ಪಾನ್ ಮಸಾಲಾ ವಿವಾದ: ಶಾರುಖ್, ಅಜಯ್, ಟೈಗರ್‌ಗೆ ಸದ್ಯಕ್ಕಿಲ್ಲ ರಿಲೀಫ್ !ಅರ್ಜಿ ವಜಾ ಮಾಡಿದ ಹೈಕೋರ್ಟ್!

ನವದೆಹಲಿ: ಪಾನ್ ಮಸಾಲಾ ಜಾಹೀರಾತು ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ನೀಡಿದ್ದ ಶೋಕಾಸ್ ನೋಟಿಸ್‌ಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಪೀಠವು ಪ್ರಕರಣದ ವಿಚಾರಣೆ ನಡೆಸಿ, ಈ ವಿಷಯವು ದೆಹಲಿ ಹೈಕೋರ್ಟ್‌ನ ಪ್ರಾದೇಶಿಕ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದೆ.

ಅರ್ಜಿ ಸಲ್ಲಿಸಿದ್ದು ನಟರಲ್ಲ!

ನೋಟಿಸ್‌ಗಳನ್ನು ರದ್ದುಗೊಳಿಸುವಂತೆ ನಟರು ಸ್ವತಃ ಅರ್ಜಿ ಸಲ್ಲಿಸಿರಲಿಲ್ಲ. ವಿಮಲ್ ಇಲಾಯ್ಚಿ ಉತ್ಪನ್ನದ ತಯಾರಿಕಾ ಸಂಸ್ಥೆ ಪಿಬಿ ಆಗ್ರೋ ಎಲ್‌ಎಲ್‌ಪಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಮಹಾರಾಷ್ಟ್ರ FDA ತನ್ನ ಬ್ರಾಂಡ್ ಅಂಬಾಸಿಡರ್‌ಗಳಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ನೋಟಿಸ್ ನೀಡಿರುವುದರಿಂದ ಕಂಪನಿಯ ವ್ಯವಹಾರದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸಂಸ್ಥೆ ವಾದಿಸಿತ್ತು.

ನೋಟಿಸ್‌ನಲ್ಲಿ ಏನಿತ್ತು?

ಮಹಾರಾಷ್ಟ್ರದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾ ಉತ್ಪನ್ನಗಳ ಮೇಲೆ ನಿಷೇಧವಿದೆ. ಆದರೆ, ‘ವಿಮಲ್ ಇಲಾಯ್ಚಿ’ ಹೆಸರಿನ ಮೂಲಕ ನಿಷೇಧಿತ ಪಾನ್ ಮಸಾಲಾವನ್ನು ಪರೋಕ್ಷವಾಗಿ ಪ್ರಚಾರ ಮಾಡಲಾಗುತ್ತಿದೆ ಎಂದು ಮಹಾರಾಷ್ಟ್ರ FDA ಆರೋಪಿಸಿತ್ತು.

ಈ ಹಿನ್ನೆಲೆಯಲ್ಲಿ ಮೂವರು ನಟರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ಜಾಹೀರಾತು ಪ್ರಚಾರವನ್ನು ನಿಲ್ಲಿಸುವುದು, ಸಾಮಾಜಿಕ ಜಾಲತಾಣಗಳಲ್ಲಿರುವ ಸಂಬಂಧಿತ ಪ್ರಚಾರದ ವಿಷಯಗಳನ್ನು ತೆಗೆದುಹಾಕುವುದು ಹಾಗೂ ಜಾಹೀರಾತು ಒಪ್ಪಂದದ ವಿವರಗಳೊಂದಿಗೆ 15 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಲಾಗಿತ್ತು.

ಕಂಪನಿಯ ವಾದ ತಿರಸ್ಕಾರ

ವಿಮಲ್ ಪಾನ್ ಮಸಾಲಾವನ್ನು 2001ರಿಂದ ಮಹಾರಾಷ್ಟ್ರದಲ್ಲಿ ತಯಾರಿಸುವುದಾಗಲಿ ಮಾರಾಟ ಮಾಡುವುದಾಗಲಿ ಮಾಡುತ್ತಿಲ್ಲ. ಹೀಗಾಗಿ FDA ನೀಡಿರುವ ನೋಟಿಸ್ ಕಾನೂನುಬಾಹಿರ ಎಂದು ಪಿಬಿ ಆಗ್ರೋ ಎಲ್‌ಎಲ್‌ಪಿ ವಾದಿಸಿತ್ತು.

ಆದರೆ, ಈ ಅರ್ಜಿಯನ್ನು ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್‌ಗೆ ಪ್ರಾದೇಶಿಕ ಅಧಿಕಾರವಿಲ್ಲ ಎಂದು ಹೇಳಿ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ. ಹೀಗಾಗಿ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಈ ಹಂತದಲ್ಲಿ ಯಾವುದೇ ನ್ಯಾಯಾಲಯದ ರಿಲೀಫ್