ಉಡುಪಿ ನಗರಸಭಾ ವ್ಯಾಪ್ತಿಯ ಖಾಲಿ ಸೈಟ್‌ಗಳಲ್ಲಿನ ಕಸ-ಕಡ್ಡಿಗಳನ್ನು ಸ್ವಚ್ಛಗೊಳಿಸಲು ಸೂಚನೆ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಖಾಸಗಿ ಖಾಲಿ ಜಾಗಗಳ ಕೆಲವು ಮಾಲೀಕರು ಸೈಟ್‌ಗಳನ್ನು ಖರೀದಿ ಮಾಡಿ, ಈ ಸೈಟ್‌ಗಳಲ್ಲಿ ಯಾವುದೇ ಪ್ರಗತಿ ಕಾಮಗಾರಿ ಕೈಗೊಳ್ಳದೇ ಹಲವಾರು ವರ್ಷಗಳಿಂದ ಹಾಗೆಯೇ ಖಾಲಿ ಬಿಟ್ಟಿದ್ದು, ಈ ಸ್ಥಳಗಳಲ್ಲಿ ಹುಲ್ಲು, ಗಿಡಗಂಟಿ, ಕಸ-ಕಡ್ಡಿ ಜೊತೆಗೆ ಅಪಾಯಕಾರಿ ಜೀವಜಂತುಗಳಾದ ವಿಷಪೂರಿತ ಹಾವು, ಇತರೆ ಜೀವಿಗಳು ವಾಸ್ತವ್ಯ ಹೂಡಿರುವುದರಿಂದ ಖಾಲಿ ಸ್ಥಳದ ಬದಿಮನೆಯವರಿಗೆ ವಿಷಪೂರಿತ ಜೀವಜಂತುಗಳಿoದ ತೊಂದರೆಯಾಗುತ್ತಿರುವುದಾಗಿ ಸಾರ್ವಜನಿಕರಿಂದ ದೂರುಗಳು ಬಂದಿರುತ್ತದೆ. ಆದ್ದರಿಂದ ಖಾಲಿ ಸ್ಥಳಗಳಲ್ಲಿ ಯಾವುದೇ ಅಭಿವೃದ್ಧಿ ಕೈಗೊಳ್ಳದೆ ಹಲವಾರು ವರ್ಷಗಳಿಂದ ಹಾಗೇ […]

ಭಾರಿ ಅಗ್ನಿ ಅವಘಡ : ಬೆಂಗಳೂರಿನಲ್ಲಿ ಆಟಿಕೆ ವಸ್ತುಗಳ ಗೋದಾಮಿ ಘಟನೆ

ಬೆಂಗಳೂರು : ಆಟಿಕೆ ವಸ್ತುಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಕೆ. ಆರ್ ಮಾರ್ಕೆಟ್ ಠಾಣಾ ವ್ಯಾಪ್ತಿಯ ಕುಂಬಾರಪೇಟೆಯಲ್ಲಿ ಭಾನುವಾರ ನಡೆದಿದೆ. ಕಟ್ಟಡದ ಮೂರನೇ ಮಹಡಿಯಲ್ಲಿದ್ದ ಗೋದಾಮಿನಲ್ಲಿ ಅವಘಡ ಉಂಟಾಗಿದ್ದು, ನಂತರ ನಾಲ್ಕನೇ ಮಹಡಿಗೂ ಬೆಂಕಿ ವ್ಯಾಪಿಸಿದೆ. ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳದಲ್ಲಿ ಐದು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ. ರಾಜ್ಯದಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ಈ ಹಿಂದೆ ಆನೇಕಲ್​ ತಾಲೂಕಿನ ಅತ್ತಿಬೆಲೆಯಲ್ಲಿ ಸಂಭವಿಸಿದ್ದ ಪಟಾಕಿ […]

ಚಂದ್ರನಿಂದ ಕಲ್ಲು-ಮಣ್ಣಿನ ಮಾದರಿ ತರುವ ಗುರಿ: ಚಂದ್ರಯಾನ-4ರತ್ತ ಇಸ್ರೋ ಚಿತ್ತ

ಪುಣೆ(ಮಹಾರಾಷ್ಟ್ರ): ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಚಂದ್ರಯಾನ-4 ಉಡಾವಣೆಗೆ ಸಿದ್ಧತೆ ನಡೆಸುತ್ತಿದೆ.ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ ನಿರ್ದೇಶಕ ನಿಲೇಶ್ ದೇಸಾಯಿ, ಚಂದ್ರಯಾನ-4 ಕುರಿತು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದರು. ಚಂದ್ರಯಾನ-3ಯೋಜನೆಯ ಯಶಸ್ಸಿನೊಂದಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಇತಿಹಾಸ ಬರೆದಿದೆ. ಇದೀಗ ಸಂಸ್ಥೆ ಮತ್ತೊಂದು ಮಹತ್ವದ ಯೋಜನೆಗೆ ಸಿದ್ಧವಾಗಿದೆ. ಅದುವೇ ಚಂದ್ರಯಾನ-4. ‘ಐದರಿಂದ 10 ವರ್ಷ […]

ಉತ್ತರ ಪ್ರದೇಶ ಸರ್ಕಾರದಿಂದ ಹಲಾಲ್ ಉತ್ಪನ್ನಗಳ ತಯಾರಿ, ಮಾರಾಟ ನಿಷೇಧ

ಲಕ್ನೋ(ಉತ್ತರ ಪ್ರದೇಶ): ಹಲಾಲ್ ಪ್ರಮಾಣೀಕೃತವಲ್ಲದ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡುವ ದುರುದ್ದೇಶಪೂರಿತ ಪ್ರಯತ್ನಗಳು ಮತ್ತು ಅನ್ಯಾಯದ ಮಾರ್ಗದಲ್ಲಿ ಆರ್ಥಿಕ ಪ್ರಯೋಜನಗಳನ್ನು ಪಡೆಯುವುದಲ್ಲದೆ, ಕೋಮು ದ್ವೇಷವನ್ನು ಬಿತ್ತಲು, ಸಮಾಜದಲ್ಲಿ ವಿಭಜನೆಗಳನ್ನು ಸೃಷ್ಟಿಸಲು ಹಾಗೂ ಹಲಾಲ್‌ ಪ್ರಮಾಣೀಕೃತವು ರಾಷ್ಟ್ರ ವಿರೋಧಿ ಶಕ್ತಿಗಳಿಂದ ದೇಶವನ್ನು ದುರ್ಬಲಗೊಳಿಸಲು ಪೂರ್ವ ಯೋಜಿತ ಕಾರ್ಯತಂತ್ರದ ಭಾಗವಾಗಿದೆ ಎಂದು ಸರ್ಕಾರ ಆರೋಪಿಸಿದೆ. ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳ ತಯಾರಿ, ಸಂಗ್ರಹಣೆ ಮತ್ತು ಮಾರಾಟದ ಮೇಲೆ ಉತ್ತರ ಪ್ರದೇಶ ಸರ್ಕಾರ ನಿಷೇಧ ಹೇರಿದೆ.ಉತ್ತರಪ್ರದೇಶ ಸರ್ಕಾರ ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳ ತಯಾರಿ, […]

ಉಡುಪಿ: ತ್ಯಾಜ್ಯಗಳನ್ನು ವಿಂಗಡಿಸಿ, ಸ್ಥಳೀಯ ಸಂಸ್ಥೆಗಳ ವಾಹನಗಳಿಗೆ ನೀಡಲು ಸೂಚನೆ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಗೂಡಂಗಡಿ, ತಳ್ಳುಗಾಡಿ ಹಾಗೂ ಅಂಗಡಿ ಮಾಲೀಕರುಗಳು ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ವಿಂಗಡಿಸಿ, ಹಸಿಕಸ ಹಾಗೂ ಒಣಕಸಗಳಾಗಿ ಬೇರ್ಪಡಿಸಿ, ಶೇಖರಿಸಿ ನಗರ ಸ್ಥಳೀಯ ಸಂಸ್ಥೆಯ ವಾಹನಗಳಿಗೆ ನೀಡಬೇಕು ಹಾಗೂ ರಸ್ತೆ ಬದಿ ಓಡಾಡುವ ಹಿರಿಯ ನಾಗರಿಕಕರು, ವಿದ್ಯಾರ್ಥಿಗಳು, ಪಾದಾಚಾರಿಗಳಿಗೆ ಮತ್ತು ವಾಹನ ಸಂಚಾರಿಗಳಿಗೆ ಅಡ್ಡಿಪಡಿಸದೇ ವ್ಯವಹಾರ ಮಾಡಬೇಕು. ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಬದಲಿಗೆ ಪೇಪರ್ ಕವರ್, ಹಳೆ ದಿನಪತ್ರಿಕೆ, ಬಟ್ಟೆ ಬ್ಯಾಗ್‌ಗಳನ್ನು ಬಳಸಬೇಕು. ಪ್ರತಿ ಅಂಗಡಿ ಮುಂದೆ ಡಸ್ಟ್ಬಿನ್ ಇಟ್ಟು, ಚಾಕಲೇಟ್ […]