ಬಂಟ್ವಾಳದ ಮಹಿಳೆ ಸಾವು ಪ್ರಕರಣ: ಅತ್ತೆಯ ಸ್ಥಿತಿ ಗಂಭೀರ ಐಸಿಯುನಲ್ಲಿ ‌ಚಿಕಿತ್ಸೆ: ಬಂಟ್ವಾಳದಲ್ಲಿ ತೀವ್ರ ನಿಗಾ

ಮಂಗಳೂರು: ಮಂಗಳೂರಿನಲ್ಲಿ ಕೊರೊನ ಸೋಂಕಿನಿಂದ ಸಾವು ವಿಚಾರ ಮೃತರ ಅತ್ತೆಯ ಸ್ಥಿತಿ ಗಂಭೀರವಾಗಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪತಿ, ಮಗ ಅವರನ್ನು ಕ್ವಾರಂಟೈನ್ ಮಾಡಲಾಗಿದೆ.
ಮೂವರ ಥ್ರೋಟ್ ಸ್ವ್ಕಾಬ್ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಮೃತ ಮಹಿಳೆಯ ಮಗ ಮಾ.16 ರಂದು ದುಬೈನಿಂದ ಬಂದಿದ್ದ ಎಂದು ತಿಳಿದು ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ತೀವ್ರ ನಿಗಾವಹಿದಿದ್ದು, ಬಂಟ್ವಾಳ ಕೆಳಗಿನ ಪೇಟೆ ಸೀಲ್ ಡೌನ್ ಮಾಡಲಾಗಿದೆ. ಯಾರು ಮನೆಯಿಂದ ಹೊರಬರಬೇಡಿ ಎಂದು ಬಂಟ್ವಾಳ ನಗರ ಪೊಲೀಸರಿಂದ ಜೀಪ್ ನಲ್ಲಿ ಅನೌನ್ಸ್ಮೆಂಟ್ ಮಾಡಲಾಗಿದೆ.