ಮಧುಮೇಹ,ಬಿಪಿ ಸೇರಿದಂತೆ 39 ಅಗತ್ಯ ಔಷಧಿಗಳ ಬೆಲೆ ಇಳಿಕೆ, ಗ್ರಾಹಕರಿಗೆ ಕೊಂಚ ರಿಲೀಫ್

ನವದೆಹಲಿ: ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ವಿವಿಧ ದೀರ್ಘಕಾಲೀನ ಕಾಯಿಲೆಗಳ ಚಿಕಿತ್ಸೆಗೆ ಬಳಸುವ 39 ಅಗತ್ಯ ಔಷಧಿಗಳ ಚಿಲ್ಲರೆ ಬೆಲೆಗೆ ಗರಿಷ್ಠ ಮಿತಿಯನ್ನು ನಿಗದಿಪಡಿಸಿ ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರ (NPPA) ಆದೇಶ ಹೊರಡಿಸಿದೆ. ಈ ಕ್ರಮದಿಂದ ಅಗತ್ಯ ಔಷಧಿಗಳ ಬೆಲೆ ಕೆಲವು ಸಂದರ್ಭಗಳಲ್ಲಿ ಕಡಿಮೆಯಾಗುವ ಸಾಧ್ಯತೆ ಇದ್ದು, ಲಕ್ಷಾಂತರ ರೋಗಿಗಳಿಗೆ ಆರ್ಥಿಕ ನಿರಾಳತೆ ಸಿಗುವ ನಿರೀಕ್ಷೆಯಿದೆ. ಈ ನಿರ್ಧಾರವನ್ನು ಡ್ರಗ್ಸ್ (ಪ್ರೈಸ್ ಕಂಟ್ರೋಲ್) ಆದೇಶ–2013 (DPCO-2013) ಅಡಿಯಲ್ಲಿ ಜಾರಿಗೆ ತರಲಾಗಿದೆ. […]
ಪಿರಿಯಡ್ಸ್ ಸಮಯದಲ್ಲಿ ಪ್ಯಾಡ್ ಅಥವಾ ಮೆನಸ್ಟ್ರುವಲ್ ಕಪ್? ಯಾವುದು ಉತ್ತಮ?

ಪ್ರತಿ ಮಹಿಳೆಯೂ ಪಿರಿಯಡ್ಸ್ ಸಮಯದಲ್ಲಿ ಆರಾಮದಾಯಕ, ಸುರಕ್ಷಿತ ಮತ್ತು ಆರೋಗ್ಯಕರ ಆಯ್ಕೆಯನ್ನು ಹುಡುಕುತ್ತಾರೆ. ಬಹುತೇಕರು ಸ್ಯಾನಿಟರಿ ಪ್ಯಾಡ್ ಬಳಸುತ್ತಿದ್ದರೆ, ಇತ್ತೀಚಿನ ವರ್ಷಗಳಲ್ಲಿ ಮೆನಸ್ಟ್ರುವಲ್ ಕಪ್ ಬಳಕೆಯೂ ಹೆಚ್ಚುತ್ತಿದೆ. ಹಾಗಾದರೆ ಈ ಎರಡರಲ್ಲಿ ಯಾವುದು ಉತ್ತಮ? ಎರಡಕ್ಕೂ ತಮ್ಮದೇ ಆದ ಪ್ರಯೋಜನಗಳು ಮತ್ತು ಕೆಲವು ಮಿತಿಗಳಿವೆ. ನಿಮ್ಮ ಜೀವನಶೈಲಿ, ರಕ್ತಸ್ರಾವದ ಪ್ರಮಾಣ ಹಾಗೂ ವೈಯಕ್ತಿಕ ಅನುಕೂಲತೆಗೆ ತಕ್ಕಂತೆ ಸೂಕ್ತ ಆಯ್ಕೆಯನ್ನು ಮಾಡಬಹುದು. ಸ್ಯಾನಿಟರಿ ಪ್ಯಾಡ್ ಎಂದರೇನು? ಪಿರಿಯಡ್ಸ್ ವೇಳೆ ಹೊರಬರುವ ರಕ್ತವನ್ನು ಹೀರಿಕೊಳ್ಳಲು ಬಳಸುವ ಉತ್ಪನ್ನವೇ ಸ್ಯಾನಿಟರಿ ಪ್ಯಾಡ್. […]
ಮಲಗುವ ಮುನ್ನ ಒಂದು ಗಂಟೆ ಮೊಬೈಲ್ ದೂರವಿಡಿ: ನಿಮ್ಮ ದೇಹದಲ್ಲಿ ರಾತ್ರಿ ಸಕ್ರೀಯವಾಗುವ ಈ ಹಾರ್ಮೋನ್ ಗಳ ಬಗ್ಗೆ ತಿಳಿದುಕೊಂಡ್ರೆ ಅಚ್ಚರಿಪಡುತ್ತೀರಿ

ಸ್ಮಾರ್ಟ್ಫೋನ್ಗಳು ನಮ್ಮ ದಿನನಿತ್ಯದ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ ಮಲಗುವ ಮುನ್ನವೂ ಗಂಟೆಗಟ್ಟಲೆ ಮೊಬೈಲ್ ಬಳಸುವ ಅಭ್ಯಾಸ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಿದ್ದಾರೆ. ಮಲಗುವ ಒಂದು ಗಂಟೆ ಮೊದಲು ಮೊಬೈಲ್ನ್ನು ದೂರವಿಟ್ಟರೆ ನಿದ್ರೆಯ ಗುಣಮಟ್ಟದಿಂದ ಹಿಡಿದು ಹಸಿವಿನ ನಿಯಂತ್ರಣದವರೆಗೆ ಹಲವು ಪ್ರಯೋಜನಗಳು ದೊರೆಯಬಹುದು ಎಂದು ಅಧ್ಯಯನಗಳು ಸೂಚಿಸಿವೆ. ಉತ್ತಮ ನಿದ್ರೆಗೆ ಮೆಲಟೋನಿನ್ ನೆರವು ರಾತ್ರಿ ವೇಳೆ ಮೆದುಳಿನಲ್ಲಿರುವ ಪೀನಿಯಲ್ ಗ್ರಂಥಿ ಮೆಲಟೋನಿನ್ ಎಂಬ ನಿದ್ರೆಯ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. […]
ರಾತ್ರಿ ಮಲಗೋ ಮುನ್ನ ಹೀಗೆ ಮಾಡಿ… ಆಮೇಲೆ ಮ್ಯಾಜಿಕ್ ನೋಡಿ

ಹೆಚ್ಚಿನವರಿಗೆ ಈಗ ರಾತ್ರಿ ಮಲಗುತ್ತಿದ್ದಂತೆಯೇ ನಿದ್ದೆ ಬರುವುದಿಲ್ಲ ಎಂಬ ಸಮಸ್ಯೆ ಕಾಣತೊಡಗಿದೆ. ಮೊಬೈಲ್, ಲ್ಯಾಪ್ಟಾಪ್ ಸ್ಕ್ರೀನ್ ಗಳನ್ನುಇಡೀ ದಿನ ನೋಡುವುದು ಇದಕ್ಕೊಂದು ಕಾರಣವಾದರೆ, ಮಾನಸಿಕ ನೆಮ್ಮದಿ, ದೈಹಿಕ ಸಮಸ್ಯೆಗಳೂ ಇನ್ನೊಂದು ಕಾರಣ. ರಾತ್ರಿ ಮಲಗುವ ಮೊದಲು ಪಾದಗಳಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡುವ ಅಭ್ಯಾಸವು ಆಯುರ್ವೇದದಲ್ಲಿ ಬಹಳ ಹಿಂದಿನಿಂದಲೂ ಪ್ರಚಲಿತದಲ್ಲಿದೆ. ಇದನ್ನು ಪಾದಾಭ್ಯಂಗ ಎಂದು ಕರೆಯಲಾಗುತ್ತದೆ. ಆಯುರ್ವೇದದ ಪ್ರಕಾರ ಈ ಸರಳ ಅಭ್ಯಾಸವು ದೇಹಕ್ಕೆ ವಿಶ್ರಾಂತಿ ನೀಡುವುದರ ಜೊತೆಗೆ ಉತ್ತಮ ನಿದ್ರೆ, ಒತ್ತಡ ನಿವಾರಣೆ ಹಾಗೂ ಪಾದಗಳ […]
ಮೂತ್ರಪಿಂಡದ ಸಮಸ್ಯೆಗಳ ಬಗ್ಗೆ ನಿರ್ಲಕ್ಷ ಮಾಡಬೇಡಿ: ಉಡುಪಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿದೆ ಮೂತ್ರಪಿಂಡದ ಎಲ್ಲಾ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ

ಉಡುಪಿ: ಮೂತ್ರಪಿಂಡಗಳು (ಕಿಡ್ನಿ) ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದ್ದು, ರಕ್ತವನ್ನು ಶುದ್ಧೀಕರಿಸಿ ದೇಹದ ತ್ಯಾಜ್ಯವನ್ನು ಹೊರಹಾಕುವ ಮಹತ್ವದ ಕಾರ್ಯ ನಿರ್ವಹಿಸುತ್ತವೆ. ಆದರೆ ಆರಂಭಿಕ ಹಂತದಲ್ಲಿ ಮೂತ್ರಪಿಂಡದ ಸಮಸ್ಯೆಗಳು ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸದೇ ಇರಬಹುದು. ಆದ್ದರಿಂದ ಕೆಲವು ಎಚ್ಚರಿಕೆ ಸೂಚನೆಗಳನ್ನು ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ. ನಿಮ್ಮ ಎಲ್ಲಾ ಮೂತ್ರಪಿಂಡದ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ ಉಡುಪಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿದ್ದು ಈ ಸಮಸ್ಯೆ ಕಂಡರೆ ತಕ್ಷಣ ಭೇಟಿ ನೀಡಿ ಪರಿಹಾರ […]