‘ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾದ ಹಾಡು ರಿಲೀಸ್​

ಈಗಾಗಲೇ ಬಿಡುಗಡೆಗೂ ಮುಹೂರ್ತ ಫಿಕ್ಸ್​ ಆಗಿದ್ದು, ಸಿನಿಮಾವು ಜುಲೈ 28ರಂದು ತೆರೆ ಕಾಣಲಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್​ ಕೂಡ ರಿಲೀಸ್​ ಆಗಿದ್ದು, ಸಿನಿಪ್ರೇಮಿಗಳನ್ನು ಆಕರ್ಷಿಸಿದೆ.’ಲವ್​ ಮಾಕ್ಟೇಲ್​’ ಖ್ಯಾತಿಯ ನಟ ಡಾರ್ಲಿಂಗ್​ ಕೃಷ್ಣ ಮತ್ತು ಮೊಗ್ಗಿನ ಮನಸು, ಬಚ್ಚನ್​, ಮುಂಗಾರು ಮಳೆ 2 ಮುಂತಾದ ಹಿಟ್​ ಚಿತ್ರಗಳನ್ನು ನೀಡಿರುವ ಸ್ಯಾಂಡಲ್​ವುಡ್​ ಸ್ವ-ಮೇಕ್​ ನಿರ್ದೇಶಕ ಶಶಾಂಕ್​ ಕಾಂಬೋದಲ್ಲಿ ‘ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾ ಬರುತ್ತಿರುವುದು ಗೊತ್ತೇ ಇದೆ.’ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾದ ’90 ಹಾಡು’ ಬಿಡುಗಡೆಯಾಗಿದೆ. ಟ್ರೇಲರ್ ಹೇಗಿದೆ?: ಕೌಸಲ್ಯಾ […]

ಲಿಂಗನಮಕ್ಕಿಗೆ ಒಂದೇ ದಿನ ಮೂರುವರೆ ಅಡಿ ನೀರು, ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ

ಶಿವಮೊಗ್ಗ: ಕಳೆದ ಮೂರು ದಿನಗಳಿಂದ ಶಿವಮೊಗ್ಗ ಜಿಲ್ಲೆ ಸೇರಿದಂತೆ, ಅಕ್ಕಪಕ್ಕದ ಜಿಲ್ಲೆಗಳಲ್ಲಿ ನಿರಂತರ ವರ್ಷಧಾರೆಯಾಗುತ್ತಿದೆ. ಮಳೆ ಎಡಬಿಡದೇ ಸುರಿದ ಪರಿಣಾಮ, ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿವೆ. ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗದ ಮಾಣಿ ಜಲಾಶಯ ಪ್ರದೇಶದಲ್ಲಿ ರಾಜ್ಯದಲ್ಲೇ ಅತ್ಯಧಿಕ 22 ಎಂಎಂ‌ ಮಳೆಯಾಗಿದೆ.ಈ ಹಿನ್ನೆಲೆಯಲ್ಲಿ ನಗರದ ಕೋರ್ಪಳಯ್ಯನ ಛತ್ರದ ಬಳಿಯ ಮಂಟಪ ಮುಳುಗುವ ಹಂತ ತಲುಪಿದ್ದು, ಇನ್ನೊಂದು ಅಡಿಯಷ್ಟು ನೀರು ಏರಿಕೆಯಾದರೆ ಮಂಟಪ ಸಂಪೂರ್ಣ ಮುಳುಗಡೆಯಾಗಲಿದೆ. ಹೀಗಾಗಿ ಮಂಟಪದ ಬಳಿ ಸಾರ್ವಜನಿಕರು ತಂಡೋಪತಂಡವಾಗಿ ಬಂದು ನದಿಯ ವಿಹಂಗಮ […]

Android 14 ಆವೃತ್ತಿಯು ಉಪಗ್ರಹದ ಮೂಲಕ SMS ತರಲಿದೆ ಹೊಸ ವೈಶಿಷ್ಟ್ಯ

ಸ್ಯಾನ್ ಫ್ರಾನ್ಸಿಸ್ಕೊ: ಮೊಬೈಲ್ ತಂತ್ರಜ್ಞಾನದಲ್ಲಿನ ಮಹತ್ವದ ಆವಿಷ್ಕಾರವೊಂದರಲ್ಲಿ ಇನ್ನು ಮುಂದೆ ಉಪಗ್ರಹ ಸಂಪರ್ಕದ ಮೂಲಕ ಎಸ್ಸೆಮ್ಮೆಸ್ ಕಳುಹಿಸುವ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸಲಾಗಿದೆ.ಮುಂಬರಲಿರುವ ಆಂಡ್ರಾಯ್ಡ್ 14 ಆವೃತ್ತಿಯ ಮೂಲಕ ಶೀಘ್ರದಲ್ಲೇ ಮೊಬೈಲ್ ಫೋನ್‌ಗಳಲ್ಲಿ ಉಪಗ್ರಹ ಸಂಪರ್ಕದ ಮೂಲಕ SMS ಕಳುಹಿಸಬಹುದು ಎಂದು ವರದಿಯಾಗಿದೆ. ಇದು ಮೊಬೈಲ್ ಸಂವಹನ ತಂತ್ರಜ್ಞಾನದಲ್ಲಿನ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ. ಮುಂಬರಲಿರುವ ಆಯಂಡ್ರಾಯ್ಡ್​ 14 ಆವೃತ್ತಿಯು ಉಪಗ್ರಹದ ಮೂಲಕ ಎಸ್ಸೆಮ್ಮೆಸ್ ಕಳುಹಿಸುವ ವೈಶಿಷ್ಟ್ಯವನ್ನು ಒಳಗೊಂಡಿರಲಿದೆ ಎಂದು ವರದಿಗಳು ತಿಳಿಸಿವೆ. ಪಿಕ್ಸೆಲ್​ನ #TeamPixel Twitter ಖಾತೆಯ ಟ್ವೀಟ್ ಆಧರಿಸಿ, […]

9 ದಿನದಲ್ಲಿ 60 ಕೋಟಿ ರೂ. ಕಲೆಕ್ಷನ್​ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿರುವ ‘ಬೇಬಿ’

ವೈಷ್ಣವಿ ಚೈತನ್ಯ ಮತ್ತು ವಿರಾಜ್ ಅಶ್ವಿನ್ ನಟನೆಗೆ ಪ್ರೇಕ್ಷಕರು ತಲೆದೂಗಿದ್ದಾರೆ. ‘ಕಲರ್ ಫೋಟೋ’ ಮುಂತಾದ ಸಿನಿಮಾಗಳಿಗೆ ಕಥೆ ಬರೆದಿರುವ ಸಾಯಿ ರಾಜೇಶ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.ಜುಲೈ​ 14 ರಂದು ತೆರೆಕಂಡ ‘ಬೇಬಿ’ ಸಿನಿಮಾ ಎಲ್ಲರ ನಿರೀಕ್ಷೆಯನ್ನೂ ಮೀರಿಸಿದ್ದು, ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಟಾಲಿವುಡ್​ ನಟ ವಿಜಯ್​ ದೇವರಕೊಂಡ ಸಹೋದರ ಆನಂದ್​ ದೇವರಕೊಂಡ ಅಭಿನಯದ ಈ ಚಿತ್ರ ಸೂಪರ್​ ಹಿಟ್​ ಆಗಿದೆ. ‘ಬೇಬಿ’ ಸಿನಿಮಾ ಒಂಬತ್ತು ದಿನಗಳಲ್ಲಿ ವಿಶ್ವದಾದ್ಯಂತ 60.3 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ‘ಬೇಬಿ’ […]

ನಿವೃತ್ತಿ ಘೋಷಿಸಿದ ಲಹಿರು ತಿರಿಮನ್ನೆ, ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಶ್ರೀಲಂಕಾ ಬ್ಯಾಟರ್​ ವಿದಾಯ

ಕೊಲಂಬೊ (ಶ್ರೀಲಂಕಾ) : ನಿವೃತ್ತಿ ಘೋಷಿಸುವ ನಿರ್ಧಾರ ಕಷ್ಟಕರವಾಗಿತ್ತು. ಆದರೆ ಈ ನಿರ್ಧಾರವನ್ನು ಸ್ವಇಚ್ಛೆಯಿಂದ ಅಥವಾ ಇಷ್ಟವಿಲ್ಲದೆ ತೆಗೆದುಕೊಳ್ಳಲು ನನ್ನನ್ನು ಪ್ರಭಾವಿಸಿದ ಅನೇಕ ಅನಿರೀಕ್ಷಿತ ಕಾರಣಗಳನ್ನು ನಾನು ಇಲ್ಲಿ ಉಲ್ಲೇಖಿಸಲಾರೆ ಎಂದಿದ್ದಾರೆ. ತಿರಿಮನ್ನೆ ಕ್ರಿಕೆಟ್ ಪಯಣದಲ್ಲಿ ಬೆಂಬಲಿಸಿದ ಮತ್ತು ಪ್ರೋತ್ಸಾಹಿಸಿದ ಅವರ ಕೋಚ್‌ಗಳು, ಸಹ ಆಟಗಾರರು, ಫಿಸಿಯೋಗಳು ಮತ್ತು ಅವರ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.ತಿರಿಮನ್ನೆ ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ 12 ವರ್ಷಗಳ ಕ್ರಿಕೆಟ್ ಪ್ರಯಾಣವನ್ನು ಕೊನೆಗೊಳಿಸುವುದಾಗಿ ತಿಳಿಸಿದ್ದಾರೆ. ಈ ಕಹಿ ಸುದ್ದಿಯೊಂದು ಕ್ರಿಕೆಟ್​ ಅಭಿಮಾನಿಗಳಿಗೆ ಬೇಸರ […]