ಯಾರು ಏನಂದ್ರೂ ಡೋಂಟ್ ವರಿ: ಇಲ್ಲಿದೆ ಸಿಂಪಲ್ಲಾಗಿ ಬದುಕುವ ದಾರಿ

ಯಾರು ಏನನ್ನುತ್ತಾರೋ? ನಾನು ಹೀಗೆ ಮಾಡಿದರೆ ಎಲ್ಲರ ಮುಂದೆ ಏನು ಅನ್ನಿಸಿಕೊಳ್ಳಬೇಕೋ ಎಂದೆಲ್ಲಾ ಯೋಚನೆ ಮಾಡುತ್ತಲೇ ಬದುಕಿನ ಅರ್ಧ ಆಯುಷ್ಯ ಕಳೆದುಬಿಡುತ್ತೇವೆ. ಅವರಿವರು ಏನು ಅಂದುಕೊಳ್ಳುತ್ತಾರೆಂದು ನಮಗೆ ಬೇಕಾದ ಹಾಗೇ ನಾವು ಕೊನೆಗೂ ಬದುಕುವುದೇ ಇಲ್ಲ.ಯಾರು ಏನೆಂದುಕೊಳ್ಳುತ್ತಾರೆ ಎನ್ನುವುದು ಮುಖ್ಯವಲ್ಲ.ನಾವು ಹೇಗೆ ಬದುಕಬೇಕು ಅಂದುಕೊಂಡಿದ್ದೇವೋ ಅದರಂತೆ ಬದುಕುವುದೇ ಮುಖ್ಯ. ನಾವು ಹೇಗೆ ಬದುಕಬಹುದು ಎನ್ನುವುದಕ್ಕೆ ಇಲ್ಲಿ ಕೆಲವೊಂದು ಸೂತ್ರಗಳನ್ನು ನೀಡಿದ್ದೇವೆ. ನೀವಿದ್ದನ್ನು ಪಾಲಿಸಿದರೆ ಚೆಂದದ ಬದುಕು ನಿಮ್ಮದಾಗಬಹುದು. •ನಿಮ್ಮ ಬದುಕು ಹೀಗೆ ಇರಬೇಕು ಎಂದು ನಿರ್ಧರಿಸುವುದು ನೀವೇ. […]

ರೈತನಿಂದ ಅನ್ನ ಉಣ್ಣುವ ನಾವು ಈ ಪ್ರತಿಜ್ಞೆಗಳನ್ನು ಮಾಡಲೇಬೇಕು: ರಾಷ್ಟ್ರೀಯ ಕೃಷಿಕರ ದಿನದ ವಿಶೇಷ ಇದು

ಇಂದು ರಾಷ್ಟ್ರೀಯ ಕೃಷಿಕರ ದಿನ. ಕೃಷಿಕನ ಶ್ರಮದ ಬೆವರು ಒಂದು ದಿನ ಹರಿಯದಿದ್ದರೂ ಜಗತ್ತಿನಲ್ಲಿ ಜನ ಸಾಮಾನ್ಯರ ಹೊಟ್ಟೆ ಹೊರೆಯುವುದು ಬಹಳ ಕಷ್ಟವಿದೆ. ಹಾಗಾಗಿ ಪ್ರತಿದಿನವೂ ಕೃಷಿಕರ ದಿನವೇ. ನಾವು ಕೃಷಿಕರಲ್ಲದೇ ಇರಬಹುದು. ಆದರೆ ಪ್ರತಿಯೊಬ್ಬರೂ ಆತನನ್ನು ಅವಲಂಬಿಸಿಯೇ ಬದುಕುತ್ತಿರುವವರಾದ್ದರಿಂದ ಆತನ ಶ್ರಮಕ್ಕೆ, ಬೆವರಿಗೆ ಗೌರವ ಕೊಡಲು ವರ್ಷವಿಡೀ ಹೀಗೆ ಮಾಡೋಣ. ಇದು ಉಡುಪಿ xpress ಕಾಳಜಿ • ಅವಶ್ಯವಿದ್ದಷ್ಟೇ ಆಹಾರ ತೆಗೆದುಕೊಂಡು ಒಂದಿಷ್ಟನ್ನೂ ತಟ್ಟೆಯಲ್ಲಿ ವ್ಯರ್ಥ‌ಮಾಡದೇ ಊಟ/ತಿಂಡಿ ಮಾಡೋಣ. • ವರ್ಷಕ್ಕೆ ಕನಿಷ್ಠ ಒಂದಾದರೂ ಗಿಡ […]

ಹಳೆ ರೇಷ್ಮೆ ಸೀರೆಗೆ ಈ ಹೊಸ ಲುಕ್ ಕೊಟ್ಟು ನೋಡಿ: ಇದು ಹಳೆ ಸೀರೆಯ ಹೊಸ ಮೋಡಿ!

»ಸುಲಭಾ ಆರ್.ಭಟ್, ಉಡುಪಿ ಹಳೆ ರೇಷ್ಮೆ ಸೀರೆಗೆ ಈ ಹೊಸ ಲುಕ್ ಕೊಟ್ಟು ನೋಡಿ.”ವ್ಹಾವ್ ಎಷ್ಟು ಚೆಂದ ಆಯ್ತಲ್ಲಾ ನನ್ನ ಹಳೆ ಸೀರೆಯ ಹೊಸ ಲುಕ್” ಅಂತ ನೀವೇ ನೋಡಿ ಖುಷಿ ಪಡ್ತೀರಿ. ಯಸ್”ಸೀರೆ ಸುಂದರವಾಗಿಯೂ ಆಕರ್ಷಕವಾಗಿಯೂ ಹಾಗೂ ಸ್ತ್ರೀಯರಿಗೆ ಗತ್ತುಗೈರತ್ತುಗಳನ್ನು ನೀಡುವಂತ ಉಡುಗೆ. ಆದರೆ ಕೆಲವೊಮ್ಮೆ ಮತ್ತೆ ಮತ್ತೆ ಹಳೆಯ ಸೀರೆಗಳನ್ನೇ  ಉಟ್ಟುಕೊಳ್ಳುವುದಕ್ಕೇ ಬೇಸರವೆಂದೆನಿಸುತ್ತದೆ ಅಲ್ಲವೇ? ಹಾಗಿದ್ದಲ್ಲಿ ಆ ಹಳೆಯ ರೇಷ್ಮೆ ಸೀರೆಗಳನ್ನು ಮರುಬಳಸಬಹುದು. ಇದು ಹೇಗೆ ಸಾಧ್ಯ ಅನ್ನೋ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. […]

ಈ ಸಮಯದಲ್ಲಿ ನೀವು ಹೂಡಿಕೆ ಹಾಗೂ ಉಳಿತಾಯ ಯೋಜನೆ ಬಗ್ಗೆ ಯೋಚಿಸಲೇಬೇಕು :ನಿಮ್ಮ ಬದುಕು ಕಾಪಾಡೋ ಯೋಜನೆಗಳಿವು!

ಕಷ್ಟಕಾಲಕ್ಕೆ ಒಂದಷ್ಟು ಸಂಪತ್ತನ್ನು ಶೇಖರಿಸಿಡಬೇಕು ಎಂದು ಚಾಣಕ್ಯ ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದಾನೆ. ಬಹಳ ವರ್ಷಗಳ ಹಿಂದೆ ನಮ್ಮ ಉಳಿತಾಯದ ಅಥವ ಹೂಡಿಕೆಯ ಅವಕಾಶಗಳು ಕಡಿಮೆ ಇದ್ದವು. ಆದರೆ ಈಗ ಕಾಲ ಬದಲಾಗಿದೆ. ಒಬ್ಬ ಸಾಮಾನ್ಯ ಪ್ರಜೆಯೂ ಹೂಡಿಕೆ ಹಾಗೂ ಉಳಿತಾಯ ಮಾಡಲು ಸಾಧ್ಯವಾಗುವ೦ತಹ ಹಲವು ಯೋಜನೆಗಳಿವೆ. ಅವುಗಳಲ್ಲಿ ಕೆಲವನ್ನು ಕೆಳಗೆ ವಿವರಿಸಿದ್ದಾರೆ ಮೂಡಬಿದ್ರೆ ಎಕ್ಸಲೆಂಟ್ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ  ವಿಕ್ರಮ್ ವತ್ಸ ♦ಫಿಕ್ಸೆಡ್ ಡೆಪೋಸಿಟ್: ಇದು ಎಲ್ಲರಿಗೂ ತಿಳಿದಿರುವ ಜನಪ್ರಿಯ ಯೋಜನೆ.ಆದರೆ ಇದರಿ೦ದ ಬರುವ […]

ನಮ್ಮ ನಿಮ್ಮ ನಡುವೆಯೂ ಇಂತವರಿರಬಹುದು ಜಾಗ್ರತೆ!

ಲೈಂಗಿಕತೆಯ ಕುರಿತು ಅರಿವೇ ಇರದ ಆ ಹುಡುಗಿಗೆ ಕದ್ದು ಮುಚ್ಚಿ ಯಾವ್ಯಾವುದೋ ಅಂಗಗಳನ್ನು ನೋಡುತ್ತಿದ್ದ ಈತನ ನೋಟಗಳು‌ ಮೊದಮೊದಲಿಗೆ ಅಸಹಜವೆನ್ನಿಸತೊಡಗಿದರೂ ಗುರುವಿನ ಮೇಲಿನ ಗೌರವದಿಂದ ನಿರ್ಲಕ್ಷಿಸಿದಳು.