ಎಳನೀರಿಗಿಂತ ಚೀಪ್ ಎಂಡ್ ಬೆಸ್ಟ್ ಈ ಪಾನೀಯ… ಒಮ್ಮೆ ಕುಡಿದು ನೋಡಿ, ಮತ್ತೆ ಬಿಡಲ್ಲ

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಬಹುತೇಕ ಜನರು ಮೊದಲ ಆಯ್ಕೆಯಾಗಿ ಎಳನೀರನ್ನು ಸೇವಿಸುತ್ತಾರೆ. ನೈಸರ್ಗಿಕವಾಗಿ ಸಿಗುವ ಈ ಪಾನೀಯ ದೇಹಕ್ಕೆ ಅಗತ್ಯವಾದ ನೀರಿನಾಂಶ ಮತ್ತು ಕೆಲವು ಪ್ರಮುಖ ಪೋಷಕಾಂಶಗಳನ್ನು ಒದಗಿಸುತ್ತದೆ. ಆದರೆ ಬೇಡಿಕೆ ಹೆಚ್ಚಿದಂತೆ ಎಳನೀರಿನ ಬೆಲೆಯೂ ಏರಿಕೆಯಾಗಿದ್ದು, ಎಲ್ಲರಿಗೂ ಪ್ರತಿದಿನ ಖರೀದಿಸುವುದು ಸುಲಭವಲ್ಲ. ಇಂತಹ ಸಂದರ್ಭದಲ್ಲಿ ಎಳನೀರಿಗಿಂತಲೂ ಹೆಚ್ಚು ಪ್ರಯೋಜನಕಾರಿ ಹಾಗೂ ಕಡಿಮೆ ವೆಚ್ಚದಲ್ಲಿ ಸಿಗುವ ಪಾನೀಯ ಮಜ್ಜಿಗೆ. ಮಜ್ಜಿಗೆ ಕೇವಲ ಬೇಸಿಗೆಯಲ್ಲಿ ಮಾತ್ರವಲ್ಲ, ವರ್ಷಪೂರ್ತಿ ಸೇವಿಸಬಹುದಾದ ಅತ್ಯುತ್ತಮ ನೈಸರ್ಗಿಕ ಪಾನೀಯವಾಗಿದೆ. ಹಾಲನ್ನು ಮೊಸರಾಗಿ, ನಂತರ ಮಜ್ಜಿಗೆಯಾಗಿ […]
ನಿಮ್ಮ ಮನೆಯಲ್ಲಿರಲಿ ಈ ಒಂದು ಪವರ್ ಫುಲ್ ಗಿಡ: ಮಧುಮೇಹಕ್ಕೆ ಮಾತ್ರವಲ್ಲ, ಹಲವು ಆರೋಗ್ಯ ಸಮಸ್ಯೆಗಳಿಗೂ ಈ ಗಿಡ ರಾಮಬಾಣ!

ಇತ್ತೀಚಿನ ದಿನಗಳಲ್ಲಿ ಮಧುಮೇಹ (ಡಯಾಬಿಟಿಸ್) ವಯಸ್ಸಿನ ಭೇದವಿಲ್ಲದೆ ಹೆಚ್ಚಾಗುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ. ಮುಖ್ಯವಾಗಿ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಈ ಒಂದು ಗಿಡ ನಿಮಗೆ ತುಂಬಾ ಸಹಕಾರಿ. ಈ ಗಿಡದ ಹೆಸರೇ “ಇನ್ಸುಲಿನ್ ಗಿಡ” ಅಥವಾ “ಸಕ್ಕರೆ ಗಿಡ” (Costus igneus) ಬನ್ನಿ ಇದರ ಕುರಿತು ತಿಳಿದುಕೊಳ್ಳೋಣ. ಇನ್ಸುಲಿನ್ ಗಿಡ: ಇನ್ಸುಲಿನ್ ಗಿಡ (Costus igneus) ಒಂದು ಔಷಧೀಯ ಸಸ್ಯವಾಗಿದೆ. ಇದರ ಎಲೆಗಳು ಅಗಲವಾದ ತಿಳಿ ಹಸಿರು ಬಣ್ಣದಲ್ಲಿದ್ದು, ಸಣ್ಣ ಕೆಂಪು ಅಥವಾ ಕಿತ್ತಳೆ ಬಣ್ಣದ ಹೂವುಗಳನ್ನು ಬಿಡುತ್ತದೆ. ಆಯುರ್ವೇದ […]
ಕ್ಯಾನ್ಸರ್ ಪತ್ತೆಗೆ ಹೊಸ ಕ್ರಾಂತಿ! ವಾಸನೆ ಹಿಡಿದು ರೋಗ ಗುರುತಿಸುತ್ತವೆ ಈ ಶ್ವಾನಗಳು

ಕ್ಯಾನ್ಸರ್ ಪತ್ತೆ ಮಾಡುವ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಆರಂಭವಾಗಿದೆ. ಮನೆಯ ಕಾವಲುಗಾರರೆಂದು ಪರಿಚಿತವಾಗಿರುವ ಶ್ವಾನಗಳು ಈಗ ಜೀವ ರಕ್ಷಿಸುವ ವೈದ್ಯರ ಪಾತ್ರವನ್ನು ನಿಭಾಯಿಸುತ್ತಿವೆ. ತಮ್ಮ ಅಸಾಧಾರಣ ವಾಸನೆ ಗ್ರಹಿಸುವ ಸಾಮರ್ಥ್ಯದ ಮೂಲಕ ಮನುಷ್ಯರಲ್ಲಿ ಕ್ಯಾನ್ಸರ್ ಇದೆಯೇ ಎಂಬುದನ್ನು ಪತ್ತೆ ಮಾಡುವಲ್ಲಿ ಅವು ಗಮನಾರ್ಹ ಯಶಸ್ಸು ಸಾಧಿಸಿವೆ. ಬೆಂಗಳೂರು ಮೂಲದ ಡಾಗ್ನೊಸಿಸ್ (Dognosis) ಸ್ಟಾರ್ಟ್ಅಪ್, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ನೆರವಿನಿಂದ 16 ಶ್ವಾನಗಳಿಗೆ ವಿಶೇಷ ತರಬೇತಿ ನೀಡಿದೆ. ಈ ಶ್ವಾನಗಳು ಮನುಷ್ಯರ ಉಸಿರಾಟದಲ್ಲಿರುವ ವೋಲಟೈಲ್ ಆರ್ಗ್ಯಾನಿಕ್ […]
ವೈದ್ಯರ ಬಳಿ ಈ ವಿಚಾರಗಳನ್ನು ಮುಕ್ತವಾಗಿ ಹೇಳಿಕೊಂಡರೆ ನಿಮಗೆ ಪರಿಹಾರ ಗ್ಯಾರಂಟಿ: ಡಾಕ್ಟರ್ಸ್ ಡೇ ಸ್ಪೆಷಲ್ ಲೇಖನ

ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ಅನಾರೋಗ್ಯದ ಸಂದರ್ಭದಲ್ಲಿ ವೈದ್ಯರ ಬಳಿಗೆ ಹೋಗುವಾಗ ನಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಮತ್ತು ನಿಖರವಾದ ಮಾಹಿತಿಯನ್ನು ನೀಡುವುದು ಅತ್ಯಂತ ಮುಖ್ಯ. ಯಾವುದೇ ವಿಷಯವನ್ನು ಮುಚ್ಚಿಡುವುದು ಅಥವಾ ಸುಳ್ಳು ಹೇಳುವುದು ತಪ್ಪಾದ ರೋಗನಿರ್ಣಯಕ್ಕೆ ಕಾರಣವಾಗಬಹುದು. ಇದರಿಂದ ಚಿಕಿತ್ಸೆ ವಿಳಂಬವಾಗುವ ಅಥವಾ ಪರಿಣಾಮಕಾರಿಯಾಗದ ಸಾಧ್ಯತೆಯೂ ಇದೆ. ಆದ್ದರಿಂದ ವೈದ್ಯರೊಂದಿಗೆ ಪ್ರಾಮಾಣಿಕವಾಗಿ ಮಾತನಾಡುವುದು ಉತ್ತಮ ಆರೋಗ್ಯದ ಮೊದಲ ಹೆಜ್ಜೆಯಾಗಿದೆ. ವಯಸ್ಸಿನ ಬಗ್ಗೆ ಸುಳ್ಳು ಹೇಳಬೇಡಿ ಕೆಲವರು, ವಿಶೇಷವಾಗಿ ಮಹಿಳೆಯರು, ತಮ್ಮ ನಿಜವಾದ ವಯಸ್ಸನ್ನು ಹೇಳಲು ಹಿಂಜರಿಯುತ್ತಾರೆ. ಆದರೆ […]
ಇಂದು ರಾಷ್ಟ್ರೀಯ ವೈದ್ಯರ ದಿನ: ವೈದ್ಯರ ಸೇವೆಗೆ ಗೌರವ ಸಲ್ಲಿಸುವ ವಿಶೇಷ ದಿನವಿದು!

ಆರೋಗ್ಯವೇ ಮಹಾಭಾಗ್ಯ ಎಂಬ ಮಾತು ಎಲ್ಲ ಕಾಲಕ್ಕೂ ಅನ್ವಯಿಸುತ್ತದೆ. ಆರೋಗ್ಯವನ್ನು ಕಾಪಾಡುವುದು, ಅನಾರೋಗ್ಯಕ್ಕೆ ಚಿಕಿತ್ಸೆ ನೀಡಿ ರೋಗಿಯನ್ನು ಗುಣಪಡಿಸುವುದು ವೈದ್ಯರ ಪ್ರಮುಖ ಕರ್ತವ್ಯವಾಗಿದೆ. ಜೀವ ಉಳಿಸಿ ಹೊಸ ಬದುಕು ನೀಡುವ ವೈದ್ಯರನ್ನು “ವೈದ್ಯೋ ನಾರಾಯಣೋ ಹರಿ” ಎಂದು ಗೌರವಿಸುವ ಸಂಪ್ರದಾಯ ಭಾರತದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ವೈದ್ಯರ ಈ ಅಮೂಲ್ಯ ಸೇವೆಯನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿವರ್ಷ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಮೊದಲ […]