ಸಣ್ಣ ಪುಟ್ಟ ಸಮಸ್ಯೆಗಳಿಗೂ ಮದ್ದು ತಗೊಳ್ಳುವ ಅಭ್ಯಾಸ ಇದ್ರೆ ಬಿಟ್ಟು ಬಿಡಿ: ರಾಜ್ಯದಲ್ಲೀಗ ಕಳಪೆ ಔಷಧಗಳದ್ದೇ ಸದ್ದು,98 ಕಳಪೆ ಗುಣಮಟ್ಟದ ಔಷಧ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕಳಪೆ ಗುಣಮಟ್ಟದ ಔಷಧಗಳ ಪೂರೈಕೆ ಆತಂಕ ಮೂಡಿಸಿದ್ದು, 2021ರಿಂದ 2026ರ ಆಗಸ್ಟ್‌ವರೆಗೆ ಒಟ್ಟು 98 ಔಷಧಗಳು ನಿಗದಿತ ಗುಣಮಟ್ಟದ ಮಾನದಂಡ (NSQ) ಪರೀಕ್ಷೆಯಲ್ಲಿ ವಿಫಲವಾಗಿವೆ. ಮಾತ್ರೆ, ಸಿರಪ್, ಟಾನಿಕ್ ಸೇರಿದಂತೆ ವಿವಿಧ ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿರುವುದು ಬೆಳಕಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆಯಾದ ಕೆಲವು ಔಷಧಗಳಲ್ಲೂ ಗುಣಮಟ್ಟದ ಲೋಪ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಪೂರೈಕೆಯಲ್ಲಿ 26 ಔಷಧ ಕಂಪನಿಗಳ ಲೋಪ ದಾಖಲಾಗಿದ್ದು, ಈ ಪೈಕಿ ಕೇವಲ 6 ಕಂಪನಿಗಳ ವಿರುದ್ಧ ಮಾತ್ರ […]

ಮಣಿಪಾಲದ ಎಂಎಸ್‌ಡಿಸಿಯಲ್ಲಿ AI ಆಧಾರಿತ ಆಫೀಸ್ ಆಟೊಮೇಷನ್ ತರಬೇತಿ, ಉದ್ಯೋಗಾವಕಾಶ ಪಡೆಯಲು ಇದು ಬೆಸ್ಟ್ ಟ್ರೈನಿಂಗ್! ಟ್ರೈ ಮಾಡಿ

ಮಣಿಪಾಲ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ಕಚೇರಿ ಕೆಲಸಗಳನ್ನು ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸುವ ಕೌಶಲ್ಯಗಳನ್ನು ಕಲಿಯಲು ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವತಿಯಿಂದ ‘Office Automation Using AI Tools’ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ತರಬೇತಿಯಲ್ಲಿ MS Word, MS Excel ಮತ್ತು MS PowerPoint ಬಳಕೆಯ ಜೊತೆಗೆ ವಿವಿಧ AI ಪರಿಕರಗಳ ಸಮನ್ವಯ, ಡೇಟಾ ವಿಶ್ಲೇಷಣೆ ಹಾಗೂ ಒಳನೋಟಗಳ ಸೃಷ್ಟಿ, ಡಾಕ್ಯುಮೆಂಟ್ ವಿನ್ಯಾಸ, ಪ್ರೆಸೆಂಟೇಶನ್ ಸುಧಾರಣೆ, ಸಂವಹನ ಮತ್ತು ಪ್ರಸ್ತುತಿ […]

ನೇಪಾಳ ಪ್ರವಾಹ: ಸಾವಿನ ಸಂಖ್ಯೆ 392ಕ್ಕೆ ಏರಿಕೆ,1,500ಕ್ಕೂ ಅಧಿಕ ಮಂದಿ ನಾಪತ್ತೆ

ಕಠ್ಮಂಡು: ಕಳೆದ 30 ವರ್ಷಗಳಲ್ಲೇ ಅತ್ಯಂತ ಭೀಕರ ಪ್ರವಾಹಕ್ಕೆ ನೇಪಾಳ ತತ್ತರಿಸಿದ್ದು, ಜಲಪ್ರಳಯದಲ್ಲಿ ಸಾವಿನ ಸಂಖ್ಯೆ 392ಕ್ಕೆ ಏರಿಕೆಯಾಗಿದೆ. 1,500ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. Nepal ಬುಧವಾರ (ಆ.6) ಸಂಭವಿಸಿದ ಭೀಕರ ಪ್ರವಾಹದಿಂದ ದೇಶಾದ್ಯಂತ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಚಿತ್ರಾನ್, ನವಲ್ಪರಾಸಿ, ಧಾಡಿಂಗ್, ರಸುವಾ ಮತ್ತು ನುನಾಕೋಟ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಸಾವುನೋವು ವರದಿಯಾಗಿದೆ. ಪ್ರವಾಹದಲ್ಲಿ ನಾಪತ್ತೆಯಾಗಿರುವವರಿಗಾಗಿ ನೇಪಾಳದ ಸೇನೆ ಹಾಗೂ ರಕ್ಷಣಾ ಪಡೆಗಳು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಪ್ರವಾಸಕ್ಕೆ ತೆರಳಿದ್ದ […]