ದಾಸನ ಬಿಡುತ್ತಿಲ್ಲ ಸಂಕಷ್ಟ! ಮಾಫಿ ಸಾಕ್ಷಿ ಶಾಕ್ ನಂತರ ದರ್ಶನ್ಗೆ ಈಗ ಡಬಲ್ ಶಾಕ್, ಅಷ್ಟಕ್ಕೂ ಆಗಿದ್ದೇನು
ಈಗಾಗಲೇ ಮಾಫಿ ಸಾಕ್ಷಿ (Approver) ಶಾಕ್ನಲ್ಲಿರುವ ದರ್ಶನ್ಗೆ ಇನ್ನೊಂದು ಶಾಕ್ ಸಿಕ್ಕಿದೆ. ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದಂತೆ ಈಗಾಗಲೇ ಸಮಸ್ಯೆಯಲ್ಲಿರುವ ದರ್ಶನ್ಗೆ ಪ್ರದೋಷ್ನ (Pradosh) ಮಾಫಿ ಸಾಕ್ಷಿ ಟ್ವಿಸ್ಟ್ ದೊಡ್ಡ ತಲೆನೋವಾಗಿದೆ. ಇನ್ನೇನು ಹೇಳಿಕೆ ದಾಖಲಿಸಬೇಕು ಎನ್ನುವಷ್ಟರಲ್ಲಿ ಹೇಗೋ ಹೈಕೋರ್ಟ್ ಮೊರೆ ಹೋಗಿ ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲು ಸದ್ಯ ಮುಂದೂಡಲಾಗಿದೆ. ಆದರೆ ದಾಸನಿಗೆ ಸಂಕಷ್ಟ ಮುಗಿಯುತ್ತಿಲ್ಲ
ದಾಸನ ಬಿಡುತ್ತಿಲ್ಲ ಸಮಸ್ಯೆ
ದರ್ಶನ್ಗೆ ಯಾಕೋ ಸಮಸ್ಯೆಗಳೇ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ, ಒಂದೊಂದೇ ಚಾಲೆಂಜ್ ಎದುರಾಗುತ್ತಲೇ ಇದೆ. ಮಾಫಿ ಸಾಕ್ಷಿಗೆ ಡಿ ಗ್ಯಾಂಗ್ ಢವ ಢವ ಅಂತಿರುವಾಗಲೇ ನಟ ದರ್ಶನ್ ಗೆ ಮಾಫಿ ಸಾಕ್ಷಿ ಶಾಕ್ ನಡುವೆ ಮತ್ತೊಂದು ಶಾಕ್ ಸಿಕ್ಕಿದೆ.
ನಟ ದರ್ಶನ್ನಿಂದ ಮತ್ತಿಬ್ಬರು ಆರೋಪಿಗಳು ದೂರ ದೂರ ಎನ್ನುವ ಹಾಗಾಗಿದೆ. ಚಿತ್ರದುರ್ಗ ಜಿಲ್ಲಾ ಜೈಲ್ಲಿಗೆ ವರ್ಗಾವಣೆ ಮಾಡುವಂತೆ ಕೋರ್ಟ್ಗೆ ಇಬ್ಬರು ಮನವಿ ಮಾಡಿದ್ದಾರೆ.















