ಮನೆಯಲ್ಲಿ ಸೊಳ್ಳೆ ಬತ್ತಿ ಹಚ್ಚೋ ಅಭ್ಯಾಸ ಇದ್ಯಾ? ಈ ಎಲ್ಲಾ ಸಮಸ್ಯೆಗಳಿಗೆ ಕಾರಣ ಆಗ್ಬೋದು ಎಚ್ಚರವಿರಲಿ

ಮಳೆಗಾಲ ಆರಂಭವಾಗುತ್ತಿದ್ದಂತೆ ಸೊಳ್ಳೆಗಳ ಕಾಟವೂ ಹೆಚ್ಚಾಗುತ್ತದೆ. ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಅನೇಕರು ರಾತ್ರಿ ಮಲಗುವಾಗ ಸೊಳ್ಳೆ ಬತ್ತಿ ಹಚ್ಚುತ್ತಾರೆ. ಆದರೆ, ಸೊಳ್ಳೆ ಬತ್ತಿಯಿಂದ ಹೊರಬರುವ ಹೊಗೆಯನ್ನು ದೀರ್ಘಕಾಲ ಉಸಿರಾಡುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಸೊಳ್ಳೆಗಳನ್ನು ನಿಯಂತ್ರಿಸಲು ಬಳಸುವ ಸೊಳ್ಳೆ ಬತ್ತಿಗಳಲ್ಲಿ ವಿವಿಧ ರಾಸಾಯನಿಕ ಪದಾರ್ಥಗಳಿರುತ್ತವೆ. ಬತ್ತಿ ಉರಿಯುವಾಗ ಬಿಡುಗಡೆಯಾಗುವ ಹೊಗೆ ಮನೆಯೊಳಗೆ ಹರಡುತ್ತದೆ. ವಿಶೇಷವಾಗಿ ಬಾಗಿಲು, ಕಿಟಕಿಗಳನ್ನು ಮುಚ್ಚಿಕೊಂಡು ಸೊಳ್ಳೆ ಬತ್ತಿ ಹಚ್ಚಿ ಮಲಗಿದರೆ ಕೋಣೆಯೊಳಗೆ ಹೊಗೆ ಹೆಚ್ಚಾಗಿ ಸಂಗ್ರಹವಾಗುವ ಸಾಧ್ಯತೆಯಿದೆ. ಶ್ವಾಸಕೋಶಕ್ಕೆ ತೊಂದರೆ ಉಂಟಾಗಬಹುದು […]
ನಿಮ್ಮ ಮಕ್ಕಳ ಭವಿಷ್ಯ ಚೆನ್ನಾಗಿರಬೇಕೇ? ಇಂದಿನಿಂದಲೇ ಹೀಗೆ ಮಾಡಿ

ಜು.28 ವಿಶ್ವ ಪ್ರಕೃತಿ ಸಂರಕ್ಷಣಾ ದಿನ: ಪ್ರಕೃತಿಯನ್ನು ಉಳಿಸುವುದು ಇಂದು ಆಯ್ಕೆಯಲ್ಲ, ನಮ್ಮೆಲ್ಲರ ಜವಾಬ್ದಾರಿ! ನಮ್ಮ ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕಬೇಕೆಂದರೆ, ಅವರಿಗೆ ಸ್ವಚ್ಛ ಗಾಳಿ, ನೀರು ದೊರೆಯಬೇಕಾದರೆ ನಾವು ಇಂದು ಎಚ್ಚೆತ್ತುಕೊಳ್ಳಬೇಕಿದೆ. ಪ್ರಕೃತಿ ಎಂದರೆ ಕೇವಲ ಕಾಡು, ಬೆಟ್ಟ, ನದಿ, ಸಮುದ್ರಗಳಲ್ಲ. ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರದಿಂದ ಹಿಡಿದು ನಮ್ಮ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಪ್ರಕೃತಿಯ ಕೊಡುಗೆ ಇದೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅತಿಯಾದ ನಗರೀಕರಣ, ಕಾಡುಗಳ ನಾಶ, ಪ್ಲಾಸ್ಟಿಕ್ […]
ಪುರುಷರೇ ಮಳೆಗಾಲದಲ್ಲಿ ಈ ಒಂದು ತಪ್ಪು ಮಾಡ್ಬೇಡಿ, ಕೂದಲು ಹೀಗಾಯ್ತು ಅಂತ ಆ ಮೇಲೆ ಗೋಳಾಗಬೇಡಿ!

ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತಿದ್ದು, ವಿಶೇಷವಾಗಿ ಮಳೆಗಾಲದಲ್ಲಿ ಈ ಸಮಸ್ಯೆ ಮತ್ತಷ್ಟು ತೀವ್ರವಾಗುತ್ತದೆ. ಜೀವನಶೈಲಿಯ ಕೆಲವು ತಪ್ಪು ಅಭ್ಯಾಸಗಳು ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾಗುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಎಂಬಿಬಿಎಸ್ ವೈದ್ಯೆ ಡಾ. ಅಪರಾಜಿತಾ ಲಂಬಾ ಅವರ ಪ್ರಕಾರ, ಮಳೆಗಾಲದಲ್ಲಿ ಕೂದಲಿಗೆ ಹೆಚ್ಚು ಸಮಯ ಎಣ್ಣೆ ಹಚ್ಚಿಕೊಂಡಿರುವುದು ಹಾಗೂ ಅತಿಯಾಗಿ ಎಣ್ಣೆ ಬಳಸುವುದು ಕೂದಲಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ನೆತ್ತಿಯಲ್ಲಿ ತೇವಾಂಶ ಹೆಚ್ಚಾಗಿ ಕೂದಲಿನ ಕಿರುಚೀಲಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. […]
ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಐವಿ ಪರೀಕ್ಷೆ ನಡೆಸಲು ಮುಂದಾದ ಆರೋಗ್ಯ ಇಲಾಖೆ, ಏಕೆ ಈ ಮಹತ್ವದ ನಿರ್ಧಾರ?

ಬೆಂಗಳೂರು: ರಾಜ್ಯದಲ್ಲಿ ಯುವಜನರಲ್ಲಿ ಹೆಚ್ಐವಿ (HIV) ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ನಿಯಂತ್ರಿಸಲು ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಐವಿ ಪರೀಕ್ಷೆ ನಡೆಸುವ ವಿಶೇಷ ಅಭಿಯಾನವನ್ನು ಆರಂಭಿಸಲು ಇಲಾಖೆ ನಿರ್ಧರಿಸಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ಹಾಗೂ ಇತರ ವರದಿಗಳ ಪ್ರಕಾರ, ಹೆಚ್ಐವಿ ಸೋಂಕಿತರ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸುಮಾರು 2.60 ಲಕ್ಷ ಮಂದಿ ಹೆಚ್ಐವಿ ಸೋಂಕಿನೊಂದಿಗೆ ಬದುಕುತ್ತಿದ್ದು, […]
ಡಾರ್ಕ್ ಚಾಕ್ಲೇಟ್ ಎಂದು ಲೈಟಾಗಿ ತಗೋಬೇಡಿ, ಒಂದು ಪೀಸ್ ಡಾರ್ಕ್ ಚಾಕ್ಲೇಟ್ ತಿಂದ್ರೂ ಆರೋಗ್ಯಕ್ಕೆ ಎಷ್ಟೊಂದೆಲ್ಲಾ ಲಾಭವಿದೆ ಗೊತ್ತೆ!

ಚಾಕೊಲೇಟ್ ಎಂದರೆ ಮಕ್ಕಳು ಮಾತ್ರವಲ್ಲ, ಯುವಕರು ಮತ್ತು ಹಿರಿಯರಿಗೂ ಅಚ್ಚುಮೆಚ್ಚು. ಅದರಲ್ಲೂ ಡಾರ್ಕ್ ಚಾಕೊಲೇಟ್ ಆರೋಗ್ಯಕ್ಕೆ ಉತ್ತಮ ಎನ್ನುವ ಮಾತು ಸಾಮಾನ್ಯವಾಗಿದೆ. ಆದರೆ ಯಾವುದೇ ಡಾರ್ಕ್ ಚಾಕೊಲೇಟ್ ಅಲ್ಲ, ಕನಿಷ್ಠ 70% ಅಥವಾ ಅದಕ್ಕಿಂತ ಹೆಚ್ಚು ಕೋಕೋ ಇರುವ ಡಾರ್ಕ್ ಚಾಕೊಲೇಟ್ ಅನ್ನು ಮಿತವಾಗಿ ಸೇವಿಸಿದರೆ ಮಾತ್ರ ಆರೋಗ್ಯ ಪ್ರಯೋಜನಗಳು ದೊರೆಯುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ. ಮುಂಬೈನ ಡಾ. ಡಿ.ವೈ. ಪಾಟೀಲ್ ಮೆಡಿಕಲ್ ಕಾಲೇಜಿನ ಡಾ. ಅಮಿತಾ ವರ್ಮಾ ಮತ್ತು ಡಾ. ಅರ್ಚನಾ ಕಾದಮ್ ನಡೆಸಿದ ಅಧ್ಯಯನದ […]