ರಾಜ್ಯದಲ್ಲಿ ಒಂದು ವರ್ಷ ಗುಟ್ಕಾ ಹಾಗೂ ಪಾನ್ ಮಸಾಲಾ ಬ್ಯಾನ್!

ಬೆಂಗಳೂರು: ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾಗಳ ಉತ್ಪಾದನೆ, ಶೇಖರಣೆ, ವಿತರಣೆ, ಸಾಗಣೆ ಮತ್ತು ಮಾರಾಟಕ್ಕೆ ಕರ್ನಾಟಕ ಸರ್ಕಾರ ಒಂದು ವರ್ಷದ ಅವಧಿಗೆ ರಾಜ್ಯಾದ್ಯಂತ ಸಂಪೂರ್ಣ ನಿಷೇಧ ಹೇರಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಸೆಕ್ಷನ್ 30(2)(a) ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಮಾರಾಟ ನಿಷೇಧ ಮತ್ತು ನಿರ್ಬಂಧಗಳು) ನಿಯಮಾವಳಿ-2011ರ ನಿಯಮ 2.3.4ರ ಅಡಿಯಲ್ಲಿ ರಾಜ್ಯ ಆಹಾರ ಸುರಕ್ಷತಾ ಆಯುಕ್ತರು ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ. ಅಧಿಸೂಚನೆ ಹೊರಡಿಸಿದ ದಿನದಿಂದಲೇ […]

ಪಬ್‌ಗಳ ಮೇಲೆ ಆಹಾರ ಇಲಾಖೆ ದಾಳಿ: ಫಂಗಸ್ ಹಿಡಿದ ಮಶ್ರೂಮ್‌, ಜಿರಳೆ ಪತ್ತೆ, ರಾಜ್ಯದ ಎಲ್ಲಾ ಹೊಟೇಲ್ ಗಳಿಗೂ ಎಚ್ಚರಿಕೆ!

ಬೆಂಗಳೂರು : ರಾಜಧಾನಿ ಬೆಂಗಳೂರಿನ ಪ್ರಮುಖ ವಾಣಿಜ್ಯ ಹಾಗೂ ನೈಟ್‌ಲೈಫ್ ತಾಣಗಳಾದ ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ನ ಪಬ್‌ಗಳು ಹಾಗೂ ರೆಸ್ಟೋರೆಂಟ್‌ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ ಮುಂದುವರಿದಿದೆ. ತಡರಾತ್ರಿ ನಡೆದ ಕಾರ್ಯಾಚರಣೆಯಲ್ಲಿ 10 ತಂಡಗಳು ವಿವಿಧ ಹೋಟೆಲ್‌ಗಳು ಮತ್ತು ಪಬ್‌ಗಳಲ್ಲಿ ಆಹಾರ ಗುಣಮಟ್ಟ ಹಾಗೂ ಅಡುಗೆಮನೆಯ ಸ್ವಚ್ಛತೆಯನ್ನು ಪರಿಶೀಲಿಸಿವೆ. ರಾಜ್ಯಾದ್ಯಂತ ಆಹಾರ ಇಲಾಖೆ ಹೊಟೇಲ್ ಗಳೀಗೆ ಭೇಟಿ ನೀಡಲಿದೆ. ಯುಬಿ ಸಿಟಿಯ ಸ್ಕೈ ಲಾಂಜ್ ಬಳಿಕ ಬ್ರಿಗೇಡ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್‌ನ […]

ನಿಮ್ಮ ಮನೆಗೆ ಬರುವ ಹಾಲಿನಲ್ಲಿ ಕಲಬೆರಕೆ ಎಷ್ಟಿದೆ? ತಿಳಿಯಲು ಹೀಗೆ ಮಾಡಿ!

ದಿನಕ್ಕೊಂದು ಲೋಟ ಹಾಲು ಕುಡಿಯದವರೇ ಇಲ್ಲ. ನೇರವಾಗಿ ಅಲ್ಲದಿದ್ದರೂ ಯಾವುದಾದರೂ ರೂಪದಲ್ಲಿ ನಾವು ಹಾಲನ್ನು ಸೇವಿಸುತ್ತೇವೆ. ಹಾಲು ಆರೋಗ್ಯಕಾರಿ ಪೇಯವೂ ಹೌದು. ಕ್ಯಾಲ್ಸಿಯಂ ಅತಿ ಹೆಚ್ಚು ಇರುವ ಮನುಷ್ಯನ ದೇಹಕ್ಕೆ ಆರೋಗ್ಯಕ್ಕೆ ಬೇಕಾದ ಮುಖ್ಯ ಆಹಾರ ಹಾಲು. ಆದರೆ, ಇತ್ತೀಚೆಗೆ ನಾವು ಸೇವಿಸುವ ಹಾಲು ಶುದ್ಧ ಹಾಲೆಂದು ಹೇಳಲು ಸಾಧ್ಯವಾಗುತ್ತಿಲ್ಲ, ರೈತರ ಮಟ್ಟದಿಂದ ಹಿಡಿದು ಹಾಲು ಸಂಗ್ರಹಣಾ ಕೇಂದ್ರ ಹಾಗೂ ಶೀತಲೀಕರಣ ಕೇಂದ್ರದವರೆಗಿನ ವಿವಿಧ ಹಂತಗಳಲ್ಲಿ ಕಲಬೆರಕೆ ಸಂಭವಿಸುತ್ತಿದೆ. ಇದು ತನಿಖೆಗಳಿಂದ ತಿಳಿದು ಬಂದಿದೆ. ಹೀಗೆ ಕಲಬೆರಕೆ […]

ಮಾನಸಿಕ ಆರೋಗ್ಯಕ್ಕೂ ಲೈಂಗಿಕ ಜೀವನಕ್ಕೂ ಎಷ್ಟೊಂದು ಸಂಬಂಧ ಇದೆ! ಇಲ್ಲಿ ನೋಡಿ

ಜಗತ್ತು ಎಷ್ಟೇ ಮುಂದುವರೆದರೂ ಇಂದಿಗೂ ಕೂಡಾ ಪರಸ್ಪರ ಸಂಗಾತಿಗಳೇ ಲೈಂಗಿಕತೆ, ತಮ್ಮ ಇಷ್ಟ-ಕಷ್ಟಗಳು, ಜೀವನದಲ್ಲಿ ಲೈಂಗಿಕ ಆರೋಗ್ಯ (Sexual Health)ದ ಕುರಿತು ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ. ಅದು ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚಾರ, ಶಿಕ್ಷಣದ ಪ್ರಭಾವ ಇರಬಹುದು. ಆದರೆ, ಲೈಂಗಿಕತೆ ಹಾಗೂ ಮಾನಸಿಕ ಆರೋಗ್ಯ ಒಂದಕ್ಕೊಂದು ತುಂಬಾ ಸಂಬಂಧಿಸಿದ್ದಾಗಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಅಥವಾ ಈಗಾಗಲೇ ನಿಮಗೆ ಈ ರೀತಿಯ ಅನುಭವವೂ ಆಗಿರಬಹುದು. ಉತ್ತಮ ಮಾನಸಿಕ ಆರೋಗ್ಯವು ಆರೋಗ್ಯಕರ ಲೈಂಗಿಕ ಜೀವನಕ್ಕೆ ನೆರವಾಗುತ್ತದೆ. ಅದೇ ರೀತಿ, ತೃಪ್ತಿದಾಯಕ […]

ಕೂದಲು ಉದುರುವ ಸಮಸ್ಯೆಗೆ ಸರಳ ಪರಿಹಾರ! ಮನೆಯಲ್ಲೇ ಹೀಗೆ ಮಾಡಿ ಮ್ಯಾಜಿಕ್ ಆಗತ್ತೆ

ಕೂದಲು ಉದುರುವುದು ಈಗ ಬಹಳ ಜನರಿಗೆ ಸಾಮಾನ್ಯ ಸಮಸ್ಯೆ. ಒತ್ತಡ, ಕಳಪೆ ಆಹಾರ, ಮಾಲಿನ್ಯ ಮತ್ತು ಸರಿಯಾದ ರೀತಿಯಲ್ಲಿ ಕೂದಲು ಆರೈಕೆ ಮಾಡದಿರುವುದು ಸಮಸ್ಯೆಗೆ ಕಾರಣ. ಮನೆಯಲ್ಲೇ ಇರುವ ಕೆಲವು ನೈಸರ್ಗಿಕ ವಸ್ತುಗಳನ್ನು ಕರಿಬೇವಿನೊಟ್ಟಿಗೆ ಬಳಸಿದರೆ ಕೂದಲು ಉದುರುವ ಸಮಸ್ಯೆಗೆ ಸ್ವಲ್ಪ ಮಟ್ಟಿನ ಪರಿಹಾರ ಸಿಗುತ್ತದೆ. ಭಾರತೀಯ ಅಡುಗೆ ಮನೆಗಳಲ್ಲಿ ಕರಿಬೇವು ಇದ್ದೇ ಇರುತ್ತದೆ. ಇದು ಅಡುಗೆಗೆ ಒಳ್ಳೆಯ ವಾಸನೆ ಕೊಡುತ್ತದೆ. ಕರಿಬೇವು ಆರೋಗ್ಯಕ್ಕೆ ಒಳ್ಳೆಯದು. ಹಾಗೆಯೇ ಕರಿಬೇವಿನ ಎಲೆಯಿಂದ ಕೂದಲಿನ ಆರೈಕೆ ಮಾಡಬಹುದು. ಕರಿಬೇವಿನ ಹೇರ್ […]