Udupi: ಮಹಿಳೆಯರಿಗಾಗಿ ಏಂಜೆಲ್ಸ್ zumba ಫಿಟ್ ನೆಸ್ ಕ್ಲಾಸ್

ಉಡುಪಿ: ಇಲ್ಲಿನ ಸಿಟಿ ಬಸ್ ನಿಲ್ದಾಣದ ಬಳಿ ಇರುವ ರಾಜ್ ಟವರ್ಸ್ ನ 5 ನೇ ಮಹಡಿಯಲ್ಲಿ ದರ್ಪಣ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ನಲ್ಲಿ ಪ್ರತಿದಿನ ಬೆಳಗ್ಗೆ 10.30 ರಿಂದ 11.30 ಮತ್ತು ಸಂಜೆ 6.30 ರಿಂದ 7.30 ರವರೆಗೆ ಮಹಿಳೆಯರಿಗಾಗಿ zumba ಫಿಟ್ ನೆಸ್ ತರಗತಿಗಳು ನಡೆಯುತ್ತಿದ್ದು ಆಸಕ್ತರು 9380323108 ಅನ್ನು ಸಂಪರ್ಕಿಸಬಹುದು. https://instagram.com/ange_lsfitness? https://g.co/kgs/dW2VsH  

ಹೆಚ್ಚುತ್ತಿರುವ ಡೆಂಘೀ.. ಇದುವೆರೆಗೆ ಸಾವನ್ನಪ್ಪಿದವರ ಸಂಖ್ಯೆ 39ಕ್ಕೆ ಏರಿಕೆ

ತಿರುವನಂತಪುರಂ: ಕಾಸರಗೋಡು ಜಿಲ್ಲೆಯ ಚೆಮ್ಮನಾಡು ಮೂಲದ ಅಶ್ವತಿ (28) ಜ್ವರದಿಂದ ಸಾವನ್ನಪ್ಪಿದವರು. ಈ ಮಹಿಳೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರು ವರ್ಷದ ಮಗು ಇರುವ ಈ ಮಹಿಳೆ ಜ್ವರದಿಂದ ಸಾವನ್ನಪ್ಪಿರುವುದು ಇಂದು ಬೆಳಗ್ಗೆ ದೃಢಪಟ್ಟಿದೆಕೇರಳದಲ್ಲಿ ಜ್ವರ ಬಾಧಿತರು ಹಾಗೂ ಜ್ವರದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಬೆಳಗ್ಗೆ ಜ್ವರದಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಆರೋಗ್ಯ ಇಲಾಖೆಯ ವೆಬ್‌ಸೈಟ್​ನಲ್ಲಿ ಕೊನೆಯದಾಗಿ ಜೂನ್​ 27 ರಂದು ಜ್ವರ ಬಾಧಿತರು ಹಾಗೂ ಸಾವನ್ನಪ್ಪಿದವರ ಅಂಕಿ ಅಂಶ ಪ್ರಕಟವಾಗಿತ್ತು. . […]

ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಿ; ಸ್ವಸ್ಥ ಸುಂದರ ಜೀವನ ನಿಮ್ಮದಾಗಿಸಿ

ಮನುಷ್ಯನ ಮೆದುಳು ಅತ್ಯುತ್ತಮ ಹೊಂದಾಣಿಕೆಯ ಸಾಮರ್ಥ್ಯವನ್ನು ಹೊಂದಿದೆ. ಆದರೆ ಕೆಲವೊಂದು ಕಾರಣಗಳಿಂದ ಮನುಷ್ಯನ ಮೆದುಳಿನ ಕಾರ್ಯಕ್ಷಮತೆ ಕುಂಠಿತವಾಗುತ್ತದೆ. ನ್ಯೂರೋಪ್ಲ್ಯಾಸ್ಟಿಸಿಟಿಯು ರಚನಾತ್ಮಕವಾಗಿ ಮತ್ತು ಕ್ರಿಯಾತ್ಮಕವಾಗಿ ಬದಲಾಯಿಸುವ ಮತ್ತು ಹೊಂದಿಕೊಳ್ಳುವ ನಮ್ಮ ಮೆದುಳಿನ ಗಮನಾರ್ಹ ಸಾಮರ್ಥ್ಯವಾಗಿದೆ. ಈ ಅಸಾಧಾರಣ ಲಕ್ಷಣವು ಹೊಸ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲು, ಗಾಯಗಳಿಂದ ಗುಣವಾಗಲು ಮತ್ತು ಬದಲಾವಣೆಗಳಿಗೆ ಹೊಂದಿಕೊಳ್ಳಲು ನಮಗೆ ಸಹಾಯಮಾಡುತ್ತದೆ. ವಿಶೇಷವಾಗಿ ಕಲಿಕೆ ಅಥವಾ ಅನುಭವಕ್ಕೆ ಪ್ರತಿಕ್ರಿಯೆಯಾಗಿ ಅಥವಾ ಗಾಯದ ನಂತರ ಸಿನಾಪ್ಟಿಕ್ ಸಂಪರ್ಕಗಳನ್ನು ರೂಪಿಸುವ ಮತ್ತು ಮೆದುಳಿನ ಸಾಮರ್ಥ್ಯವನ್ನು ಮರುಸಂಘಟಿಸುವ ಕ್ರಿಯೆಗೆ ನ್ಯೂರೋಪ್ಲ್ಯಾಸ್ಟಿಸಿಟಿ […]

World Yoga Day : ಯೋಗದಲ್ಲಿ ನಟಿ ರಾಗಿಣಿ ದ್ವಿವೇದಿ ಕಂಡಂತೆ

ಸ್ಯಾಂಡಲ್‌ವುಡ್ (Sandalwood) ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಆರೋಗ್ಯಕ್ಕೂ ಸಾಕಷ್ಟು ಸಮಯ ಕೊಡುತ್ತಾರೆ. ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ನಿದ್ದೆಗೆಡಿಸುವ ನಟಿ ರಾಗಿಣಿ ಈ ಬಾರಿ ಯೋಗ ಲುಕ್ ಮೂಲಕ ಗಮನ ಸೆಳೆದಿದ್ದಾರೆ. ಹಲವು ಯೋಗಗಳನ್ನು ಮಾಡಿ ಅವುಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಕೈಕೊಟ್ಟ ಕೊಟ್ಟಿದೆ ಮುಂಗಾರು,ಎಪಿಎಂಸಿ ಮಾರುಕಟ್ಟೆಗೆ ತರಕಾರಿಯ ಆವಕ ಪ್ರಮಾಣವೂ ಕಡಿಮೆ…ಹೆಚ್ಚಿದೆ ತರಕಾರಿ ಬೆಲೆ..

ವಿಜಯಪುರ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಜಿಲ್ಲೆಯಲ್ಲಿ ಅನ್ನದಾತರು ಇನ್ನೂ ಬಿತ್ತನೆಯನ್ನೇ ಆರಂಭಿಸಿಲ್ಲ. ಜೊತೆಗೆ ಬಿಸಿಲಿನ ತಾಪಮಾನವೂ ಏರಿರುವ ಕಾರಣ ಎಪಿಎಂಸಿ ಮಾರುಕಟ್ಟೆಗೆ ತರಕಾರಿ ಆವಕ ಪ್ರಮಾಣವೂ ಕಡಿಮೆಯಾಗಿ ಸಗಟು ಮಾರುಕಟ್ಟೆಯಲ್ಲೇ ಬೆಲೆ ಗಗನಕ್ಕೇರಿದೆ.ವಿಜಯಪುರ ಜಿಲ್ಲೆಯ ಸುತ್ತಮುತ್ತಲಿನ ಭಾಗದಲ್ಲಿ ರೈತರು ತರಕಾರಿಯನ್ನು ಸಮೃದ್ಧವಾಗಿ ಬೆಳೆಯುತ್ತಾರೆ. ಆದರೆ ಮಳೆಯ ಅಭಾವದಿಂದ ತರಕಾರಿ ಬೆಳೆ ಒಣಗಿದ್ದು, ಮಾರುಕಟ್ಟೆಗೆ ಆವಕ ಪ್ರಮಾಣ ಗಣನೀಯ ಕ್ಷೀಣಿಸಿದೆ. ತರಕಾರಿ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಇದರ ಪರಿಣಾಮ ವಾರದ ಸಂತೆಯಲ್ಲೂ ತರಕಾರಿ […]