ಆ.19ರಂದು ಸಹಾಯ ಸೌಹಾರ್ದ ಸಹಕಾರಿಯ ನೂತನ ತೆಂಕನಿಡಿಯೂರು ಶಾಖೆ ಉದ್ಘಾಟನೆ

ಉಡುಪಿ: ಉಡುಪಿ ಸಂತೆಕಟ್ಟೆಯ ಸಹಾಯ ಸೌಹಾರ್ದ ಸಹಕಾರಿ ನಿ. ಇದರ 3 ನೇ ತೆಂಕನಿಡಿಯೂರಿನ ಶಾಖೆಯ ಉದ್ಘಾಟನಾ ಸಮಾರಂಭವು ಅಗಸ್ಟ್ 19 ಶುಕ್ರವಾರ, ಪೂರ್ವಾಹ್ನ ಗಂಟೆ 10ಕ್ಕೆ “ಬೃಂದಾವನ ಆರ್ಕೇಡ್” ತೆಂಕನಿಡಿಯೂರು, ಮಲ್ಪೆಯಲ್ಲಿ ನಡೆಯಲಿದೆ.

ಶಾಖೆಯ ಉದ್ಘಾಟನೆಯನ್ನು ಶ್ರೀ ಕೆ. ರಘುಪತಿ ಭಟ್, ವಿಧಾನಸಭಾ ಸದಸ್ಯರು, ಉಡುಪಿ ಕ್ಷೇತ್ರ ನಡೆಸಲಿದ್ದು, ಆಶೀರ್ವಚನವನ್ನು ವಂ.ರೆ.ಫಾ| ಡೆನಿಸ್ ಡೆಸಾ, ಧರ್ಮ ಗುರುಗಳು, ಸೈಂಟ್ ಆನ್ಸ್ ಚರ್ಚ್, ತೊಟ್ಟಂ. ನೀಡುವರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಲೇರಿಯನ್ ಆರ್. ಫೆರ್ನಾಂಡಿಸ್, ಅಧ್ಯಕ್ಷರು, ಸಹಾಯ ಸೌಹಾರ್ದ ಸಹಕಾರಿ ನಿಯಮಿತ, ಸಂತೆಕಟ್ಟೆ ನಡೆಸಲಿರುವರು.

ಭದ್ರತಾ ಕೋಶ  ಉದ್ಘಾಟನೆಯನ್ನು ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಅಧ್ಯಕ್ಷರು ಉಡುಪಿ ಜಿಲ್ಲಾ ಕೋ.ಆ. ಯೂನಿಯನ್, ಉಡುಪಿ. ನಡೆಸಲ್ಲಿದ್ದು, ಗಣಕಯಂತ್ರ ಉದ್ಘಾಟನೆಯನ್ನು ಶ್ರೀ ಮಂಜುನಾಥ್ ಎಸ್. ಕೆ., ನಿರ್ದೇಶಕರು, ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ಸಂಘ, ಬೆಂಗಳೂರು ಮಾಡುವರು. ಹಾಗೂ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಪ್ರಮೋದ್ ಮಧ್ವರಾಜ್, ಮಾಜಿ ಸಚಿವರು, ಕರ್ನಾಟಕ ಸರಕಾರ, ಶ್ರೀ ಯಶ್ ಪಾಲ್ ಸುವರ್ಣ, ಅಧ್ಯಕ್ಷರು, ದ.ಕ. ಮತ್ತು ಉಡುಪಿ ಜಿಲ್ಲಾ ಮೀನುಗಾರರ ಫೆಡರೇಶನ್ (ರಿ.), ಮಂಗಳೂರು, ಶ್ರೀಮತಿ ಗಾಯತ್ರಿ, ಅಧ್ಯಕ್ಷರು, ತೆಂಕನಿಡಿಯೂರು ಗ್ರಾಮ ಪಂಚಾಯತ್, ಶ್ರೀ ಪ್ರಶಾಂತ್ ಹೆಬ್ಬಾರ್, ಸದಸ್ಯರು, ತೆಂಕನಿಡಿಯೂರು ಗ್ರಾಮ ಪಂಚಾಯತ್, ಶ್ರೀಮತಿ ವೆರೋನಿಕಾ  ಕರ್ನೇಲಿಯೋ, ಸಮಾಜ ಸೇವಕರು, ಉಡುಪಿ., ಶ್ರೀ ಪ್ರಶಾಂತ್ ಶೆಟ್ಟಿ, ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬೆಳ್ಕಳೆ., ಶ್ರೀ ಕೃಷ್ಣಮೂರ್ತಿ ಆಚಾರ್ಯ, ಸಮಾಜ ಸೇವಕರು,ಕಿನ್ನಿಮೂಲ್ಕಿ. ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.