ನಿಮ್ಮ ತಿಂಗಳ ಸಂಬಳ ಎಷ್ಟೇ ಇರಲಿ, ಈ ಸರಳ ಸೂತ್ರ ಪಾಲಿಸಿದರೆ ಭವಿಷ್ಯಕ್ಕೆ ಉಳಿತಾಯ ಮಾಡಬಹುದು!

ತಿಂಗಳಿಗೆ 15-20 ಸಾವಿರದ ಒಳಗೆ ಸಂಬಳ ಪಡೆಯುವವರು ತಿಂಗಳ ಕೊನೆಯಲ್ಲಿ ಕೈಯಲ್ಲಿ ಹಣ ಉಳಿಯುವುದಿಲ್ಲ ಎಂದು ಚಿಂತೆಪಡುತ್ತಿರುತ್ತಾರೆ. ಆದರೆ ಆದಾಯ ಕಡಿಮೆ ಇದ್ದರೂ ಸರಿಯಾದ ರೀತಿಯಲ್ಲಿ ಹಣವನ್ನು ನಿರ್ವಹಿಸಿದರೆ ದಿನನಿತ್ಯದ ಖರ್ಚು, ಉಳಿತಾಯ ಮತ್ತು ಭವಿಷ್ಯದ ಅಗತ್ಯಗಳನ್ನು ಸಮತೋಲನಗೊಳಿಸಬಹುದು. ಸಂಬಳ ಬಂದ ತಕ್ಷಣವೇ ಎಲ್ಲ ಹಣವನ್ನು ಖರ್ಚು ಮಾಡುವ ಬದಲು ಮೊದಲೇ ಒಂದು ಬಜೆಟ್ ರೂಪಿಸಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ನಿಮ್ಮ ಸಂಬಳ ಎಷ್ಟೇ ಇರಲಿ ಅದರಲ್ಲಿ ಸಣ್ಣ ಮೊತ್ತವನ್ನು ಉಳಿತಾಯಕ್ಕೆ ನೀವು ಮೀಸಲಿಡಲೇಬೇಕು. ಸಂಬಳ ಕೈಗೆ […]
ಡಾರ್ಕ್ ಚಾಕ್ಲೇಟ್ ಎಂದು ಲೈಟಾಗಿ ತಗೋಬೇಡಿ, ಒಂದು ಪೀಸ್ ಡಾರ್ಕ್ ಚಾಕ್ಲೇಟ್ ತಿಂದ್ರೂ ಆರೋಗ್ಯಕ್ಕೆ ಎಷ್ಟೊಂದೆಲ್ಲಾ ಲಾಭವಿದೆ ಗೊತ್ತೆ!

ಚಾಕೊಲೇಟ್ ಎಂದರೆ ಮಕ್ಕಳು ಮಾತ್ರವಲ್ಲ, ಯುವಕರು ಮತ್ತು ಹಿರಿಯರಿಗೂ ಅಚ್ಚುಮೆಚ್ಚು. ಅದರಲ್ಲೂ ಡಾರ್ಕ್ ಚಾಕೊಲೇಟ್ ಆರೋಗ್ಯಕ್ಕೆ ಉತ್ತಮ ಎನ್ನುವ ಮಾತು ಸಾಮಾನ್ಯವಾಗಿದೆ. ಆದರೆ ಯಾವುದೇ ಡಾರ್ಕ್ ಚಾಕೊಲೇಟ್ ಅಲ್ಲ, ಕನಿಷ್ಠ 70% ಅಥವಾ ಅದಕ್ಕಿಂತ ಹೆಚ್ಚು ಕೋಕೋ ಇರುವ ಡಾರ್ಕ್ ಚಾಕೊಲೇಟ್ ಅನ್ನು ಮಿತವಾಗಿ ಸೇವಿಸಿದರೆ ಮಾತ್ರ ಆರೋಗ್ಯ ಪ್ರಯೋಜನಗಳು ದೊರೆಯುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ. ಮುಂಬೈನ ಡಾ. ಡಿ.ವೈ. ಪಾಟೀಲ್ ಮೆಡಿಕಲ್ ಕಾಲೇಜಿನ ಡಾ. ಅಮಿತಾ ವರ್ಮಾ ಮತ್ತು ಡಾ. ಅರ್ಚನಾ ಕಾದಮ್ ನಡೆಸಿದ ಅಧ್ಯಯನದ […]
ಮನೆಯಲ್ಲೇ ರೆಡಿ ಮಾಡಿ ಈ ಸ್ಪ್ರೇ! ಜಿರಳೆಗೆ ಹೇಳಿ ಗುಡ್ ಬೈ….

ಅಡುಗೆಮನೆಯಲ್ಲಿ ಜಿರಳೆಗಳ ಕಾಟ ಶುರುವಾದರೆ ಅದನ್ನು ನಿಯಂತ್ರಿಸುವುದು ಸುಲಭದ ಕೆಲಸವಲ್ಲ. ವಿಶೇಷವಾಗಿ ರಾತ್ರಿ ವೇಳೆ ಅಡುಗೆಮನೆಯ ಲೈಟ್ ಆಫ್ ಮಾಡಿದ ಬಳಿಕ ಜಿರಳೆಗಳು ಹೊರಬಂದು ಓಡಾಡುವುದು ಸಾಮಾನ್ಯ. ಆಹಾರ, ನೀರು ಮತ್ತು ಬೆಚ್ಚಗಿನ ಜಾಗಗಳು ಸಿಕ್ಕರೆ ಜಿರಳೆಗಳು ಬೇಗ ಹೆಚ್ಚಾಗಬಹುದು. ಜಿರಳೆಗಳು ಆಹಾರ ಮತ್ತು ಅಡುಗೆಮನೆಯ ಮೇಲ್ಮೈಗಳನ್ನು ಕಲುಷಿತಗೊಳಿಸುವ ಸಾಧ್ಯತೆ ಇರುವುದರಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ. ಜಿರಳೆಗಳನ್ನು ನಿಯಂತ್ರಿಸಲು ಹಲವರು ಕೀಟನಾಶಕ ಸ್ಪ್ರೇಗಳನ್ನು ಬಳಸುತ್ತಾರೆ. ಆದರೆ ಇವುಗಳನ್ನು ಬಳಸುವಾಗ ಮಕ್ಕಳು, ಸಾಕುಪ್ರಾಣಿಗಳು ಮತ್ತು ಉಸಿರಾಟದ […]
ಅಪರಿಚಿತ ವಾಟ್ಸಪ್ ಸಂಖ್ಯೆಯಿಂದ ಬಂತು ಮದುವೆ ಆಹ್ವಾನ ಪತ್ರಿಕೆ, ಓಪನ್ ಮಾಡಿದ್ದೇ ಬ್ಯಾಂಕ್ ಖಾತೆಯಿಂದ ₹9.96 ಲಕ್ಷ ಢಮಾರ್, ನಿಮಗೂ ಹೀಗಾಗಬಹುದು ಎಚ್ಚರ!

ಬೆಂಗಳೂರು: ವಾಟ್ಸಪ್ಗೆ ಅಪರಿಚಿತ ಸಂಖ್ಯೆಯಿಂದ ಬರುವ ಸಂದೇಶಗಳು, ಲಿಂಕ್ಗಳು ಅಥವಾ ಫೈಲ್ಗಳನ್ನು ತೆರೆಯುವ ಮುನ್ನ ಎಚ್ಚರಿಕೆ ವಹಿಸುವಂತೆ ಸೈಬರ್ ತಜ್ಞರು ಸಲಹೆ ನೀಡುತ್ತಿದ್ದಾರೆ. ಆದರೂ ಪ್ರತೀ ದಿನವೂ ಒಂದಿಲ್ಲೊಂದು ಸೈಬರ್ ಪ್ರಕರಣ ಆಗುತ್ತಲೇ ಇದೆ. ಮದುವೆ ಆಹ್ವಾನ ಪತ್ರಿಕೆ ಎಂದು ನಂಬಿ APK ಫೈಲ್ ತೆರೆದ ಸರ್ಕಾರಿ ಅಧಿಕಾರಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ಸುಮಾರು ₹9.96 ಲಕ್ಷ ಕಳೆದುಕೊಂಡಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಮೇಶ್ ಬಾಬು ಅವರಿಗೆ ಜುಲೈ 14ರಂದು ಸಂಜೆ […]
ಎದೆಹಾಲುಣಿಸುವಾಗ ಮೊಬೈಲ್ ಸ್ಕ್ರೀನ್ ನೋಡೋ ತಾಯಂದಿರೇ, ಈ ಎಚ್ಚರಿಕೆ ಇರಲಿ!

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ನಮ್ಮ ಜೀವನದ ಅವಿಭಾಜ್ಯ ಭಾಗವಾಗಿದೆ. ಊಟ ಮಾಡುವಾಗ, ವಿಶ್ರಾಂತಿ ಪಡೆಯುವಾಗ ಮಾತ್ರವಲ್ಲದೆ, ಕೆಲ ತಾಯಂದಿರು ಮಗುವಿಗೆ ಎದೆಹಾಲುಣಿಸುವ ಸಮಯದಲ್ಲೂ ಮೊಬೈಲ್ನಲ್ಲಿ ಚಾಟ್ ಮಾಡುವುದು, ಸಾಮಾಜಿಕ ಜಾಲತಾಣಗಳನ್ನು ಸ್ಕ್ರೋಲ್ ಮಾಡುವುದು ಅಥವಾ ವಿಡಿಯೋ ನೋಡುವುದನ್ನು ರೂಢಿಸಿಕೊಂಡಿರುತ್ತಾರೆ. ಆದರೆ, ಹಾಲುಣಿಸುವಂತಹ ಅಮೂಲ್ಯ ಸಮಯದಲ್ಲಿ ತಾಯಿಯ ಗಮನ ಮೊಬೈಲ್ಗಿಂತ ಮಗುವಿನ ಮೇಲಿರುವುದು ಹೆಚ್ಚು ಮುಖ್ಯ ಎನ್ನುತ್ತಾರೆ ತಜ್ಞರು. ಎದೆಹಾಲು ಕೇವಲ ಆಹಾರವಲ್ಲ ಮಗುವಿಗೆ ಎದೆಹಾಲು ಪೌಷ್ಟಿಕ ಆಹಾರ ನೀಡುವುದರ ಜೊತೆಗೆ, ತಾಯಿ ಮತ್ತು ಮಗುವಿನ […]