Boys vs Girls ಶೋನಿಂದ ಬಿಗ್ ಬಾಸ್ ನ ಲಾಯರ್ ಜಗದೀಶ್ ಔಟ್!

‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ರಂಪಾಟ ಮಾಡಿಕೊಂಡು ಕಿಕ್ ಔಟ್ ಆಗಿದ್ದ ಲಾಯರ್ ಜಗದೀಶ್ ‘ಬಾಯ್ಸ್ ವರ್ಸಸ್‌ ಗರ್ಲ್ಸ್’ ಶೋನಲ್ಲಿ ಸ್ಪರ್ಧಿಸಬೇಕಿತ್ತು. ಆದರೆ, ಕೊಡಿಗೇಹಳ್ಳಿ ಗಲಾಟೆ ಕೇಸ್‌ನಲ್ಲಿ ಲಾಯರ್‌ ಜಗದೀಶ್‌ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪರಿಣಾಮ, ಅವರನ್ನ ಹೊಸ ಗೇಮ್‌ ಶೋದಿಂದ ಕೈಬಿಡಲಾಗಿದೆ. ‘’ನಾನು ಕರ್ನಾಟಕದ ಸಿಎಂ ಆಗ್ತೀನಿ. ‘ಬಿಗ್ ಬಾಸ್’ ಮೂಲಕ ಇನ್ನೂ ಹೆಚ್ಚು ಅಭಿಮಾನಿಗಳನ್ನ ಗಳಿಸ್ತೀನಿ’’ ಅಂತ ಹೇಳಿಕೊಂಡು ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮಕ್ಕೆ ಬಂದವರು ಲಾಯರ್ ಜಗದೀಶ್‌. ಆದರೆ, ‘ಬಿಗ್ ಬಾಸ್’ ಮನೆಯಲ್ಲಿ ಲಾಯರ್‌ ಜಗದೀಶ್‌ ಎಂಟರ್‌ಟೇನ್ಮೆಂಟ್‌ ನೀಡಿದ್ದಕ್ಕಿಂತ ಜಗಳ, ವಾಗ್ವಾದ ಮಾಡಿದ್ದೇ ಹೆಚ್ಚು. ಮಹಿಳಾ ಸ್ಪರ್ಧಿಗಳನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪರಿಣಾಮ, ಜಗದೀಶ್ ಅವರನ್ನ ‘ಬಿಗ್ ಬಾಸ್’ ಹೊರದಬ್ಬಿದ್ದರು. ‘ಬಿಗ್ ಬಾಸ್’ ಬಳಿಕ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋನಲ್ಲಿ ಲಾಯರ್ ಜಗದೀಶ್‌ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೀಗ ಜೈಲುಪಾಲಾಗಿರುವ ಲಾಯರ್ ಜಗದೀಶ್ ಅವರನ್ನ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋದಿಂದ ಕೈಬಿಡಲಾಗಿದೆ.

ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದ ಲಾಯರ್ ಜಗದೀಶ್
‘ಬಿಗ್ ಬಾಸ್’ ಮನೆಯಿಂದ ಕಿಕ್ ಔಟ್ ಆಗಿದ್ದ ಲಾಯರ್ ಜಗದೀಶ್ ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ವಾರದಲ್ಲಿ ದೊಡ್ಮನೆಯೊಳಗೆ ಹೋಗಿದ್ದರು. ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋ ಬಗ್ಗೆ ಪ್ರಚಾರ ಮಾಡಿ ಬಂದಿದ್ದರು.

‘ಬಾಯ್ಸ್ ವರ್ಸಸ್ ಗರ್ಲ್ಸ್’ ಕಾರ್ಯಕ್ರಮದ ಮೊದಲ ಪ್ರೋಮೋದಲ್ಲಿ ಲಾಯರ್ ಜಗದೀಶ್‌ ಕಾಣಿಸಿಕೊಂಡಿದ್ದರು. ಈ ಶೋನಲ್ಲಿ ಲಾಯರ್ ಜಗದೀಶ್ ಸ್ಪರ್ಧಿಸಬೇಕಿತ್ತು. ಆದರೆ, ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವ ಮುನ್ನವೇ ಕೊಡಿಗೇಹಳ್ಳಿಯಲ್ಲಿ ರಂಪಾಟ ಮಾಡಿಕೊಂಡರು. ಲಾಯರ್ ಜಗದೀಶ್ ಅವರನ್ನ ಪೊಲೀಸರು ಬಂಧಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೀಗಾಗಿ, ಜಗದೀಶ್‌ ‘ಬಾಯ್ಸ್ ವರ್ಸಸ್‌ ಗರ್ಲ್ಸ್’ ಶೋನಿಂದ ಬಾಹರ್ ಆಗಿದ್ದಾರೆ.

ಏನದು ಕೊಡಿಗೇಹಳ್ಳಿ ರಂಪಾಟ?
ರಸ್ತೆಯಲ್ಲಿ ಅಣ್ಣಮ್ಮ ಕೂರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಹಾಗೂ ಲಾಯರ್ ಜಗದೀಶ್ ಮಧ್ಯೆ ಕಿರಿಕ್ ಆಗಿತ್ತು. ಅದು ಕೈ-ಕೈ ಮಿಲಾಯಿಸುವ ಹಂತದವರೆಗೂ ಹೋಗಿತ್ತು. ಜಗದೀಶ್‌ ಮೇಲೆ ಕೆಲವರು ಹಲ್ಲೆ ನಡೆಸಿದರು.

ಜನವರಿ 24 ರಂದು ರಾತ್ರಿ 9 ಗಂಟೆ ಸುಮಾರಿಗೆ ಕೊಡಿಗೇಹಳ್ಳಿಯಲ್ಲಿ ಪರಿಸ್ಥಿತಿ ಹದಗೆಟ್ಟಿತ್ತು. ನೂರಾರು ಜನರು ಸೇರಿದ್ದ ಜಾಗದಲ್ಲಿ ಜಗದೀಶ್ ಗನ್‌ಮ್ಯಾನ್‌ ಫೈರಿಂಗ್ ಮಾಡಿದ್ದರು. ರೊಚ್ಚಿಗೆದ್ದ ಜನತೆ ಜಗದೀಶ್ ಅವರಿಗೆ ಸೇರಿದ ಸ್ಕಾರ್ಪಿಯೋ ಕಾರನ್ನ ಜಖಂಗೊಳಿಸಿದರು. ದೂರನ್ನ ದಾಖಲಿಸಿಕೊಂಡ ಕೊಡಿಗೇಹಳ್ಳಿ ಪೊಲೀಸರು ಲಾಯರ್ ಜಗದೀಶ್‌, ಜಗದೀಶ್ ಪುತ್ರ, ಗನ್‌ಮ್ಯಾನ್‌ ಮತ್ತು ಕಾರ್‌ ಡ್ರೈವರ್‌ ಅನ್ನು ಬಂಧಿಸಿದರು.

ಆರೋಪಿಗಳಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಪರಪ್ಪನ ಅಗ್ರಹಾರದಲ್ಲಿ ಲಾಯರ್ ಜಗದೀಶ್‌ ಫೈರಿಂಗ್ ಹಾಗೂ ಗಲಾಟೆ ಕೇಸ್‌ನಲ್ಲಿ ಲಾಯರ್ ಜಗದೀಶ್ ಅಂದರ್ ಆಗಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವ ಜಗದೀಶ್, ಜಗದೀಶ್ ಪುತ್ರ, ಗನ್‌ಮ್ಯಾನ್‌ ಹಾಗೂ ಚಾಲಕನಿಗೆ ಸದ್ಯ ಪರಪ್ಪನ ಅಗ್ರಹಾರ ಜೈಲೇ ಗತಿ.