ಬ್ರಹ್ಮಾವರ: ಟ್ರಾನ್ಸ್ ಫಾರ್ಮರ್ ಕಂಬದಲ್ಲಿ ಬೆಂಕಿ ಅವಘಡ: ಮಳೆಯಿಂದ ತಪ್ಪಿದ ಭಾರಿ ದುರಂತ

ಚಿತ್ರ: ಪ್ರವೀಣ್ ಬ್ರಹ್ಮಾವರ

ಬ್ರಹ್ಮಾವರ: ಇಲ್ಲಿನ ದೂಪದಕಟ್ಟೆಯಲ್ಲಿ ಎಂಬಲ್ಲಿ ಟ್ರಾನ್ಸ್ ಫಾರ್ಮರ್ ಕಂಬದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ರಾತ್ರಿ ನಡೆದಿದೆ.

ದೂಪದ‌ಕಟ್ಟೆಯ‌ ಮಾನಸ ಬಾರ್ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಟ್ರಾನ್ಸ್ ಫಾರ್ಮರ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಇದರ ಪರಿಣಾಮ ಸುತ್ತಲಿನ ಸುಮಾರು 200 ಮೀಟರ್ ನಷ್ಟು ಪ್ರದೇಶಕ್ಕೆ ಬೆಂಕಿ‌ ವ್ಯಾಪಿಸಿದೆ.

ಮಳೆಯಿಂದ ತಪ್ಪಿದ ಭಾರಿ ದುರಂತ:
ಬೆಂಕಿ ಕಾಣಿಸಿಕೊಂಡ ಕೂಡಲೇ ಸ್ಥಳೀಯರು ನಂದಿಸಲು ಪ್ರಯತ್ನಿಸಿದ್ದಾರೆ. ಅದೃಷ್ಟವಶಾತ್ ಅದೇ ವೇಳೆ ಮಳೆ ಸುರಿದಿದ್ದು, ಇದರಿಂದ ಬೆಂಕಿಯ ತೀವ್ರತೆ ಕಡಿಮೆಯಾಯಿತು. ಬಳಿಕ ಸ್ಥಳಕ್ಕೆ ಅಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ‌ ನಂದಿಸಿದರು. ಈ ಘಟನೆಯಿಂದ ಬ್ರಹ್ಮಾವರ ಸುತ್ತಮುತ್ತಲೂ ವಿದ್ಯುತ್ ‌ಸಂಪರ್ಕ‌ ಕಡಿತಗೊಂಡಿದೆ.