ಪೇಜಾವರ ಮಠದಿಂದ 500 ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಉಡುಪಿ: ಉಡುಪಿ ಪೇಜಾವರ ಮಠದ ವತಿಯಿಂದ  ಕೊರೊನಾ ಲಾಕ್ ಡೌನ್ ನಿಂದ ನಿರಾಶ್ರಿತರಾದ 500 ಬಡ ಕೂಲಿ ಕಾರ್ಮಿಕರ ಕುಟುಂಬಗಳಿಗೆ ತಲಾ ಒಂದು ಸಾವಿರ ಮೌಲ್ಯದ ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ಶುಕ್ರವಾರ ವಿತರಿಸಲಾಯಿತು.
ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರ ಅನುಗ್ರಹದೊಂದಿಗೆ ಶಾಸಕ ಕೆ. ರಘುಪತಿ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಠದ ದಿವಾನರಾದ ಎಂ ರಘುರಾಮಾಚಾರ್ಯ, ಸುಬ್ರಹ್ಮಣ್ಯ ಭಟ್, ಇಂದುಶೇಖರ್, ಜಿ. ವಾಸುದೇವ ಭಟ್ ಮಹೇಶ ಕುಲಕರ್ಣಿ‌, ಸಂತೋಷ್  ಮೊದಲಾದವರು ಉಪಸ್ಥಿತರಿದ್ದರು .
ರೋಹನ್ ಬಾರಿತ್ತಾಯ, ಪ್ರಣವ್ ಆಚಾರ್ಯ, ಪ್ರಶಾಂತ್ ಭಟ್ ಪೆರಂಪಳ್ಳಿ,ಆಕಾಶ್, ಡೆನಿಸ್ ಡಿಸೋಜ, ನರಸಿಂಹ, ಸುಧೀಂದ್ರ, ಬಾಲಕೃಷ್ಣ ಭಟ್, ರಾಘವೇಂದ್ರ ಭಟ್, ಅನಿರುದ್ಧ ಭಟ್, ನಾಗರಾಜ ಭಟ್, ಶಶಾಂಕ್ ಶಿವತ್ತಾಯ, ಗುರುಮೂರ್ತಿ ಭಟ್ ಹಾಗೂ ಮಠದ ವಿದ್ಯಾರ್ಥಿಗಳು, ಸಿಬ್ಬಂದಿ ಕಿಟ್ ತಯಾರಿಸುವಲ್ಲಿ‌ ಸಹಕರಿಸಿದರು.