ಸಂಸ್ಕಾರಯುತ ಕುಟುಂಬದಿಂದ ರಾಮರಾಜ್ಯ ಸ್ಥಾಪನೆ ಸಾಧ್ಯ: ಶ್ರೀ ಶಕ್ತಿ ಶಾಂತಾನಂದ ಮಹರ್ಷಿ

ಕೊಡವೂರು: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣವಾದ ಬಬಿತ ಇವರ ಗ್ರಹ ಪ್ರವೇಶ ಸಂದರ್ಭದಲ್ಲಿ ಕುಟುಂಬ ಪ್ರಬೋಧನ್ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಶ್ರೀ ಶಕ್ತಿ ಶಾಂತಾನಂದ ಮಹರ್ಷಿಗಳು, ನಮ್ಮ ಕುಟುಂಬದ ವ್ಯವಸ್ಥೆಯು ಪ್ರಭು ಶ್ರೀ ರಾಮಚಂದ್ರನಂತೆ ಇರಬೇಕು. ತಂದೆ-ತಾಯಿ ಹೇಳಿದಂತೆ ನಡೆಯಬೇಕು. ಪ್ರಭು ಶ್ರೀ ಕೃಷ್ಣ ಪರಮಾತ್ಮನಂತೆ ಎಲ್ಲರನ್ನೂ ಒಳ್ಳೆಯ ರೀತಿಯಲ್ಲಿ ತಗೊಂಡು ಹೋದರೆ ಮಾತ್ರ ಕುಟುಂಬದಲ್ಲಿ ಸಂಸ್ಕಾರ ನೆಲೆಸುವುದು. ಸಂಸ್ಕಾರಯುತ ಕುಟುಂಬದಿಂದ ಬಂದರೆ ಮಾತ್ರ ನಾವು ಗುರು ಹಿರಿಯರಿಗೆ ಗೌರವ ಕೊಡಲು ಸಾಧ್ಯ. ಒಂದು ಕುಟುಂಬ ಬಲಿಷ್ಠವಾದರೆ ಸಮಾಜ ಬಲಿಷ್ಟವಾಗುತ್ತದೆ. ಸಮಾಜದಿಂದ ದೇಶ ಬಲಿಷ್ಠವಾಗಿ ರಾಮರಾಜ್ಯ ಸ್ಥಾಪನೆ ಸಾಧ್ಯವಾಗುತ್ತದೆ ಎಂದರು.

ಈ ಸಂಧರ್ಭದಲ್ಲಿ ದಾನಿಗಳಾದ ಅರುಣೋದಯ ಯುವಕ ಸಂಘ (ರಿ.) ಬಾಚನಬೈಲು, ಕೊಡವೂರು ಇವರ ವತಿಯಿಂದ ಮೇಘಿ ಸಂತೆಕಟ್ಟೆ ಇವರಿಗೆ ವೀಲ್ ಚೇರ್ ವಿತರಣೆಯನ್ನು, ದಾನಿಗಳಾದ ಶೇಕರ್ ಕೊಡವೂರು ಇವರ ವತಿಯಿಂದ ಅಪ್ಪಿ ಕೊಡವೂರು, ಕಲ್ಯಾಣಿ ದೇವಾಡಿಗ ಉಡುಪಿ ದಾಸಣ್ಣ ಲಕ್ಷ್ಮೀ ನಗರ ಇವರಿಗೆ ಔಷಧಿಗೆ ಧನ ಸಹಾಯ ಮಾಡಲಾಯಿತು. ಶ್ರೀಮತಿ ಆಶಾ ಅರುಣ್ ಮೆಂಡನ್ ಕೊಪ್ಪಲ್ ತೋಟ ಹಾಗೂ ಶ್ರೀ ಕೃಷ್ಣ ವೃದ್ಧರ ಅಶ್ರಯಾಧಮ ಕೊಡವೂರು ಇವರ ಹುಟ್ಟುಹಬ್ಬದ ನಿಮಿತ್ತ ಅಂಗವಿಕಲರಿಗೆ, ದಿವ್ಯಾಂಗರಿಗೆ, ದುಡಿಯಲು ಸಾಧ್ಯವಿಲ್ಲದವರಿಗೆ ಅಕ್ಕಿ ವಿತರಣೆ ಮಾಡಲಾಯಿತು.

ಜ್ಯೋತಿಷಿ ಪ್ರಕಾಶ್ ಅಮ್ಮಣಾಯ್ಯ, ನಗರಸಭಾ ಸದಸ್ಯ ವಿಜಯ್ ಕೊಡವೂರು ಸುಂದರ್ ಜಲಶಾಂತಿ ಕೊಡವೂರು, ಹಿಂದೂ ಯುವ ಸೇನೆ ಅಧ್ಯಕ್ಷ ಅಜಿತ್ ಕುಮಾರ್ ಕೊಡವೂರು, ವಾರ್ಡ್ ಅಭಿವೃದ್ದಿ ಸಮಿತಿ ಅಧ್ಯಕ್ಷ ಅಶೋಕ್ ಶೆಟ್ಟಿಗಾರ್, ಮೋಹನ್ ಕುಂದರ್, ನಾಗರಾಜ ಆಚಾರ್ಯ ಮತ್ತಿತರರು ಹಾಜರಿದ್ದರು.