ತನಿಖೆಗಳಿಂದ ತಿಳಿದು ಬಂದಿದೆ. ಹೀಗೆ ಕಲಬೆರಕೆ […]