ಉಡುಪಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಆಗುತ್ತಿರುವ ಅತಿವೃಷ್ಟಿ ಕಡಿಮೆ ಮಾಡುವುದಕ್ಕಾಗಿ ಸಂಪ್ರದಾಯದಂತೆ ಉಡುಪಿ ರಥಬೀದಿಯಲ್ಲಿರುವ ಅನಂತೇಶ್ವರ ದೇವಾಲಯದಲ್ಲಿ ಚಿತ್ರಾನ್ನ ಸೇವೆ ನಡೆಸಲಾಯಿತು.
ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ನಡೆದ ಈ ಸೇವೆಯ ಸಂದರ್ಭದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಆಗಮಿಸಿ, ಅನಂತೇಶ್ವರ ದೇವರಿಗೆ ವಿಶೇಷ ಪೂಜೆ ನೆರೆವೇರಿಸಿ, ಪ್ರಾರ್ಥನೆ ಸಲ್ಲಿಸಿದರು.
![](https://udupixpress.com/wp-content/uploads/2024/08/IMG_20240806_154408-1024x558.jpg)
ನಂತರ ಮಾತನಾಡಿದ ಶ್ರೀಗಳು, ಅತಿವೃಷ್ಟಿಯಿಂದ ನಾನಾ ರೀತಿಯ ಅನಾಹುತಗಳು ನಾಡಿನಾದ್ಯಂತ ಸಂಭವಿಸುತ್ತಿವೆ. ಅವುಗಳನ್ನೆಲ್ಲಾ ಪರಿಹರಿಸಿ, ಜನರಿಗೆ ನೆಮ್ಮದಿಯನ್ನು ನೀಡುವಂತೆ ಅನಂತೇಶ್ವರನಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.
ಭಂಡಾರಿಕೇರಿ ಮಠದ ಶ್ರೀ ವಿದ್ವೇಶ ತೀರ್ಥ ಶ್ರೀಪಾದರು ಮತ್ತಿತರರು ಉಪಸ್ಥಿತರಿದ್ದರು.
![](https://udupixpress.com/wp-content/uploads/2024/08/IMG_20240806_154430-1024x558.jpg)
![](https://udupixpress.com/wp-content/uploads/2024/08/IMG_20240806_154442-1024x563.jpg)
![](https://udupixpress.com/wp-content/uploads/2024/08/IMG_20240806_154459-1024x558.jpg)