ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನದ 94ನೇ ಭಜನಾ ಸಪ್ತಾಹ ಮಂಗಲೋತ್ಸವ ಸಂಪನ್ನ

ಕಲ್ಯಾಣಪುರ: ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 94ನೇ ಭಜನಾ ಸಪ್ತಾಹ ಮಂಗಲೋತ್ಸವ ಆದಿತ್ಯವಾರ ಸಂಪನ್ನಗೊಂಡಿತು. ದೇವಳದ ಆಡಳಿತ ಮೊಕ್ತೇಸರ ಅನಂತ ಪದ್ಮನಾಭ ಕಿಣಿಯವರ ಮಾರ್ಗದರ್ಶನದಲ್ಲಿ 1 ವಾರಗಳ ಕಾಲ ಊರ ಪರವೂರ ಸಂತ ಮಂಡಳಿ ಸಹಕಾರದೊಂದಿಗೆ ಅಹೋರಾತ್ರಿ ಭಜನೆ ಜರುಗಿತು. ದೇವಳದ ಪ್ರಧಾನ ಅರ್ಚಕ ಜಯದೇವ ಭಟ್ ಮತ್ತು ಗಣಪತಿ ಭಟ್ ಧಾರ್ಮಿಕ ಪೂಜಾ ವಿಧಾನಗಳನ್ನು ನೆರವೇರಿಸಿದರು.

ಭಜನಾ ಸಮಿತಿ ಅಧ್ಯಕ್ಷ ಕೆ ತುಳಸೀದಾಸ್ ಕಿಣಿ, ಉಪಾಧ್ಯಕ್ಷ ಸೀತಾರಾಮ್ ಭಟ್ ಅರವಿಂದ ಬಾಳಿಗಾ, ದತ್ತತ್ರೇಯ ಕಿಣಿ, ವಿನೋದ್ ಕಾಮತ್ , ಲಕ್ಷ್ಮೀಶ್ ಭಟ್, ಲಕ್ಷ್ಮೀನಾರಾಯಣ ನಾಯಕ್, ವಿದ್ಯಾಧರ್ ಕಿಣಿ , ಶ್ರೀನಿವಾಸ ಮಲ್ಯ, ಶಿವಾನಂದ ಕಿಣಿ, ಭಜನಾ ಸಮಿತಿಯ ವಿವಿಧ ಸದಸ್ಯರು, ಜಿ ಎಸ್ ಬಿ ಸಭಾ ಸದಸ್ಯರು ಉಪಸ್ಥಿತರಿದ್ದರು.

ಮಂಗಲೋತ್ಸವ ಅಂಗವಾಗಿ ಪೇಟೆ ಉತ್ಸವ, ಪಲ್ಲಕಿ ಉತ್ಸವ, ಭಕ್ತರೂ ಮಡೆ ಸ್ನಾನ ( ಉರುಳುಸೇವೆ ) ಸಮರ್ಪಿಸಿದರು. ಓಕುಳಿ ಸಂಭ್ರಮದಲ್ಲಿ ಯುವಕರು ಬಣ್ಣದಾಟವಾಡಿದರು. ಶ್ರೀ ದೇವರಿಗೆ ಸಮರ್ಪಿಸಿದ ವಸ್ತುಗಳನ್ನು ಏಲಂ ಮಾಡಲಾಯಿತು. ಮಹಾಪೂಜೆ ಬಳಿಕ ಮಹಾ ಸಮಾರಾಧನೆಯಲ್ಲಿ ನೂರಾರು ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು.