“ದೇಶದ ಅಭಿವೃದ್ಧಿಯ ಹರಿಕಾರರಾಗೋಣ” – ನಿಟ್ಟೆಯಲ್ಲಿ ಶ್ರೀ ದೀಪಕ್ ವೋರಾ ಅವರ ಅತಿಥಿ ಉಪನ್ಯಾಸ

ಕಾರ್ಕಳ: ನಮ್ಮ ದೇಶವು ವಿಶ್ವದ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ. ಇದು ಸರ್ವರ ಕಠಿಣ ಪರಿಶ್ರಮ, ದೂರದರ್ಶಿತ್ವ ಚಿಂತನೆ, ಉತ್ತಮ ನಾಯಕತ್ವ ಮತ್ತು ಸಕಾಲಿಕ ನಿರ್ಣಯಗಳಿಂದ ಸಾಧ್ಯವಾಗಿದೆ. ವಿದೇಶಿ ವಿನಿಮಯ ಯೋಜನೆ, ವಿಶ್ವ ದರ್ಜೆಯ ಅಧೋರಚನೆ, ಅತ್ಯುತ್ತಮ ಶಿಕ್ಷಣ ನಮ್ಮ ದೇಶವನ್ನು ಇಂದು ಬಲಿಷ್ಠ ಶಕ್ತಿಯನ್ನಾಗಿಸಿದೆ. ನಮ್ಮ ದೇಶದ ನಾಗರೀಕತೆ ಇತಿಹಾಸದಲ್ಲಿ ಆರ್ಥಿಕ -ಮಿತ್ರತ್ವವನ್ನು ಸೃಷ್ಟಿಸಿದೆ. ಹಿಂದಿನ ವ್ಯವಸ್ಥೆ ಹಿಂದಕ್ಕೆ ಸರಿದು ಹೊಸ ಬದಲೀ ವ್ಯವಸ್ಥೆಯನ್ನು ನಾವು ಎಲ್ಲೆಂದರಲ್ಲಿ ಕಾಣುತ್ತಿದ್ದೇವೆ. ಜಗತ್ತಿನ ಅತ್ಯಂತ ದೊಡ್ಡ ಸ್ಟಾರ್ಟ್ […]

ಕೆ.ಎಂ.ಸಿ ಯಲ್ಲಿ ಖ್ಯಾತ ಸಂಧಿವಾತಶಾಸ್ತ್ರ ತಜ್ಞ ಡಾ. ಶಿವರಾಜ್ ಪಡಿಯಾರ್ ಮತ್ತು ಡಾ.ಪ್ರತ್ಯೂಷಾ ಮಣಿಕುಪ್ಪಂ ಪ್ರತೀ ಶುಕ್ರವಾರ ಸಮಾಲೋಚನೆಗೆ ಲಭ್ಯ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ತನ್ನ ಪರಿಣಿತ ಆರೋಗ್ಯ ತಜ್ಞರ ಸಮಿತಿಗೆ ಹೊಸ ತಜ್ಞರ ಸೇರ್ಪಡೆಯನ್ನು ಪ್ರಕಟಿಸಿದೆ. ಫೆಬ್ರವರಿ 02 ರಿಂದ, ಕೆಎಂಸಿ ಆಸ್ಪತ್ರೆ, ಅತ್ತಾವರ, ಮಂಗಳೂರು ಇಲ್ಲಿನ ಖ್ಯಾತ ಸಂಧಿವಾತಶಾಸ್ತ್ರ ತಜ್ಞರಾದ (ರುಮಟಾಲಜಿಸ್ಟ್ ) ಡಾ. ಶಿವರಾಜ್ ಪಡಿಯಾರ್ ಮತ್ತು ಡಾ.ಪ್ರತ್ಯೂಷಾ ಮಣಿಕುಪ್ಪಂ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸಮಾಲೋಚನೆಗಾಗಿ ಲಭ್ಯವಿರುತ್ತಾರೆ. ಅವರು ಪ್ರತಿ ಶುಕ್ರವಾರ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 2:00 ರವರೆಗೆ ಸಮಾಲೋಚನೆಗೆ ಲಭ್ಯವಿರುತ್ತಾರೆ. ವಿಶೇಷವಾಗಿ ಈ ಕೆಳಗಿನ ಯಾವುದೇ ರೋಗಲಕ್ಷಣ ಹೊಂದಿರುವವರು: ಗರ್ಭಾವಸ್ಥೆಯಲ್ಲಿ […]

ಗೌರಿಗದ್ದೆ ರಿಟ್ರೀಟ್: ಕೊಪ್ಪದಲ್ಲೊಂದು ಸಾಂಪ್ರದಾಯಿಕ ಹೋಂಸ್ಟೇ

ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಬಿಕ್ಕಾಲಿ ಕಾರಗದ್ದೆಯಲ್ಲಿ ಸಾಂಪ್ರದಾಯಿಕ ಹೋಂ ಸ್ಟೇ “ಗೌರಿಗದ್ದೆ ರಿಟ್ರೀಟ್” ಅಚ್ಚ ಹಸಿರಿನ ಬೆಟ್ಟಗಳು ಮತ್ತು ಮರಗಳಿಂದ ಸುತ್ತುವರೆದಿರುವ ಪ್ರಶಾಂತ ಸ್ಥಳವಾಗಿದೆ. ಸಾಂಪ್ರದಾಯಿಕ ಶೈಲಿಯ ಕೊಠಡಿಗಳು ವಿಶಾಲವಾಗಿದ್ದು ಸ್ವಚ್ಛ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟಿವೆ. ಅಧಿಕೃತ ಮಲನಾಡ್ ಶೈಲಿಯ ರುಚಿಕರ ವ್ಯಂಜನಗಳು ಲಭ್ಯವಿವೆ. ಸೇವೆಗೆ ಸಿದ್ದರಾಗಿರುವ ಸಿಬ್ಬಂದಿಗಳಿದ್ದು ಕುಟುಂಬ ಮತ್ತು ಸ್ನೇಹಿತರೊಂದಿಗೆ ವಿಶ್ರಾಂತಿ ವಾರಾಂತ್ಯವನ್ನು ಕಳೆಯಲು ಅತ್ಯುತ್ತಮ ಆಯ್ಕೆಯಾಗಿದೆ. ಮಾಹಿತಿಗಾಗಿ ಸಂಪರ್ಕಿಸಿ: 9448744638/ 94487 70338

ಕಾಪು: ಎರಡು ಬೈಕ್ ಗಳು ಮುಖಾಮುಖಿ ಢಿಕ್ಕಿ – ಓರ್ವ ಮೃತ್ಯು

ಕಾಪು: ಉಡುಪಿ ಜಿಲ್ಲೆಯ ರಾ.ಹೆ. 66ರ ಉಳಿಯಾರಗೋಳಿ ಕೋತಲಕಟ್ಟೆಯಲ್ಲಿ ಬೈಕ್ ಮತ್ತು ಬೈಕ್ ಮುಖಾ ಮುಖೀ ಢಿಕ್ಕಿ ಹೊಡೆದು ಕೊಂಡು ಓರ್ವ ಮೃತಪಟ್ಟು, ಇಬ್ಬರು ಸವಾರರು ಗಾಯಗೊಂಡ ಘಟನೆ ಸಂಭವಿಸಿದೆ. ಸಹಸವಾರ ಪಾಂಗಾಳ ದುರ್ಗಾ ವೆಲ್ ರಿಂಗ್‌ ವರ್ಕ್ಸ್ ಕಾರ್ಮಿಕ ಮಲ್ಲೇಶ್‌ (53) ಮೃತಪಟ್ಟಿದ್ದು, ಬೈಕ್‌ ಸವಾರ ಜಯನ್ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಪಲ್ಸರ್ ಬೈಕ್ ಮತ್ತು ಉಳಿಯಾರಗೋಳಿ ಸರ್ವೀಸ್‌ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ಹೋಂಡಾ ಬೈಕ್ ಪರಸ್ಪರ ಢಿಕ್ಕಿ […]

ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು ಇದರ ಉಡುಪಿ ಜಿಲ್ಲಾಧ್ಯಕ್ಷರಾಗಿ ಹಿರಿಯ ಪತ್ರಕರ್ತ ಸುರೇಶ್ ಶೆಟ್ಟಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮಾಲತಿ ಆಚಾರ್ಯ ಆಯ್ಕೆ

ಕಾರವಾರ- ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು ಇದರ ಉಡುಪಿ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಹಿರಿಯ ಪತ್ರಕರ್ತ, ಕರಾವಳಿ ಅಲೆ ದಿನಪತ್ರಿಕೆ ಉಡುಪಿ ವರದಿಗಾರ ಶ್ರೀ ಸುರೇಶ್ ಶೆಟ್ಟಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಉಡುಪಿ ಪತ್ರಕರ್ತೆ ಮಾಲತಿ ಆಚಾರ್ಯ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ. ಕರ್ನಾಟಕ ಪ್ರೆಸ್ಸ್ ಕ್ಲಬ್ ನ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಮಾರ್ ನಾಯ್ಕ ಭಟ್ಕಳ ಅವರ ಸೂಚನೆಯ ಮೇರೆಗೆ ಕರ್ನಾಟಕ ಪ್ರೆಸ್ಸ್ ಕ್ಲಬ್ ನ ರಾಜ್ಯ ಅಧ್ಯಕ್ಷರಾದ ಶ್ರೀ ದಯಾನಂದ […]