ಬೆಳ್ಮಣ್ ಉಚಿತ ವೈದ್ಯಕೀಯ ಶಿಬಿರ.. ಆರೋಗ್ಯವಂತ ಜನತೆ ದೇಶದ ಸಂಪತ್ತು- ಸುನಿಲ್ ಕುಮಾರ್

ಕಾರ್ಕಳ: ಇನ್ನಾ ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿ, ಲಯನ್ಸ್ ಕ್ಲಬ್ ಬೆಳ್ಮಣ್ ಆಶ್ರಯ ದಲ್ಲಿ ಉಚಿತ ವೈದ್ಯಕೀಯ ಶಿಬಿರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆಯಿತು. ಕೇಮಾರು ಶ್ರೀ ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯೆಕ್ಷತೆ  ವಹಿಸಿದ್ದ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರು ಮಾತನಾಡಿ, ಆರೋಗ್ಯ ವಂತ ಜನತೆ ದೇಶದ ನಿಜವಾದ ಸಂಪತ್ತು. ಅದನ್ನು ರಕ್ಷಿಸುವಲ್ಲಿ ಸರಕಾರದ ಜೊತೆ ಸಂಘ ಸಂಸ್ಥೆಗಳು ಕೈ ಜೋಡಿಸಬೇಕು. ಜನರ ಆರೋಗ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಸರಕಾರವು ಇಂದ್ರಧನುಷ್, ಮಾತೃವಂದನಾ, ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ದಂತಹ  ಹಲವಾರು ಯೋಜನೆಗಳನ್ನು ತಂದಿದ್ದು, ಜನರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸಭೆಯಲ್ಲಿ ಜಿ.ಪಂ ಸದಸ್ಯೆ ರೇಶ್ಮಾ ಉದಯ ಶೆಟ್ಟಿ, ತಾ .ಪಂ ಉಪಾದ್ಯಕ್ಷ ಗೋಪಾಲ ಮೂಲ್ಯ, ರೋಟರಿ ಸಂಸ್ಥೆಯ ರತ್ನಾಕರ್ ಇಂದ್ರಾಳಿ, ಬೆಳ್ಮಣ್ ಲಯನ್ಸ್ ಕ್ಲಬ್ ನ ಸೀತಾರಾಮ ಭಟ್, ಸದಾನಂದ ಶೆಟ್ಟಿಗಾರ್, ಧ.ಗ್ರಾ.ಯೋಜನೆಯ ಕೃಷ್ಣ ಟಿ., ಶ್ರೀನಿವಾಸ್, ಅನಿಲ್ ಡಿಸೋಜ, ತಾಲೂಕು ವೈದ್ಯಧಿಕಾರಿ ಕೃಷ್ಣಾನಂದ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.ಇನ್ನಾ ಉದಯ ಶೆಟ್ಟಿ ಸ್ವಾಗತಿಸಿ, ಶಂಕರ್ ಅಮೀನ್ ವಂದಿಸಿದರು. ಚಂದ್ರಹಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.