ಸಿಂಧೂರ ಕಲಾವಿದೆರ್ ಕಾರ್ಲ ನಾಟಕ ತಂಡದ 6ನೇ ವರ್ಷಾಚರಣೆ: ಕಾರ್ಕಳ ಸುರಕ್ಷಾ ಸೇವಾಶ್ರಮಕ್ಕೆ ಅಕ್ಕಿ, ದಿನಸಿ ಸಾಮಗ್ರಿ ವಿತರಣೆ

ಕಾರ್ಕಳ: ಸಿಂಧೂರ ಕಲಾವಿದೆರ್ ಕಾರ್ಲ ಇದರ 6ನೇ ವರ್ಷಾಚರಣೆಯ ಪ್ರಯುಕ್ತ ತಂಡದ ಸಾರಥಿ ಲೀಲಾವತಿ ಪೊಸಲಾಯಿ ಅವರ ನೇತೃತ್ವದಲ್ಲಿ ಕಾರ್ಕಳದ ಸುರಕ್ಷಾ ಸೇವಾಶ್ರಮಕ್ಕೆ ನಾಟಕ ತಂಡದ ಸದಸ್ಯರು ಮತ್ತು ದಾನಿಗಳ ಸಹಾಯದಿಂದ ಅಕ್ಕಿ ಮತ್ತು ದಿನಸಿ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು.

ಆಶ್ರಮಕ್ಕೆ ಭೇಟಿ ನೀಡಿದ ನಾಟಕ ತಂಡದ ಸದಸ್ಯರು ದಿನಸಿ ಸಾಮಗ್ರಿ ವಿತರಿಸಿದರು. ಬಳಿಕ ಆಶ್ರಮದ ಮುಖ್ಯಸ್ಥೆ ಆಯಿಶಾ ಅವರನ್ನು ತಂಡದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಂಡದ ಹಿರಿಯ ನಟ ರವೀಂದ್ರ ಶಾಂತಿ ಪುಲ್ಕೇರಿ, ಸಂಚಾಲಕ ಜೇರಾಲ್ಡ್ ಡಿಸಿಲ್ವಾ ಮಿಯ್ಯಾರು, ಮಹಾ ಪೋಷಕರಾದ ಅಶೋಕ್ ಮೊಯಿಲಿ ಪೊಸಲಾಯಿ, ಮೋಹನ್ ದೇವಾಡಿಗ ಕಾರ್ಕಳ, ಅನಿಲ್ ಕಾಬೆಟ್ಟು, ಹಮೀದ್ ಮಿಯ್ಯಾರು, ತಾರಾನಾಥ್ ಬೊಳ, ವಿಠ್ಠಲ್ ಅಮೀನ್ ಪುಲ್ಕೇರಿ, ರಾಜೇಶ್ ದಾನಶಾಲೆ ಮತ್ತು ತಂಡದ ಎಲ್ಲಾ ಸದಸ್ಯರು ಇದ್ದರು. ಸಂದೀಪ್ ಬಾರಾಡಿ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ನೆಲ್ಲಿಕಟ್ಟೆ ವಂದಿಸಿದರು.