ಎಮ್ ಎನ್ ರಾಜೇಂದ್ರ ದಂಪತಿಗಳಿಗೆ ಬೀಳ್ಕೊಡುಗೆ ಸಮಾರಂಭ

ಉಡುಪಿ: ಅಂಬಲಪಾಡಿ ಯೂನಿಯನ್ ಬ್ಯಾಂಕ್( ಕಾರ್ಪೊರೇಷನ್ ಬ್ಯಾಂಕ್ )ನಲ್ಲಿ ಸುಮಾರು 38 ವರ್ಷಗಳ ಕಾಲ ಉಡುಪಿ ಜಿಲ್ಲೆಯ ವಿವಿಧ ಕಡೆ ಸೇವೆಸಲ್ಲಿಸಿ ಅಂಬಲಪಾಡಿ ಶಾಖೆಯಲ್ಲಿ ನಿವೃತ್ತರಾದ ಎಮ್ ಎನ್ ರಾಜೇಂದ್ರ ಹಾಗೂ ಶ್ರೀಮತಿ ಬೃಂದ ರಾಜೇಂದ್ರ ದಂಪತಿಗಳನ್ನು ಬೀಳ್ಕೊಡಲಾಯಿತು.

ಸಮಾರಂಭದಲ್ಲಿ ಉಪ ಶಾಖಾಧಿಕಾರಿ ಶ್ರೀಮತಿ ಉಷಾ ಕುಮಾರಿ ದಂಪತಿಗಳಿಗೆ ಶಾಲು ಹೊದಿಸಿ ರಜತ ಸ್ಮರಣಿಕೆ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಯೂನಿಯನ್ ಬ್ಯಾಂಕ್ ನೌಕರರ ಸಂಘದ ವತಿಯಿಂದ ನಾಗೇಶ್ ನಾಯಕ್ ದಂಪತಿಗಳನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ವಿಷ್ಣುಜಿತ್, ಮನೋಜ್, ಹೇಮಂತ್ ಕಾಂತ್, ಶಾಂತ, ವಿನಯ, ರಾಜೇಶ್, ರೋಹಿಣಿ, ಸತ್ಯವತಿ, ಅದಿತಿ ಹಾಗೂ ನಿವೃತ್ತ ಅಧಿಕಾರಿಗಳು ವಿವಿಧ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.