ಕಾರ್ಕಳ: ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಪ್ರಯುಕ್ತ ಕಾರ್ಕಳದಲ್ಲಿ ಸಿಐಟಿಯು ನೇತ್ರತ್ವದಲ್ಲಿ ಮೇ ದಿನಾಚರಣೆ ಆಚರಣೆ ಬಂಡಿಮಠ ಬಸ್ ನಿಲ್ದಾಣ ಬಳಿ ನಡೆಸಲಾಯಿತು.
ಸಭೆಯನ್ನು ಉದ್ದೇಶಿಸಿ ಸಿಐಟಿಯು ಉಡುಪಿ ಜಿಲ್ಲಾ ಅಧ್ಯಕ್ಷ ರಾದ ಶಶಿಧರ್ ಗೊಲ್ಲ ಮಾತನಾಡಿದರು. ಕಾರ್ಕಳ ತಾಲೂಕು ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷರಾದ ಸುನೀತಾ ಶೆಟ್ಟಿ, ಲೆಮಿನಾ ಫೌಂಡ್ರಿಸ್ ಯೂನಿಯನ್ ಅಧ್ಯಕ್ಷ ರಾದ ಮೋಹನ್ ಚಂದ್ರ,ಕಟ್ಟಡ ಸಂಘದ ಮುಖಂಡರಾದ ನಾಗೇಶ್ ಮತ್ತು ಪುಷ್ಪ, ಅಕ್ಷರದಾಸೋಹ ಸಂಘಟನೆಯ ಜಯಶ್ರೀ ಉಪಸ್ಥಿತರಿದ್ದರು

















