ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರು ಕುಡಿಯೋದ್ರಿಂದ ಏನೇನೆಲ್ಲಾ ಲಾಭಗಳಿವೆ?

ತಾಮ್ರದ ಪಾತ್ರೆ ಬಳಸುವವರು ಈಗಂತೂ ಭಾರೀ ಕಡಿಮೆ ಮಂದಿ. ಆದರೆ ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರನ್ನು ಕುಡಿಯೋದರಿಂದ ಆಗುವ ಲಾಭಗಳು ನೂರಾರು. ನೋಡೋಣ ಬನ್ನಿ ತಾಮ್ರದ ಪಾತ್ರೆಯ ನೀರು ಕುಡಿಯೋದರಿಂದ ಏನೇನೆಲ್ಲಾ ಲಾಭವಿದೆ ಅಂತ. ತಾಮದ್ರ ಪಾತ್ರೆಯಲ್ಲಿ ರಾತ್ರಿಯಿಡೀ ಶೇಖರಿಸಿಟ್ಟ ನೀರನ್ನು ಮುಂಜಾನೆ ಕುಡಿಯುವುದರಿಂದ ವಾತಾ, ಪಿತ್ತ ,ಕಫಗಳಲ್ಲಿ ಏರುಪೇರು ಉಂಟಾಗದಂತೆ ನೋಡಿಕೊಳ್ಳಬಹುದು ಎನ್ನುತ್ತದೆ ಆಯುರ್ವೇದ. ಕನಿಷ್ಠ ಪಕ್ಷ 8 ಗಂಟೆಗಳ ಕಾಲ ನೀರನ್ನು ತಾಮದ್ರ ಪಾತ್ರೆಗಳಲ್ಲಿ ಇಟ್ಟು ಬಳಿಕ ಕುಡಿಯುದರಿಂದಷ್ಟೇ ಲಾಭಗಳನ್ನು ಪಡೆಯಬಹುದು. ತಾಮ್ರದ ಪಾತ್ರೆಯಲ್ಲಿ […]
ತುಪ್ಪದಿಂದ ಅದೆಷ್ಟು ಲಾಭವಿದೆಯಂತ ನಿಮಗೆ ಗೊತ್ತಿರಲಿ: ಡಾಕ್ಟ್ರು ಹೇಳಿದ ತುಪ್ಪದ ಗುಟ್ಟುಗಳು

ಸಂಸ್ಕೃತದಲ್ಲಿ ಘೃತ ಎಂದು ಕರೆಯಲಾಗುವ ತುಪ್ಪವು ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ತಯಾರಿಸಿದ ಹಸುವಿನ ಹಾಲಿನ ಶುದ್ಧ ತುಪ್ಪದ ಆರೋಗ್ಯ ಲಾಭವು ಅಪಾರ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾರೂ ಕೂಡ ಸೇವಿಸಬಹುದು ಈ ತುಪ್ಪವನ್ನು. ತುಪ್ಪದಿಂದ ಏನೇನ್ ಲಾಭ ಇದೆ ಒಮ್ಮೆ ಕೇಳಿ ♦ ತುಪ್ಪವು ನಿಗದಿತ ಪ್ರಮಾಣದಲ್ಲಿ (ಒಂದುವರೆ ಚಮಚ) ಸೇವಿಸಿದರೆ ಜೀರ್ಣಶಕ್ತಿಯನ್ನು ಹೆಚ್ಚಿಸಿ ಜೀರ್ಣಕ್ರಿಯೆ ಚೆನ್ನಾಗಿ ಆಗುವಂತೆ ಮಾಡುತ್ತದೆ. ಆದರೆ ಅತಿ ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಅಜೀರ್ಣಕ್ಕೆ ಕಾರಣವಾಗುತ್ತದೆ. ♦ ದೇಹದಲ್ಲಿ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು […]
ಇದು ಗೊತ್ತಾದ್ರೆ ಸ್ವೀಟ್ ಕಾರ್ನ್, ಸೋ ಸ್ವೀಟ್ ಅಂತೀರಾ!

ಮಳೆಗಾಲದಲ್ಲಿ ಸ್ವೀಟ್ ಕಾರ್ನ್ ತಿನ್ನುವ ಖುಷಿಯೇ ಬೇರೆ. ಎಲ್ಲಾ ವಯೋಮಾನದವರಿಗೂ ಒಂದಲ್ಲ ಒಂದು ಕಾರಣಕ್ಕೆ ಸ್ವೀಟ್ ಕಾರ್ನ್ ಇಷ್ಟವಾಗುತ್ತದೆ. ಮಕ್ಕಳಿಗಳಂತೂ ಸ್ವೀಟ್ ಕಾರ್ನ್ ಎಂದರೆ ಫೆವರೇಟ್ ಬಿಡಿ. ಪೇಟೆಯಲ್ಲಿ ಯಾವುದ್ಯಾವುದೋ ಗಾಡಿಯ ತಿಂಡಿಗಳನ್ನು ತಿನ್ನುವುದಕ್ಕಿಂತಲೂ ಅಂತದ್ದೇ ಗಾಡಿಗಳಲ್ಲಿ ದೊರಕುವ ಸ್ವೀಟ್ ಕಾರ್ನ್ ತಿನ್ನುವುದು ಹೆಚ್ಚು ಸೂಕ್ತ. ಯಾಕೆಂದರೆ ಸ್ವೀಟ್ ಕಾರ್ನ್ ನಲ್ಲಿ ಕೆಲವೊಂದು ಆರೋಗ್ಯ ಲಾಭಗಳಿವೆ. ಆದರೆ ಮನೆಯಲ್ಲಿಯೇ ಸ್ವೀಟ್ ಕಾರ್ನ್ ಬೇಯಿಸಿ ತಿಂದರೆ ಇನ್ನೂ ಬೆಸ್ಟ್.ಸ್ವೀಟ್ ಕಾರ್ನ್ ನಿಂದ ಏನೆನೆಲ್ಲಾ ಲಾಭಗಳಿವೆ ಎಂದು ಇಲ್ಲಿ ಮಾಹಿತಿ […]
ವಯಸ್ಸು 35 ದಾಟಿದವರು ಈ ಆಹಾರಗಳನ್ನು ತಿನ್ನದೇ ಇರಬೇಡಿ ಮತ್ತೆ!

ನೋಡ ನೋಡುತ್ತಿದ್ದಂತೆಯೇ ಮನುಷ್ಯನಿಗೆ ವಯಸ್ಸಾಗಿಬಿಡುತ್ತದೆ.ಯೌವ್ವನದ ದಿನಗಳನ್ನು ಕಳೆದು ಮಧ್ಯ ವಯಸ್ಸಿಗೆ ಬರುತ್ತಿದ್ದಂತೆಯೇ ಡಯಾಬಿಟಿಸ್,ಬಿಪಿ ಯಂತಹ ಕೆಲವೊಂದು ಸಮಸ್ಯೆಗಳು ಅತೀಯಾಗಿ ಕಾಡಲು ತೊಡಗುತ್ತದೆ. ಜೀವನಶೈಲಿಯಲ್ಲೂ ಆದ ಕೆಲವೊಂದು ಬದಲಾವಣೆಗಳಿಂದ ಈ ಸಮಸ್ಯೆಗಳು ಉದ್ಭವಿಸುವುದು ಸಾಮಾನ್ಯವಾಗಿದೆ.ಆದರೆ ಉತ್ತಮ ಜೀವಶೈಲಿಯ ನಿರ್ವಹಣೆಯಿಂದ ಕ್ರಮಬದ್ಧವಾದ ಆಹಾರ ಸೇವನೆಯಿಂದ ಆರೋಗ್ಯವನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು. ಹಾಗಾದ್ರೆ ಬನ್ನಿ 35 ವರ್ಷ ದಾಟಿದ ಮೇಲೆ ಯಾವುದೆಲ್ಲಾ ಆಹಾರವನ್ನು ಸೇವಿಸಬೇಕು ಎನ್ನುವ ಮಾಹಿತಿ ಇಲ್ಲಿದೆ. ♦ ಬ್ಲೂ ಬೆರ್ರಿ ಹಣ್ಣು : ಬ್ಲೂ ಬೆರ್ರಿ ಹಣ್ಣಿನಲ್ಲಿ ವಿಟಮಿನ್ ‘ಸಿ’, ವಿಟಮಿನ್ […]
ಕೊರೊನಾ ಕೊರೊನಾ ಅಂತ ಹೆದರಿಸುವುದನ್ನು ಮೊದಲು ಬಿಡಿ, ಮನಸ್ಸು ಗಟ್ಟಿಯಾಗಿಸುವ ಕೆಲಸ ಮಾಡಿ : ಡಾ.ಶಶಿಕಿರಣ್ ಶೆಟ್ಟಿ ಹೇಳಿದ್ದಾರೆ ಒಂದಷ್ಟು ಟಿಪ್ಸ್

♠ ಡಾ.ಶಶಿಕಿರಣ್ ಶೆಟ್ಟಿ ಉಡುಪಿ ಘಟನೆ: 1 : ಇದು 2009 ರಲ್ಲಿ ನಡೆದ ಘಟನೆ. ವೈದ್ಯನಾದ ನನ್ನ ಕ್ಲಿನಿಕ್ ಗೆ ರಾತ್ರಿ 7 ಗಂಟೆಗೆ ಯುವಕನೊಬ್ಬ ಗಾಬರಿಯಿಂದ ಬಂದಿದ್ದ, ಆತನೊಂದಿಗೆ 4-5 ಜನರಿದ್ದರು. “ಸರ್ ಹಾವು ಕಚ್ಚಿದೆ” ಎಂದ. ಕಚ್ಚಿದ ಜಾಗ ನೋಡಿದೆ, ಬಲಗೈಯಲ್ಲಿ ಹಲ್ಲುಗಳ ಎರಡು ಚಿಕ್ಕ ಗಾಯಗಳಿದ್ದವು. ಜೊತೆಗಿದ್ದ ಇಬ್ಬರು “ಅದು ಭಯಂಕರ ಸರ್ಪ, ಕೂಡಲೇ ವಿಷವೇರುವುದು” ಹಾಗೆ ಹೀಗೆ ಅಂತ ಕತೆ ಹೇಳುತ್ತಲಿದ್ದರು. ಸಂದೇಹ ಬೇಡ ಎಂದು ಸಮೀಪದ ಆಸ್ಪತ್ರೆಗೆ ಕಳುಹಿಸಿದೆ. […]