ಕೊಟೇಶ್ವರ ಅಪಘಾತ:ಬೈಕ್ ಸವಾರ ಸಾವು

ಕುಂದಾಪುರ : ಇಲ್ಲಿಗೆ ಸಮೀಪದ ಕೊಟೇಶ್ವರ ಗ್ರಾಮದ,  ಅರಳುಗುಡ್ಡೆ ರಸ್ತೆಯ ಶ್ರೀ ಹೈಗುಳಿ ಬೊಬ್ಬರ್ಯ ದೈವಸ್ಥಾನದ ತಿರುವಿನ  ರಸ್ತೆಯಲ್ಲಿ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್‌ಸವಾರ ಸತೀಶ್‌ಎನ್ನುವವರು ಮೃತ ಪಟ್ಟಿರುವ ಘಟನೆ ವರದಿಯಾಗಿದೆ.

 ತಮ್ಮ ಕೆಎ೨೦ ಎಕ್ಸ್೧೫೨೮ ಬೈಕ್‌ನ್ನು ಕೊಟೇಶ್ವರ ಕಡೆಯಿಂದ  ಹಳೆ ಅಳಿವೆ ಕಡೆಗೆ ಸವಾರಿ ಮಾಡಿಕೊಂಡು ಬಂದು ತಿರುವಿನ  ರಸ್ತೆಯಲ್ಲಿ,  ನಿರ್ಲಕ್ಷತನದಿಂದ  ಬ್ರೇಕ್‌ಹಾಕಿದ  ಕಾರಣ ಬೈಕ್‌ಸ್ಕಿಡ್‌ಆಗಿ ವಾಹನ ಸಮೇತ  ರಸ್ತೆಯಲ್ಲಿ ಬಿದ್ದು ಅವರ ದೇಹದ ಅಂಗಾಂಗಳಿಗೆ ಪೆಟ್ಟಾಗಿ  ಪ್ರಜ್ಞೆ ಕಳೆದುಕೊಂಡಿದ್ದರು.

 ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಕೊಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಕುಂದಾಪುರ ಸಂಚಾರ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.