ರಾಷ್ಟ್ರ ಸ್ವಯಂ ಸೇವಿಕಾ ಸಮಿತಿ ವತಿಯಿಂದ ಜಿಲ್ಲಾ ಕಾರಾಗೃಹದಲ್ಲಿ ಭಜನೆ

ಹಿರಿಯಡಕ: ಭಾರತಾಂಬೆ ಸಗ್ರಿ ರಾಷ್ಟ್ರ ಸ್ವಯಂ ಸೇವಿಕಾ ಸಮಿತಿ ವತಿಯಿಂದ ಅರವಿಂದ ಭಂಡಾರಿಯವರ ನೇತೃತ್ವದಲ್ಲಿ ನವರಾತ್ರಿಯ ಪ್ರಯುಕ್ತ ಜಿಲ್ಲಾ ಕಾರಾಗೃಹದಲ್ಲಿ ಭಜನಾ ಕಾರ್ಯಕ್ರಮ ನೆರವೇರಿತು. ರಾಷ್ಟ್ರ ಸ್ವಯಂ ಸೇವಿಕಾ ಸಮಿತಿ ಉಡುಪಿ ಜಿಲ್ಲೆಯ ನಿಧಿಪ್ರಮುಖ್ ಭಾರತೀ ಎಚ್.ನಾಯಕ್, ಹಿರಿಯ ರಾಷ್ಟ್ರ ಸ್ವಯಂ ಸೇವಕಿ ಶ್ರೀಮತಿ ಸ್ನೇಹ ಪ್ರಭಾ ಕೆ. ರಾವ್, ಉಡುಪಿ ಕಾರ್ಯವಾಹಿಕಾ ಶ್ರೀಮತಿ ಶಕುಂತಲಾ ಆರ್ ಶೆಣೈ, ಭಾರತಾಂಬೆ ಸಗ್ರಿ ಶಾಖೆಯ ಪ್ರಮುಖ ಶಿಕ್ಷಕಿ ಮಂಜುಳಾ ಪ್ರಸಾದ್ ಹಾಗೂ ಕಾರಾಗೃಹದ ಅಧಿಕಾರಿ ಎಸ್.ಬಿ.ಪಟೇಲ್ ಅವರ ಸಹಕಾರದೊಂದಿಗೆ ಭಜನೆ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭ ಅರವಿಂದ ಭಂಡಾರಿಯವರಿಗೆ ಕಾರಾಗೃಹದ ಅಧಿಕಾರಿ ಎಸ್. ಬಿ ಪಟೇಲ್ ಸನ್ಮಾನ ಮಾಡಿದರು. ರಾಷ್ಟ್ರ ಸ್ವಯಂ ಸೇವಕಿ ತಂಡ ಭಾರತಾಂಬೆ ಸಗ್ರಿ ವತಿಯಿಂದ ಎಸ್ .ಬಿ. ಪಟೇಲ್ ಅವರನ್ನು ಗೌರವಿಸಲಾಯಿತು.

ಭಾರತಾಂಬೆ ಸಗ್ರಿ ಸ್ವಯಂ ಸೇವಕಿಯರಾದ ಸುಜಾತ ನಾಯಕ್, ಜಯಶ್ರೀ ಕೆ, ಪದ್ಮಾವತಿ ನಾಯಕ್, ವಿದ್ಯಾ ಪ್ರಭು, ವನಿತಾ ಎ ಭಂಡಾರಿ, ಸಂಧ್ಯಾ ಪ್ರಭು, ಸಾನ್ವೀ ನಾಯಕ್, ತೇಜಸ್, ಆದಿತ್ಯ ಮತ್ತು ಸಿದ್ದಾರ್ಥ್ ಉಪಸ್ಥಿತರಿದ್ದರು.