ಬಿಜೆಪಿ ಮಹಿಳಾ ಮೋರ್ಚಾ: ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಕಾರ್ಯಕ್ರಮಕ್ಕೆ ಚಾಲನೆ

ಉಡುಪಿ: ಮಾಜಿ ಪ್ರಧಾನಿ ‘ಭಾರತ ರತ್ನ’ ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜನ್ಮದಿನಾಚರಣೆಯ ಪ್ರಯಕ್ತ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಮಣಿಪಾಲದ ಹೊಸ ಬೆಳಕು ಆಶ್ರಯಧಾಮದ ಮೂರು ಮಂದಿ ವಯೋವೃದ್ಧರಿಗೆ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯದಲ್ಲಿ ಕಣ್ಣಿನ ಪೊರೆಯ (Cataract) ಉಚಿತ ಶಸ್ತ್ರಚಿಕಿತ್ಸೆ ಮಾಡುವ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ನೇತ್ರತಜ್ಞ ಡಾ. ಕೃಷ್ಣ ಪ್ರಸಾದ್, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷ ವೀಣಾ ಎಸ್. ಶೆಟ್ಟಿ, ಜಿಲ್ಲಾ ಮಾಧ್ಯಮ ಪ್ರಕೋಷ್ಠದ ಸಂಚಾಲಕಿ ಶ್ರೀನಿಧಿ ಹೆಗ್ಡೆ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಬಿಜೆಪಿ ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ನಗರ ಮಹಿಳಾ ಮೋರ್ಚಾದ ಅಧ್ಯಕ್ಷೆ ಸರೋಜ ಶೆಟ್ಟಿಗಾರ್, ರಮಾನಂದ ಸಾವಂತ ಸರಳೇಬೆಟ್ಟು, ಹೊಸಬೆಳಕು ಆಶ್ರಮದ ಮೇಲ್ವಿಚಾರಕ ವಿನಯಚಂದ್ರ.

ಪ್ರಮುಖರಾದ ರಜನಿ ಹೆಬ್ಬಾರ್, ನೀರಜಾ ಶೆಟ್ಟಿ, ಪೂರ್ಣಿಮ ರತ್ನಾಕರ್ ಶೆಟ್ಟಿ, ರೇಣುಕಾ, ಮಾಲತಿ, ಗಾಯತ್ರಿ ಪ್ರಭು, ಶೋಭ ಶೆಟ್ಟಿ, ಸರೋಜಾ ದೇವಾಡಿಗ, ಸುಧಾ ಪೈ, ಆಶಾ ಶೆಟ್ಟಿ, ಪೂರ್ಣಿಮಾ, ಭಾರತಿ ಚಂದ್ರಶೇಖರ್, ಶಿಲ್ಪ, ಲೈಲಾ, ಮಂಜುಳ ಪ್ರಸಾದ್, ರಶ್ಮಿ ಮೊದಲಾದವರು ಉಪಸ್ಥಿತರಿದ್ದರು.