ಈ ಬೇಸಿಗೆ ರಜೆಯಲ್ಲಿ ಮಕ್ಕಳ ಮೊಗದಲ್ಲಿ ಖುಷಿಯ ನಗು ಅರಳಿಸಿ ಪ್ಲೀಸ್! ಮಕ್ಕಳನ್ನು ಖುಷಿಯಾಗಿರಿಸಲು ನೀವೇನ್ ಮಾಡ್ಬೇಕು?

ಮತ್ತೆ ಬಂದಿದೆ ಬೇಸಿಗೆ ರಜೆ. ಬೇಸಿಗೆ ರಜೆ ಬಂದಾಗಲೆಲ್ಲಾ ಬಹುತೇಕ ಹೆತ್ತವರಿಗೆ ತಮ್ಮ‌ ಕೆಲಸಗಳ ನಡುವೆ ಮಕ್ಕಳನ್ನು ಮನೆಯಲ್ಲಿಯೇ ನೋಡಿಕೊಳ್ಳುವುದು ಹೇಗೆ ಅನ್ನುವ ಚಿಂತೆ ಮೂಡಿಯೇ ಮೂಡುತ್ತದೆ.ರಜೆ ಎನ್ನುವುದು ಮಕ್ಕಳು ರಿಲ್ಯಾಕ್ಸ್ ಆಗಿ ಖುಷಿಯಿಂದ ಕಳೆಯಲು ಇರುವ ಅದ್ಬುತ ಕ್ಷಣ.ಈ ರಜೆಯಲ್ಲಿ ಮಕ್ಕಳು ಎಂದಿಗೂ ಮರೆಯದಂತಹ ಸುಂದರ ಅನುಭವಗಳನ್ನು ತಮ್ಮದಾಗಿಸಿಕೊಂಡರೆ ಬದುಕಿನಲ್ಲಿ ಮುಂದೆಯೂ ಖುಷಿಯಾಗಿ ಬದುಕಬಲ್ಲರು. ಬನ್ನಿ ನಿಮ್ಮ ಮಕ್ಕಳನ್ನು ಈ ಬೇಸಿಗೆಯಲ್ಲಿ ಖುಷಿಯಾಗಿರಿಸಲು ನೀವೇನು ಮಾಡ್ಬೇಕು ಎನ್ನುವ ಕುರಿತು ನಾವೊಂದಷ್ಟು ಟಿಪ್ಸ್ ಕೊಡ್ತೇವೆ ಪ್ರಕೃತಿಯ ಜೊತೆ […]

ಬೆಳಿಗ್ಗೆ ಲೇಟಾಗಿ ತಿಂಡಿ ತಿನ್ನುವ ಅಭ್ಯಾಸ ನಿಮಗಿದ್ರೆ  ಕೂಡಲೇ ಬಿಟ್ಟು ಬಿಡಿ, ಯಾಕೆ ಅನ್ನೋದನ್ನು ಒಮ್ಮೆ ಓದಿ

ಈಗೀಗ ಜೀವನಶೈಲಿ ಸಂಪೂರ್ಣ ಬದಲಾಗಿಬಿಟ್ಟಿದೆ. ಬೆಳಿಗ್ಗೆ ಎದ್ದವರೇ ಬ್ಯುಸಿಯಾಗಿಬಿಡುವ ಅದೆಷ್ಟೋ ಮಂದಿ ಸರಿಯಾಗಿ ತಿಂಡಿಯನ್ನೂ ತಿನ್ನದೇ ಆಫೀಸ್ ಕೆಲಸಕ್ಕೋ, ಮನೆ ಕೆಲಸಕ್ಕೋ ತೊಡಗುವುದು ಮಾಮೂಲು, ಆದ್ರೆ ಏನೂ ತಿನ್ನದೇ ಬೆಳಿಗ್ಗಿನ ಅದೆಷ್ಟೋ ಹೊತ್ತು ಹೊಟ್ಟೆ ಖಾಲಿಯಾಗಿರಿಸಿಕೊಳ್ಳುವವ ಜನರು ಹೆಚ್ಚಿದ್ದಾರೆ. ಅಂತವರಿಗೋಸ್ಕರವೇ ಈ ಮಾಹಿತಿ. ಬೆಳಿಗ್ಗೆ ತುಂಬಾ ಹೊತ್ತಿನವರೆಗೂ ಏನೂ ತಿನ್ನದೇ ಇದೋದ್ರಿಂದ ನಮ್ಮ ಆರೋಗ್ಯದ ಮೇಲಾಗುವ ಗಂಭೀರ ಸಮಸ್ಯೆಗಳು ಅಷ್ಟಿಷ್ಟಲ್ಲ. ಸಾಮಾನ್ಯ ಮಹಿಳೆಯರು ಬೆಳಿಗ್ಗೆ ಎದ್ದಾಗಿನಿಂದ ಸರಿಯಾಗಿ ತಿಂಡಿ ತಿನ್ನದೇ ಮಕ್ಕಳಿಗೆ ಸ್ಕೂಲ್ ಗೆ ಕಳಿಸೋದ್ರಲ್ಲಿ, ಅವರಿವರ […]

ರೀಲ್ಸ್ ಪ್ರಿಯರೇ ಇನ್ನಾದರೂ ಎಚ್ಚರಾಗಿರಿ: ನಿಮ್ಮ ಕಣ್ಣನ್ನೇ ಕಿತ್ತುಕೊಳ್ಳಬಹುದು ಈ ಅಭ್ಯಾಸ!

ನೀವು ರೀಲ್ಸ್ ಪ್ರಿಯರೇ, ರಾಶಿ ರಾಶಿ ರೀಲ್ಸ್ ಗಳನ್ನು ಮಾಡೋದು, ಹೆಚ್ಚಿನ ರೀಲ್ಸ್ ವೀಕ್ಷಣೆಗಾಗಿ ಸಮಯ ಮೀಸಲಿಡೋದು ನಿಮ್ಮ ದಿನಚರಿಯ ಭಾಗವೇ, ಹಾಗಾದ್ರೆ ಇನ್ನು ಮುಂದಾದ್ರೂ ನೀವು ರೀಲ್ಸ್ ವೀಕ್ಷಣೆಯನ್ನು ಕಡಿಮೆಯಾಡುದೊಳಿತು! ಹೌದು. ರೀಲ್ಸ್ ನಿಂದಾಗಿ ಕಣ್ಣಿಗೆ ಹೆಚ್ಚಿನ ಹಾನಿಯಾದ ಪ್ರಕರಣಗಳು ಸಂಶೋಧನೆಯಿಂದ ಇದೀಗ ಬೆಳಕಿಗೆ ಬಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗಾ ಕಾಣಿಸುತ್ತಲೇ ಇರುವ ರೀಲ್ಸ್ ಗಳಿಗೆ ಕಣ್ಣು ಹೊಂದಿಕೊಂಡು ಕಣ್ಣಿನ ದೃಷ್ಟಿಯಲ್ಲಿ ಸಮಸ್ಯೆ ಕೂಡ ಬರುತ್ತೆ ಎನ್ನುವುದು ಸಾಬೀತಾಗಿದೆ. ಯಶೋಭೂಮಿ-ಇಂಡಿಯಾ ಅಂತರರಾಷ್ಟ್ರೀಯ ಸಮಾವೇಶ ಮತ್ತು ಪ್ರದರ್ಶನ […]

ಯುಗಾದಿಗೆ ಉಸಿರು, ಪ್ರಕೃತಿಯ ಹಸುರು: ಮತ್ತೆ ಬಂತು ಚಿಗುರಿನ ಹಬ್ಬ: ಯುಗಾದಿಯ ವಿಶೇಷ ಬರಹ

ಬರಹ-ಪ್ರಸಾದ ಶೆಣೈ ಮಾರ್ಚ್ ತಿಂಗಳು ಮುಗಿದು ಎಪ್ರಿಲ್ ತಿಂಗಳು ಆರಂಭವಾಗುತ್ತದೋ, ಆಗ ಮರದ ತುಂಬಾ ಚಿಪಿಪಿಲಿ ಹಾಡುಗಳನ್ನು ಹಾಡುತ್ತಲೇ ರೆಂಬೆ ಕೊಂಬೆಗಳಿಗೂ ಹಾರುವ ಹಕ್ಕಿಗಳು ಒಂದೇ ಸಮನೆ ಜಾಸ್ತಿಯಾಗುತ್ತವೆ. ಅವುಗಳೆಲ್ಲಾ “ನೋಡು ನೋಡು ಗೆಳತಿ ಚೈತ್ರ ಕಾಲ ಬಂದಿದೆ, ಮೋಡಿ ಮಾಡಿ ನನ್ನ ಮನಕೆ ಹರುಷ ತಂದಿದೆ”ಎಂದು ಯಕ್ಷಗಾನದಲ್ಲಿ ಭಾಗವತರು ಸುಶ್ರಾವ್ಯವಾಗಿ ಹಾಡುವ ಪದ್ಯದಂತೆ, ವಸಂತರಾಜನನ್ನು ಕೊಂಡಾಡುತ್ತ, ಬಾ ಬಾ ವಸಂತ ಬಾ ಬಾ ಎಂದು ಹಸಿರ ಬಾಗಿಲೊಳು ನಿಂತು ಕರೆದಂತೆ ಕಾಣಿಸುತ್ತವೆ. ಪುಟ್ಟ ಮರಿಹಕ್ಕಿಗೆ  ಒಂದೊಂದೇ […]

ಬದಲಾಗುತ್ತಿದೆ ಕಾಲ: ಮಾಧ್ಯಮದಲ್ಲಿ ಹೊಸ ಕ್ರಾಂತಿಗೆ ಇದು ಸಕಾಲ: ಕುದ್ಯಾಡಿ ಸಂದೇಶ್ ಸಾಲ್ಯಾನ್ ಬರಹ

ಪತ್ರಿಕೆಗೆ ಕಳುಹಿಸಿದ ವರದಿಯೊಂದು ಪ್ರಕಟವಾಗಿದೆಯೇ ಎಂದು ಆ ಪತ್ರಿಕೆಯ ವರದಿಗಾರರನ್ನು ಕೇಳಿದರೆ ಅವರಿಗೆ ಸಂತೋಷವೇನೂ ಆಗಲಿಕ್ಕಿಲ್ಲ. “ಬಂದಿರಬಹುದು, ನೋಡಿ” ಎನ್ನಬಹುದು ಅವರು. ಏಕೆಂದರೆ ತಮ್ಮ ಪತ್ರಿಕೆಯನ್ನು ಎಲ್ಲರೂ ಖರೀದಿಸಿ ಓದುತ್ತಾರೆ ಅಥವಾ ಓದಲಿ ಎಂಬ ನಿರೀಕ್ಷೆಯಲ್ಲಿ ಅವರಿರುತ್ತಾರೆ. ಬೇಕಾದರೆ ಕೊಂಡುಕೊಂಡು ಓದಲಿ ಎನ್ನುವುದು ಪತ್ರಿಕಾ ಕಚೇರಿಯ ಧೋರಣೆ. ಏಕೆಂದರೆ ಪತ್ರಿಕೆ ಇರುವುದು ಖರೀದಿಸಿ ಓದುವುದಕ್ಕಾಗಿಯೇ! ಉತ್ಪಾದನಾ ವೆಚ್ಚಕ್ಕಿಂತ ಹಲವು ಪಟ್ಟು ಕಡಿಮೆ ದರಕ್ಕೆ ಸಿಗುವ ಉತ್ಪನ್ನವೊಂದಿದ್ದರೆ ಅದು ಪತ್ರಿಕೆ. ಬಂದಿರಬಹುದು ನೋಡಿ ಎಂದರೆ ಖರೀದಿಸಿ ನೋಡಿ ಎಂದರ್ಥ. […]