ಉಡುಪಿ: ವ್ಯಕ್ತಿ ನಾಪತ್ತೆ

ಉಡುಪಿ: ನಗರದ ಬಿಲ್ಡಿಂಗ್ ಒಂದರಲ್ಲಿ ಸೆಂಟ್ರಿ೦ಗ್ ಕೆಲಸ ಮಾಡಿಕೊಂಡಿದ್ದ ದೀಪಕ್ ನಿಶಾದ್ (26) ಎಂಬ ವ್ಯಕ್ತಿಯು ಮದುವೆ ನಿಶ್ಚಯವಾದ ಹಿನ್ನೆಲೆ, ಮದುವೆ ತಯಾರಿ ಮಾಡಿಕೊಳ್ಳುವ ಸಲುವಾಗಿ ಉಡುಪಿಯಿಂದ ತನ್ನ ಸ್ವಂತ ಊರಿಗೆ ಹೋಗುವುದಾಗಿ ತಿಳಿಸಿ ಹೋದವರು, ಈವರೆಗೂ ಊರಿಗೂ ಹೋಗದೇ, ಕೆಲಸದ ಸ್ಥಳಕ್ಕೂ ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 3 ಇಂಚು ಎತ್ತರ, ಗೋಧಿ ಮೈಬಣ್ಣ, ಹೊಂದಿದ್ದು, ಹಿಂದಿ ಹಾಗೂ ಭೋಜ್ಪುರಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಪಿ.ಐ ಮೊ.ನಂ: […]
ಬೆಳಿಗ್ಗೆ ಲೇಟಾಗಿ ತಿಂಡಿ ತಿನ್ನುವ ಅಭ್ಯಾಸ ನಿಮಗಿದ್ರೆ ಕೂಡಲೇ ಬಿಟ್ಟು ಬಿಡಿ, ಯಾಕೆ ಅನ್ನೋದನ್ನು ಒಮ್ಮೆ ಓದಿ

ಈಗೀಗ ಜೀವನಶೈಲಿ ಸಂಪೂರ್ಣ ಬದಲಾಗಿಬಿಟ್ಟಿದೆ. ಬೆಳಿಗ್ಗೆ ಎದ್ದವರೇ ಬ್ಯುಸಿಯಾಗಿಬಿಡುವ ಅದೆಷ್ಟೋ ಮಂದಿ ಸರಿಯಾಗಿ ತಿಂಡಿಯನ್ನೂ ತಿನ್ನದೇ ಆಫೀಸ್ ಕೆಲಸಕ್ಕೋ, ಮನೆ ಕೆಲಸಕ್ಕೋ ತೊಡಗುವುದು ಮಾಮೂಲು, ಆದ್ರೆ ಏನೂ ತಿನ್ನದೇ ಬೆಳಿಗ್ಗಿನ ಅದೆಷ್ಟೋ ಹೊತ್ತು ಹೊಟ್ಟೆ ಖಾಲಿಯಾಗಿರಿಸಿಕೊಳ್ಳುವವ ಜನರು ಹೆಚ್ಚಿದ್ದಾರೆ. ಅಂತವರಿಗೋಸ್ಕರವೇ ಈ ಮಾಹಿತಿ. ಬೆಳಿಗ್ಗೆ ತುಂಬಾ ಹೊತ್ತಿನವರೆಗೂ ಏನೂ ತಿನ್ನದೇ ಇದೋದ್ರಿಂದ ನಮ್ಮ ಆರೋಗ್ಯದ ಮೇಲಾಗುವ ಗಂಭೀರ ಸಮಸ್ಯೆಗಳು ಅಷ್ಟಿಷ್ಟಲ್ಲ. ಸಾಮಾನ್ಯ ಮಹಿಳೆಯರು ಬೆಳಿಗ್ಗೆ ಎದ್ದಾಗಿನಿಂದ ಸರಿಯಾಗಿ ತಿಂಡಿ ತಿನ್ನದೇ ಮಕ್ಕಳಿಗೆ ಸ್ಕೂಲ್ ಗೆ ಕಳಿಸೋದ್ರಲ್ಲಿ, ಅವರಿವರ […]
ಕೇಸರಿ ಬಟ್ಟೆಯ ಕೊಲಾಜ್ ನಲ್ಲಿ ಮೂಡಿಬಂದ ಶ್ರೀರಾಮ

ಉಡುಪಿ: ಶ್ರೀರಾಮ ನವಮಿಯ ಪ್ರಯುಕ್ತ ಕಾರ್ಕಳ ಬೈಲೂರಿನ ತ್ರಿವರ್ಣ ಆರ್ಟ್ ಕ್ಲಾಸಸ್ ಹಾಗೂ ಕರಾವಳಿ ಯೂತ್ ಕ್ಲಬ್ ಉಡುಪಿ ಸಹಯೋಗದ ವತಿಯಿಂದ ಇಲ್ಲಿನ ಕಲಾ ತರಗತಿಯ ವಿದ್ಯಾರ್ಥಿಗಳು ರಚಿಸಿರುವ 200 ಅಡಿ ವಿಸ್ತೀರ್ಣದ ಕಪ್ಪು ಮತ್ತು ಕೇಸರಿ ಬಟ್ಟೆಯಲ್ಲಿ ಅರಳಿದ ಶ್ರೀ ರಾಮನ ಅದ್ಭುತ ಕಲಾಕೃತಿಯು ಅನಾವರಣಗೊಂಡಿತು. ತುಳು ರಂಗಭೂಮಿಯ ಕಲಾವಿದ, ನಿರ್ದೇಶಕ ಹಾಗೂ ಚಲನಚಿತ್ರ ನಟ, ಸಂಭಾಷಣೆಕಾರ ಪ್ರಸನ್ನ ಶೆಟ್ಟಿ ಬೈಲೂರು, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ವಿಕ್ರಂ ಹೆಗ್ಡೆ, ಹಿಂದೂ ಜಾಗರಣ ವೇದಿಕೆಯ ಮುಖಂಡ […]
ಎ.18ರಂದು ಯಕ್ಷಗಾನ ಸಿನಿಮಾ “ವೀರ ಚಂದ್ರಹಾಸ’ ರಾಜ್ಯಾದ್ಯಂತ ಬಿಡುಗಡೆ- ರವಿ ಬಸ್ರೂರು

ಉಡುಪಿ: ಯಕ್ಷಗಾನವನ್ನು ವಿಸ್ತಾರಗೊಳಿಸುವ ಉದ್ದೇಶದೊಂದಿಗೆ ಪರಿಶ್ರಮ ತಂಡದ ನೇತೃತ್ವದಲ್ಲಿ ನಿರ್ಮಿಸಿರುವ ಬಹುನಿರೀಕ್ಷಿತ ‘ವೀರ ಚಂದ್ರಹಾಸ’ ಸಿನಿಮಾವನ್ನು ಎ.18ರಂದು ಏಕ ಕಾಲದಲ್ಲಿ ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಿನಿಮಾದ ನಿರ್ದೇಶಕ, ಸಂಗೀತ ನಿರ್ದೇಶಕ ರವಿ ಬಸ್ರೂರು ತಿಳಿಸಿದ್ದಾರೆ. ಕುಂಭಾಶಿಯ ಆನೆಗುಡ್ಡೆ ವಿನಾಯಕ ದೇವಸ್ಥಾನದ ವಠಾರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಚಿತ್ರದಲ್ಲಿ ಬಹುತೇಕ ಪಾತ್ರಗಳನ್ನು ವೃತ್ತಿಪರ ಯಕ್ಷಗಾನ ಕಲಾವಿದರೇ ನಿರ್ವಹಿಸಿದ್ದಾರೆ. ಸುಮಾರು 400ರಿಂದ 500 ಪಾತ್ರಧಾರಿಗಳು ಸಿನಿಮಾದ ದೃಶ್ಯಾವಳಿಗಳಲ್ಲಿ ಅಭಿನಯಿಸಿದ್ದಾರೆ. ಪ್ರಸಿದ್ಧ ಭಾಗವತರಾದ ಪಟ್ಲ, […]
ಇಂದ್ರಾಣಿ ಹೊಳೆ ಸಂಪೂರ್ಣ ಕಲುಷಿತ; ಭತ್ತ, ತರಕಾರಿ ಬೆಳೆಗೆ ಹಾನಿ

ಉಡುಪಿ: ಉಡುಪಿಯ ಮಣಿಪಾಲದ ಇಂದ್ರಾಣಿಯಲ್ಲಿ ಹುಟ್ಟಿ ನಗರದಲ್ಲಿ ಸಾಗಿ ಸಮುದ್ರ ಸೇರುವ ಇಂದ್ರಾಣಿ ತೀರ್ಥ ಹೊಳೆ ಸಂಪೂರ್ಣ ಕಲುಷಿತಗೊಂಡಿದೆ. ಉಡುಪಿ ನಗರ ಭಾಗದಲ್ಲಿ ಹೊಳೆ ಗೆ ಕಾಲುವೆ ಮತ್ತು ಚರಂಡಿಗಳು ಅಲ್ಲಲ್ಲಿ ಜೋಡಣೆ ಆಗುವುದರಿಂದ ಶುದ್ಧವಾಗಿ ಹರಿಯುತ್ತಿದ್ದ ಹೊಳೆ ಪೂರ್ಣ ಚರಂಡಿಯಂತಾಗಿದೆ. ಸುತ್ತಮುತ್ತದ ನೂರಾರು ಮನೆಗಳು, ಅಪಾರ್ಟ್ಮೆಂಟ್ ಗಳು ನಿರ್ಮಾಣವಾಗಿದ್ದು ನಗರದಲ್ಲಿ ಯಾವುದೇ ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದಿರುವ ಕಾರಣ ಶೌಚಾಲಯದ ನೀರನ್ನು ಹೊಳೆಗೆ ಬಿಡುತ್ತಿದ್ದಾರೆ. ಈ ಬಗ್ಗೆ ಹಲವು ಹೋರಾಟಗಳು ಜನಜಾಗ್ರತಿ ಕಾರ್ಯಕ್ರಮ ನಡೆದರೂ ಸುತ್ತಮುತ್ತ […]