ಇಂದು ರಾಷ್ಟ್ರೀಯ ವೈದ್ಯರ ದಿನ: ವೈದ್ಯರ ಸೇವೆಗೆ ಗೌರವ ಸಲ್ಲಿಸುವ ವಿಶೇಷ ದಿನವಿದು!

ಆರೋಗ್ಯವೇ ಮಹಾಭಾಗ್ಯ ಎಂಬ ಮಾತು ಎಲ್ಲ ಕಾಲಕ್ಕೂ ಅನ್ವಯಿಸುತ್ತದೆ. ಆರೋಗ್ಯವನ್ನು ಕಾಪಾಡುವುದು, ಅನಾರೋಗ್ಯಕ್ಕೆ ಚಿಕಿತ್ಸೆ ನೀಡಿ ರೋಗಿಯನ್ನು ಗುಣಪಡಿಸುವುದು ವೈದ್ಯರ ಪ್ರಮುಖ ಕರ್ತವ್ಯವಾಗಿದೆ. ಜೀವ ಉಳಿಸಿ ಹೊಸ ಬದುಕು ನೀಡುವ ವೈದ್ಯರನ್ನು “ವೈದ್ಯೋ ನಾರಾಯಣೋ ಹರಿ” ಎಂದು ಗೌರವಿಸುವ ಸಂಪ್ರದಾಯ ಭಾರತದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ವೈದ್ಯರ ಈ ಅಮೂಲ್ಯ ಸೇವೆಯನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿವರ್ಷ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಮೊದಲ […]

2030 ರ ವೇಳೆಗೆ ಪ್ರತಿ 9-10 ಭಾರತೀಯರಲ್ಲಿ ಒಬ್ಬರಿಗೆ ಕ್ಯಾನ್ಸರ್, ಶಾಕಿಂಗ್ ವರದಿಯಿದು: ಕ್ಯಾನ್ಸರ್ ತಡೆಗಟ್ಟಲು ನೀವು ಕೈಗೊಳ್ಳಲೇಬೇಕಾದ ಕ್ರಮಗಳೇನು?

ನವದೆಹಲಿ: ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಜ್ಞರ ವರದಿಗಳ ಪ್ರಕಾರ, 2030ರ ವೇಳೆಗೆ ಪ್ರತಿ 9 ರಿಂದ 10 ಭಾರತೀಯರಲ್ಲಿ ಒಬ್ಬರಿಗೆ ಕ್ಯಾನ್ಸರ್ ಬರುವ ಅಪಾಯ ಎದುರಾಗುವ ಸಾಧ್ಯತೆಯಿದೆ.ಇದೊಂದು ಶಾಕಿಂಗ್ ಸುದ್ದಿ. ತಜ್ಞರ ಪ್ರಕಾರ, ವಯಸ್ಸಾದ ಜನಸಂಖ್ಯೆಯ ಹೆಚ್ಚಳ, ಬದಲಾಗುತ್ತಿರುವ ಜೀವನಶೈಲಿ, ಪರಿಸರ ಮಾಲಿನ್ಯ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಮಾನಸಿಕ ಒತ್ತಡ ಕ್ಯಾನ್ಸರ್ ಪ್ರಕರಣಗಳು ಹೆಚ್ಚಲು […]

ಊಟದ ಬಳಿಕ ಚಹಾ ಕುಡಿಯುವ ಅಭ್ಯಾಸ ಇದೆಯೇ? ಹಾಗಿದ್ರೆ ಈ ಮಾಹಿತಿ ನಿಮಗೆ ತಿಳಿದಿರಲಿ

ಭಾರತದಲ್ಲಿ ಹೆಚ್ಚಿನ ಜನರು ದಿನವನ್ನು ಒಂದು ಕಪ್ ಚಹಾ ಅಥವಾ ಕಾಫಿಯೊಂದಿಗೆ ಆರಂಭಿಸುತ್ತಾರೆ. ಕೆಲವರಿಗೆ ಬೆಳಿಗ್ಗೆ ಟೀ ಕುಡಿಯದೇ ದಿನವೇ ಶುರುವಾಗುವುದಿಲ್ಲ. ಇದೇ ರೀತಿ, ಕೆಲವರು ಊಟದ ನಂತರವೂ ಒಂದು ಕಪ್ ಚಹಾ ಸೇವಿಸುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಊಟವಾದ ತಕ್ಷಣ ಚಹಾ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೇ ಎಂಬ ಪ್ರಶ್ನೆ ಹಲವರಲ್ಲಿ ಇರುತ್ತದೆ. ಇಲ್ಲಿದೆ ಮಹಿತಿ. ಹಲವು ತಜ್ಞ ವೈದ್ಯರ ಪ್ರಕಾರ, ಊಟದ ತಕ್ಷಣ ಚಹಾ ಸೇವಿಸುವುದು ಕೆಲವು ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಯಾಗಬಹುದು. ನಾವು […]

ನೀವು ರೈಲಿನಲ್ಲಿ ಚಲಿಸುತ್ತಿರುವಾಗ ಏನಾದರೂ ಸಮಸ್ಯೆ ಆದ್ರೆ ಹೀಗೆ ಮಾಡಿ…

ಫಟನೆ 1: ಟ್ರೇನ್ ನಲ್ಲಿ ಬಹುದೂರದ ಪಯಣ ಕೈಗೊಂಡಿದ್ದ ದಂಪತಿಗಳು ಸ್ಲೀಪರ್ ಕೋಚ್ ಬುಕ್ ಮಾಡಿ ಸುರಕ್ಷಿತ ಪಯಣ ಮಾಡುವ ಧೈರ್ಯ ಹೊಂದಿದ್ದರು. ಆದರೆ ಯಾವುದೋ ಒಂದು ನಿಲ್ದಾಣದಲ್ಲಿ ಸಾಕಷ್ಟು ಲಗೇಜ್ ಗಳೊಂದಿಗೆ ಹತ್ತಿದ ಐದಾರು ಯುವಕರು ಜಾಗ ಖಾಲಿ ಇದ್ದೆಡೆಯಲ್ಲೆಲ್ಲಾ ಅವರ ಲಗೇಜ್ ತುರುಕಿಸಿ ಇಟ್ಟು ಅರಾಮವಾಗಿ ನಮ್ಮದೇ‌ಬೋಗಿ ಎಂಬಂತೆ ಹರಟೆ ಹೊಡೆಯುತ್ತಾ ನೆಲದ ಮೇಲೆ ಕುಳಿತು ಬಿಟ್ಟರು. ಇತರ ಪ್ರಯಾಣಿಕರ ಪ್ರಶ್ನೆಗಳಿಗೂ ಉತ್ತರಿಸದೇ ತಮ್ಮಷ್ಟಕ್ಕೆ ತಾವಿದ್ದರು. ಯಂಗ್ ಟಿಟಿಇ ಅವರೊಂದಿಗೆ ನಗುತ್ತಲೇ ಮಾತಾಡಿ ಮುಂದಿನ […]

ನೇರಳೆ ಹಣ್ಣಿನ ಸಮೃದ್ಧ ಫಸಲು ಬರಗಾಲದ ಮುನ್ಸೂಚನೆಯೇ? ಪೂರ್ವಜರ ನಂಬಿಕೆಗೆ ಇಲ್ಲಿದೆ ವೈಜ್ಞಾನಿಕ ವಿವರಣೆ

ಬೆಂಗಳೂರು: ಈ ವರ್ಷ ರಾಜ್ಯದಲ್ಲಿ ಹೇರಳವಾಗಿ ಕಂಡುಬರುತ್ತಿರುವ ನೇರಳೆ ಹಣ್ಣಿನ ಫಸಲು ಬರಗಾಲದ ಸೂಚನೆಯೇ ಎಂಬ ಚರ್ಚೆ ಜೋರಾಗಿದೆ. “ನೇರಳೆ ಹಣ್ಣು ಹೆಚ್ಚು ಬಂದರೆ ಆ ವರ್ಷ ಬರಗಾಲ ಬರುತ್ತದೆ” ಎಂಬುದು ಜನಪದದಲ್ಲಿ ಹಿರಿಯರಿಂದ ಬಂದಿರುವ ನಂಬಿಕೆ. ಇದೇ ವೇಳೆ ಮುಂಗಾರು ಮಳೆ ನಿರೀಕ್ಷೆಗಿಂತ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯೂ ಈ ಚರ್ಚೆಗೆ ಮತ್ತಷ್ಟು ಬಲ ನೀಡಿದೆ. ಹವಾಮಾನ ಇಲಾಖೆಯ ಪ್ರಕಾರ, ಎಲ್‌ನಿನೋ ಪರಿಣಾಮದಿಂದ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ದಾಖಲಾಗುವ […]