೧ ರೂಪಾಯಿಯಲ್ಲಿ ಪಿ ಯು ವ್ಯಾಸಂಗ ಮಾಡುವ ಸದಾವಕಾಶ

ಪ್ರತೀ ವರ್ಷದಂತೆ ತ್ರಿಶಾ ಸಂಸ್ಥೆಯು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಒದಗಿಸುತ್ತಿದ್ದು, ಈ ಬಾರಿ ವಿನೂತನವಾಗಿ ಎಸ್.ಎಸ್. ಎಲ್. ಸಿ. ಯಲ್ಲಿ 615 ಕ್ಕಿಂತ ಹೆಚ್ಚಿನ ಅಂಕ ಗಳಿಸಿದವರಿಗೆ ಒಂದು ರೂಪಾಯಿಯ ವೆಚ್ಚದಲ್ಲಿ ಪಿ ಯು ಸಿ ಅಧ್ಯಯನ ಮಾಡುವ ಸುವರ್ಣಾವಕಾಶ ಒದಗಿಸಿದೆ. ಅದಲ್ಲದೆ 560 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಆಕರ್ಷಕ ವಿದ್ಯಾರ್ಥಿ ವೇತನ ಪಡೆಯುವ ಅವಕಾಶವಿದೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ತ್ರಿಶಾ ಸಂಸ್ಥೆ ಇತ್ತೀಚಿನ ಬದಲಾವಣೆಗಳ ಅನುಸಾರ ಗುಣಮಟ್ಟದ ಶಿಕ್ಷಣವನ್ನು […]

ಆಳ್ವಾಸ್ ಶಿಕ್ಷಣ ಸಂಸ್ಥೆ: ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ, ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರೌಢಶಾಲಾ ಎಸೆಸೆಲ್ಸಿ ಪರೀಕ್ಷೆಯ ಎಲ್ಲ 442 ಮಂದಿ ಉತ್ತೀರ್ಣರಾಗಿ ಶೇ. 100 ಫಲಿತಾಂಶ ದಾಖಲಾಗಿದೆ. 277 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು 51 ಮಂದಿ 600ಕ್ಕೂ ಹೆಚ್ಚು 15 ಮಂದಿ 610 ಕ್ಕೂ ಅಧಿಕ ಅಂಕ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮೆರೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಇಶಾನ್( 619), ಮನಿಷಾ ಎನ್ (618 ), ಮಾನ್ಯ ಎನ್.ಪೂಜಾರಿ (617), ಋತುರಾಜ್ […]

ಕೊಲ್ಲೂರು: ಯುವತಿಯೊಡನೆ ಸಂಪರ್ಕ ಬೆಳೆಸಿ ಅತ್ಯಾಚಾರ – ದೂರು ದಾಖಲು.

ಕೊಲ್ಲೂರು: ಜಿಲ್ಲೆಯ ಕೊಲ್ಲೂರು ಸಮೀಪ ಚಿತ್ತೂರು ನಿವಾಸಿ ಯುವತಿಯೊಡನೆ ಸಂಪರ್ಕ ಬೆಳೆಸಿ ಆಕೆಯನ್ನು ಅತ್ಯಾಚಾರ ಎಸಗಿದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಕೊಪ್ಪಳ ಮೂಲದ ಮಂಜುನಾಥ್‌ನನ್ನು ಬಂಧಿಸಿದ ಕೊಲ್ಲೂರು ಪೊಲೀಸ್‌ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಆತನಿಗೆ 15 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಯ ಫೋಟೋ ಬಳಸಿ ಬೆದರಿಕೆ ಒಡ್ಡಿದ ಬಗ್ಗೆ ಕೂಡ ದೂರಿನಲ್ಲಿ ಆಕೆ ವಿವರಿಸಿದ್ದಾರೆ.

ಕಾಪು: 11 ವರ್ಷದ ಬಾಲಕಿ ಮೃತ್ಯು.

ಕಾಪು: ಉಡುಪಿ ಕಾಪುವಿನ ಮಣಿಪುರ ಗ್ರಾಮದಲ್ಲಿ ಧಿಡೀರ್ ಅಸ್ವಸ್ಥಗೊಂಡು 11 ವರ್ಷದ ಬಾಲಕಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. 11 ವರ್ಷದ ಸಂದೇಶ್‌ ಅವರ ಪುತ್ರಿ ಧನ್ವಿ ಮೃತ ಬಾಲಕಿ. 4ನೇ ತರಗತಿ ಮುಗಿಸಿದ್ದ ಧನ್ವಿ ಪ್ರಸ್ತುತ ಶಾಲೆಗೆ ರಜೆಯಾಗಿರುವುದರಿಂದ ಮನೆಯಲ್ಲಿಯೇ ಇದ್ದಳು. ಮೇ.8ರಂದು ಮನೆ ಮಂದಿಯ ಜೊತೆ ಊಟ ಮಾಡಿ ಮಲಗಿದ್ದ ಬಾಲಕಿ ಧನ್ವಿಯು ಮೇ. 9ರಂದು ಬೆಳಗ್ಗಿ ನ ಜಾವ 3 ಗಂಟೆಯ ಸುಮಾರಿಗೆ ನಿದ್ರೆಯಿಂದ ಎದ್ದು ವಾಂತಿ ಮಾಡಲು ಆರಂಭಿಸಿದ್ದಾಳೆ. ಬಳಿಕ ಮನೆಯವರು […]

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ: ಶ್ರೀರಾಮನಾಮಜಪ ಅಭಿಯಾನ ಆರಂಭ

ಉಡುಪಿ: ಉಡುಪಿಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಗುರುಪೀಠಗಳಲ್ಲೊಂದಾದ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವರ್ಷದ ಆಚರಣೆ ಮತ್ತು ಸಮಾಜದ ಉದ್ಧಾರಕ್ಕಾಗಿ ಹಮ್ಮಿಕೊಂಡ, ಮಠಾಧಿಪತಿಗಳಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ಒಡೆಯರ್ ಸ್ವಾಮೀಜಿ ಅವರಿಂದ ಉಪದೇಶಿಸಲ್ಪಟ್ಟ ಶ್ರೀರಾಮನಾಮಜಪ ಅಭಿಯಾನವ ಮೇ.10 2024 ಅಕ್ಷಯ ತೃತೀಯದ ವಿಶೇಷ ದಿನದಂದು ಶ್ರೀದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ, ಶ್ರೀ ರಾಮದೇವರ ಭಾವ ಚಿತ್ರ ಮೆರವಣಿಗೆಯ ಮೂಲಕ ಶ್ರೀ ಸಚ್ಚಿದಾನಂದ ಸಭಾಗ್ರಹದಲ್ಲಿ ಶ್ರೀರಾಮನಾಮಜಪ ಪ್ರಾರಂಭಗೊಂಡಿತ್ತು. […]