2050 ರ ವೇಳೆಗೆ ಹೆಚ್ಚಾಗಲಿದೆಯಂತೆ ಶ್ರವಣ ಸಮಸ್ಯೆ,WHO ವರದಿಯಲ್ಲೇನಿದೆ?

ಇತ್ತೀಚೆಗೆ World Health Organization (WHO) ಒಂದು ವರದಿ ಪ್ರಕಟಿಸಿದ್ದು. ಆ ವರದಿ ನಮ್ಮನ್ನು ಕಂಗಾಲಾಗಿಸುವಂತಿದೆ.  ಹೌದು. ಮೊದಲ ವಿಶ್ವ ಶ್ರವಣ ವರದಿ ಪ್ರಕಾರ, ಜಾಗತಿಕ ಮಟ್ಟದಲ್ಲಿ ಶ್ರವಣ ಸಮಸ್ಯೆಗಳು ಗಂಭೀರವಾಗಿ ಏರಿಕೆಯಾಗುತ್ತಿವೆ. 2050 ರೊಳಗೆ ಸುಮಾರು 250 ಕೋಟಿ ಜನರು ಅಂದರೆ ಪ್ರತಿ ನಾಲ್ವರಲ್ಲಿ ಒಬ್ಬರು ಯಾವುದಾದರೂ ಮಟ್ಟದ ಶ್ರವಣ ನಷ್ಟವನ್ನು ಅನುಭವಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಇವರಲ್ಲಿ ಸುಮಾರು 70 ಕೋಟಿ ಜನರಿಗೆ ವಿಶೇಷ ಶ್ರವಣ ಆರೈಕೆ ಹಾಗೂ ಪುನರ್ವಸತಿ ಸೇವೆಗಳ […]

ಬಿಸಿಲು ಹೆಚ್ಚಾದಾಗ ನಮ್ಮ ದೇಹಕ್ಕೆ ಮೊಸರು ಒಳ್ಳೆದೋ? ಮಜ್ಜಿಗೆ ಒಳ್ಳೆದೋ, ನೀವು ತಿಳಿದುಕೊಂಡಿರಲೇಬೇಕಾದ ಸಂಗತಿಗಳಿವು!

ನಮ್ಮ ದಿನನಿತ್ಯದ ಆಹಾರದಲ್ಲಿ ಮೊಸರು ಮತ್ತು ಮಜ್ಜಿಗೆ ಪ್ರಮುಖ ಸ್ಥಾನ ಪಡೆದಿವೆ. ಇವು ರುಚಿಕರವಾಗಿರುವುದರ ಜೊತೆಗೆ ಆರೋಗ್ಯಕ್ಕೂ ಅನೇಕ ರೀತಿಯಲ್ಲಿ ಉಪಯುಕ್ತವಾಗಿವೆ. ಹಾಲಿನಿಂದ ತಯಾರಾಗುವ ಮೊಸರು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದು, ಹೊಟ್ಟೆಯನ್ನು ತುಂಬಿದಂತೆ ಅನುಭವ ಕೊಡುತ್ತದೆ.ಆದ್ರೆ ಈ ಬೇಸಿಗೆಯಲ್ಲಿ ಗಟಗಟ ಎಂದು ಮಜ್ಜಿಗೆ ಕುಡಿಬಹುದಾ ಅಥವಾ ಗಟ್ಟಿ ಮೊಸರು ಕುಡಿಯಬಹುದಾ ಯಾವುದು ಬೆಸ್ಟ್ ಎಂದು ಒಮ್ಮೆ ನೋಡೋಣ ಬನ್ನಿ ಮೊಸರು ಕುಡಿದರೆ ಏನಾಗುತ್ತದೆ? ಮೊಸರಿನಲ್ಲಿ ಪ್ರೋಟೀನ್ ಹೆಚ್ಚು ಇರುವುದರಿಂದ ಇದು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಜೊತೆಗೆ ಇದರಲ್ಲಿ […]

ರಾತ್ರಿ 11 ಗಂಟೆ ಮೇಲೆ ಮಲಗುವುದರಿಂದ ತೂಕದ ಮೇಲಾಗುವ ಪರಿಣಾಮ!

ಡಯಟ್ ಶಿಸ್ತುಬದ್ಧವಾಗಿದ್ದರೂ ನಿರ್ದಿಷ್ಟ ಹಂತದ ನಂತರ ತೂಕ ಕಡಿಮೆಯಾಗುವುದಿಲ್ಲವೆ? ಹಾಗಿದ್ದರೆ ನಿಮ್ಮ ನಿದ್ರೆಯ ಕಡೆಗೆ ಗಮನ ಕೊಡುವ ಅಗತ್ಯವಿದೆ. ಜನರು ತೂಕ ಇಳಿಸುವ ಬಗ್ಗೆ ಚರ್ಚಿಸುವಾಗ ಸಾಮಾನ್ಯವಾಗಿ ಡಯಟ್ (ಶಿಸ್ತಿನ ಆಹಾರ), ವ್ಯಾಯಾಮ ಅಥವಾ ನಡಿಗೆಯ ಮೇಲೆ ಗಮನಹರಿಸುತ್ತಾರೆ. ಆದರೆ, ಅವರು ಸಾಮಾನ್ಯವಾಗಿ ನಿದ್ರೆಯ ಪ್ರಾಮುಖ್ಯತೆಯ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. ಮುಖ್ಯವಾಗಿ ಮಧ್ಯರಾತ್ರಿಗಿಂತ ಮೊದಲಿನ ಸಮಯ. “ಬಹುತೇಕರು ಚೆನ್ನಾಗಿ ಫಿಟ್ನೆಸ್ ಅನುಸರಿಸುತ್ತಿರಬಹುದು. ಆದರೆ ಒಂದು ತೂಕಕ್ಕಿಂತ ಕೆಳಗೆ ಇಳಿಯುವುದಿಲ್ಲ. ಅದಕ್ಕೆ ಮುಖ್ಯ ಕಾರಣ ನಿದ್ರೆ ಸರಿಯಾಗಿ […]

ಈ ಆಹಾರ ಪದಾರ್ಥಗಳನ್ನು ಫ್ರಿಜ್ ನಲ್ಲಿ ಇಡುವ ಮೊದಲು ನೂರು ಸಲ ಯೋಚಿಸಿ !

ಫ್ರಿಜ್‌ ನಲ್ಲಿ ಕೆಲವೊಂದು ಆಹಾರ ಪದಾರ್ಥಗಳನ್ನಿರಿಸಿದರೆ ಅವು ಆರೋಗ್ಯಕ್ಕೆ ಮಾರಕವಾಗುವ ಸಾಧ್ಯತೆ ಇದೆ. ಯಾವುದೆಲ್ಲಾ ವಸ್ತುಗಳನ್ನು ಫ್ರಿಜ್ ನಲ್ಲಿಡಬಾರದು, ಅಥವ ಇಡಬಹುದು ಎಂಬುದನ್ನು ನಾವಿಲ್ಲಿ ಚರ್ಚಿಸೋಣ. ಅಪ್ಪಿತಪ್ಪಿಯೂ ಮೊಟ್ಟೆಗಳನ್ನು ಫ್ರಿಜ್‌ನಲ್ಲಿ ಇಡಬಾರದೆಂಬುದು ತಪ್ಪು ಕಲ್ಪನೆ. ವಾಸ್ತವವಾಗಿ, ಮೊಟ್ಟೆಗಳನ್ನು ಫ್ರಿಜ್‌ನಲ್ಲಿ ಇಡುವುದರಿಂದ ಅವು ಹೆಚ್ಚು ದಿನ ತಾಜಾ ಆಗಿರುತ್ತವೆ. ತಂಪಾದ ವಾತಾವರಣದಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆ ಕಡಿಮೆಯಾಗುತ್ತದೆ ಮತ್ತು ಮೊಟ್ಟೆ ಬೇಗ ಕೆಡುವುದಿಲ್ಲ. ಶುಂಠಿಯನ್ನು ಫ್ರಿಜ್‌ನಲ್ಲಿ ಇಡುವಾಗ ತೇವಾಂಶ ಜಾಸ್ತಿಯಾದರೆ ಅದರ ಮೇಲೆ ಅಚ್ಚು ಬೀಳಬಹುದು. ಆದರೆ ಒಣಗಿಸಿ ಸರಿಯಾಗಿ […]

10 ತಿಂಗಳ ಮಗುವಿನ ಶ್ವಾಸನಾಳದಲ್ಲಿ ಸಿಲುಕಿದ ಕಡಲೇಬೀಜದ ತುಣುಕು; ವೈದ್ಯರಿಂದ ಚಿಕಿತ್ಸೆ ಯಶಸ್ವಿ

ಮಂಗಳೂರು: ಶ್ವಾಸನಾಳದಲ್ಲಿ ಕಡಲೆಬೀಜದ ತುಣುಕು ಸಿಲುಕಿ ಉಸಿರಾಟದ ಸಮಸ್ಯೆಗೆ ಒಳಗಾಗಿದ್ದ 10 ತಿಂಗಳ ಮಗುವನ್ನು ರಕ್ಷಿಸುವಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿದೆ. ಮನೆಯಲ್ಲಿ ಆಟವಾಡುವಾಗ 10 ತಿಂಗಳ ಮಗು ಕಡಲೆಬೀಜ ಸೇವಿಸಿ, ಕೆಮ್ಮಲು ಆರಂಭಿಸಿ, ಕೆಲ ಸಮಯದಲ್ಲಿ ಸಹಜ ಸ್ಥಿತಿಗೆ ಮರಳಿತ್ತು. ಆದರೆ, ದಿನ ಕಳೆಯುತ್ತಿದ್ದಂತೆ ಮಗು ನಿತ್ರಾಣಗೊಂಡು, ಉಸಿರಾಟದ ಸಮಸ್ಯೆ ಎದುರಿಸಲು ಶುರುಮಾಡಿತು. ಪಾಲಕರು ಪುತ್ತೂರಿನ ವೈದ್ಯರೊಬ್ಬರಿಗೆ ತೋರಿಸಿದಾಗ, ಅವರು ಶ್ವಾಸನಾಳದಲ್ಲಿ ಯಾವುದೋ ವಸ್ತು ಸಿಲುಕಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ತಕ್ಷಣ ಮಗುವನ್ನು ಮಂಗಳೂರು […]