ಮಣಿಪಾಲ ಡಾ.ಟಿಎಂಎ ಪೈ ಪಾಲಿಟೆಕ್ನಿಕ್ ನಲ್ಲಿ ವಿವಿಧ ಕೋರ್ಸ್’ಗಳಿಗೆ ಪ್ರವೇಶಾತಿ ಆರಂಭ.

ಮಣಿಪಾಲ: ಎಐಸಿಟಿಇ ಹೊಸದಿಲ್ಲಿಯಿಂದ ಮಾನ್ಯತೆ ಪಡೆದ, ರಾಜ್ಯ ಡಿಟಿಇ ಅಂಗ ಸಂಸ್ಥೆಯಾದ ಈಶ್ವರ ನಗರ ಎಂಐಟಿ ಒಳ ರಸ್ತೆಯಲ್ಲಿರುವ ಡಾ.ಟಿಎಂಎ ಪೈ ಪಾಲಿಟೆಕ್ನಿಕ್ ನಲ್ಲಿ ವಿವಿಧ ಕೋರ್ಸ್’ಗಳಿಗೆ ಪ್ರವೇಶಾತಿ ಆರಂಭಗೊಂಡಿದೆ. ಇಲ್ಲಿ ಆಟೋಮೊಬೈಲ್ ಇಂಜಿನಿಯರಿಂಗ್ (ಕೌಶಲ ಪ್ರಮಾಣ ಪತ್ರದೊಂದಿಗೆ) ನಡಿ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನ ತಂತ್ರಜ್ಞಾನ, ಆಟೋಮೇಶನ್ ಆ್ಯಂಡ್ ರೋಬೋಟಿಕ್ಸ್, ಆಟೋಮೊಬೈಲ್ ಸರ್ವಿಸಿಂಗ್, ಸಿವಿಲ್ ಇಂಜಿನಿಯರಿಂಗ್ (ಇಂಟೀರಿಯರ್ ಡಿಸೈನ್ ಅಂಡ್ ಡ್ರೋನ್ ತಂತ್ರಜ್ಞಾನದಲ್ಲಿ ಕೌಶಲ ಪ್ರಮಾಣ ಪತ್ರ) – ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಸ್ಟ್ರೀಮ್ ನಡಿ […]
ಭಾರತೀಯ ವಿದ್ಯಾರ್ಥಿಗೆ ಕೋಳ: ಕಾನೂನು ಉಲ್ಲಂಘನೆ ಸಹಿಸುವುದಿಲ್ಲ; ಅಮೆರಿಕ

ನವದೆಹಲಿ: ಅಮೆರಿಕವು ಕಾನೂನುಬದ್ಧ ಪ್ರಯಾಣಿಕರನ್ನು ಸ್ವಾಗತಿಸುತ್ತಲೇ ಇದೆ. ಆದರೆ, ಅಕ್ರಮ ಪ್ರವೇಶ ಮತ್ತು ವೀಸಾಗಳ ದುರುಪಯೋಗವನ್ನು ಸಹಿಸಲು ಸಾಧ್ಯವಿಲ್ಲ ಎಂದು ಇಲ್ಲಿನ ಅಮೆರಿಕ ರಾಯಭಾರ ಕಚೇರಿ ಮಂಗಳವಾರ ತಿಳಿಸಿದೆ.ರಾಯಭಾರ ಕಚೇರಿಯು ಎಕ್ಸ್ ಪೋಸ್ಟ್ ಮೂಲಕ ಈ ಬಗ್ಗೆ ಸಂಕ್ಷಿಪ್ತ ಹೇಳಿಕೆ ಹಂಚಿಕೊಂಡಿದೆ. ‘ಅಮೆರಿಕವು ದೇಶಕ್ಕೆ ಕಾನೂನುಬದ್ಧ ಪ್ರಯಾಣಿಕರನ್ನು ಸ್ವಾಗತಿಸುತ್ತಲೇ ಇದೆ. ಅಕ್ರಮ ಪ್ರವೇಶ, ವೀಸಾಗಳ ದುರುಪಯೋಗ ಅಥವಾ ಅಮೆರಿಕ ಕಾನೂನಿನ ಉಲ್ಲಂಘನೆಯನ್ನು ನಾವು ಸಹಿಸಲು ಸಾಧ್ಯವಿಲ್ಲ. ಅಂತಹರಿಗೆ ಅಮೆರಿಕ ಪ್ರವೇಶಿಸುವ ಯಾವುದೇ ಹಕ್ಕು ಇರುವುದಿಲ್ಲ’ ಎಂದು ಅದು […]
ಜೂ.16 ರಿಂದ 20ರ ವರೆಗೆ ‘ನಂದಿ ಹಿಲ್ಸ್’ ಗೆ ಪ್ರವಾಸಿಗರ ಪ್ರವೇಶ ನಿರ್ಬಂಧ

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿ ಗಿರಿಧಾಮದಲ್ಲಿ ಜೂ.19 ರಂದು ರಾಜ್ಯ ಸರ್ಕಾರದ ಸಚಿವ ಸಂಪುಟದ 2025ನೇ ಸಾಲಿನ 13ನೇ ಸಭೆಯನ್ನು ಚಿಕ್ಕಬಳ್ಳಾಪುರ ಹಮ್ಮಿಕೊಂಡಿರುವುದರ ಜೂನ್ 16 ರ ಸಂಜೆ 6 ಗಂಟೆಯಿಂದ ಜೂನ್ 20 ರ ಬೆಳಿಗ್ಗೆ 5 ಗಂಟೆಯವರೆಗೆ ಪ್ರವಾಸಿಗರಿಗೆ ಹಾಗೂ ವಾಹನಗಳ ಪ್ರವೇಶಕ್ಕೆ ನಿರ್ಬಂಧಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ. ರಾಜ್ಯ ಸಚಿವ ಸಂಪುಟ ಸಭೆಗೆ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಕರ್ನಾಟಕ ಸರ್ಕಾರದ ಸಚಿವ ಸಂಪುಟ ದರ್ಜೆಯ ಎಲ್ಲಾ ಮಂತ್ರಿಗಳು, ಶಾಸನಸಭಾ ಹಾಗೂ […]
ಮಣಿಪಾಲ ಮತ್ತು ಮಂಗಳೂರಿನ ಪ್ರಸಿದ್ಧ ಖಾಸಗಿ ಕಂಪೆನಿಯಲ್ಲಿ ಉದ್ಯೋಗವಕಾಶ.

ಉಡುಪಿ:ಮಣಿಪಾಲ ಮತ್ತು ಮಂಗಳೂರಿನ ಪ್ರಸಿದ್ಧ ಖಾಸಗಿ ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 🔸ಅಕೌಂಟೆಂಟ್ 4- ಪೋಸ್ಟ್🔸ಅಕೌಂಟ್ ಅಸಿಸ್ಟೆಂಟ್ 4- ಪೋಸ್ಟ್🔸ಡಾಟಾ ಎಂಟ್ರಿ -10 ಪೋಸ್ಟ್🔸ಬಿಲ್ಲಿಂಗ್ -10 ಪೋಸ್ಟ್🔸ಟೆಲಿಕಾಲರ್ 5- ಪೋಸ್ಟ್🔸ರಿಸೆಪ್ಷನಿಸ್ಟ್ -2 ಪೋಸ್ಟ್ ಮಾಹಿತಿಗಾಗಿ ಸಂಪರ್ಕಿಸಿ: 📞7019891796, 📞8050364397
ಬಂಟಕಲ್: ಶ್ರೀ ಮಧ್ವವಾದಿರಾಜ ವಿದ್ಯಾರ್ಥಿವೇತನ ಯೋಜನೆ: ಅರ್ಜಿ ಆಹ್ವಾನ

ಉಡುಪಿ:ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಪ್ರೋತ್ಸಾಹಿಸುವ ಯೋಜನೆಯಾಗಿ 2025-26ನೇ ಶೈಕ್ಷಣಿಕ ವರ್ಷಕ್ಕೆ ‘ಶ್ರೀ ಮಧ್ವವಾದಿರಾಜ ಎಂಬಿಎ ವಿದ್ಯಾರ್ಥಿ ವೇತನ’ ಎಂಬ ಹೊಸ ವಿದ್ಯಾರ್ಥಿವೇತನ ಆರಂಭಿಸಿದೆ. ಆಯ್ಕೆಯು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನಡೆಸಲಾಗುತ್ತದೆ. ವಿದ್ಯಾರ್ಥಿ 10ನೇ ತರಗತಿಯಿಂದ ಪದವಿ ತರಗತಿಯ ಅಂತಿಮ ಸೆಮಿಸ್ಟರ್ ವರೆಗೆ ಶೇ.75ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು. ವಾಣಿಜ್ಯ, ವ್ಯವಹಾರ ಆಡಳಿತ, ವಿಜ್ಞಾನ, ಎಂಜಿನಿಯರಿಂಗ್, ಕಲೆ ಮುಂತಾದ ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು […]